AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinayaka Chaturthi Today: ವಿನಾಯಕ ಚತುರ್ಥಿ ಶುಭ ದಿನದ ಮುಹೂರ್ತ, ಆಚರಣೆ ಮತ್ತು ಪೂಜಾ ವಿಧಿ-ವಿಧಾನ

ವಿನಾಯಕ ಚತುರ್ಥಿ 2021: ಆಶಾಢ ತಿಂಗಳಿನ ಮಗಳವಾರ ಸಂಕಷ್ಟ ಚತುರ್ಥಿ ಬಂದಿರುವುದರಿಂದ ಅಂಗಾರಕಿ ಚತುರ್ಥಿ ಎಂದೂ ಈ ದಿನವನ್ನು ಕರೆಯಲಾಗುತ್ತದೆ. ವಿನಾಯಕನಿಗೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

Vinayaka Chaturthi Today: ವಿನಾಯಕ ಚತುರ್ಥಿ ಶುಭ ದಿನದ ಮುಹೂರ್ತ, ಆಚರಣೆ ಮತ್ತು ಪೂಜಾ ವಿಧಿ-ವಿಧಾನ
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Jul 13, 2021 | 11:04 AM

Share

ಸಂಕಷ್ಟ ನಿವಾರಣೆಗಾಗಿ ಗಣೇಶನನ್ನು(Lord Ganesha) ಬೇಡಿಕೊಳ್ಳುವುದು ಸಾಮಾನ್ಯ. ನಮ್ಮ ಜೀವನದ ತೊಂದರೆಗಳನ್ನು ನಿವಾರಿಸುವ ಶಕ್ತಿ ಕೊಡು ಎಂದು ಭಕ್ತಿಯಿಂದ ವಿನಾಯಕನ ಮೊರೆ ಹೋಗುತ್ತೇವೆ. ಇಂದು (ಜುಲೈ 13, ಮಂಗಳವಾರ) ವಿನಾಯಕ ಚತುರ್ಥಿಯನ್ನು(Vinayaka Chaturthi) ಆಚರಿಸಲಾಗುತ್ತಿದೆ. ಇಂದಿನ ದಿನ ವಿನಾಯಕನಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಸಕಲ ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ವಿನಾಯಕನಿಗೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಇದೇ ತಿಂಗಳಿನಲ್ಲಿ ಅಂಗಾರಕ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ.

ಇಂದು ಉಪವಾಸ ಕೈಗೊಂಡು ಶುಭ್ರ ವಸ್ತ್ರದಲ್ಲಿ ಗಣೇಶನ ಪೂಜೆ ಮಾಡುವುದು ಸಾಂಪ್ರಾದಾಯಿಕವಾಗಿ ಬಂದಿದೆ. ಹಿಂದೂ ಸಂಪ್ರದಾಯದಲ್ಲಿ ವಿನಾಯಕನ ಪೂಜೆಯಲ್ಲಿ ಭಕ್ತರು ತೊಡಗಿಕೊಳ್ಳುವುದು ಹೆಚ್ಚು. ಅದರಲ್ಲಿಯೂ ಪೂಜೆಗೆ ವಿಶೇಷವಾಗಿರುವ ಮಂಗಳವಾರದಂದೇ ಸಂಕಷ್ಟ ಚತುರ್ಥಿ ಬಂದಿರುವುದರಿಂದ ಗಣೇಶನಿಗೆ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ.

ಜೀವನದಲ್ಲಿ ಎದುರಾಗುವ ಸಂಕಷ್ಟಗಳು-ಅಡೆತಡೆಗಳನ್ನು ನಿಭಾಯಿಸುವ ಶಕ್ತಿಯ ಜತೆಗೆ ಬದುಕು ಶಾಂತಿಯಿಂದಿರಿಲಿ, ಜೀವನಪೂರ್ತಿ ಸುಖ- ನೆಮ್ಮದಿಯೇ ತುಂಬಿರಲಿ ಎಂದು ಬೇಡಿಕೊಳ್ಳುತ್ತಾ ಭಕ್ತರು ಇಂದು ಗಣೇಶನ ಧ್ಯಾನ ಮಾಡುತ್ತಾರೆ. ವಿನಾಯಕನ ಮಂತ್ರಗಳನ್ನು ಪಠಿಸುವುದರ ಜತೆಗೆ ಭಜನೆ ಹೇಳುವ ಮೂಲಕ ಗಣೇಶನನ್ನು ಸ್ಮರಿಸಲಾಗುತ್ತದೆ.

ಹಿಂದೂ ಕ್ಯಾಲೆಂಡರ್​ ಪ್ರಕಾರ ಆಷಾಢ ತಿಂಗಳ ತೈತೀಯ ದಿನಾಂಕ ಇಂದು (ಜುಲೈ 13) ಬೆಳಿಗ್ಗೆ 08:24 ರಿಂದ ಚತುರ್ಥಿ ತಿಥಿಯು ಆರಂಭಗೊಳ್ಳುತ್ತದೆ. ಜುಲೈ 14 ಅಂದರೆ ನಾಳೆ ಬೆಳ್ಳಿಗ್ಗೆ 8:02 ಸಂಕಷ್ಟ ಚತುರ್ಥಿ ಮುಹೂರ್ತ ಮುಕ್ತಾಯಗೊಳ್ಳುತ್ತದೆ. ಜುಲೈ 13ನೇ ತಾರೀಕು ಅಂದರೆ ಇಂದು ಬೆಳಿಗ್ಗೆ 11:04 ರಿಂದ ಮಧ್ಯಾಹ್ನ 1:50 ರವರೆಗೆ ಪೂಜೆ ಕೈಗೊಳ್ಳುವ ಸಮಯ.

ಪಾಲಿಸಲೇಬೇಕಾದ ನಿಯಮಗಳು *ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಉಡುಪು ಧರಿಸುವುದು *ಗಣೇಶನ ಕುರಿತಾದ ಭಜನೆ, ಮಂತ್ರಗಳನ್ನು ಪಠಿಸುವುದು *ಉಪವಾಸ ಕೈಗೊಳ್ಳುವುದು *ಗಣೇಶದ ಧ್ಯಾನ ಮಾಡುವುದು *ಈರುಳ್ಳಿ-ಬೆಳ್ಳುಳ್ಳಿ, ಮಾಂಸಹಾರಗಳನ್ನು ಸೇವಿಸಬಾರದು *ತಂಬಾಕು ಮತ್ತು ಮದ್ಯಪಾನಗಳಿಂದ ದೂರವಿರಬೇಕು *ಆರೋಗ್ಯ ಸಮಸ್ಯೆ ಇರುವವರು ಹಣ್ಣು-ಹಾಲನ್ನು ಸೇವಿಸಬಹುದು *ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ನೀಡುವುದು *ಮಹೂರ್ತದ ಸಮಯದಲ್ಲಿ ಗಣೇಶನಿಗೆ ವಿಶೇಷ ಪೂಜೆ ಕೈಗೊಳ್ಳುವುದು

ಇದನ್ನೂ ಓದಿ:

Sankashti Chaturthi 2021: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಪೂಜಾ ವಿಧಿ-ವಿಧಾನ ತಿಳಿಯಿರಿ

ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು

Published On - 10:33 am, Tue, 13 July 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