AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2023: ಪಾಕ್ ಆಟಗಾರನ ಕರಾಳ ಮುಖ ಬಯಲು: ಕಿಶನ್ ಔಟಾದಾಗ ಹ್ಯಾರಿಸ್ ರೌಫ್ ಏನು ಮಾಡಿದ್ರು ನೋಡಿ

India vs Pakistan, Asai Cup 2023: ಏಷ್ಯಾಕಪ್ 2023 ರಲ್ಲಿ ಶನಿವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ವಿಶೇಷ ಘಟನೆ ನಡೆಯಿತು. ಇಶಾನ್ ಕಿಶನ್ ಔಟಾದ ಸಂದರ್ಭ ಪಾಕ್ ಬೌಲರ್ ಹ್ಯಾರಿಸ್ ರೌಫ್ ಆಡಿದ ರೀತಿ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Asia Cup 2023: ಪಾಕ್ ಆಟಗಾರನ ಕರಾಳ ಮುಖ ಬಯಲು: ಕಿಶನ್ ಔಟಾದಾಗ ಹ್ಯಾರಿಸ್ ರೌಫ್ ಏನು ಮಾಡಿದ್ರು ನೋಡಿ
haris rauf Ishan Kishan and Virat Kohli
Vinay Bhat
|

Updated on: Sep 03, 2023 | 9:26 AM

Share

ಏಷ್ಯಾಕಪ್ 2023 ರಲ್ಲಿ ಶನಿವಾರ ಭಾರತ ಹಾಗೂ ಪಾಕಿಸ್ತಾನ (India vs Pakistan) ಪಂದ್ಯವನ್ನು ಆಯೋಜಿಸಲಾಗಿತ್ತು. ಅಪರೂಪಕ್ಕೆ ಮುಖಾಮುಖಿ ಆಗುವ ಉಭಯ ತಂಡಗಳ ಪಂದ್ಯ ರಣರೋಚಕವಾಗಿರುತ್ತದೆ. ಅದರಂತೆ ಈ ಪಂದ್ಯ ಕೂಡ ಇತ್ತು. ಮಳೆಯಿಂದ ಪೂರ್ಣ ಪಂದ್ಯ ನಡೆಯದಿದ್ದರೂ ಭಾರತದ ಬ್ಯಾಟಿಂಗ್ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇಂಡೋ-ಪಾಕ್ ಆಟಗಾರರು ಬದ್ಧವೈರಿಗಳಂತೆ ಕಾದಾಡಿದರು. ಮೈದಾನದಲ್ಲಿ ಜಗಳ ನಡೆಯುವ ಹಂತಕ್ಕೂ ಏರಿತ್ತು. ಮುಖ್ಯವಾಗಿ ಭಾರತಕ್ಕೆ ಆಸರೆಯಾಗಿದ್ದ ಇಶಾನ್ ಕಿಶನ್ ಔಟಾದಾಗ ಹ್ಯಾರಿಸ್ ರೌಫ್ ನಡೆದುಕೊಂಡ ರೀತಿ ಭಾರತೀಯ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.

ಭಾರತದ ಅಗ್ರಕ್ರಮಾಂಕದ ಬ್ಯಾಟರ್​ಗಳು ಆರಂಭದಲ್ಲೇ ಪೆವಿಲಿಯನ್ ಸೇರಿದ ಬಳಿಕ ತಂಡಕ್ಕೆ ಆಸರೆಯಾಗಿದ್ದು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ. ಈ ಜೋಡಿ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿತ್ತು. ಹೀಗಾಗಿ ಪಾಕಿಸ್ತಾನ ಇವರ ಜೊತೆಯಾಟವನ್ನು ಬ್ರೇಕ್ ಮಾಡಲು ನಾನಾ ಕಸರತ್ತು ನಡೆಸಿತು. 38ನೇ ಓವರ್​ನಲ್ಲಿ ಪಾಕ್ ಪ್ಲಾನ್ ವರ್ಕೌ ಆಯಿತು. ಹ್ಯಾರಿಸ್ ರೌಫ್ ಬೌಲಿಂಗ್​ನ 3ನೇ ಎಸೆತದಲ್ಲಿ ಇಶಾನ್ ಕಿಶನ್ ಅವರು ಬಾಬರ್ ಅಜಮ್ ಹಿಡಿದ ಕ್ಯಾಚ್​ಗೆ ಬಲಿಯಾದರು. ಈ ಸಂದರ್ಭ ರೌಫ್ ನಡೆದುಕೊಂಡ ರೀತಿ ವಿಚಿತ್ರವಾಗಿತ್ತು.

