AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್​ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ

IPL 2022| RCB vs CSK | Propose: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದ ವೇಳೆ ನಡೆದ ಪ್ರೇಮ ನಿವೇದನೆ ಪ್ರಕರಣ ಆರ್​ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿತು. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿಡಿಯೋ.

ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್​ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ
ಆರ್​ಸಿಬಿ ಜೆರ್ಸಿ ತೊಟ್ಟಿದ್ದ ಗೆಳೆಯನಿಗೆ ಪ್ರೇಮನಿವೇದನೆ ಮಾಡಿದ ಯುವತಿ
TV9 Web
| Updated By: shivaprasad.hs|

Updated on:May 05, 2022 | 8:22 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಬುಧವಾರ ನಡೆದ ಐಪಿಲ್ ಪಂದ್ಯವು ವಿಶೇಷ ಸಂದರ್ಭವೊಂದಕ್ಕೆ ಸಾಕ್ಷಿಯಾಯಿತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನಡೆದ ಪಂದ್ಯದ ವೇಳೆ ನಡೆದ ಪ್ರೇಮ ನಿವೇದನೆ ಪ್ರಕರಣ ಆರ್​ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿತು. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ನೋಡಿ. ಆರ್​ಸಿಬಿ ಹಾಗೂ ಸಿಎಸ್ ಕೆ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಡೆವೋನ್ ಕಾನ್ವೆ ಬ್ಯಾಟ್ ಮಾಡುತ್ತಿದ್ದರು. ವನಿಂದು ಹಸರಂಗ ಬೌಲ್ ಮಾಡುತ್ತಿದ್ದರು.‌ ಈ ವೇಳೆ ಸ್ಟೇಡಿಯಂನಲ್ಲಿ ಯುವತಿಯೋರ್ವರು ತಮ್ಮ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದರು. ಯುವಕ ಆರ್​ಸಿಬಿ ಜೆರ್ಸಿ ತೊಟ್ಟಿದ್ದರು. ಪ್ರೇಮ ನಿವೇದನೆ ಮಾಡಿದ ಯುವತಿ ಗೆಳೆಯನಿಗೆ ರಿಂಗ್ ಕೂಡ ತೊಡಿಸಿದರು. ನಂತರ ಈರ್ವರೂ ಆಲಂಗಿಸಿಕೊಂಡರು. ಈ ಸುಂದರ ಕ್ಷಣವನ್ನು ಕ್ಯಾಮೆರಾಮೆನ್ ಸೆರೆಹಿಡಿಯುತ್ತಿದ್ದಂತೆ ಮೈದಾನದಲ್ಲಿ ಹರ್ಷೋದ್ಗಾರ ಕೇಳಿಬಂತು. ಕಾಮೆಂಟರಿ ಮಾಡುತ್ತಿದ್ದವರೂ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದ ವಿಡಿಯೋ ಇಲ್ಲಿದೆ:

ಇದನ್ನೂ ಓದಿ
Image
RCB vs CSK Highlights, IPL 2022: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಂಡಿಯೂರಿದ ಚೆನ್ನೈ
Image
IPL 2022 DC vs SRH Live Streaming: ದೆಹಲಿ- ಹೈದರಾಬಾದ್ ನಡುವೆ ರೋಚಕ ಹೋರಾಟ! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
Image
ICC Annual Ranking: 5 ವರ್ಷಗಳ ನಂತರ ಟೆಸ್ಟ್​ನಲ್ಲಿ ಭಾರತದ ಅಧಿಪತ್ಯ ಅಂತ್ಯ! ODI-T20ಯಲ್ಲಿ ಬೆಸ್ಟ್ ಯಾರು ಗೊತ್ತಾ?

ಸದ್ಯ ಪ್ರೇಮಿಗಳ ಪ್ರಪೋಸ್ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ‘ಆರ್​ಸಿಬಿ ಅಭಿಮಾನಿಗಳಾಗಿರುವವರು ಪತಿಯಾಗಲು ಯೋಗ್ಯರು, ಕಾರಣ ಅವರು ಬಹಳ ನಿಷ್ಠಾವಂತರು’ ಎಂಬ ಮೀಮ್ ಗಳನ್ನು ನೀವು ನೋಡಿರಬಹುದು. ಸದ್ಯ ಈ ಪ್ರಕರಣದಲ್ಲೂ ಅದನ್ನೇ ಉದಾಹರಿಸಿ ಮೀಮ್​ಗಳನ್ನು ಮಾಡಲಾಗುತ್ತಿದೆ.

ತಮ್ಮ ಪಂಚಿಂಗ್ ಟ್ವೀಟ್​ಗಳಿಂದ ಹೆಸರುವಾಸಿಯಾಗಿರುವ ಮಾಜಿ‌ ಕ್ರಿಕೆಟ್ ಆಟಗಾರ ವಾಸಿಂ ಜಾಫರ್ ಟ್ವೀಟ್ ಮಾಡಿ, “ಬುದ್ಧಿವಂತ ಹುಡುಗಿ ಆರ್​ಸಿಬಿ ಫ್ಯಾನ್​ಗೆ ಪ್ರಪೋಸ್ ಮಾಡಿದ್ದಾಳೆ. ಗೆಳೆಯ ಆರ್​ಸಿಬಿಗೆ ನಿಷ್ಠನಾಗಿ ಇರುತ್ತಾನಾದರೆ ಜತೆಗಾರ್ತಿಯೊಂದಿಗೂ ಹಾಗೆಯೇ ಇರುತ್ತಾನೆ. ಒಳ್ಳೆಯ ಕೆಲಸ, ಹಾಗೂ ಪ್ರೇಮ ನಿವೇದನೆ ಮಾಡಲು ಒಳ್ಳೆಯ ದಿನ. ಶುಭವಾಗಲಿ” ಎಂದು ಬರೆದುಕೊಂಡಿದ್ದಾರೆ.

ವಾಸಿಂ ಜಾಫರ್ ಟ್ವೀಟ್ ಇಲ್ಲಿದೆ:

ಅಂದಹಾಗೆ ಕ್ರಿಕೆಟ್ ಮೈದಾನದಲ್ಲಿ ನಿವೇದನೆಗಳು ಹೊಸದಲ್ಲ. ಈ ಹಿಂದೆ ಚೆನ್ನೈ ತಂಡದ ಕ್ರಿಕೆಟ್ ಆಟಗಾರ ದೀಪಕ್ ಚಾಹರ್ ಪಂದ್ಯ ಮುಗಿದ ಬಳಿಕ ತಮ್ಮ ಗೆಳತಿ ಜಯಾ ಭರಧ್ವಾಜ್ ಗೆ ಮೈದಾನದಲ್ಲೇ ಪ್ರಪೋಸ್ ಮಾಡಿದ್ದರು.

ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ಸಿಬಿ:

ಆರ್​ಸಿಬಿ ಹಾಗೂ ಸಿಎಸ್ ಕೆ ನಡುವಿನ ಪಂದ್ಯದಲ್ಲಿ ಎರಡೂ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆರ್​ಸಿಬಿ ಗೆಲುವಿನೊಂದಿಗೆ ಚೆನ್ನೈ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 173 ರನ್ ಗಳ ಸವಾಲು ನೀಡಿತ್ತು. ಆದರೆ ಚೆನ್ನೈ 160 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 am, Thu, 5 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