AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಿಯೂ ಆಹಾರ ಸೇವಿಸಿ ನಿದ್ರೆ ಮಾಡಬೇಡಿ, ಮಾಡಿದ್ರೆ ದಾರಿದ್ರ್ಯ, ರೋಗ ನಿಶ್ಚಿತ

ಶಾಸ್ತ್ರ ಹೇಳುತ್ತದೆ ಕಾಲೋ ಜಗದ್ ಭಕ್ಷಕಃ: ಎಂದು. ಸಮಯು ಮಾನವನ ಜೀವನವನ್ನು ನಿಧಾನವಾಗಿ ಭಕ್ಷಿಸುತ್ತದೆ ಎಂದು ಇದರ ಅರ್ಥ. ಅದೇನೇ ಇರಲಿ ಈಗ ನಾವು ಯಾವ ಕಾಲದಲ್ಲಿ ಆಹಾರಾದಿಗಳ ಮತ್ತು ನಿದ್ರೆಯನ್ನು ಮಾಡಬಾರದು ಎಂದು ನೋಡೋಣ. ಭರತ ಭೂಮಿಯಲ್ಲಿ ಸಂಧ್ಯಾಕಾಲಕ್ಕೆ ಅತ್ಯಂತ ಮಹತ್ತರವಾದ ಸ್ಥಾನವಿದೆ.

ತಪ್ಪಿಯೂ ಆಹಾರ ಸೇವಿಸಿ ನಿದ್ರೆ ಮಾಡಬೇಡಿ, ಮಾಡಿದ್ರೆ ದಾರಿದ್ರ್ಯ, ರೋಗ ನಿಶ್ಚಿತ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:May 11, 2023 | 11:04 AM

Share

ಸನಾತನ ಪರಂಪರೆಯಲ್ಲಿ ಮತ್ತು ಎಲ್ಲಾ ಧರ್ಮಗಳಲ್ಲೂ ಕಾಲಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆಡು ಭಾಷೆಯಲ್ಲಿ ಹೇಳುವಂತೆ ಸಮಯಪ್ರಜ್ಞೆ ಸರಿ ಇರಬೇಕು. ಅದೆಷ್ಟೋ ಸಲ ನಾವು ಈ ಪ್ರಜ್ಞೆಯ ಕೊರತೆಯ ಕಾರಣದಿಂದ ಒಳ್ಳೆಯ ಅವಕಾಶ ವಂಚಿರಾಗುತ್ತೇವೆ ಹಾಗೆಯೇ ಅದೆಷ್ಟೋ ಜನರ ಅಮೂಲ್ಯ ಕ್ಷಣಗಳ ನಾಶಕ್ಕೆ ಕಾರಣೀಭೂತರಾಗಿರುತ್ತೇವೆ ಅಲ್ಲದೇ ಸ್ವಾರ್ಥಕ್ಕಾಗಿ ಪರಹಿತವನ್ನು ಯೋಚಿಸದೇ ಸಮಯದ ದುಂದುವೆಚ್ಚ ಮಾಡಿರುತ್ತೇವೆ ಅಲ್ಲವೇ? ಒಮ್ಮೆ ಯೋಚಿಸಿ. ಶಾಸ್ತ್ರ ಹೇಳುತ್ತದೆ ಕಾಲೋ ಜಗದ್ ಭಕ್ಷಕಃ: ಎಂದು. ಸಮಯು ಮಾನವನ ಜೀವನವನ್ನು ನಿಧಾನವಾಗಿ ಭಕ್ಷಿಸುತ್ತದೆ ಎಂದು ಇದರ ಅರ್ಥ. ಅದೇನೇ ಇರಲಿ ಈಗ ನಾವು ಯಾವ ಕಾಲದಲ್ಲಿ ಆಹಾರಾದಿಗಳ ಮತ್ತು ನಿದ್ರೆಯನ್ನು ಮಾಡಬಾರದು ಎಂದು ನೋಡೋಣ. ಭರತ ಭೂಮಿಯಲ್ಲಿ ಸಂಧ್ಯಾಕಾಲಕ್ಕೆ ಅತ್ಯಂತ ಮಹತ್ತರವಾದ ಸ್ಥಾನವಿದೆ. ಸಂಧ್ಯಾಕಾಲವು ಮೂರುವಿಧ. ಪ್ರಾತಃಸಂಧ್ಯೆ ಮಧ್ಯಾಹ್ನ ಸಂಧ್ಯೆ ಸಾಯಂ ಸಂಧ್ಯೆ ಎಂದು. ಇದರಲ್ಲಿ ಮಧ್ಯಾಹ್ನ ಸಂಧ್ಯೆಯೆಂಬುದು ಅಷ್ಟೊಂದು ಮುಖ್ಯ ಸ್ಥಾನವನ್ನು ವಹಿಸುವುದಿಲ್ಲ. ಆದರೆ ಪ್ರಾತ ಮತ್ತು ಸಾಯಂ ಸಂಧೆಗಳು ಅತ್ಯಂತ ಮುಖ್ಯವಾದ ಕಾಲಗಳು.

ಸೂರ್ಯೋದಯದ ಸಮಯವನ್ನು ಪ್ರಾತಃಸಂಧ್ಯೆ ಅಂತಲೂ ಸೂರ್ಯಾಸ್ತದ ಸಮಯವನ್ನು ಸಾಯಂ ಸಂಧ್ಯೆ ಅಂತಲೂ ಕರೆಯುತ್ತಾರೆ. ಈ ಸಮಯವು ದೇವತಾಕಾರ್ಯಗಳಿ ಅತ್ಯಂತ ಪ್ರಶಸ್ತವಾದ ಸಮಯ. ಯಾಜ್ಞವಲ್ಕ್ಯ ಮಹರ್ಷಿಗಳು ಹೀಗೆ ಹೇಳುತ್ತಾರೆ. ಶುಚಿಃ ವಾ ಅಶುಚಿಃ ವಾ ಕಾಲೇ ಸಂಧ್ಯಾ ಸಮಾಚರೇತ್ ಎಂದು. ಮಾನವನು ಶುಚಿಯಾಗಿರಲಿ ಅಶುಚಿಯಾಗಿರಲಿ ಸಂಧ್ಯಾಕಾಲದಲ್ಲಿ ದೇವರ ನಾಮಸ್ಮರಣೆ ಮತ್ತು ಸಂಧ್ಯವಂದನೆಯನ್ನು ಮಾಡಲೇಬೇಕು ಎಂದು.

ಅರ್ಥಾತ್ ಸಂಧ್ಯಾ ಸಮಯವೆಂಬುದು ಅತ್ಯಂತ ಪುಣ್ಯಕಾಲ ಎಂಬುದು ನಿಶ್ಚಿತ. ಇಂತಹ ಪುಣ್ಯಕಾಲವಾದ ಪ್ರಾತಃಸಂಧ್ಯೆಯಲ್ಲಿ ಜ್ಞಾನಾಪೇಕ್ಷಿತನಾದ (ಒಳ್ಳೆಯ ಬುದ್ಧಿ ಬಯಸುವವನು) ವ್ಯಕ್ತಿಯು ಪೂರ್ವಭಿಮುಖವಾಗಿ ಸೂರ್ಯನನ್ನು ಧ್ಯಾನಿಸಬೇಕು ಮತ್ತು ಸೂರ್ಯಸ್ತುತಿಯನ್ನು ಮಾಡಬೇಕು. ಈ ಸಮಯದಲ್ಲಿ (ಸೂರ್ಯೋದಯದ ಕಾಲದಲ್ಲಿ) ತಪ್ಪಿಯೂ ಮಲಗಿರಬೇಡಿ. ಇದರಿಂದ ಅನಾರೋಗ್ಯ ನಿಶ್ಚಿತವಾಗಿಯೂ ಸಂಭವಿಸುವುದು. ಇದು ಆಯುರ್ವೇದವೂ ಒಪ್ಪಿದ ಸತ್ಯ.

