AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual: ಪ್ರಾಚೀನರು ಹೇಳದ್ದು, ಅರ್ವಾಚೀನರು ಹೇಳಿದ್ದು….

ಭಾರತದಂತಹ ಮತೀಯ, ಭಾಷಿಕ, ಜನಾಂಗೀಯ ಬಹುತ್ವಯುಕ್ತ ರಾಷ್ಟ್ರದಲ್ಲಿ ಜೈನ ರಾಮಾಯಣದಲ್ಲಿ ಲಕ್ಷ್ಮಣ ರಾವಣನನ್ನು ಕೊಲ್ಲುವುದು, ಕಾಶ್ಮೀರೀ ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿರುವುದು, ಆನಂದ ರಾಮಾಯಣದಲ್ಲಿ ಸೀತೆ ರಾವಣನ ಬೆರಳಿನ ಚಿತ್ರ ಬಿಡಿಸಿದಳೆಂದು ರಾಮ ಆಕೆಯನ್ನು ಕಾಡಿಗೆ ಕಳುಹಿಸುವುದು ಇವೇ ಮುಂತಾದ ಆವಾಪ ಉದ್ವಾಪಗಳು ಸಂಭವಿಸುತ್ತಿರುತ್ತವೆ.

Spiritual: ಪ್ರಾಚೀನರು ಹೇಳದ್ದು, ಅರ್ವಾಚೀನರು ಹೇಳಿದ್ದು....
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 25, 2022 | 7:00 AM

Share

ಭಾರತೀಯ ಕಾವ್ಯ ಪ್ರಪಂಚದಲ್ಲಿ ‘ಕವಿಸಮಯ‘ ಎನ್ನುವುದೊಂದು ವಿಶಿಷ್ಟವಾದ ಅವಕಾಶ. ಪ್ರಾಚೀನನಾದ ಕವಿಯೊಬ್ಬ ಭುವನೋಪಜೀವಿಯಾದ ಕಾವ್ಯವನ್ನು ಬರೆದಾಗ ಅದನ್ನಾಧರಿಸಿ ಕಲಾಪ್ರಕಾರಗಳಲ್ಲಿ ಅದನ್ನು ಮೂಡಿಸಿ ತಮ್ಮ ಸಮಕಾಲೀನರ ಮನಸ್ಸನ್ನು ಮುದಗೊಳಿಸಲು ಹಾಗೂ ಮೂಲಕವಿಯ ಕೃತಿಯಲ್ಲಿನ ವಿಷಯಗಳನ್ನು ಹಾಗೂ ಆಶಯಗಳನ್ನು ಆಚಂದ್ರಾರ್ಕವಾಗಿ ಜೀವಂತವಾಗಿರಿಸಲು ಅರ್ವಾಚೀನನೂ ಸಮರ್ಥನೂ ಆದ ಕವಿಯೊಬ್ಬನಿಗೆ ಮೂಲಕಾವ್ಯದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅದರ ಮರುಸೃಷ್ಟಿಯನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೆ ಆ ಮರುಸೃಷ್ಟಿಯಲ್ಲಿ ಹೊಸ ಪಾತ್ರಗಳ, ಹೊಸ ಸನ್ನಿವೇಶಗಳ, ಹೊಸ ಆದರ್ಶಗಳ ಮೂಲಕ ಆತ ಹೊಮ್ಮಿಸುವ ಸೃಜನಶೀಲತೆಯು ಮೂಲದ ಆಶಯಗಳಿಗೆ ಧಕ್ಕೆಯುಂಟುಮಾಡುವುದಾಗಲೀ ಅಥವಾ ಅಲ್ಲಿನ ಐತಿಹಾಸಿಕವಾಗಿ ಪ್ರಮುಖವಾಗಬಹುದಾದಂತಹ ಘಟನೆಗಳನ್ನೇ ತಿರುಚುವುದನ್ನಾಗಲೀ ಮಾಡಬಾರದೆನ್ನುವುದು ಸರ್ವಾನುಮೋದಿತವಾದ ವಿಧಿ.

ಕೆಲವು ಬಾರಿ ಅಂತಹ ಅಪಸವ್ಯಗಳು ಸಂಭವಿಸುತ್ತವೆ. ಅದರಲ್ಲಿಯೂ ಭಾರತದಂತಹ ಮತೀಯ, ಭಾಷಿಕ, ಜನಾಂಗೀಯ ಬಹುತ್ವಯುಕ್ತ ರಾಷ್ಟ್ರದಲ್ಲಿ ಜೈನ ರಾಮಾಯಣದಲ್ಲಿ ಲಕ್ಷ್ಮಣ ರಾವಣನನ್ನು ಕೊಲ್ಲುವುದು, ಕಾಶ್ಮೀರೀ ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿರುವುದು, ಆನಂದ ರಾಮಾಯಣದಲ್ಲಿ ಸೀತೆ ರಾವಣನ ಬೆರಳಿನ ಚಿತ್ರ ಬಿಡಿಸಿದಳೆಂದು ರಾಮ ಆಕೆಯನ್ನು ಕಾಡಿಗೆ ಕಳುಹಿಸುವುದು ಇವೇ ಮುಂತಾದ ಆವಾಪ ಉದ್ವಾಪಗಳು ಸಂಭವಿಸುತ್ತಿರುತ್ತವೆ. ಅಂತಹದೇ ಒಂದು ಅಪಸವ್ಯ “ರಾವಣ ಸೀತೆಯನ್ನು ಪುಷ್ಪಕವಿಮಾನದಲ್ಲಿ ಅಪಹರಿಸಿಕೊಂಡು ಹೋದ” ಎನ್ನುವುದು.

ಪ್ರಸ್ತುತ ಗ್ರಂಥದ ಮೂಲಕರ್ತೃವಾದ ವಾಲ್ಮೀಕಿ ಮಹರ್ಷಿಗಳು ಮಾತ್ರ,

ಇದನ್ನೂ ಓದಿ
Image
Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?
Image
“ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ
Image
ಮನೆಯಲ್ಲಿ ನೆಮ್ಮದಿ ಕಾಣಬೇಕೆಂದರೆ ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋಗಳು ಇಡಬೇಡಿ!
Image
Vastu Tips: ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ

“ಪ್ರಾದ್ರವನ್ ಗಿರಿಸಂಕಾಶಂ ಭಯಾರ್ತಾ ವನದೇವತಾಃ |

ಸ ಚ ಮಾಯಮಯೋ ದಿವ್ಯಃ ಖರಯುಕ್ತಃ ಖರಸ್ವನಃ ||

ಪ್ರತ್ಯದರ್ಶತ ಹೇಮಾಂಗೋ ರಾವಣಸ್ಯ ಮಹಾರಥಃ |” (ರಾವಣನು ಪರ್ವತೋಪಮವಾಗಿ ಬೆಳೆದನು. ಅಷ್ಟರಲ್ಲಿ ಅವನ ಹೇಸರಗತ್ತೆಗಳಿಂದ ಕೂಡಿದ, ಕರ್ಕಶವಾದ ಶಬ್ದವನ್ನುಂಟುಮಾಡುತ್ತಿದ್ದ ಸ್ವರ್ಣಮಯವಾದ ರಥವು ಕಾಣಿಸಿಕೊಂಡಿತು)

“ಅಂಕೇನಾದಾಯ ವೈದೇಹೀಂ ರಥಮಾರೋಪಯತ್ತದಾ |” (ತೊಡೆಯ ಹಿಂಭಾಗವನ್ನು ಹಿಡಿದು ಸೀತೆಯನ್ನು ರಥಕ್ಕೆ ಹತ್ತಿಸಿದನು) ಎಂದೇ ಆ ಸನ್ನಿವೇಶವನ್ನು ವರ್ಣಿಸುತ್ತಾರೆ. ಇದೇ ರಥವನ್ನೂ, ಅದರ ಸಾರಥಿಯನ್ನೂ ಹಾಗೂ ರಾವಣನಿಗೆ ಛತ್ರ ಚಾಮರಗಳನ್ನು ಹಿಡಿದಿದ್ದವರನ್ನೂ ಮುಂದೆ ಮಾರ್ಗಮಧ್ಯದಲ್ಲಿ ಮಹಾಪರಾಕ್ರಮಿಯಾದ ಜಟಾಯುವು ನಾಶಪಡಿಸುತ್ತಾನೆ. ತದನಂತರ ಜಟಾಯುವನ್ನು ಕೊಂದ ರಾವಣ ಸೀತೆಯನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಹಾರಿಹೋಗುತ್ತಾನೆ.

