AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ, ಹಣದ ನಷ್ಟ ಗ್ಯಾರಂಟಿ!

ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಜ್ 'ಜಲ ತತ್ವ'ದ ಪ್ರತೀಕ. ಇದರ ದಿಕ್ಕು ಮತ್ತು ಮೇಲೆ ಇಡುವ ವಸ್ತುಗಳು ಮನೆಯ ಧನಾತ್ಮಕ ಶಕ್ತಿ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಅನೇಕರು ಸ್ಥಳಾವಕಾಶದ ಕೊರತೆಯಿಂದ ಫ್ರಿಜ್ ಮೇಲ್ಭಾಗವನ್ನು ವಸ್ತುಗಳನ್ನು ಇಡಲು ಬಳಸುತ್ತಾರೆ, ಆದರೆ ಈ ಅಭ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ವಾಸ್ತು ದೋಷಕ್ಕೆ ಕಾರಣವಾಗಬಹುದು.

Vasthu Tips: ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ, ಹಣದ ನಷ್ಟ ಗ್ಯಾರಂಟಿ!
ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Jun 21, 2026 | 4:45 PM

Share

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ಸಣ್ಣ ವಸ್ತುಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿಯೂ ಅಡುಗೆಮನೆಯಲ್ಲಿರುವ ಫ್ರಿಜ್ (Refrigerator) ಅತ್ಯಂತ ಪ್ರಮುಖವಾದ ಸಾಧನವಾಗಿದೆ. ಏಕೆಂದರೆ ಇದರಲ್ಲಿ ನಾವು ನಮ್ಮ ಆಹಾರ ಮತ್ತು ತಿನ್ನುವ ವಸ್ತುಗಳನ್ನು ಸಂಗ್ರಹಿಸಿಡುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಫ್ರಿಜ್ ಅನ್ನು ‘ಜಲ ತತ್ವ’ದ (ನೀರಿನ ಅಂಶ) ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಫ್ರಿಜ್ ಅನ್ನು ಇಡುವ ದಿಕ್ಕು ಮತ್ತು ಅದರ ಸುತ್ತಮುತ್ತಲಿನ ವಾತಾವರಣವು ಮನೆಯ ಧನಾತ್ಮಕ ಶಕ್ತಿ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅನೇಕರು ಸ್ಥಳಾವಕಾಶದ ಕೊರತೆಯಿಂದ ಫ್ರಿಜ್ ಮೇಲ್ಭಾಗವನ್ನು ವಸ್ತುಗಳನ್ನು ಇಡಲು ಬಳಸುತ್ತಾರೆ, ಆದರೆ ಈ ಅಭ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ವಾಸ್ತು ದೋಷಕ್ಕೆ ಕಾರಣವಾಗಬಹುದು.

ಫ್ರಿಜ್ ಮೇಲೆ ಮರೆತೂ ಇಡಬಾರದ 5 ಪ್ರಮುಖ ವಸ್ತುಗಳು:

ಮಾತ್ರೆ ಮತ್ತು ಔಷಧಿಗಳು:

ವಾಸ್ತು ನಿಯಮಗಳ ಪ್ರಕಾರ, ಫ್ರಿಜ್ ಮೇಲೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಇಡಬಾರದು. ಹೀಗೆ ಮಾಡುವುದರಿಂದ ಔಷಧಿಗಳ ಪ್ರಭಾವ ಅಥವಾ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಮನೆಯಲ್ಲಿ ಅನಾರೋಗ್ಯದ ವಾತಾವರಣ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಗದು ಹಣ ಅಥವಾ ಆಭರಣಗಳು:

ಕೆಲವರು ಗಡಿಬಿಡಿಯಲ್ಲಿ ಅಥವಾ ಅಭ್ಯಾಸಬಲದಿಂದ ಹಣ, ನಾಣ್ಯಗಳು ಅಥವಾ ಚಿನ್ನಾಭರಣಗಳನ್ನು ಫ್ರಿಜ್ ಮೇಲೆ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಜಾಗದಲ್ಲಿ ಹಣ ಇಡುವುದರಿಂದ ಮನೆಗೆ ಲಕ್ಷ್ಮಿ ಬರುವ ಹಾದಿ ಮುಚ್ಚಿಹೋಗುತ್ತದೆ ಮತ್ತು ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಮೈಕ್ರೋವೇವ್ ಅಥವಾ ಭಾರೀ ಎಲೆಕ್ಟ್ರಾನಿಕ್ ಉಪಕರಣಗಳು:

