AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Havan Bhasma Power: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ನಿಮ್ಮ ಲಾಕರ್‌ನಲ್ಲಿ ಈ ಒಂದು ವಸ್ತುವನ್ನಿಡಿ

ಹಿಂದೂ ಧರ್ಮದಲ್ಲಿ ಹವನ ಭಸ್ಮವು ಕೇವಲ ಬೂದಿಯಲ್ಲ, ಇದು ಪರಿಸರ ಮತ್ತು ಅಂತರಾತ್ಮವನ್ನು ಶುದ್ಧೀಕರಿಸುವ ಶಕ್ತಿಯುತ ವೈಜ್ಞಾನಿಕ ಪ್ರಕ್ರಿಯೆಯ ಫಲಿತಾಂಶ. ಇದು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ ಧನಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ. ದೃಷ್ಟಿ ದೋಷ, ವಾಸ್ತು ದೋಷ ನಿವಾರಣೆಗೆ, ಆರ್ಥಿಕ ಅಭಿವೃದ್ಧಿ, ನೆಮ್ಮದಿಯ ನಿದ್ರೆ ಹಾಗೂ ದೈಹಿಕ ಶುದ್ಧಿಗೆ ಹವನ ಭಸ್ಮ ಅದ್ಭುತ ಪರಿಹಾರಗಳನ್ನು ನೀಡುತ್ತದೆ.

Havan Bhasma Power: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ನಿಮ್ಮ ಲಾಕರ್‌ನಲ್ಲಿ ಈ ಒಂದು ವಸ್ತುವನ್ನಿಡಿ
ಹವನ ಅಥವಾ ಯಜ್ಞ
ಅಕ್ಷತಾ ವರ್ಕಾಡಿ
|

Updated on: Apr 09, 2026 | 12:18 PM

Share

ಹಿಂದೂ ಧರ್ಮದಲ್ಲಿ ಹವನ ಅಥವಾ ಯಜ್ಞ ಎನ್ನುವುದು ಕೇವಲ ಒಂದು ಧಾರ್ಮಿಕ ವಿಧಿ ವಿಧಾನವಲ್ಲ, ಅದು ಪರಿಸರ ಮತ್ತು ಅಂತಃಕರಣವನ್ನು ಶುದ್ಧೀಕರಿಸುವ ಒಂದು ವೈಜ್ಞಾನಿಕ ಪ್ರಕ್ರಿಯೆ. ವೇದ ಮಂತ್ರಗಳ ಘೋಷದ ನಡುವೆ, ಪವಿತ್ರ ಅಗ್ನಿಗೆ ಅರ್ಪಿತವಾದ ದ್ರವ್ಯಗಳು ದಹಿಸಿ ಉಳಿಯುವ ‘ಭಸ್ಮ’ (ಬೂದಿ) ಅಗಾಧವಾದ ದೈವಿಕ ಗುಣಗಳನ್ನು ಹೊಂದಿರುತ್ತದೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮದ ಪ್ರಕಾರ, ಈ ಪವಿತ್ರ ಭಸ್ಮವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಜೀವನದ ಅನೇಕ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು. ಅದರ ಅದ್ಭುತ ಪ್ರಯೋಜನಗಳು ಇಲ್ಲಿವೆ:

ನಕಾರಾತ್ಮಕ ಶಕ್ತಿಗಳ ಸಂಹಾರಕ:

ನಿಮ್ಮ ಮನೆಯಲ್ಲಿ ಅಕಾರಣವಾಗಿ ಕಲಹಗಳು ನಡೆಯುತ್ತಿದ್ದರೆ ಅಥವಾ ಮನೆಯ ಸದಸ್ಯರು ಪದೇ ಪದೇ ಅಸ್ವಸ್ಥರಾಗುತ್ತಿದ್ದರೆ, ಅಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಇರಬಹುದು. ಹವನ ಭಸ್ಮವನ್ನು ಮನೆಯ ನಾಲ್ಕೂ ಮೂಲೆಗಳಲ್ಲಿ ಮತ್ತು ಹೊಸ್ತಿಲ ಬಳಿ ಸಿಂಪಡಿಸಿ. ಇದು ದುಷ್ಟ ಶಕ್ತಿಗಳನ್ನು ಹೊರಹಾಕಿ, ಮನೆಯಲ್ಲಿ ಧನಾತ್ಮಕ ಕಂಪನಗಳನ್ನು (Positive Vibrations) ಹೆಚ್ಚಿಸುತ್ತದೆ.

