AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಮೋಸ ಹೋಗದಿರಲು ಈ 5 ಪಾಠಗಳನ್ನು ನೀವು ತಿಳಿದಿರಬೇಕು- ಚಾಣಕ್ಯ ನೀತಿ

ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ಆಗಬಹುದಾದ ದೊಡ್ಡ ಅನಾಹುತದಿಂದ ಆದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

Chanakya Niti: ಜೀವನದಲ್ಲಿ ಮೋಸ ಹೋಗದಿರಲು ಈ 5 ಪಾಠಗಳನ್ನು ನೀವು ತಿಳಿದಿರಬೇಕು- ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us
TV9 Web
| Updated By: ganapathi bhat

Updated on:Apr 05, 2022 | 12:34 PM

ಜೀವನದಲ್ಲಿ ಎಷ್ಟು ಎಚ್ಚರವಿದ್ದರೂ ಸಾಕಾಗುವುದಿಲ್ಲ. ಹಲವು ಬಾರಿ ಎಷ್ಟು ಜಾಗರೂಕರಾಗಿ ಇದ್ದರೂ ಎಡವಿ ಬೀಳುತ್ತೇವೆ. ಮೋಸ ಹೋಗುತ್ತೇವೆ. ಎಷ್ಟೇ ಅಚ್ಚುಕಟ್ಟಿನ ಜೀವನ ನಮ್ಮದಾಗಿದ್ದರೂ ಸಣ್ಣ ತಪ್ಪು ಹೆಜ್ಜೆಯೂ ಭಾರೀ ದೊಡ್ಡ ಸಮಸ್ಯೆಗೆ ಕಾರಣ ಆಗಬಹುದು. ನಮಗೆ ತಿಳಿದವರು, ತಿಳಿಯದವರು ಯಾರೂ ಕೂಡ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಷ್ಟದ ಸಮಯದಲ್ಲಿ ಚಾಣಕ್ಯ ನೀತಿಯು ನಮಗೆ ಸಹಕಾರಿ ಆಗಬಹುದು. ಚಾಣಕ್ಯ ನೀತಿ ಹಲವು ಬಾರಿ ನಮ್ಮ ಜೀವನಕ್ಕೆ ನೀತಿಪಾಠ ಹೇಳಿ, ದಾರಿ ತೋರಬಹುದು. ನೀತಿ ತಿಳಿದಿರುವುದರಿಂದ ಕೆಲವು ಸಮಸ್ಯೆಗಳನ್ನಾದರೂ ತಪ್ಪಿಸಿಕೊಳ್ಳಬಹುದು.

ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ಆಗಬಹುದಾದ ದೊಡ್ಡ ಅನಾಹುತದಿಂದ ಆದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

  • ಚಾಣಕ್ಯ ನೀತಿಯ ಪ್ರಕಾರ, ದುಷ್ಟ ಹೆಂಡತಿ, ಸುಳ್ಳು ಸ್ನೇಹಿತ, ರಾಕ್ಷಸ ಸೇವಕ ಮತ್ತು ಹಾವಿನೊಂದಿಗೆ ವಾಸಿಸುವ ವ್ಯಕ್ತಿಯು ತನಗಾಗಿ ತೊಂದರೆಗಳ ಕೂಪವನ್ನು ಅಗೆಯುತ್ತಾನೆ. ಈ ಎಲ್ಲಾ ಜನರು ತನಗೆ ತಾನೇ ಮಾರಕ ಸನ್ನಿವೇಶ ಸೃಷ್ಟಿಸಿಕೊಳ್ಳಬಹುದು. ಇದು ಅವರ ಸಾವಿಗೆ ಕಾರಣವೂ ಆಗಬಹುದು. ಅವುಗಳಿಂದ ತನ್ನನ್ನು ತಾನು ದೂರ ಇಡುವವನೇ ಜ್ಞಾನಿ.
  • ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತನ್ನು ಸಂಗ್ರಹಿಸಬೇಕು. ಏಕೆಂದರೆ ತೊಂದರೆಯು ಯಾವುದೇ ಸಮಯದಲ್ಲಿ ಬರಬಹುದು. ಕಷ್ಟದ ಸಮಯದಲ್ಲಿ, ಯಾರೂ ನಿಮ್ಮೊಂದಿಗೆ ಇಲ್ಲದಿದ್ದಾಗ, ನಿಮ್ಮ ಹಣ ಮಾತ್ರ ನಿಮಗೆ ಉಪಯುಕ್ತವಾಗಿರುತ್ತದೆ.
  • ನಿಮ್ಮ ಸೇವಕನು ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದಾಗ ಅವನನ್ನು ಪರೀಕ್ಷಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ತೊಂದರೆ ಬಂದಾಗ, ಸಂಬಂಧಿಕರನ್ನು ಪರೀಕ್ಷಿಸಬೇಕು ಮತ್ತು ನೀವು ಕಷ್ಟವನ್ನು ಎದುರಿಸುತ್ತಿರುವಾಗ, ನೀವು ನಿಮ್ಮ ಸ್ನೇಹಿತರನ್ನು ಪರೀಕ್ಷಿಸಬೇಕು. ನಿಮಗೆ ಒಳ್ಳೆಯ ಸಮಯವಿಲ್ಲದಿದ್ದಾಗ ನೀವು ನಿಮ್ಮ ಹೆಂಡತಿಯನ್ನು ಪರೀಕ್ಷಿಸಬೇಕು.
  • ಎಲ್ಲಿ ಉದ್ಯೋಗದ ಸಾಧನವಿಲ್ಲವೋ ಅಲ್ಲಿ, ಜ್ಞಾನವುಳ್ಳವರು ಇಲ್ಲದಿರುವಾಗ ಮತ್ತು ಜನರು ದಾನ ಮತ್ತು ಧರ್ಮದ ಪ್ರವೃತ್ತಿಯನ್ನು ಹೊಂದಿಲ್ಲದಿದ್ದರೆ, ಅಂತಹ ಸ್ಥಳದಲ್ಲಿ ಒಬ್ಬರು ವಾಸಿಸಬಾರದು.
  • ನೀವು ಮೂರ್ಖನಿಗೆ ಬೋಧಿಸಿದರೆ, ದುಷ್ಟ ವ್ಯಕ್ತಿಗೆ ಆಹಾರವನ್ನು ನೀಡಿದರೆ ಅಥವಾ ಅತೃಪ್ತಿ ಮತ್ತು ನಕಾರಾತ್ಮಕ ಜನರ ಸಹವಾಸದಲ್ಲಿ ಇದ್ದರೆ, ನೀವೇ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೀರಿ. ಮತ್ತು ನೀವೇ ನಕಾರಾತ್ಮಕರಾಗುತ್ತೀರಿ. ಅವರಿಂದ ಅಂತರ ಕಾಯ್ದುಕೊಳ್ಳುವುದು ಜಾಣತನ.

ಇದನ್ನೂ ಓದಿ: Chanakya: ಹೊಸ ವರ್ಷದ ಹೊಸ್ತಿಲಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯನ ಈ ಮಾತು ಆಲಿಸಿ, ಅನುಸರಿಸಿ

ಇದನ್ನೂ ಓದಿ: ತಂದೆ-ತಾಯಿಯಿಂದ ಉತ್ತಮ ಸಂಸ್ಕಾರ ಪಡೆದರೆ ಮಕ್ಕಳು ಉತ್ತಮರು, ಸಫಲರೂ ಆಗುತ್ತಾರೆ! ಚಾಣಕ್ಯ ಹೇಳೋದೇನು?

Published On - 6:10 am, Mon, 21 February 22