“ಸ ತು ತಾಂ ರಾಮ ರಾಮೇತಿ ರುದಂತೀಂ ಲಕ್ಷ್ಮಣೇತಿ ಚ | ಜಗಾಮಾದಾಯ ಚಾಕಾಶಂ ರಾವಣೋ ರಾಕ್ಷಸೇಶ್ವರಃ ||”

ಆಶ್ಚರ್ಯವೆಂದರೆ ತೊರವೆ ರಾಮಾಯಣವಾಗಲೀ, ತುಳಸೀರಾಮಾಯಣವಾಗಲೀ, ಆಧ್ಯಾತ್ಮ ರಾಮಾಯಣವಾಗಲೀ ‘ರಥ’ದಲ್ಲಿ ರಾವಣ ಸೀತೆಯನ್ನು ಅಪಹರಿಸಿದ ಎಂದೇ ಹೇಳುವುದು.

ಕಲಾಪ್ರಕಾರಗಳಲ್ಲಿ ಕೆಲವೊಮ್ಮೆ ರಂಜನೆಯ ದೃಷ್ಟಿಯಿಂದ ಕೆಲವು ಬದಲಾವಣೆಗಳು ಮಾಡಲ್ಪಡುತ್ತವೆ. ತಪ್ಪೇನೂ ಅಲ್ಲ. ಹಾಗಾಗಿ ಪುರಾಣೋಪಜೀವೀ ಕಲೆಯಾದ ಯಕ್ಷಗಾನದಲ್ಲಿ ಎಲ್ಲಿಯಾದರೂ ಈ ಪ್ರಯೋಗ ನಡೆದಿದೆಯೇ ಅಂತ ಗಮನಿಸಿದಾಗ ಅಲ್ಲಿಯೂ ಸಹ ‘ಪಾರ್ತಿಸುಬ್ಬ’ ಕವಿಯ ‘ಸೀತಾಪಹಾರ’ ಪ್ರಸಂಗದಲ್ಲಿ ಸ್ಪಷ್ಟವಾಗಿ “ದಾನವನು ತನಗೆ ಸಿಕ್ಕಿದಳೆಂದು ನೆನೆಸುತ್ತಲಾ ನಿತಂಬೆಯ ‘ರಥದಲಿ’ ಕುಳ್ಳಿರಿಸುತೈದಿದಂ” ಅಂತಲೇ ಹೇಳುವುದು!!

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಮನೆಯಲ್ಲಿ ನೆಮ್ಮದಿ ಕಾಣಬೇಕೆಂದರೆ ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋಗಳು ಇಡಬೇಡಿ!

ಅರೇ!! ಪುಷ್ಪಕವಿಮಾನವೆಲ್ಲಿ??

ಅದು ಇರುವುದು ಕ್ರಿಸ್ತಪೂರ್ವ ಮೂರನೇ ಶತಮಾನದ ಸುಮಾರಿಗೆ ಜೀವಿಸಿದ್ದನೆಂದು ಹೇಳಲಾದ ಜೈನಕವಿಯಾದ ವಿಮಲಸೂರಿಯ ಪ್ರಾಕೃತ ಭಾಷೆಯ ರಾಮಾಯಣದ ಆವೃತ್ತಿಯಲ್ಲಿ. ಮುಂದೆ ಅದನ್ನೇ ಕನ್ನಡದ ನಾಗಚಂದ್ರ ಕವಿ ತನ್ನ ಪಂಪರಾಮಾಯಣಕ್ಕೆ ತಂದ. ಅಷ್ಟೇ……!!

ಈ ಘಟ್ಟದಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ಸನ್ನಿವೇಶದಲ್ಲಿ ಇಂತಹ ಬದಲಾವಣೆ ಉಂಟಾದರೂ ಖಳಪಾತ್ರಗಳ ಉದಾರೀಕರಣದ ಭರದಲ್ಲಿ ರಾವಣ ಸೀತೆಯನ್ನು ಕದ್ದೊಯ್ದದ್ದಲ್ಲ, ಸೀತೆಯೇ ರಾವಣನೊಂದಿಗೆ ಹೋದದ್ದು ಎಂದಾಗಲಿಲ್ಲವಲ್ಲ. ರಾವಣ ಸೀತೆಯನ್ನು ಪಂಚವಟಿಯಿಂದ ಅಪಹರಿಸಿದ ಅನ್ನುವ ಮೂಲದ ಅಂಶ ಹಾಗೆಯೇ ಉಳಿಯಿತಲ್ಲ. ಅದೇ ಸಮಾಧಾನ….!! ಇದನ್ನೇ ಸಕಾರಾತ್ಮಕ ಸೃಜನಶೀಲತೆ ಎನ್ನುವುದು.

– ನಚಿಕೇತ್ ಹೆಗಡೆ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್