AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​ಲೈನ್​ ಪಾಠ ಗಣಿತವನ್ನು ಇನ್ನಷ್ಟು ಕಬ್ಬಿಣದ ಕಡಲೆಯಾಗಿಸಿದೆಯೇ? ಗಣಿತ ಶಿಕ್ಷಕ ವಿಜಯ್ ಸಂದರ್ಶನ

National Mathematics Day 2020 ಮತ್ತು ಕೊರೊನಾ ಕಾಟದ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೇ ಗಣಿತ ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿದ್ದಾರಾ? ಮುಂದಿನ 3 ರಿಂದ 5 ವರ್ಷಗಳ ನಂತರ ಗಣಿತ ಬೋಧನೆ ಹೇಗಿರಬಹುದು? ಎಂಬ ಟಿವಿ9 ಕನ್ನಡ ಡಿಜಿಟಲ್​ ಪ್ರಶ್ನೆಗೆ ಗಣಿತ ಶಿಕ್ಷಕರಾಗಿರುವ ವಿಜಯ್ ಅವ​ರು ನೇರವಾಗಿ ಉತ್ತರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಓದಿ ನೋಡಿ..

ಆನ್​​ಲೈನ್​ ಪಾಠ ಗಣಿತವನ್ನು ಇನ್ನಷ್ಟು ಕಬ್ಬಿಣದ ಕಡಲೆಯಾಗಿಸಿದೆಯೇ? ಗಣಿತ ಶಿಕ್ಷಕ ವಿಜಯ್ ಸಂದರ್ಶನ
ಗಣಿತ ಶಿಕ್ಷಕರಾದ ವಿಜಯ್ ಅವ​ರ ಸಂದರ್ಶನ ಟಿವಿ9 ಕನ್ನಡ ಡಿಜಿಟಲ್​ನಲ್ಲಿ..
Follow us
guruganesh bhat
|

Updated on:Dec 22, 2020 | 4:23 PM

ರಾಷ್ಟ್ರೀಯ ಗಣಿತ ದಿನದ National Mathematics Day 2020 ಪ್ರಯುಕ್ತ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅಪೋಲೊ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಗಣಿತ ಶಿಕ್ಷಕರಾಗಿರುವ ವಿಜಯ್ ಅವ​ರನ್ನು ಟಿವಿ9 ಕನ್ನಡ ಡಿಜಿಟಲ್ ಸಂದರ್ಶಿಸಿದೆ. ವಿದ್ಯಾರ್ಥಿಗಳಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆ ಎಂಬ ಅಸಾಮಾನ್ಯ ಭಾವವಿದೆ. ಇಂತಿರುವಾಗ, ಕಳೆದ ಐದಾರು ತಿಂಗಳಿಂದ ವರ್ಚುವಲ್ ಕ್ಲಾಸ್​ನಲ್ಲಿ ಗಣಿತ ಕಲಿಯುತ್ತಿರುವ ವಿದ್ಯಾರ್ಥಿಗಳ ಮನೋಭಾವದ ಕುರಿತು ವಿಜಯ್ ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರ: ಗಣಿತ ಮಿಕ್ಕೆಲ್ಲ ವಿಷಯಗಳಿಗಿಂತ ಸ್ವಲ್ಪ ಕಷ್ಟ ಎಂಬ ಸಾಮಾನ್ಯ ಅಭಿಪ್ರಾಯ ವಿದ್ಯಾರ್ಥಿಗಳ ಮನದಲ್ಲಿದೆ. ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ, ಆನ್​ಲೈನಲ್ಲಿ ಗಣಿತ ಬೋಧನೆ ಎಷ್ಟು ಪರಿಣಾಮಕಾರಿ?

