AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮದುವೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಯಾಕೆ? ಆಧ್ಯಾತ್ಮಿಕ ಕಾರಣ ಇಲ್ಲಿದೆ

ಮದುವೆಗೆ ಸಹಾಯ ಮಾಡುವುದು ಕೇವಲ ಮಾನವೀಯ ಸೇವೆಯಲ್ಲ, ಇದು ಹೋಮ-ಯಜ್ಞಕ್ಕೆ ಸಮನಾದ ಪುಣ್ಯ ಕಾರ್ಯವಾಗಿದೆ. ವಿವಾಹಕ್ಕೆ ನೆರವು ನೀಡುವುದರಿಂದ ಪಿತೃ ದೋಷ, ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಅಕಾಲಿಕ ಮರಣ ದೂರವಾಗಿ ಗುರು-ಶುಕ್ರ ಗ್ರಹ ಬಲ ಹೆಚ್ಚುತ್ತದೆ. ಅನ್ನ, ವಸ್ತ್ರ, ನೀರು ಮತ್ತು ಇತರ ರೂಪದಲ್ಲಿ ಮಾಡುವ ಸಹಾಯವು ಕುಟುಂಬಕ್ಕೆ ಸಮೃದ್ಧಿ ಮತ್ತು ಆರೋಗ್ಯವನ್ನು ತರುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Daily Devotional: ಮದುವೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಯಾಕೆ? ಆಧ್ಯಾತ್ಮಿಕ ಕಾರಣ ಇಲ್ಲಿದೆ
ಮದುವೆಗೆ ಬರಿಗೈಯಲ್ಲಿ ಹೋಗಬಾರದು ಯಾಕೆ?Image Credit source: Pinterest
ಅಕ್ಷತಾ ವರ್ಕಾಡಿ
|

Updated on:May 19, 2026 | 8:18 AM

Share

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಸಹಾಯ ಮಾಡುವುದು ಒಂದು ಮಹತ್ವದ ಮತ್ತು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗಿದೆ. ದಾನಂ ದಹತಿ ಪಾಪಂ ಎಂಬಂತೆ, ಮದುವೆಗೆ ನೀಡುವ ಯಾವುದೇ ರೀತಿಯ ಸಹಾಯವು ಅನೇಕ ಶುಭ ಫಲಗಳನ್ನು ತರುತ್ತದೆ ಎಂಬ ನಂಬಿಕೆ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಹಿಂದಿನ ಕಾಲದಲ್ಲಿ, ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗದ ಆರಂಭದ ದಿನಗಳಲ್ಲಿ, ಒಂದು ಮನೆಯಲ್ಲಿ ಮದುವೆಯಾದರೆ, ಶತ್ರುಗಳಿದ್ದರೂ ಸಹ ಸುತ್ತಮುತ್ತಲಿನ ಜನರು ಬಂದು ನೆರವಾಗುತ್ತಿದ್ದರು. ಬಂಧುಗಳಿಗೆ ಸ್ಥಳಾವಕಾಶ, ಊಟೋಪಚಾರ, ಹಣಕಾಸು, ದವಸಧಾನ್ಯ, ಬಟ್ಟೆ, ವಾಹನ ಮುಂತಾದ ಅನೇಕ ರೀತಿಯ ಸಹಾಯಗಳನ್ನು ನೀಡುತ್ತಿದ್ದರು. ಮನೆಯ ಮುಂದೆ ಚಪ್ಪರ ಹಾಕುವುದರಿಂದ ಹಿಡಿದು, ಅದಕ್ಕೆ ಬೇಕಾದ ಕಟ್ಟಿಗೆ, ತೆಂಗಿನ ಗರಿ, ದಾರ, ಗುದ್ದಲಿ ಇವೆಲ್ಲವನ್ನೂ ತಂದುಕೊಡಲು ಎಲ್ಲರೂ ಸಹಕರಿಸುತ್ತಿದ್ದರು. ಇದು ಕೇವಲ ಮಾನವೀಯತೆಯಾಗಿರದೆ, ತಮ್ಮ ಕುಟುಂಬಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದಲೂ ಕೂಡ ಇತ್ತು.

