AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Rule Changes: ಕ್ರಿಕೆಟ್​ನ 8 ನಿಯಮಗಳನ್ನು ಬದಲಿಸಿದ ಐಸಿಸಿ: ಇನ್ಮುಂದೆ ಪಂದ್ಯಾಟ ಮತ್ತಷ್ಟು ರೋಚಕ

ICC Rule Changes: ಐಸಿಸಿಯ ಹೊಸ ನಿಯಮದ ಪ್ರಕಾರ ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು. ಒಂದು ವೇಳೆ ತಡವಾದರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ.

ICC Rule Changes: ಕ್ರಿಕೆಟ್​ನ 8 ನಿಯಮಗಳನ್ನು ಬದಲಿಸಿದ ಐಸಿಸಿ: ಇನ್ಮುಂದೆ ಪಂದ್ಯಾಟ ಮತ್ತಷ್ಟು ರೋಚಕ
ICC Rule Changes
TV9 Web
| Updated By: ಝಾಹಿರ್ ಯೂಸುಫ್|

Updated on:Sep 20, 2022 | 4:12 PM

Share

ಟಿ20 ವಿಶ್ವಕಪ್​ಗೂ (T20 World Cup 2022) ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Rule Changes) ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಅಕ್ಟೋಬರ್ 1 ರಿಂದ ಕ್ರಿಕೆಟ್‌ನಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾದ ನಿಯಮಗಳೊಂದಿಗೆ, ಟಿ20 ವಿಶ್ವಕಪ್ ನಡೆಯಲಿರುವುದು ವಿಶೇಷ. ಇಲ್ಲಿ ಒಟ್ಟು 8 ನಿಯಮಗಳನ್ನು ಬದಲಿಸಲಾಗಿದ್ದು, ಅದರಲ್ಲಿ ಮಂಕಡ್​ ರನೌಟ್ ನಿಯಮ ಕೂಡ ಸೇರಿವೆ. ಈ ನಿಮಯಗಳಲ್ಲಿ ಬಹುತೇಕ ರೂಲ್ಸ್​ ಟಿ20 ವಿಶ್ವಕಪ್​ನಲ್ಲಿಯೇ ಜಾರಿಗೆ ಬರಲಿವೆ. ಇನ್ನು ಕೆಲ ನಿಯಮಗಳು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ಗೆ ಅನ್ವಯಿಸಲಿದ್ದು, ಹೀಗಾಗಿ ಮುಂಬರುವ ಸರಣಿಗಳಲ್ಲಿ ಅನ್ವಯವಾಗಲಿದೆ.  ಹಾಗಿದ್ರೆ ಐಸಿಸಿ ಬದಲಿಸಿದ ಪ್ರಮುಖ ನಿಯಮಗಳೇನು ಎಂದು ನೋಡೋಣ…