ಫ್ರಿಜ್ ಮೇಲೆ ಮೈಕ್ರೋವೇವ್ ಓವನ್ ಅಥವಾ ಟೋಸ್ಟರ್‌ಗಳಂತಹ ಭಾರವಾದ ಎಲೆಕ್ಟ್ರಿಕಲ್ ಉಪಕರಣಗಳನ್ನು ಇಡಬೇಡಿ. ಇವೆರಡೂ ಭಿನ್ನ ತರಂಗಗಳನ್ನು ಹೊರಸೂಸುವುದರಿಂದ ಇವುಗಳ ಶಕ್ತಿಗಳ ನಡುವೆ ಘರ್ಷಣೆ ಏರ್ಪಡುತ್ತದೆ. ಅಲ್ಲದೆ, ಫ್ರಿಜ್ ಚಾಲನೆಯಲ್ಲಿರುವಾಗ ಉಂಟಾಗುವ ಕಂಪನದಿಂದ (Vibration) ಮೇಲಿಟ್ಟ ವಸ್ತುಗಳು ಕೆಳಗೆ ಬಿದ್ದು ಹಾಳಾಗುವ ಅಪಾಯವೂ ಇರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಒಣಗಿದ ಹೂವುಗಳು ಅಥವಾ ಬೋನ್ಸಾಯ್ ಗಿಡಗಳು:

ಫ್ರಿಜ್ ಅನ್ನು ಅಂದಗೊಳಿಸಲು ಅದರ ಮೇಲೆ ಒಣಗಿದ ಹೂವುಗಳು, ಬಾಡಿದ ಎಲೆಗಳು ಅಥವಾ ಬೋನ್ಸಾಯ್ ಗಿಡಗಳನ್ನು ಇಡುವ ತಪ್ಪು ಮಾಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಒಣಗಿದ ಅಥವಾ ಬೆಳವಣಿಗೆ ಕುಂಠಿತಗೊಂಡ ಗಿಡಗಳು ಮನೆಯಲ್ಲಿ ‘ಮೃತ ಶಕ್ತಿ’ಯನ್ನು (Dead Energy) ಮತ್ತು ನಕಾರಾತ್ಮಕತೆಯನ್ನು ಆಕರ್ಷಿಸುತ್ತವೆ.

ಫ್ರಿಜ್ ಇಡಲು ವಾಸ್ತು ಸೂಚಿಸುವ ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಫ್ರಿಜ್ ಅನ್ನು ಯಾವಾಗಲೂ ಅಡುಗೆಮನೆ ಅಥವಾ ಡೈನಿಂಗ್ ರೂಮ್‌ನ ದಕ್ಷಿಣ-ಪಶ್ಚಿಮ (South-West) ಅಥವಾ ದಕ್ಷಿಣ-ಪೂರ್ವ (South-East) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ ತರಲಿದೆ. ಯಾವುದೇ ಕಾರಣಕ್ಕೂ ಫ್ರಿಜ್ ಅನ್ನು ಈಶಾನ್ಯ (North-East) ದಿಕ್ಕಿನಲ್ಲಿ ಇಡಬಾರದು. ಇದರೊಂದಿಗೆ, ಫ್ರಿಜ್ ಅನ್ನು ಯಾವಾಗಲೂ ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು; ಅದರಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಸಿ ಕಸದ ತೊಟ್ಟಿಯಂತೆ ಮಾಡಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ
ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದವರಿಗೆ ನೋ ಎಂಟ್ರಿ
ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರೆಂಟ್; 4 ಕಡೆ ವೋಟರ್ ಐಡಿ ಇರುವ ಆರೋಪ
ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರೆಂಟ್; 4 ಕಡೆ ವೋಟರ್ ಐಡಿ ಇರುವ ಆರೋಪ
ವಾರ ಭವಿಷ್ಯ; ಜೂನ್ 22 ರಿಂದ 28 ರವರೆಗಿನ ದ್ವಾದಶ ರಾಶಿಗಳ ಫಲಾಫಲ
ವಾರ ಭವಿಷ್ಯ; ಜೂನ್ 22 ರಿಂದ 28 ರವರೆಗಿನ ದ್ವಾದಶ ರಾಶಿಗಳ ಫಲಾಫಲ
ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್‌ ಪದಗ್ರಹಣ ನೇರಪ್ರಸಾರ
ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್‌ ಪದಗ್ರಹಣ ನೇರಪ್ರಸಾರ
ಮೇಕೆದಾಟು ಯೋಜನೆ: ತಮಿಳುನಾಡು ಆಕ್ಷೇಪಕ್ಕೆ ಹೆಚ್​​ಡಿಕೆ ಅಸಮಾಧಾನ
ಮೇಕೆದಾಟು ಯೋಜನೆ: ತಮಿಳುನಾಡು ಆಕ್ಷೇಪಕ್ಕೆ ಹೆಚ್​​ಡಿಕೆ ಅಸಮಾಧಾನ