ವಿವಾಹಕ್ಕೆ ಸಹಾಯ ಮಾಡುವುದಕ್ಕೆ ಹಲವಾರು ಆಧ್ಯಾತ್ಮಿಕ ಕಾರಣಗಳನ್ನು ನೀಡಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಸರ್ವ ದೇವತೆಗಳ ಉಪಸ್ಥಿತಿ ಇರುತ್ತದೆ. ವರನು ವಿಷ್ಣುವಿನ ರೂಪವಾಗಿದ್ದರೆ, ವಧು ಮಹಾಲಕ್ಷ್ಮಿಯ ರೂಪವಾಗಿರುತ್ತಾಳೆ. ಆದ್ದರಿಂದ, ಮದುವೆಗೆ ಸಹಾಯ ಮಾಡುವುದು ವಿಷ್ಣು ಮತ್ತು ಲಕ್ಷ್ಮಿಯ ವಿವಾಹಕ್ಕೆ ನೆರವಾದಂತೆ ಎಂಬ ಭಾವನೆಯನ್ನು ಹಿಂದಿನವರು ಹೊಂದಿದ್ದರು. ಇದು ಹೋಮ, ಯಜ್ಞ, ಯಾಗಾದಿಗಳನ್ನು ಮಾಡಿದ ಫಲಕ್ಕೆ ಸಮನಾದ ಪುಣ್ಯವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ವಿವಾಹಕ್ಕೆ ಸಹಾಯ ಮಾಡಿದವರಿಗೆ ಪಿತೃ ದೋಷಗಳು ನಿವಾರಣೆಯಾಗುತ್ತವೆ, ಸರ್ಪ ದೋಷಗಳು ಹೊರಟುಹೋಗುತ್ತವೆ. ಅಕಾಲಿಕ ಮರಣದ ಭೀತಿಯು ದೂರವಾಗುತ್ತದೆ. ಅಲ್ಲದೆ, ಗುರು ಗ್ರಹ ಮತ್ತು ಶುಕ್ರ ಗ್ರಹಗಳ ಬಲ ಹೆಚ್ಚುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಸಹಾಯದ ವಿವಿಧ ರೂಪಗಳು ಮತ್ತು ಅವುಗಳ ಫಲಗಳನ್ನು ಸಹ ವಿವರಿಸಲಾಗಿದೆ. ತಾಳಿಯನ್ನು ಕೊಡಿಸಿದರೆ ಕುಟುಂಬದಲ್ಲಿ ವಿವಾಹಗಳು ಸುಗಮವಾಗಿ ನಡೆಯುತ್ತವೆ. ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗಿ ಶಾಶ್ವತ ಆರೋಗ್ಯ ಲಭಿಸುತ್ತದೆ. ಅಕ್ಕಿ ದಾನ ಮಾಡಿದರೆ ಜೀವನ ಪರ್ಯಂತ ಆಹಾರದ ಕೊರತೆ ಇರುವುದಿಲ್ಲ. ನೀರಿನ ದಾನವು ಲವಲವಿಕೆಯನ್ನು ಹೆಚ್ಚಿಸುತ್ತದೆ, ಹಾಲಿನ ದಾನವು ಕಂಟಕಗಳನ್ನು ನಿವಾರಿಸುತ್ತದೆ. ತರಕಾರಿ ದಾನವು (ಬುಧ ಗ್ರಹದ ಪ್ರತೀಕ) ಕುಟುಂಬದಲ್ಲಿ ಯಾವುದೇ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲು ಹತ್ತದಂತೆ ನೋಡಿಕೊಳ್ಳುತ್ತದೆ.

ಇಂತಹ ನಿಸ್ವಾರ್ಥ ಸೇವೆಯಿಂದ ಪುಣ್ಯವು ವಾಪಸು ಬಂದೇ ಬರುತ್ತದೆ. ಈ ಫಲಗಳು ತಕ್ಷಣವೇ ಗೋಚರಿಸದಿರಬಹುದು, ಆದರೆ ಕಾಲಾನಂತರದಲ್ಲಿ ಅವು ಪ್ರಕಟವಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ವಿವಾಹಕ್ಕೆ ಕೈಲಾದಷ್ಟು ಸಹಾಯ ಮಾಡಿ ಪುಣ್ಯವನ್ನು ಕಟ್ಟಿಕೊಳ್ಳುವುದು ಎಲ್ಲರಿಗೂ ಶುಭವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 am, Tue, 19 May 26

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು