AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammed Siraj: ನ್ಯೂಜಿಲೆಂಡ್ 62 ರನ್​ಗೆ ಆಲೌಟ್ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದ ಮೊಹಮ್ಮದ್ ಸಿರಾಜ್: ಏನಂದ್ರು ಕೇಳಿ

India vs New Zealand: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಸಿರಾಜ್​ಗೆ ಬೌಲಿಂಗ್ ಮಾಡಿದ್ದು ಕೇವಲ 4 ಓವರ್ ಮಾತ್ರ. ಇದರಲ್ಲಿ ಕೇವಲ 19 ರನ್ ನೀಡಿದ 3 ವಿಕೆಟ್ ಕಿತ್ತರು. ಕಿವೀಸ್ ಪಡೆಯನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಲು ಇವರು ರೂಪಿಸಿದ ಮಾಸ್ಟರ್ ಪ್ಲಾನ್ ಏನು ಎಂದು ಅವರೇ ಹೇಳಿದ್ದಾರೆ.

Mohammed Siraj: ನ್ಯೂಜಿಲೆಂಡ್ 62 ರನ್​ಗೆ ಆಲೌಟ್ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದ ಮೊಹಮ್ಮದ್ ಸಿರಾಜ್: ಏನಂದ್ರು ಕೇಳಿ
mohammed siraj India vs New Zealand
Follow us
TV9 Web
| Updated By: Vinay Bhat

Updated on: Dec 05, 2021 | 10:54 AM

ಟೆಸ್ಟ್ ಕ್ರಿಕೆಟ್ ಲೋಕದಲ್ಲಿ ಶನಿವಾರ ಎರಡು ಪ್ರಮುಖ ದಾಖಲೆಗಳು ನಿರ್ಮಾಣವಾದವು. ಒಂದು ಐತಿಹಾಸಿಕ ದಾಖಲೆಯಾದರೆ, ಮತ್ತೊಂದು ಅತಿ ಕೆಟ್ಟ ದಾಖಲೆ. ಇವೆರಡೂ ನ್ಯೂಜಿಲೆಂಡ್ (New Zealand Cricket Team) ತಂಡದ ಕಡೆಯಿಂದ ಬಂದಿರುವುದು ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ. ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯ ಶನಿವಾರ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿದ್ದು ಸುಳ್ಳಲ್ಲ. ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ (Ajaz Patel) ಭಾರತದ 10 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದರೆ, ನ್ಯೂಜಿಲೆಂಡ್ ಕೇವಲ 62 ರನ್​ಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆಯಿತು. ಪ್ರವಾಸಿಗರನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಮೊಹಮ್ಮದ್ ಸಿರಾಜ್ (Mohammed Siraj) ಕೂಡ ಪ್ರಮುಖ ಕಾರಣ. ಈ ಬಗ್ಗೆ ಅವರು ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ.

ಸಿರಾಜ್​ಗೆ ಬೌಲಿಂಗ್ ಮಾಡಲು ಸಿಕ್ಕಿದ್ದು ಕೇವಲ 4 ಓವರ್ ಮಾತ್ರ. ಇದರಲ್ಲಿ ಕೇವಲ 19 ರನ್ ನೀಡಿದ 3 ವಿಕೆಟ್ ಕಿತ್ತರು. ಪ್ರಮುಖ ಅಪಾಯಕಾರಿ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿ ನ್ಯೂಜಿಲೆಂಡ್​ಗೆ ಆರಂಭದಲ್ಲೇ ಶಾಕ್ ಮೇಲೆ ಶಾಕ್ ನೀಡಿದರು. ಸ್ಟಂಪ್ ಟು ಸ್ಟಂಪ್‌ ಬೌಲ್‌ ಮಾಡಿದ್ದ ಸಿರಾಜ್‌, ನಾಲ್ಕನೇ ಓವರ್‌ನಲ್ಲಿ ಆರಂಭಿಕರಾದ ವಿಲ್‌ ಯಂಗ್‌(4) ಹಾಗೂ ಟಾಮ್‌ ಲೇಥಮ್‌(10) ಅವರ ವಿಕೆಟ್‌ಗಳನ್ನು ಉರುಳಿಸಿ ಕಿವೀಸ್‌ಗೆ ಆರಂಭಿಕ ಆಘಾತ ನೀಡಿದ್ದರು. ನಂತರ, ಆರನೇ ಓವರ್‌ನಲ್ಲಿ ಮತ್ತೆ ಬಂದ ಸಿರಾಜ್‌, ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದ್ದು ಮನಮೋಹಕವಾಗಿತ್ತು. ಹೀಗೆ ಆರಂಭದಲ್ಲೇ ಪ್ರಮುಖ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿ ನ್ಯೂಜಿಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ನೆರವಾದರು. ಇದಕ್ಕೆ ಇವರು ರೂಪಿಸಿದ ಮಾಸ್ಟರ್ ಪ್ಲಾನ್ ಏನು ಎಂದು ಅವರೇ ಹೇಳಿದ್ದಾರೆ ಕೇಳಿ.

ಈ ಕುರಿತು ಮಾತನಾಡಿರುವ ಸಿರಾಜ್, “ನಾನು ನ್ಯೂಜಿಲೆಂಡ್ ಬೌಲರ್‌ಗಳ ಬೌಲಿಂಗ್‌ ಗಮನಿಸುತ್ತಿದ್ದೆ. ಅವರ ಬೌಲಿಂಗ್ ನೋಡಿದ ಬಳಿಕ ಸ್ಟಂಪ್‌ ಟು ಸ್ಟಂಪ್‌ ಬೌಲ್‌ ಮಾಡಬೇಕೆಂದು ಅರಿತುಕೊಂಡೆ. ನನಗೆ ಸ್ವಿಂಗ್‌ ಸಿಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಾನು ನೋಡಲಿಲ್ಲ. ಆದರೆ, ಸಾಧ್ಯವಾದಷ್ಟು ಸ್ಥಿರವಾಗಿ ವಿಕೆಟ್​ ಕಡೆ ಒಂದೇ ಜಾಗದಲ್ಲಿ ಬೌಲ್‌ ಮಾಡುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೆ. ಈ ವೇಳೆ ಸ್ವಿಂಗ್‌ ಪಡೆದರೆ ಖಂಡಿತಾ ಬ್ಯಾಟ್ಸ್‌ಮನ್‌ ತೊಂದರೆಗೆ ಸಿಲುಕಲಿದ್ದಾರೆ. ಹಾಗಾಗಿ ಒಂದೇ ಜಾಗದಲ್ಲಿ ಬೌಲ್‌ ಮಾಡುವುದು ನನ್ನ ಪ್ಲಾನ್‌ ಆಗಿತ್ತು,” ಎಂದು ಹೇಳಿಕೊಂಡಿದ್ದಾರೆ.

“ಬ್ಯಾಟ್ಸ್‌ಮನ್‌ ಪ್ಯಾಡ್‌ಗೆ ಚೆಂಡು ತಗುಲುವಂತೆ ಬೌಲ್‌ ಮಾಡಬೇಕಾಗಿತ್ತು. ಆದರೆ, ಈ ವೇಳೆ ಒಂದೇ ಒಂದು ಔಟ್‌ ಸ್ವಿಂಗರ್‌ ಹಾಕಬೇಕೆಂದು ನನ್ನ ಮನಸಿಗೆ ಅನಿಸಿತು. ಅದರಂತೆ ಔಟ್‌ ಸ್ವಿಂಗ್‌ ಹಾಕಿ ಯಶಸ್ವಿಯಾದೆ. ಈ ಎಸೆತ ಫಾಸ್ಟ್ ಬೌಲರ್‌ಗಳಿಗೆ ಕನಸಿನ ಎಸೆತ,” ಎಂದು ಮೊಹಮ್ಮದ್‌ ಸಿರಾಜ್‌ ಹೇಳಿದ್ದಾರೆ.

IND vs NZ 2nd Test, Day 3 LIVE Score

Ajaz Patel: ಪಂದ್ಯದ ಬಳಿಕ ನ್ಯೂಜಿಲೆಂಡ್ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ದ್ರಾವಿಡ್, ಕೊಹ್ಲಿ: ಕಾರಣ ಕೇಳಿದ್ರೆ ಹೆಮ್ಮೆ ಆಗುತ್ತೆ

(India vs New Zealand mohammed siraj master plan to all out kiwis for 62 here is the interesting details)

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್