ಇದನ್ನೂ ಓದಿ
Image
ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್!
Image
ಭಾರತ- ನೇಪಾಳ ನಡುವಿನ ಪಂದ್ಯ ನಡೆಯುವುದು ಡೌಟ್..!
Image
ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಹೇಗಿದೆ?
Image
ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ

ಇಶಾನ್ ಕಿಶನ್ ಔಟಾಗಾದ ಹ್ಯಾರಿಸ್ ರೌಫ್ ವಿಚಿತ್ರ ಸಂಭ್ರಮಾಚರಣೆಯ ವಿಡಿಯೋ:

ಕಿಶನ್ 81 ಎಸೆತಗಳಲ್ಲಿ 82 ರನ್ ಗಳಿಸಿ ಔಟ್ ಆಗುತ್ತಿದ್ದಂತೆ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದ ಹ್ಯಾರಿಸ್ ರೌಫ್, ಭಾರತೀಯ ಬ್ಯಾಟರ್‌ಗೆ ಕೈಸನ್ನೆ ಮಾಡುವ ಮೂಲಕ ‘ಗೆಟ್ ಲಾಸ್ಟ್’ ಎಂದು ಹೇಳಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರೌಫ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಪಂದ್ಯದ ಹಿಂದಿನ ದಿನ ರೌಫ್ ಅವರು ಭಾರತೀಯ ಆಟಗಾರರ ಜೊತೆ ನಗುತ್ತಾ ಸ್ನೇಹದಿಂದ ಮಾತನಾಡಿರುವುದು.

ಭಾರತ-ಪಾಕ್ ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಉಭಯ ತಂಡಗಳ ಆಟಗಾರರು ಪಲ್ಲಕೆಲೆ ಮೈದಾನದಲ್ಲಿ ಒಟ್ಟಾಗಿ ಅಭ್ಯಾಸ ನಡೆಸುತ್ತಿದ್ದರು. ಈ ಸಂದರ್ಭ ರೌಫ್ ಅವರು ಭಾರತೀಯ ಆಟಗಾರರ ಜೊತೆ ಸಮಯ ಕಳೆದಿದ್ದರು. ಅಲ್ಲದೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಫೋಟೋ ವೈರಲ್ ಆಗಿತ್ತು. ಇಷ್ಟೆಲ್ಲ ಉತ್ತಮ ಬಾಂಧವ್ಯ ಇರುವಂತೆ ತೋರಿಸಿ ಮೈದಾನದಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ ಕಿಶನ್​ರನ್ನು ಶ್ಲಾಘಿಸದೆ ಗೆಟ್ ಲಾಸ್ಟ್ ಎಂದಿದ್ದು ತಪ್ಪು. ಇದು ಪಾಕ್ ಆಟಗಾರ ನಿಜವಾದ ಮುಖ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ರೌಫ್ ಅವರ ಈ ನಡೆಗೆ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ.

ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ

ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ 11, ಗಿಲ್ 10, ವಿರಾಟ್ ಕೊಹ್ಲಿ 4 ಹಾಗೂ ಶ್ರೇಯಸ್ ಅಯ್ಯರ್ 14 ರನ್​ಗೆ ಬ್ಯಾಟ್ ಕೆಳಗಿಟ್ಟರು. ಆದರೆ, ಐದನೇ ವಿಕೆಟ್​ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬೊಂಬಾಟ್ ಜೊತೆಯಾಟ ಆಡಿದರು. 138 ರನ್​ಗಳ ಕಾಣಿಕೆ ನೀಡಿದರು. ಕಿಶನ್ 81 ಎಸೆತಗಳಲ್ಲಿ 82 ರನ್ ಸಿಡಿಸಿದರೆ, ಹಾರ್ದಿಕ್ 90 ಎಸೆತಗಳಲ್ಲಿ 87 ರನ್​ಗೆ ಔಟಾದರು. ಭಾರತ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಆಲೌಟ್ ಆಯಿತು. ಬಳಿಕ ಶುರುವಾದ ಮಳೆ ನಿಲ್ಲದ ಕಾರಣ ಪಾಕ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