AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬ್ಲ್ಯೂಟಿಸಿ ಆಡಿದ 45 ದಿನಗಳ ನಂತರ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​ ಸರಣಿಯನ್ನಾಡುವುದು ಮೂರ್ಖತನ ಮತ್ತು ಹಾಸ್ಯಾಸ್ಪದ: ವೆಂಗ್​ಸರ್ಕಾರ್

ಡಬ್ಲ್ಯೂಟಿಸಿ ನಂತರ ಇಂಗ್ಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ವಿರುದ್ಧ ಸೀಮಿತ ಓವರ್ ಪಂದ್ಯಗಳ ಸರಣಿಗಳನ್ನು ಹೋಸ್ಟ್ ಮಾಡಲಿದೆ. ಈ ಸರಣಿಗಳು ಜೂನ್ ಮತ್ತು ಜುಲೈನಲ್ಲಿ ನಡೆಯಲಿವೆ. ಡಬ್ಲ್ಯೂಟಿಸಿ ಮುಗಿದ ಕೂಡಲೇ ಟೆಸ್ಟ್​ ಸರಣಿಯನ್ನು ಯಾಕೆ ನಿಗದಿಪಡಿಸಿಲ್ಲ ಎಂದು ವೆಂಗ್​ಸರ್ಕಾರ್ ಕೇಳುತ್ತಿದ್ದಾರೆ.

ಡಬ್ಲ್ಯೂಟಿಸಿ ಆಡಿದ 45 ದಿನಗಳ ನಂತರ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​ ಸರಣಿಯನ್ನಾಡುವುದು ಮೂರ್ಖತನ ಮತ್ತು ಹಾಸ್ಯಾಸ್ಪದ: ವೆಂಗ್​ಸರ್ಕಾರ್
ದಿಲಿಪ್ ವೆಂಗ್​ಸರ್ಕಾರ್
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jun 01, 2021 | 10:40 PM

Share

ಮುಂಬೈ: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ದಿಲಿಪ್ ವೆಂಗ್​ಸರ್ಕಾರ್ ಸ್ಟ್ರೇಟ್ ಡ್ರೈವ್​ಗೆ ಖ್ಯಾತರಾಗಿದ್ದಂತೆ ನೇರ ಮಾತಿಗೂ ಹೆಸರಾದವರು. ಜೇಡವನ್ನು ಜೇಡವೆಂದೇ ಕರೆಯಬಲ್ಲ ಛಾತಿಯುಳ್ಳ ಕೆಲವೇ ಮಾಜಿ ಮತ್ತು ಹಾಲಿ ಆಟಗಾರರಲ್ಲಿ ವೆಂಗ್​ಸರ್ಕಾರ್ ಕೂಡ ಒಬ್ಬರು. ಸಾಮಾನ್ಯವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದವರು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿರುದ್ಧ ಯಾವುದೇ ಟೀಕೆ ಮಾಡುವುದಿಲ್ಲ. ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಅವರನ್ನು ಆವರಿಸಿರುತ್ತದೆ. ಈಗ ಐಪಿಎಲ್​ನಿಂದಾಗಿ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸಿಗಲಿಲ್ಲದಿದ್ದರೇನಂತೆ, ಐಪಿಎಲ್ ಇದೆಯಲ್ಲ,ಅದರಲ್ಲಿ ನನ್ನ ಪ್ರತಿಭೆ ತೋರುತ್ತೇನೆ ಅಂತ ಯುವ ಪ್ರತಿಭಾವಂತರು ಅಂದುಕೊಳ್ಳುತ್ತಾರೆ. ಆದರೆ, ತಾವಾಡುತ್ತಿದ್ದ ದಿನಗಳಲ್ಲಿ ಕರ್ನಲ್ ಎಂದು ಕರೆಸಿಕೊಳ್ಳುತ್ತಿದ್ದ ವೆಂಗ್​ಸರ್ಕಾರ್ ಬಿಸಿಸಿಐನ ಧೋರಣೆ ಸರಿ ಅನಿಸದಿದ್ದರೆ ಅದನ್ನು ನೇರವಾಗಿ ಹೇಳಿಬಿಡುತ್ತಿದ್ದರು. 

ಈಗ ನೋಡಿ, ಇದೇ ಕರ್ನಲ್ ಮಂಡಳಿಯು ಭಾರತದ ಇಂಗ್ಲೆಂಡ್​ ಪ್ರವಾಸವನ್ನು ಪ್ಲ್ಯಾನ್ ಮಾಡಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಗಮನಕ್ಕೂ ಬಂದಿರಲಿಲ್ಲ. ವಿಷಯ ಏನು ಗೊತ್ತಾ? ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ 5 ದಿನಗಳ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಪಂದ್ಯವನ್ನು ಜೂನ್ 18ರಿಂದ ಆಡಿದ ನಂತರ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಆದರೆ ಗೊತ್ತಿರದ ಸಂಗತಿಯೇನೆಂದರೆ, ಈ ಡಬ್ಲ್ಯೂಟಿಸಿ ಪಂದ್ಯ ಆಡಿದ ಒಂದೂವರೆ ತಿಂಗಳ ನಂತರ ಎರಡು ರಾಷ್ಟ್ರಗಳ ನಡುವೆ ಟೆಸ್ಟ್​ ಸರಣಿ ಆರಂಭವಾಗಲಿದೆ! ಡಬ್ಲ್ಯೂಟಿಸಿ ಪಂದ್ಯವು ರಿಸರ್ವ್ ದಿನವನ್ನು ಹಿಡಿದು 23 ಕ್ಕೆ ಕೊನೆಗೊಂಡರೆ ಟೆಸ್ಟ್ ಸರಣಿಯು ಆಗಸ್ಟ್​ 4 ರಿಂದ ಆರಂಭವಾಗಲಿದೆ!! ಅಲ್ಲಿಯವರೆಗೆ ಅಂದರೆ 45 ದಿನಗಳ ಕಾಲ ಟೀಮ್ ಇಂಡಿಯಾದ ಸದಸ್ಯರು ಇಂಗ್ಲೆಂಡ್​ನಲ್ಲಿ ಸೋಂಬೇರಿಗಳಂತೆ ಅಲೆಯಲಿದ್ದಾರೆ. ಹೌದು, ನೀವು ಓದಿದ್ದು ಅಕ್ಷರಶಃ ನಿಜ.

ವೆಂಗ್​ಸರ್ಕಾರ್ ಇದನ್ನೇ ಪ್ರಶ್ನಿಸುತ್ತಿದ್ದಾರೆ.

ಡಬ್ಲ್ಯೂಟಿಸಿ ನಂತರ ಇಂಗ್ಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ವಿರುದ್ಧ ಸೀಮಿತ ಓವರ್ ಪಂದ್ಯಗಳ ಸರಣಿಗಳನ್ನು ಹೋಸ್ಟ್ ಮಾಡಲಿದೆ. ಈ ಸರಣಿಗಳು ಜೂನ್ ಮತ್ತು ಜುಲೈನಲ್ಲಿ ನಡೆಯಲಿವೆ. ಡಬ್ಲ್ಯೂಟಿಸಿ ಮುಗಿದ ಕೂಡಲೇ ಟೆಸ್ಟ್​ ಸರಣಿಯನ್ನು ಯಾಕೆ ನಿಗದಿಪಡಿಸಿಲ್ಲ ಎಂದು ವೆಂಗ್​ಸರ್ಕಾರ್ ಕೇಳುತ್ತಿದ್ದಾರೆ.

‘ಈ ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದ ಆಟಗಾರರು ಏನು ಮಾಡಲಿದ್ದಾರೆ? ಈ ಶೆಡ್ಯೂಲಿಂಗ್ ನನ್ನಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಯಾವ ರೀತಿಯ ಪ್ರವಾಸವನ್ನು ಅವರು (ಬಿಸಿಸಿಐ) ಪ್ಲ್ಯಾನ್ ಮಾಡಿದ್ದಾರೆ? ಒಂದು ಟೆಸ್ಟ್ ಪಂದ್ಯವಾಡಿದ ನಂತರ ಅವರು (ಟೀಮ್ ಇಂಡಿಯಾ ಸದಸ್ಯರು) ಅದ್ಹೇಗೆ ಒಂದೂವರೆ ತಿಂಗಳುಗಳವರೆಗೆ ಯಾವುದೇ ಕ್ರಿಕೆಟ್​ ಆಡದಂತಿರುತ್ತಾರೆ?’ ಎಂದು ಸುದ್ದಿ ಮಾಧ್ಯಮವೊಂದರ ಜೊತೆ ಮಾತಾಡುತ್ತಾ ವೆಂಗ್​ಸರ್ಕಾರ್ ಕೇಳಿದ್ದಾರೆ.

‘ಒಂದು ಪಕ್ಷ ಶ್ರೀಲಂಕಾ ಮತ್ತು ಪಾಕಿಸ್ತಾನ ಸೀಮಿತ ಓವರ್​ಗಳ ಸರಣಿಗಳನ್ನು ಜುಲೈನಲ್ಲಿ ಆಡಲು ಇಂಗ್ಲೆಂಡ್​ (ಶ್ರೀಲಂಕಾ ಮತ್ತು ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ತಲಾ 3-ಪಂದ್ಯಗಳ ಒಡಿಐ ಹಾಗೂ ಅಷ್ಟೇ ಸಂಖ್ಯೆಯ ಟಿ20ಪಂದ್ಯಗಳ ಸರಣಿಗಳನ್ನು ಆಡಲಿವೆ) ಪ್ರವಾಸಕ್ಕೆ ಹೋದರೂ ಡಬ್ಲ್ಯೂಟಿಸಿ ಮುಗಿದ ಕೂಡಲೇ ಟೆಸ್ಟ್​ ಸರಣಿಯನ್ನು ಯಾಕೆ ಆಯೋಜಿಸುತ್ತಿಲ್ಲ?’ಎಂದು ಕರ್ನಲ್ ಕೇಳಿದ್ದಾರೆ

‘ಡಬ್ಲ್ಯೂಟಿಸಿ ನಂತರ ಟೀಮ್ ಇಂಡಿಯಾ ಸ್ವದೇಶಕ್ಕೆ ಮರಳಲಿದೆಯೇ? ಒಂದೂವರೆ ತಿಂಗಳು ಕಾಲ ಅವರೇನು ಮಾಡಲಿದ್ದಾರೆ? ಈ 45 ದಿನಗಳಲ್ಲಿ ವಿವಿಧ ಕೌಂಟಿಗಳ ವಿರುದ್ಧ ಟೂರ್​ ಗೇಮ್​ಗಳನ್ನು ಆಯೋಜಿಸಲಾಗಿದೆ ಎಂದು ಭಾವಿಸಿದರೂ ಒಂದೂವರೆ ತಿಂಗಳು ಸುದೀರ್ಘ ಅವಧಿಯಾಗಿದೆ,’ ಎಂದು 1976ರಿಂದ 1992ರವರೆಗೆ ಭಾರತದ ಪರ 116 ಟೆಸ್ಟ್​ಗಳನ್ನಾಡಿದ ವೆಂಗ್​ಸರ್ಕಾರ್ ಹೇಳಿದ್ದಾರೆ.

‘ಇದು ಹುಚ್ಚುತನದ ಪರಮಾವಧಿ. ಒಂದೂವರೆ ತಿಂಗಳುಗಳವರೆಗೆ ಕ್ರಿಕೆಟ್ ಇಲ್ಲದಿರುವುದು ಆಶ್ಚರ್ಯ ಹುಟ್ಟಿಸುವ ಸಂಗತಿಯಾಗಿದೆ. ಭಾರತ ಅಲ್ಲಿ ಟೆಸ್ಟ್​ಗಳನ್ನಾಡಲು ಹೋಗಿದೆ ಅಂತಾದರೆ, ಅದು ಇಂಥ ಅಂತರಗಳಿಲ್ಲದೆ ಸತತವಾಗಿ ಟೆಸ್ಟ್​ಗಳನ್ನಾಡಬೇಕು. ಈ ಅಂತರಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಟಿ20 ಹಾಗೂ ಒಡಿಐ ಪಂದ್ಯಗಳ ಸರಣಿಗಳನ್ನಾಡುವುದು ಮೂರ್ಖತನ ಮತ್ತು ಹಾಸ್ಯಾಸ್ಪದ,’ ಎಂದು ವೆಂಗ್​ಸರ್ಕಾರ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್: ರೋಹಿತ್​ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಬಹುದು- ಅಗರವಾಲ್ ಅಥವಾ ಗಿಲ್?

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