ಇದನ್ನೂ ಓದಿ:Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ಹಾಗೆಯೇ ಸಾಯಂ ಸಂಧ್ಯೆಯ ಕಾಲ ಲಕ್ಷ್ಮಿಯ ಕಾಲ. ಈ ಕಾಲವನ್ನು ಸೂರ್ಯಾಸ್ತದ ಕಾಲವೆನ್ನುವರು. ಈ ಸೂರ್ಯಾಸ್ತದ ಸಂದರ್ಭದಲ್ಲಿ ಯಾರೂ ಮುಖ್ಯವಾಗಿ ಆಹಾರ ಸೇವನೆ ಮಾಡಲೇಬಾರದು ಮತ್ತು ಮಲಗಿರಲೂ ಬಾರದು. ಈ ಸಮಯದಲ್ಲಿ ಸಂಪತ್ತಿನ ಅಪೇಕ್ಷೆಯುಳ್ಳವರು ಮತ್ತು ಅಭಿವೃದ್ಧಿಯನ್ನು ಬಯಸುವವರು ಈ ಎರಡು ತಪ್ಪನ್ನು ಮಾಡಬೇಡಿರಿ. ಸಾಯಂಕಾಲ ಸೂರ್ಯೋದಯ ಆದಾಗಿನಿಂದ 48 ನಿಮಿಷಗಳ ಕಾಲ ಆಹಾರವನ್ನು ಸ್ವೀಕರಿಸಲೇಬೇಡಿ. ಸಾಧ್ಯವಿದ್ದಲ್ಲಿ ಮನೆಯ ಮುಂದೆ ತುಳಸಿ ಇದ್ದರೆ ಅಲ್ಲಿ ದೀಪವನ್ನು ಹಚ್ಚಿರಿ ಇಲ್ಲದಿದ್ದಲ್ಲಿ ಮನೆಯ ಮುಖ್ಯ ದ್ವಾರದ ಮುಂಭಾಗದಲ್ಲಿ ದೀಪವನ್ನು ಹಚ್ಚಿರಿ. ಅದರಿಂದ ಮನೆಗೆ ಭಾಗ್ಯಲಕ್ಷ್ಮಿಯನ್ನು ಸ್ವಾಗತಿಸಿದಂತೆ ಆಗುವುದು. ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದು.

ಸಂಧ್ಯಾಕಾಲವೆನ್ನುವುದು ದೇವತಾಕಾರ್ಯಕ್ಕೆ ಅಂದರೆ ನಾಮಸ್ಮರಣೆ ಭಜನೆ ಪೂಜೆ ಇತ್ಯಾದಿಗಳಿಗೆ ಅತ್ಯಂತ ಪುಣ್ಯಕಾಲ ಮಾತ್ರವಲ್ಲ ಒಳ್ಳೆಯ ಮುಹೂರ್ತಕಾಲವೂ ಹೌದು. ಇಂತಹ ಒಳ್ಳೆಯ ಮುಹೂರ್ತವನ್ನು ಭಗವಂತ ನಮಗೆ ದಿನಕ್ಕೆ ಎರಡು ಬಾರಿ ನೀಡಿರುವಾಗ ಅದನ್ನು ಮಲಗಿಯೋ ಅಥವಾ ಆಹಾರ ಸೇವನೆಗೋ ಬಳಸಿ ದಾರಿದ್ರ್ಯ ರೋಗ ಅಶುಭವನ್ನು ಅನುಭವಿಸುವುದಕ್ಕಿಂತ ಉತ್ತಮ ಕಾರ್ಯಗಳಾದ ದೇವರ ನಾಮಸ್ಮರಣೆಯಲ್ಲಿ ತೊಡಗಿಸಿ ನೆಮ್ಮದಿ ಆರೋಗ್ಯ ಸಂಪತ್ತುಗಳನ್ನು ಅನುಭವಿಸುವುದು ಉತ್ತಮ ಅಲ್ಲವೇ? ಯೋಚಿಸಿ. ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ, ಮನಸ್ಸಿದ್ದರೆ ಯಾವುದೂ ಕಷ್ಟವಲ್ಲ ಅಲ್ಲವೇ?

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:01 am, Thu, 11 May 23

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?