ಉ: ಈ ಮೊದಲು ಆನ್​ಲೈನ್ ಕ್ಲಾಸ್​ಗಳ ಕುರಿತು ಶಿಕ್ಷಕರಾದ ನಮಗೂ ಸಂಪೂರ್ಣ ಪರಿಕಲ್ಪನೆ ಇರಲಿಲ್ಲ. ಒಮ್ಮೊಮ್ಮೆ ವಿಡಿಯೊ, ಪಿಪಿಟಿಗಳನ್ನು ಆಧರಿಸಿ ಪಾಠ ಮಾಡುತ್ತಿದ್ದೆವು‌. ಆದರೆ ಸಂಪೂರ್ಣ ಆನ್​ ಲೈನ್ ಶಿಕ್ಷಣದ ಮೇಲೆ ಅವಲಂಬಿತವಾಗಿರಲಿಲ್ಲ, ಆ ಕಲ್ಪನೆಯೂ ಇರಲಿಲ್ಲ. ಗಣಿತದಲ್ಲಿ 10 ಪುಟದ ಪಾಠವನ್ನು ಆನ್​ಲೈನ್ ಮೂಲಕ ಮೂರೇ ಮೂರು ಪುಟದಲ್ಲಿ ಕಲಿಸಬಹುದು. ಮಕ್ಕಳಿಗೆ ನೇರ ಅನುಭವವಾಗದ ಕಾರಣ ಮಕ್ಕಳ ಗಮನವೂ ಬೇರೆಡೆ ಹರಿಯುತ್ತೆ. ಗಣಿತದಲ್ಲಿ 10 ರಲ್ಲಿ 3 ಉತ್ತರಗಳಷ್ಟೇ ಮಕ್ಕಳು ಸರಿಯಾಗಿ‌ ನೀಡಬಲ್ಲರು. ಹೆಚ್ಚು ಸಮಯ ತೆಗೆದುಕೊಂಡು ಹೇಳಿದ್ದನ್ನೇ ಹೇಳಿ, ಮತ್ತೆ ಮತ್ತೆ ಕಲಿಸಿ ಪ್ರತಿಶತಃ 100 ಸಾಧನೆಯಾಗಬಹುದು ಎಂದು ಹೇಳಬಹುದಷ್ಟೆ..

ಪ್ರ: ಗಣಿತವನ್ನ ಆನ್​ಲೈನ್​ನಲ್ಲಿ ಕಲಿಸಲು ಯಾವ ಸಾಧನಗಳನ್ನು ಬಳಸುತ್ತೀರಿ..?

ಉ: ಮೊದಲಾದರೆ ಚಾಕ್ ಪೀಸ್- ಬೋರ್ಡ್, ಪೆನ್ ಗಳಿತ್ತು. ಮಕ್ಕಳ ಬಳಿ ನೇರ ಸಂವಹನ ಮಾಡಬಹುದಿತ್ತು. ಆದರೆ ಈಗ ಹೀಗಲ್ಲ..ಸ್ಮಾರ್ಟ್ ಫೋನ್, ಟ್ಯಾಬ್​ಗಳ‌ ಮುಂದೆ ಲೆಕ್ಕ ಹೇಳಬೇಕಾಗಿದೆ. Pen Tab ಎಂಬ ಸಾಧನವಿದೆ, ನಾಲ್ಕರಿಂದ ಎಂಟು ಸಾವಿರದೊಳಗೆ ಸಿಗುತ್ತೆ. ಅದರಲ್ಲಿ ನಾವು ಏನು ಬರೀತೆವೋ ಅದು ಮಕ್ಕಳಿಗೆ ಕಾಣಿಸುತ್ತೆ..ಇನ್ನೊಂದು ಸಾಧನ iPad, ನಾನು iPad ಅನ್ನು ಬಳಸುತ್ತೇನೆ. ಇದರಲ್ಲಿ ಬೋರ್ಡ್​​ನ ಫೀಲ್ ಬರುತ್ತೆ. ಚಿತ್ರ, ಸಂಖ್ಯೆ, ಲೆಕ್ಕ ಏನು ಬೇಕಾದರೂ ಬರೆಯಬಹುದು..

ಪ್ರ: ಸಾಂಪ್ರದಾಯಿಕ ತರಗತಿಯಲ್ಲಿ ಗಣಿತ ಬೋಧನೆಗೂ, ಆನ್​ಲೈನ್​ನಲ್ಲಿ ಗಣಿತ ಬೋಧನೆಗೂ ಏನೆಲ್ಲಾ ವ್ಯತ್ಯಾಸಗಳಿವೆ?

ಉ: ನೋಡಿ.. ಗಣಿತ ಎಂದರೆ ಇತರ ವಿಷಯಗಳಂತಲ್ಲ.  ಮಗುವಿನ ಸಾಮರ್ಥ್ಯದ ಮೇಲೆ ನಾವು ಕಲಿಸುವ ರೀತಿ ಅವಲಂಬಿತವಾಗಿರುತ್ತೆ. ಕ್ಲಾಸಲ್ಲಾದರೆ ಒಂದು ಚಿತ್ರವನ್ನು ಬೋರ್ಡ್ ನಲ್ಲಿ ಬರೆದರೂ ಮನಸಲ್ಲಿ ಕಲ್ಪನೆ ಮಾಡಿಕೊಳ್ಳಲು ಹೇಳುತ್ತೇವೆ. ‌ಆದರೆ, ಆನ್​ಲೈನ್​ನಲ್ಲಿ ಗೂಗಲ್‌ ಮೂಲಕ ಯಾವುದೇ Abstract ಚಿತ್ರವನ್ನು ಸಹ ಮಗುವಿಗೆ ಕಾಣಿಸಬಹುದು.. ಗ್ರಾಫ್ ಆದರೆ ಗೂಗಲ್ ಜೀಬ್ರಾ ಇದೆ. ಮ್ಯಾಥ್ ಲ್ಯಾಬ್ ಸಾಫ್ಟ್​ವೇರ್ ಮೂಲಕ ಯಾವುದೇ ಚಿತ್ರವನ್ನು 3 ಆಯಾಮದಲ್ಲಿ, 360 ಡಿಗ್ರಿಯಲ್ಲಿ ಕಾಣಿಸಬಹುದು.. ಒಂದು ಆಯತದ ಚಿತ್ರ ಎಂದಿಟ್ಟುಕೊಂಡರೆ, ಮಗು ಆಯತವನ್ನು ಮುಟ್ಟಿ ನೋಡಿದ ಅನುಭವ ಪಡೆಯಬಹುದು.. ಆನ್​ಲೈನ್ ಗಣಿತ ಕಲಿಸಲು ಇಷ್ಟೆಲ್ಲ ಅವಕಾಶಗಳೂ ಇವೆ.

ಪ್ರ: ಅಂದರೆ, ಆನ್​ಲೈನ್​ನಲ್ಲಿ ಗಣಿತ ಕಲಿಸುವುದೇ ಹೆಚ್ಚು ಪರಿಣಾಮಕಾರಿಯೇ..?

ಉ: ಅಲ್ಲ, ಖಂಡಿತಾ ಅಲ್ಲ.. ಸಾಂಪ್ರದಾಯಿಕ ಅಂದರೆ ಶಾಲೆಗಳಲ್ಲಿ ಗಣಿತ ಕಲಿಯುವುದು ತುಂಬಾ ಪರಿಣಾಮಕಾರಿ. ಶಾಲೆಯಲ್ಲಿ ನಮ್ಮ ಮತ್ತು ವಿದ್ಯಾರ್ಥಿಗಳ ನಡುವೆ.. ನೇರ ಸಂವಹನ ಸಾಧ್ಯವಾಗುತ್ತೆ.. ಆದರೆ, ಆನ್​ಲೈನ್​ನಲ್ಲಿ ಇದು ಸಾಧ್ಯವಿಲ್ಲ. ಏನೇನೋ ತಾಂತ್ರಿಕ ತೊಂದರೆಗಳು, ಮಕ್ಕಳಿಗೆ ಇಷ್ಟವಿರಲ್ಲ.. ಹೀಗೆ ಬೇರೆ ಬೇರೆ ತೊಂದರೆಗಳೂ ಇದ್ದೇ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಜೊತೆ ವೈಯಕ್ತಿಕ ಸಂಪರ್ಕ ಸಾಧ್ಯವಾಗುವುದಿಲ್ಲ. ಗಣಿತವನ್ನು ಸುಲಲಿತಗೊಳಿಸಲು ಈ ಸಂಪರ್ಕ ಬೇಕು.. ಅದು ಆನ್​ಲೈನ್​ ಬೋಧನೆಯಲ್ಲಿ ಸಾಧ್ಯವಿಲ್ಲ.

ಪ್ರ: ಆನ್​ಲೈನ್ ಗಣಿತ ಕ್ಲಾಸ್​ಗಳ ಕುರಿತು ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿದೆ? ಉ: ಮಕ್ಕಳು ನಮಗಿಂತ ಬುದ್ಧಿವಂತರು.. ಕೊಟ್ಟ ಹೋಂ ವರ್ಕ್​ಗಳನ್ನು ಸ್ಕ್ಯಾನ್ ಮಾಡಿ ಕಳಿಸಲು ಹೇಳಿರುತ್ತೇವೆ. ಟೈಮ್​​ಪಾಸ್​ ಥರ ತೆಗೆದುಕೊಳ್ಳುವ ಮಕ್ಕಳೂ ಇದ್ದಾರೆ. ಕೆಲವರಿಗೆ ಆನ್​ಲೈನ್ ಗಣಿತ ಕ್ಲಾಸ್​ಗಳೆಂದರೆ ಫನ್ ಆ್ಯಕ್ಟಿವಿಟಿ ಇದ್ದಂತೆ.. ಗಂಭೀರವಾಗಿ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. ಮೊದಮೊದಲು ಕಷ್ಟವಾದರೂ ನಂತರ ಆನ್​ಲೈನ್ ತರಗತಿಗೆ ಹೊಂದಿಕೊಂಡರು. ಆದರೆ ಈಗೀಗ ಗಣಿತವನ್ನು ಆನ್​ಲೈನ್​ನಲ್ಲಿ ಕಲಿಯಲು ಬೋರ್​ ಬರುತ್ತಿದೆ ಎನ್ನುತ್ತಿದ್ದಾರೆ. ಆದರೆ, ಆನ್​ಲೈನ್ ಕ್ಲಾಸ್​ಗಳಿಂದ ಸಾಂಪ್ರದಾಯಿಕ ಆಫ್​ಲೈನ್ ತರಗತಿಗಳ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಿದೆ.

