AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಗ್ರಹಣದ ಪ್ರಭಾವ ಇದೆಯೇ?

ಇಂದು ಸಂಭವಿಸುತ್ತಿರುವ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು 2026ರ ಮೊದಲ ಗ್ರಹಣವಾಗಿದೆ. ಇದು ಭಾರತದಲ್ಲಿ ಗೋಚರಿಸದಿದ್ದರೂ, ಕೆಲವು ರಾಶಿಗಳ ಮೇಲೆ ಇದರ ಪ್ರಭಾವವಿರುತ್ತದೆ. ಪಂಚಗ್ರಹ ಕೂಟ ಮತ್ತು ಗುರು ದೃಷ್ಟಿಯೊಂದಿಗೆ ಧನಿಷ್ಠಾ ನಕ್ಷತ್ರದಲ್ಲಿ ನಡೆಯುವ ಈ ಗ್ರಹಣದ ಪರಿಣಾಮಗಳು, ಜಪ, ದಾನ, ಧ್ಯಾನದಂತಹ ಪರಿಹಾರ ಕ್ರಮಗಳ ಕುರಿತು ಇಲ್ಲಿ ತಿಳಿದುಕೊಳ್ಳಿ.

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಗ್ರಹಣದ ಪ್ರಭಾವ ಇದೆಯೇ?
2026ರ ಮೊದಲ ಸೂರ್ಯಗ್ರಹಣImage Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 17, 2026 | 10:29 AM

Share

ಇಂದು(ಫೆಬ್ರವರಿ 17)ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಇದು 2026ನೇ ವರ್ಷದ ಪ್ರಥಮ ಗ್ರಹಣವಾಗಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಂತಹ ಪ್ರದೇಶಗಳಲ್ಲಿ ಇದು ಗೋಚರಿಸಲಿದೆ. ಭಾರತದಲ್ಲಿ ಗೋಚರಿಸದಿದ್ದರೂ, ಗ್ರಹಣದ ಪರಿಣಾಮಗಳು ಕೆಲವು ರಾಶಿಗಳ ಮತ್ತು ನಕ್ಷತ್ರಗಳ ಮೇಲೆ ಇರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಈ ಗ್ರಹಣವು ಮಾಘ ಮಾಸದ ಕೃಷ್ಣಪಕ್ಷದಲ್ಲಿ ಸಂಭವಿಸುತ್ತಿದೆ. ಇದು ಕುಂಭ ರಾಶಿಯ ಧನಿಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಡೆಯುತ್ತಿದೆ. ಇದನ್ನು “ರಿಂಗ್ ಆಫ್ ಫೈರ್” ಎಂದು ಕರೆಯಲಾಗುತ್ತದೆ. ಅಂದರೆ, ಸೂರ್ಯನು ಬೆಂಕಿಯ ಆಕಾರದಲ್ಲಿ ಕಾಣಿಸುತ್ತಾನೆ. ಗ್ರಹಣದ ಸಮಯದಲ್ಲಿ ಐದು ಗ್ರಹಗಳಾದ ರವಿ, ಬುಧ, ಶುಕ್ರ, ರಾಹು, ಮತ್ತು ಚಂದ್ರ ಒಂದೇ ಮನೆಯಲ್ಲಿ ಇರುವುದು ವಿಶೇಷ. ಇದನ್ನು ಪಂಚಗ್ರಹ ಕೂಟ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ, ಗುರು ಗ್ರಹವು ಈ ಗ್ರಹಣವನ್ನು ನೋಡುತ್ತಿದೆ, ಇದು ಇದರ ಮಹತ್ವವನ್ನು ಹೆಚ್ಚಿಸುತ್ತದೆ.

ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26 ಕ್ಕೆ, ಮಧ್ಯಮ ಕಾಲ ಸಂಜೆ 5:43 ಕ್ಕೆ ಮತ್ತು ಮೋಕ್ಷಕಾಲ ರಾತ್ರಿ 7:57 ಕ್ಕೆ ಇರುತ್ತದೆ. ಇದು ಭಾರತದಲ್ಲಿ ಗೋಚಾರವಿಲ್ಲದಿದ್ದರೂ, ಕರ್ಕಾಟಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಮತ್ತು ಕುಂಭ ರಾಶಿಯವರ ಮೇಲೆ ತೀವ್ರ ಪರಿಣಾಮಗಳನ್ನು ಮತ್ತು ಬದಲಾವಣೆಗಳನ್ನು ತರಬಹುದು. ರವಿ ಗ್ರಹವನ್ನು ರಾಜಗ್ರಹವೆಂದು ಪರಿಗಣಿಸಲಾಗುತ್ತದೆ, ಇದು ಆತ್ಮಕಾರಕ ಮತ್ತು ಆರೋಗ್ಯಕಾರಕ ಗ್ರಹವಾಗಿದೆ. ಈ ಗ್ರಹಣವು ರಾಜಕೀಯ, ಆಡಳಿತ, ನಾಯಕರು ಮತ್ತು ಅಧಿಕಾರಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಧನಿಷ್ಠಾ ನಕ್ಷತ್ರದ ಜೊತೆಗೆ ಮೃಗಶಿರಾ ಮತ್ತು ಚಿತ್ತಾ ನಕ್ಷತ್ರಗಳಿಗೂ ಇದು ಅಷ್ಟೊಂದು ಶುಭಕರವಲ್ಲ.

ಇದನ್ನೂ ಓದಿ: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ

ಗ್ರಹಣದ ಸಮಯದಲ್ಲಿ ಬುದ್ಧಿಮಾಂದ್ಯರು, ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳು ಮತ್ತು ಗರ್ಭಿಣಿಯರು ಪ್ರಯಾಣಿಸುವುದು ಅಷ್ಟು ಶುಭಕರವಲ್ಲ. ಗ್ರಹಣದ ಪ್ರಭಾವವು ಸುಮಾರು 90 ದಿನಗಳವರೆಗೆ ಇರಬಹುದು. ಪರಿಹಾರ ಕ್ರಮಗಳಾಗಿ, ಈ ಸಮಯದಲ್ಲಿ ಧ್ಯಾನ ಮಾಡುವುದು, ಸೂರ್ಯ ನಮಸ್ಕಾರ ಮಾಡುವುದು, ಮಂತ್ರ ಜಪ ಮಾಡುವುದು, ಹಾಗೂ ದಾನಗಳನ್ನು ನೀಡುವುದು ಹೆಚ್ಚು ಫಲಪ್ರದ. ವಿಶೇಷವಾಗಿ, ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರು ಗೋಧಿ, ಉದ್ದಿನಬೇಳೆ, ತಾಮ್ರವನ್ನು ದಾನ ಮಾಡುವುದರಿಂದ ಮತ್ತು ಸೂರ್ಯನ ಜಪ ಮಾಡುವುದರಿಂದ ಹಾಗೂ ಆದಿತ್ಯ ಹೃದಯವನ್ನು ಕೇಳಿಸಿಕೊಳ್ಳುವುದರಿಂದ ಶುಭ ಫಲ ದೊರೆಯುತ್ತದೆ. ಗ್ರಹಣದ ಸಮಯದಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಜಾಗರೂಕರಾಗಿರುವುದು ಮುಖ್ಯ. ಪ್ರಪಂಚದ ಯಾವುದೇ ಮೂಲೆಯಲ್ಲಿ ಗ್ರಹಣ ಸಂಭವಿಸಿದರೂ, ಕೆಲವು ರಾಶಿಗಳು ಮತ್ತು ನಕ್ಷತ್ರಗಳ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Tue, 17 February 26