ದೃಷ್ಟಿ ದೋಷಕ್ಕೆ ರಾಮಬಾಣ:

ಮಕ್ಕಳಿಗೆ ಅಥವಾ ವಯಸ್ಕರಿಗೆ ಬೇರೆಯವರ ಕೆಟ್ಟ ದೃಷ್ಟಿ (Evil Eye) ತಗುಲಿ ಆರೋಗ್ಯದಲ್ಲಿ ಏರುಪೇರಾದಾಗ ಭಸ್ಮವು ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಸ್ನಾನದ ನಂತರ ಈ ಪವಿತ್ರ ಬೂದಿಯನ್ನು ಹಣೆಯ ಮೇಲೆ ತಿಲಕದಂತೆ ಧರಿಸಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಬಾಹ್ಯ ದೃಷ್ಟಿ ದೋಷಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಆರ್ಥಿಕ ಅಭಿವೃದ್ಧಿ ಮತ್ತು ಸಂಪತ್ತಿನ ವೃದ್ಧಿ:

ವ್ಯಾಪಾರದಲ್ಲಿ ಸತತ ನಷ್ಟ ಅಥವಾ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಕೊರಗು ನಿಮಗಿದ್ದರೆ ಈ ಸಣ್ಣ ಪ್ರಯೋಗ ಮಾಡಿ ನೋಡಿ. ಸ್ವಲ್ಪ ಹವನ ಭಸ್ಮವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ನಿಮ್ಮ ಕಚೇರಿಯ ಡ್ರಾಯರ್ ಅಥವಾ ಮನೆಯ ಹಣದ ಲಾಕರ್‌ನಲ್ಲಿ (Tijori) ಇರಿಸಿ. ಇದು ಲಕ್ಷ್ಮಿಯ ಕೃಪೆಗೆ ಪಾತ್ರವಾಗಲು ಮತ್ತು ಧನ ಹರಿವು ಹೆಚ್ಚಲು ಸಹಕಾರಿ ಎಂಬ ನಂಬಿಕೆಯಿದೆ.

ನೆಮ್ಮದಿಯ ನಿದ್ರೆ ಮತ್ತು ದುಃಸ್ವಪ್ನಗಳ ನಿವಾರಣೆ:

ರಾತ್ರಿ ವೇಳೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅಥವಾ ಅಕಾರಣ ಭಯದಿಂದ ನಿದ್ರೆ ಬರದಿದ್ದರೆ ಭಸ್ಮವು ಮನಸ್ಸನ್ನು ಶಾಂತಗೊಳಿಸುತ್ತದೆ. ಒಂದು ಸಣ್ಣ ಕಾಗದದಲ್ಲಿ ಸ್ವಲ್ಪ ಭಸ್ಮವನ್ನು ಸುತ್ತಿ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ. ಇದು ಮನಸ್ಸಿನ ಆತಂಕವನ್ನು ದೂರ ಮಾಡಿ ಗಾಢ ನಿದ್ರೆಗೆ ಜಾರುವಂತೆ ಮಾಡುತ್ತದೆ.

ವಾಸ್ತು ದೋಷ ಮತ್ತು ದೈಹಿಕ ಶುದ್ಧಿ:

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯವರ ಏಳಿಗೆಗೆ ತಡೆಯಾಗಬಹುದು. ಹಾಗೆಯೇ ದೈಹಿಕ ಆಯಾಸವು ಮಾನಸಿಕ ನೆಮ್ಮದಿಯನ್ನು ಕಡಿತಗೊಳಿಸುತ್ತದೆ. ಮನೆಯ ಈಶಾನ್ಯ (North-East) ದಿಕ್ಕಿನಲ್ಲಿ ಹವನ ಭಸ್ಮವನ್ನು ಒಂದು ಸಣ್ಣ ಪಾತ್ರೆಯಲ್ಲಿ ಇಡುವುದರಿಂದ ವಾಸ್ತು ದೋಷದ ಪ್ರಭಾವ ಕಡಿಮೆಯಾಗುತ್ತದೆ.ದೈಹಿಕ ಶುದ್ಧಿಗೆ ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಭಸ್ಮವನ್ನು ಸೇರಿಸಿ ಸ್ನಾನ ಮಾಡುವುದರಿಂದ ಶರೀರದ ಮೇಲಿರುವ ನಕಾರಾತ್ಮಕ ಅಂಶಗಳು ದೂರವಾಗಿ ಚೈತನ್ಯ ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಕಲ್ಲಿದ್ದಲು ಟ್ರಕ್
ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಕಲ್ಲಿದ್ದಲು ಟ್ರಕ್
ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?
ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?
ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್
ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್
ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ
ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ
ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ
ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