  1. ಕ್ಯಾಚ್ ಔಟ್ ಮತ್ತು ಬ್ಯಾಟಿಂಗ್: ಐಸಿಸಿಯ ಹೊಸ ನಿಯಮಗಳ ಪ್ರಕಾರ ಕ್ಯಾಚ್ ಔಟ್ ಆದಾಗ ಹೊಸ ಬ್ಯಾಟ್ಸ್​ಮನ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ಬ್ಯಾಟ್ಸ್‌ಮನ್‌ ಕ್ಯಾಚ್‌ ಔಟಾಗುವಾಗ ನಾನ್‌ಸ್ಟ್ರೈಕರ್‌ ಬ್ಯಾಟ್ಸ್‌ಮನ್‌ ಅರ್ಧ ಪಿಚ್​ ಅನ್ನು ದಾಟಿದ್ದರೆ, ಆತನಿಗೆ ಸ್ಟ್ರೈಕ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೀಗ ಕ್ಯಾಚ್ ಔಟ್ ಆದರೆ ಹೊಸ ಬ್ಯಾಟ್ಸ್​ಮನ್​ ಬಂದು ಚೆಂಡನ್ನು ಎದುರಿಸಬೇಕಾಗುತ್ತದೆ. ಅಂದರೆ ಹೊಸ ಬ್ಯಾಟ್ಸ್​ಮನ್​​ ನೇರವಾಗಿ ಬಂದು ಸ್ಟ್ರೈಕ್ ತೆಗೆದುಕೊಳ್ಳಬೇಕು.
  2. ಎಂಜಲು ಬಳಕೆ ನಿಷೇಧ: ಕೊರೋನಾ ಹಿನ್ನೆಲೆಯಲ್ಲಿ ಐಸಿಸಿ ಕಳೆದ ಎರಡು ವರ್ಷಗಳಿಂದ ಚೆಂಡಿನ ಮೇಲೆ ಎಂಜಲನ್ನು ಬಳಸುವುದನ್ನು ನಿಷೇಧಿಸಿತ್ತು. ಇದೀಗ ಶಾಶ್ವತವಾಗಿ ಚೆಂಡಿನ ಮೇಲೆ ಎಂಜಲು ಬಳಕೆಯನ್ನು ನಿಷೇಧಿಸಲಾಗಿದೆ. ಅಂದರೆ ಮುಂದಿನ ನಿಯಮ ಜಾರಿಯವರೆಗೆ ಯಾವುದೇ ಬೌಲರ್ ಚೆಂಡಿನ ಮೇಲೆ ಎಂಜಲನ್ನು ಅಥವಾ ಬಾಯಿಯ ಲಾಲಾರಸವನ್ನು ಬಳಸುವಂತಿಲ್ಲ.
  3. ಬ್ಯಾಟ್ಸ್​ಮನ್​ಗೆ ಕೇವಲ 2 ನಿಮಿಷ ಸಮಯವಕಾಶ: ಒಬ್ಬರು ಔಟಾದರೆ, ಅಥವಾ ಬ್ಯಾಟಿಂಗ್​ಗೆ ಸಿದ್ಧವಾಗಬೇಕಿದ್ದರೆ ಇನ್ನು ಕೇವಲ 2 ನಿಮಿಷಗಳ ಅವಕಾಶ ಮಾತ್ರ ನೀಡಲಾಗುತ್ತದೆ. ಅಂದರೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​​ಗಳು ಚೆಂಡನ್ನು ಎದುರಿಸಲು ಅಥವಾ ಮೈದಾನಕ್ಕಿಳಿಯಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದ್ದರು. ಇದೀಗ ಇದಕ್ಕೂ ಸಮಯವಕಾಶ ನಿಗದಿ ಮಾಡಲಾಗಿದೆ. ಅದರಂತೆ ಬ್ಯಾಟ್ಸ್​ಮನ್​ಗಳು ಕೇವಲ 2 ನಿಮಿಷಗಳಲ್ಲಿ ಬ್ಯಾಟ್ ಮಾಡಲು ಸಿದ್ಧರಾಗಿರಬೇಕು. ಇನ್ನು ಟಿ20 ಕ್ರಿಕೆಟ್​ನಲ್ಲಿ ಈ ಸಮಯವಕಾಶ ಕೇವಲ 90 ಸೆಕೆಂಡ್​ಗಳು ಮಾತ್ರ. ಅಂದರೆ 90 ಸೆಕೆಂಡ್​ಗಳಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಾಗಿರಬೇಕಾಗುತ್ತದೆ. ಒಂದು ವೇಳೆ ಈ ಸಮಯವಕಾಶದಲ್ಲಿ ಚೆಂಡನ್ನು ಎದುರಿಸಲು ಸಿದ್ಧವಾಗಿರದಿದ್ದರೆ ಅವರನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.
  4. ಫೀಲ್ಡರ್​ ಚಲನಾ ನಿಮಯ: ಬೌಲರ್ ರನ್-ಅಪ್ ಸಮಯದಲ್ಲಿ ಯಾವುದೇ ಫೀಲ್ಡರ್​ ಉದ್ದೇಶಪೂರ್ವಕವಾಗಿ ತನ್ನ ಸ್ಥಳದಿಂದ ಚಲಿಸಿದರೆ, ಅಂಪೈರ್ ಆ ತಂಡಕ್ಕೆ ಐದು ರನ್​ ದಂಡವನ್ನು ವಿಧಿಸಲಿದ್ದಾರೆ. ಅಂದರೆ ಬೌಲರ್ ರನ್​ ಅಪ್ ವೇಳೆ ಫೀಲ್ಡರ್ ಉದ್ದೇಶಪೂರ್ವಕವಾಗಿ ಅತ್ತಿತ್ತ ಚಲಿಸಿದರೆ ಎದುರಾಳಿ ತಂಡಕ್ಕೆ 5 ರನ್​ಗಳು ಸಿಗಲಿದೆ. ಇದಕ್ಕೂ ಮುನ್ನ ಈ ರೀತಿಯಾದರೆ ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು. ಇದೀಗ ಈ ನಿಮಯವನ್ನು ಬದಲಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
  5. ಬ್ಯಾಟ್ಸ್​ಮನ್​ ಪಿಚ್​ನಲ್ಲಿಯೇ ಇರಬೇಕು: ಐಸಿಸಿಯ ಹೊಸ ನಿಯಮದ ಪ್ರಕಾರ ಬ್ಯಾಟ್ಸ್‌ಮನ್‌ ಪಿಚ್‌ನ ಒಳಗೆ ಇರುವಾಗಲೇ ಶಾಟ್‌ ಬಾರಿಸಬೇಕು. ಅಂದರೆ ಬ್ಯಾಟಿಂಗ್ ಮಾಡುವಾಗ ದೇಹವು ಪಿಚ್‌ನಿಂದ ಹೊರಗೆ ಹೋದರೆ, ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ. ಆ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಪಿಚ್​ನಿಂದ ಹೊರಹೋದ ಬಾಲ್​ ಅನ್ನು ಹೋಗಿ ಬಾರಿಸಲು ಇನ್ನು ಅವಕಾಶ ಇರುವುದಿಲ್ಲ. ಈ ಹಿಂದೆ ಬೌಲರ್​ ಕೈಯಿಂದ ಜಾರಿದ ಚೆಂಡನ್ನು ಓಡಿ ಹೋಗಿ ಬಾರಿಸಲು ಅವಕಾಶವಿತ್ತು. ಹೀಗೆ ಪಿಚ್​ ಹೊರಗೆ ಹೋದ ಚೆಂಡುಗಳಿಗೆ ಸಿಕ್ಸ್​-ಫೋರ್​ಗಳನ್ನು ಬಾರಿಸುತ್ತಿದ್ದರು. ಆದರೆ ಇನ್ಮುಂದೆ ಅಂತಹ ಶಾಟ್​ಗಳಿಗೆ ಅವಕಾಶವಿಲ್ಲ.
  6. ಮಂಕಡ್ ರನೌಟ್ ನಿಯಮ ಬದಲಾವಣೆ: ಐಸಿಸಿಯ ನೂತನ ನಿಯಮದ ಪ್ರಕಾರ, ಇನ್ಮುಂದೆ ಮಂಕಡ್ ರನೌಟ್ ಇರುವುದಿಲ್ಲ. ಬದಲಾಗಿ ಆ ಔಟ್ ಅನ್ನು ಕೂಡ ರನೌಟ್ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಚೆಂಡೆಸೆಯುವ ಮುನ್ನ ಇನ್ಮುಂದೆ ಬ್ಯಾಟ್ಸ್​ಮನ್ ಕ್ರೀಸ್​ ಬಿಟ್ಟರೆ ರನೌಟ್ ಮಾಡಬಹುದು.
  7. ಸ್ಟ್ರೈಕರ್ ರನೌಟ್ ನಿಯಮ: ಬೌಲರ್​ ಚೆಂಡೆಸೆಯುವ ಮುನ್ನ ಸ್ಟ್ರೈಕರ್​ ಕ್ರೀಸ್ ಬಿಟ್ಟು ಮುನ್ನುಗ್ಗಿ ಬಂದಿದ್ದರೆ ಆತನನ್ನು ನೇರವಾಗಿ ರನೌಟ್ ಮಾಡುವ ಅವಕಾಶ ಬೌಲರ್​ಗೆ ಇರುವುದಿಲ್ಲ. ಅಂದರೆ ಬೌಲಿಂಗ್ ಮಾಡುವ ಮೊದಲು ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟು ಬಂದು ಮುಂದೆ ನಿಂತು ಚೆಂಡನ್ನು ಎದುರಿಸಲು ಸಿದ್ಧನಾಗಿದ್ದರೆ, ಬೌಲಿಂಗ್ ಮಾಡದೇ  ನೇರವಾಗಿ ಚೆಂಡನ್ನು ವಿಕೆಟ್​ಗೆ ಎಸೆದು ಅಥವಾ ಕೀಪರ್​ಗೆ ಎಸೆದು ರನೌಟ್ ಮಾಡುವ ಅವಕಾಶ ಇರುವುದಿಲ್ಲ. ಬದಲಾಗಿ ಅಂತಹ ಸಮಯದಲ್ಲಿ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.
  8. ಸ್ಲೋ ಓವರ್​ ರೇಟ್ ನಿಯಮ: ಐಸಿಸಿಯ ಹೊಸ ನಿಯಮದ ಪ್ರಕಾರ ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು. ಒಂದು ವೇಳೆ ತಡವಾದರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ. ಈಗಾಗಲೇ ಈ ನಿಯಮ ಟಿ20 ಕ್ರಿಕೆಟ್​ನಲ್ಲಿ ಜಾರಿಗೆ ಬಂದಿದೆ. ಇದೀಗ ಇದೇ ನಿಯಮವನ್ನು ಏಕದಿನ ಕ್ರಿಕೆಟ್​ಗೂ ಅನ್ವಯಿಸಲಾಗಿದೆ.
ಇದನ್ನೂ ಓದಿ
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

Published On - 4:10 pm, Tue, 20 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