ಪ್ರ: ಆನ್​ಲೈನ್​ ತರಗತಿಗಳಿಂದ ಗಣಿತವನ್ನು ಎಲ್ಲಾ ಬುದ್ಧಿಮತ್ತೆಯ ವಿದ್ಯಾರ್ಥಿಗಳೂ ಅರ್ಥಮಾಡಿಕೊಳ್ಳುತ್ತಿದ್ದಾರಾ? ಉ: ಈ ವಿಷಯದಲ್ಲಿ ಬಹಳ ಗಂಭೀರ ಸಮಸ್ಯೆಯಿದೆ. ನಿಧಾನ ಕಲಿಕೆಯ ಸಾಮರ್ಥ್ಯದ ಮಕ್ಕಳಿಗೆ ಆನ್​ಲೈನ್​ನಲ್ಲಿ ಗಣಿತ ಕಲಿಯುವುದು ಇನ್ನೂ ಕಷ್ಟವಾಗುತ್ತೆ. ಅದರಲ್ಲೂ, ಅಭ್ಯಾಸ ಇಲ್ಲದಿರುವದರಿಂದ ಪರಿಸ್ಥಿತಿ ಬಿಗಡಾಯಿಸುತ್ತೆ. ಮಧ್ಯಮ ಸಾಮರ್ಥ್ಯದ ಮಕ್ಕಳು ಹಂತ ಹಂತವಾಗಿಯಾದರೂ ಕಲಿಯುತ್ತಾರೆ. ಆದರೆ, ನಿಧಾನ ಕಲಿಕೆಯ ಮಕ್ಕಳಿಗೆ ಕಷ್ಟ. ಈಗಿರುವ ನಿಯಮಾವಳಿಗಳ ಪ್ರಕಾರ ನಿಧಾನ ಕಲಿಕೆಯ ಮಕ್ಕಳಿಗೆಂದು ಎಕ್ಸ್​ಟ್ರಾ ಕ್ಲಾಸ್ ಮಾಡಲೂ ಆಗದು.

ಪ್ರ: ಬಹುತೇಕ ಶಾಲೆಗಳು ಆನ್​​ಲೈನ್​ ಕ್ಲಾಸ್​ ಆರಂಭಿಸಿವೆ. ಜೊತೆಗೆ, ಯೂಟ್ಯೂಬ್​ನಲ್ಲೂ ಉಚಿತವಾಗಿ ಗಣಿತ ಕಲಿಸುವ ವಿಡಿಯೋಗಳು ಸಿಗುತ್ತಿವೆ. ಹಣ ಕೊಟ್ಟು ವ್ಯಾವಹಾರಿಕ ಕಂಪನಿಗಳಿಗೆ ಚಂದಾದಾರರಾಗುವವರೂ ಇದ್ದಾರೆ. ಇಷ್ಟೆಲ್ಲ ಆಯ್ಕೆಗಳಿರುವಾಗ ಮಕ್ಕಳು ಯಾವುದನ್ನು ಇಷ್ಟಪಡುತ್ತಿದ್ದಾರೆ? ಉ: ನೋಡಿ.. ಉಚಿತವಾಗಿ ಎಷ್ಟೇ ಉತ್ತಮ ಕ್ಲಾಸ್​ಗಳು ಸಿಗಲಿ.. ಅಥವಾ ‘ಕ್ವಾಲಿಟಿ’ಯ ಹೆಸರಲ್ಲಿ ಹಣ ತೆತ್ತು ಚಂದಾದಾರರಾಗಿ. ಮಕ್ಕಳಿಗೆ ಅವರ ಸರ್/ಟೀಚರ್ ಪಾಠ ಹೇಳಿದರೇನೆ ಒಂದು ಖುಷಿ.. ಉದಾಹರಣೆಗೆ ಮಹತ್ವದ ನಿರ್ಧಾರ ಕೈಗೊಳ್ಳುವಾಗ ನಿಮ್ಮ ಪರಿಚಿತರ ಸಲಹೆಯನ್ನೇ ನೀವು ಪರಿಗಣಿಸುವುದಿಲ್ಲವೇ.. ಹಾಗೇ ಇದು. ಮಕ್ಕಳಿಗೆ ಅವರ ಶಾಲೆಯ ಶಿಕ್ಷಕರ ಪಾಠವೇ ಅಚ್ಚುಮೆಚ್ಚು.

