AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saturn Line Palmistry: ಅಂಗೈಯಲ್ಲಿ ಶನಿ ರೇಖೆ ಎಲ್ಲಿದೆ? ಇದು ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ?

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಶನಿ ರೇಖೆಯು ಅತ್ಯಂತ ಪ್ರಮುಖವಾಗಿದೆ. ಇದು ವ್ಯಕ್ತಿಯ ಭವಿಷ್ಯ, ವೃತ್ತಿ ಮತ್ತು ಶನಿ ದೇವರ ಪ್ರಭಾವವನ್ನು ಸೂಚಿಸುತ್ತದೆ. ಮಧ್ಯದ ಬೆರಳಿನ ಕೆಳಗೆ ಮೂಡುವ ಈ ರೇಖೆ ಜೀವನದಲ್ಲಿ ಹೋರಾಟದ ನಂತರ 35 ವರ್ಷದ ನಂತರ ಅಪಾರ ಯಶಸ್ಸು, ಪ್ರಾಮಾಣಿಕತೆ ಮತ್ತು ಸುವರ್ಣ ಕಾಲವನ್ನು ತರುತ್ತದೆ. ರೇಖೆಯ ಸ್ಪಷ್ಟತೆ ಮತ್ತು ಬಣ್ಣವು ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ.

Saturn Line Palmistry: ಅಂಗೈಯಲ್ಲಿ ಶನಿ ರೇಖೆ ಎಲ್ಲಿದೆ? ಇದು ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ?
ಶನಿ ರೇಖೆ
ಅಕ್ಷತಾ ವರ್ಕಾಡಿ
|

Updated on:Feb 21, 2026 | 10:39 AM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅದೇ ರೀತಿ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳಿಗೆ ಅಷ್ಟೇ ಮಹತ್ವವಿದೆ. ಒಬ್ಬ ವ್ಯಕ್ತಿಯ ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯು ಅದು ಅವನ ವ್ಯಕ್ತಿತ್ವ, ವೃತ್ತಿ ಮತ್ತು ಭವಿಷ್ಯದ ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿರುತ್ತದೆ. ಇಂದು ಹಸ್ತದಲ್ಲಿನ ಅತ್ಯಂತ ಪ್ರಭಾವಶಾಲಿ ರೇಖೆಯಾದ ‘ಶನಿ ರೇಖೆ’ (Saturn Line) ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಶನಿ ರೇಖೆ ಅಂಗೈಯಲ್ಲಿ ಎಲ್ಲಿರುತ್ತದೆ?

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಮ್ಮ ಮಧ್ಯದ ಬೆರಳಿನ (Middle Finger) ಕೆಳಭಾಗದಲ್ಲಿರುವ ಉಬ್ಬಿದ ಭಾಗವನ್ನು ‘ಶನಿ ಪರ್ವತ’ ಎಂದು ಕರೆಯಲಾಗುತ್ತದೆ. ಈ ಶನಿ ಪರ್ವತದತ್ತ ಸಾಗುವ ಅಥವಾ ಅಲ್ಲಿ ಮೂಡುವ ರೇಖೆಯನ್ನೇ ‘ಶನಿ ರೇಖೆ’ ಎನ್ನಲಾಗುತ್ತದೆ. ಈ ರೇಖೆಯು ನಿಮ್ಮ ಜೀವನದಲ್ಲಿ ಶನಿದೇವನ ಪ್ರಭಾವ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.ಜೀವನದ ಮೇಲೆ ಶನಿ ರೇಖೆಯ ಪ್ರಭಾವಗಳುಶನಿ ಎಂದರೆ ಕೇವಲ ಕಷ್ಟಗಳಲ್ಲ, ಅದು ಶಿಸ್ತು ಮತ್ತು ಪರಿಶ್ರಮದ ಸಂಕೇತ.

ಅಂಗೈಯಲ್ಲಿ ಶನಿ ರೇಖೆಯಿದ್ದರೆ ಏನು ಫಲ?

  • ಹೋರಾಟದ ನಂತರ ಯಶಸ್ಸು: ಅಂಗೈಯಲ್ಲಿ ಶನಿ ರೇಖೆ ಇದ್ದರೆ, ಜೀವನದ ಆರಂಭಿಕ ಹಂತದಲ್ಲಿ ನೀವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ನೆನಪಿಡಿ, ಈ ಹೋರಾಟಗಳೇ ನಿಮಗೆ ಜೀವನದ ದೊಡ್ಡ ಪಾಠಗಳನ್ನು ಕಲಿಸುತ್ತವೆ.
  • 35ರ ನಂತರ ಸುವರ್ಣ ಕಾಲ: ಅಂಗೈಯಲ್ಲಿ ಶನಿ ರೇಖೆ ಇದ್ದರೆ ಸಾಮಾನ್ಯವಾಗಿ ಶನಿ ರೇಖೆಯ ಪ್ರಭಾವದಿಂದ ಆ ವ್ಯಕ್ತಿಯು 35 ವರ್ಷ ವಯಸ್ಸಿನ ನಂತರ ಅಪಾರ ಯಶಸ್ಸನ್ನು ಕಾಣುತ್ತಾನೆ. ಜೀವನದ ಎಲ್ಲಾ ಸುಖ-ಸಂತೋಷಗಳು ಈ ಅವಧಿಯಲ್ಲಿ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ನಂಬಲಾಗಿದೆ.
  • ನ್ಯಾಯಯುತ ಜೀವನ: ಬಲವಾದ ಶನಿ ರೇಖೆ ಹೊಂದಿರುವವರು ಅತ್ಯಂತ ಪ್ರಾಮಾಣಿಕರು ಮತ್ತು ನ್ಯಾಯಪ್ರಿಯರಾಗಿರುತ್ತಾರೆ. ತಪ್ಪು ದಾರಿಯಲ್ಲಿ ನಡೆಯಲು ಇವರು ಯಾವಾತ್ತಿಗೂ ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ರೇಖೆಯ ವಿನ್ಯಾಸ ಮತ್ತು ಅದರ ಅರ್ಥಗಳು:

ನಿಮ್ಮ ಅಂಗೈಯಲ್ಲಿರುವ ಶನಿ ರೇಖೆ ಯಾವ ಸ್ಥಿತಿಯಲ್ಲಿದೆ ಎಂಬುದು ಕೂಡ ಬಹಳ ಮುಖ್ಯ.

  • ಸ್ಪಷ್ಟ ಮತ್ತು ನೇರ ರೇಖೆ: ಜೀವನದಲ್ಲಿ ಅಡೆತಡೆಗಳಿಲ್ಲದ ಯಶಸ್ಸು ಮತ್ತು ಸುಖ-ಸಂತೋಷ ಪ್ರಾಪ್ತಿ.
  • ಹಸಿರು-ಗುಲಾಬಿ ಮಿಶ್ರಿತ ಬಣ್ಣದ ರೇಖೆ: ಸಮೃದ್ಧ ಕೌಟುಂಬಿಕ ಜೀವನ, ಕೆಲವರಲ್ಲಿ ಪ್ರೇಮ ವಿವಾಹದ ಯೋಗವೂ ಕಂಡುಬರುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
  • ತುಂಡಾದ ಅಥವಾ ಮಾಸಿದ ರೇಖೆ: ಜೀವನದಲ್ಲಿ ಸಂಕಷ್ಟಗಳು ಹೆಚ್ಚಾಗಬಹುದು. ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Sat, 21 February 26

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು