AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viswanathan Anand: ಚೆಸ್‌ನಲ್ಲಿ ವಂಚನೆ ಆನ್‌ಲೈನ್ ಪಂದ್ಯಾವಳಿಗಳಿಗೆ ಸೀಮಿತವಾಗಿದೆ: ವಿಶ್ವನಾಥನ್ ಆನಂದ್

ಈ ವಿಷಯವನ್ನು ಪರಿಶೀಲಿಸಲು ನಾವು ಆಯೋಗವನ್ನು ಹೊಂದಿದ್ದೇವೆ. ಆದರೆ ಇದನ್ನು ಸಾವಿರಾರು ಪಂದ್ಯಾವಳಿಗಳಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ.

Viswanathan Anand: ಚೆಸ್‌ನಲ್ಲಿ ವಂಚನೆ ಆನ್‌ಲೈನ್ ಪಂದ್ಯಾವಳಿಗಳಿಗೆ ಸೀಮಿತವಾಗಿದೆ: ವಿಶ್ವನಾಥನ್ ಆನಂದ್
Viswanathan Anand
TV9 Web
| Edited By: |

Updated on: Nov 30, 2022 | 10:34 PM

Share

ಚೆಸ್‌ ಸ್ಪರ್ಧೆಯಲ್ಲಿ ವಂಚನೆ ವ್ಯಾಪಕವಾಗಿಲ್ಲ. ಅಂತಹ ಮೋಸಗಳಿದ್ದರೆ ಅದು ಆನ್‌ಲೈನ್ ಪಂದ್ಯಾವಳಿಗಳಿಗೆ ಸೀಮಿತವಾಗಿದೆ ಭಾರತೀಯ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ (Viswanathan Anand) ಅವರು ಹೇಳಿದ್ದಾರೆ. ಸೆಪ್ಟೆಂಬರ್​ನಲ್ಲಿ ನಡೆದ ಸಿಂಕ್‌ಫೀಲ್ಡ್ ಕಪ್‌ ಚೆಸ್​ನಲ್ಲಿ ಯುಎಸ್ ಹದಿಹರೆಯದ ಹ್ಯಾನ್ಸ್ ನೀಮನ್ ವಿರುದ್ಧ ಸೋಲನುಭವಿಸಿದ ಬಳಿಕ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಮೋಸದಾಟದ ಆರೋಪ ಹೊರಿಸಿದ್ದರು. ಈ ಬಗ್ಗೆ ಮಾತನಾಡಿದ ವಿಶ್ವ ಆಡಳಿತ ಮಂಡಳಿಯ (FIDE) ಉಪ ಅಧ್ಯಕ್ಷರಾಗಿರುವ ಚೆಸ್ ಕ್ರೀಡೆಯಲ್ಲಿ ಮೋಸವು ವ್ಯಾಪಕವಾಗಿದೆ ಎಂದು ಅನಿಸುತ್ತಿಲ್ಲ. ಒಂದು ವೇಳೆ ಮೋಸದಾಟ ನಡೆಯುತ್ತಿದ್ದರೆ ಅದು “ಆನ್‌ಲೈನ್” ಪಂದ್ಯಾವಳಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಆನ್​ಲೈನ್ ಸ್ಪರ್ಧೆ ಎಂಬುದು ಹೊಸ ಕ್ಷೇತ್ರವಾಗಿದೆ. ಹೀಗಾಗಿ ಖಂಡಿತವಾಗಿಯೂ ವಂಚನೆಯ ಸಾಧ್ಯತೆ ಎಂದು ನಮಗೆ ತಿಳಿದಿದೆ. ಇದು ಚೆಸ್ ಸ್ಪರ್ಧೆ ಮೇಲಿನ ಆತಂಕ ಕೂಡ ಹೌದು. ಆದರೆ ಇದು ವ್ಯಾಪಕವಾಗಿಲ್ಲ ಎಂಬುದು ನಂಬುತ್ತೇನೆ ಎಂದು ಮಾಜಿ ಗ್ರ್ಯಾಂಡ್​ ಮಾಸ್ಟರ್ ತಿಳಿಸಿದರು.

ಆಫ್​ಲೈನ್​ನಲ್ಲಿ ವಂಚನೆಗಳಾಗುತ್ತಿಲ್ಲ ಎಂದೇ ಭಾವಿಸುತ್ತೇನೆ. ಆದರೆ ಆನ್​ಲೈನ್​ನಲ್ಲಿ ವಂಚನೆಯ ಶೇಕಡಾವಾರು ನನಗೆ ತಿಳಿದಿಲ್ಲ. ಆದರೆ ಅದು ಅತಿರೇಕವಾಗಿಲ್ಲ ಎಂಬ ನಂಬಿಕೆಯಿದೆ. ಏಕೆಂದರೆ ಲಕ್ಷಾಂತರ ಮಂದಿ ಆನ್‌ಲೈನ್‌ನಲ್ಲಿ ಆಡುತ್ತಿದ್ದಾರೆ. ಆದರೆ ಇಂತಹ, ಸಮಸ್ಯೆಯನ್ನು ನಿರ್ಲಕ್ಷ್ಯಸುವ ಬದಲು ಮುಂಚಿತವಾಗಿ ಪರಿಹರಿಸುವುದು ಉತ್ತಮ ಎಂದು ವಿಶ್ವನಾಥನ್ ಆನಂದ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ
Image
Suryakumar Yadav: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೂರ್ಯಕುಮಾರ್ ಯಾದವ್
Image
BPL 2023: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ಗೆ ಭಾರತೀಯ ಆಟಗಾರ ಎಂಟ್ರಿ..!
Image
IPL 2023: 4 ವರ್ಷಗಳ ಬಳಿಕ ಐಪಿಎಲ್​ನತ್ತ ಜೋ ರೂಟ್..!
Image
ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಇದೇ ವೇಳೆ ಚೆಸ್​ನಲ್ಲಿ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಮಾತನಾಡಿದ ಆನಂದ್, ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ ಆನ್​ಲೈನ್ ವಂಚನೆಯನ್ನು ಎಂದಿಗೂ ಪರಿಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ತಂತ್ರಜ್ಞಾನದ ಮೂಲಕವೇ ಅದಕ್ಕೊಂದು ಚೌಕಟ್ಟು ಹೊಂದುವುದು ತುಂಬಾ ಮುಖ್ಯ. ಈ ಮೂಲಕ ಮೋಸದಾಟದ ವಿರುದ್ಧ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಬಹುದು ಎಂದರು.

ಸದ್ಯ ಕಾರ್ಲ್‌ಸೆನ್-ನೀಮನ್ ನಡುವಣ ಸ್ಪರ್ಧೆಯ ವಿಶ್ವ FIDE ನ ಫೇರ್ ಪ್ಲೇ ಕಮಿಷನ್‌ನಿಂದ ತನಿಖೆಗೆ ಒಳಪಟ್ಟಿದೆ. ಏಕೆಂದರೆ ವಿಶ್ವ ಚಾಂಪಿಯನ್ ಪುರಾವೆಗಳಿಲ್ಲದೆ ಆರೋಪ ಮಾಡಿದ್ದಕ್ಕಾಗಿ ಅಮಾನತುಗೊಳಿಸುವ ಅಪಾಯವಿದೆ. ಕಾರ್ಲ್‌ಸೆನ್ ವಿರುದ್ಧ USD 100 ಮಿಲಿಯನ್ ಮೊಕದ್ದಮೆಯನ್ನು ಹೂಡಿರುವ ನೀಮನ್ ತಿಳಿಸಿದ್ದಾರೆ. ಒಂದು ವೇಳೆ ವಂಚನೆಯ ಬಗ್ಗೆ  ಪುರಾವೆಗಳು ಕಂಡುಬಂದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಈ ವಿಷಯವನ್ನು ಪರಿಶೀಲಿಸಲು ನಾವು ಆಯೋಗವನ್ನು ಹೊಂದಿದ್ದೇವೆ. ಆದರೆ ಇದನ್ನು ಸಾವಿರಾರು ಪಂದ್ಯಾವಳಿಗಳಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ. ಅಂತಹ ತಪಾಸಣೆಯ ಮೂಲಕ ಕ್ರೀಡೆಯ ಮೇಲಿನ ಅಪನಂಬಿಕೆಯನ್ನು ಕೂಡ ಹೋಗಲಾಡಿಸಬಹುದು ಎಂದು ವಿಶ್ವನಾಥನ್ ಆನಂದ್ ತಿಳಿಸಿದರು.

ಇದೇ ವೇಳೆ ಭಾರತೀಯ ಯುವ ಚೆಸ್ ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಐದು ಬಾರಿಯ ಗ್ರ್ಯಾಂಡ್ ಮಾಸ್ಟರ್ ಆನಂದ್,  ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನಾನಂದ ಹದಿಹರೆಯದ ಮೂವರಲ್ಲಿ ಒಬ್ಬರು ಮುಂದಿನ ವಿಶ್ವ ಚಾಂಪಿಯನ್ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Follow Us
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