ಜೊತೆಗೆ, ಶಿಕ್ಷಕರಿಗೂ ಮಕ್ಕಳ ಸಾಮರ್ಥ್ಯದ ಅರಿವಿರುವುದರಿಂದ , ಪ್ರತಿ ವಿದ್ಯಾರ್ಥಿಗೂ ಹೇಗೆ ಪಾಠ ಮಾಡಬೇಕೆಂಬ ಅರಿವಿರುತ್ತೆ. ಮೊದಲೇ ನಿರ್ಮಾಣವಾದ ಒಂದು ಸಂವಹನ ವ್ಯವಸ್ಥೆಯಿರುತ್ತೆ. ಈ ವಿದ್ಯಾರ್ಥಿಗೆ ಹೀಗೆ ಹೇಳಿದರೆ ಚೆನ್ನಾಗಿ ಮನದಟ್ಟಾಗುತ್ತೆ ಎಂಬುದು ಗೊತ್ತಿರುತ್ತೆ. ಬೇರೆ ಬೇರೆ ಕಂಪನಿಗಳ ಟೀಚಿಂಗ್ ಕ್ಲಾಸ್​ಗಳಲ್ಲಿ ಎಲ್ಲರಿಗೂ ಒಂದೇ ಥರದ ಪಾಠ ಸಿಗುತ್ತೆ. ಆದರೆ ನಮ್ಮಲ್ಲಿ ಹಾಗಲ್ಲ.. 5 ಸೆಂ.ಮೀ. ಸರ್ಕಲ್ಲಿನ ಬದಲಿಗೆ 2.5 ಸೆಂ.ಮೀ. ಸರ್ಕಲ್ಲಿನ ಉದಾಹರಣೆಯನ್ನೂ ನಾವು ಹೇಳುತ್ತೇವೆ.

ಪ್ರ: ಆನ್​ಲೈನ್​ನಲ್ಲೇ ಗಣಿತ ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿದ್ದಾರಾ? ಮುಂದಿನ 3 ರಿಂದ 5 ವರ್ಷಗಳ ನಂತರ ಗಣಿತ ಬೋಧನೆ ಹೇಗಿರಬಹುದು? ಉ: 100ರಲ್ಲಿ ಎರಡು ವಿದ್ಯಾರ್ಥಿಗಳು ಈ ನಿರ್ಧಾರ ತಳೆಯಬಹುದಷ್ಟೇ.. ಆದರೆ, ಶಾಲೆಯ ತರಗತಿಯ ಜೊತೆಜೊತೆಗೆ ಆನ್​ಲೈನ್ ಮೂಲಕವೂ ಗಣಿತ ಪಾಠ ನಡೆಸಬಹುದು. ಸತತ 5 ವರ್ಷ ಒಬ್ಬನೇ ಶಿಕ್ಷಕ ವಿದ್ಯಾರ್ಥಿಯೋರ್ವನಿಗೆ ಆನ್​ಲೈನ್​ನಲ್ಲಿ ಗಣಿತ ಪಾಠ ಮಾಡಿದರೆ ಮಾತ್ರ ಈ ಕುರಿತು ಯೋಚಿಸಬಹುದು.. ಮಕ್ಕಳ ಮಾನಸಿಕ ಬೆಳವಣಿಗೆಯ ಮಟ್ಟ, ಬುದ್ಧಿಮತ್ತೆ ಮತ್ತು ಕಲಿಕೆಯ ಸಾಮರ್ಥ್ಯ ಅರಿತಿದ್ದರೆ ಮಾತ್ರ ಗಣಿತವನ್ನು ಆನ್​ಲೈನ್​​ನಲ್ಲಿ ಕಲಿಸಬಹುದು..

Published On - 4:15 pm, Tue, 22 December 20

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