AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಐಪಿಎಲ್ ಮೆಗಾ ಹರಾಜು ವೇಳೆ ಚೆನ್ನೈ ಜೊತೆ ಟೇಬಲ್​ನಲ್ಲಿ ಇರಲಿದ್ದಾರೆ ಎಂಎಸ್ ಧೋನಿ

IPL 2022 Auction: ಐಪಿಎಲ್ 2022 ಮೆಗಾ ಆಕ್ಷನ್ ನಡೆಯುವ ಸಮಯದಲ್ಲಿ ಚೆನ್ನೈ ಟೇಬಲ್​ನಲ್ಲಿ ಇತರೆ ಸದಸ್ಯರ ಜೊತೆ ಎಂಎಸ್ ಧೋನಿ ಕೂಡ ಇರಲಿದ್ದಾರಂತೆ. ಈ ಬಗ್ಗೆ ಸಿಎಸ್​ಕೆ ಅಧಿಕೃತ ಮೂಲಗಳು ತಿಳಿಸಿವೆ ಎಂದು ಇನ್​ಸೈಡ್ ಸ್ಫೋರ್ಟ್ಸ್​ ವರದಿ ಮಾಡಿದೆ.

MS Dhoni: ಐಪಿಎಲ್ ಮೆಗಾ ಹರಾಜು ವೇಳೆ ಚೆನ್ನೈ ಜೊತೆ ಟೇಬಲ್​ನಲ್ಲಿ ಇರಲಿದ್ದಾರೆ ಎಂಎಸ್ ಧೋನಿ
MS Dhoni CSK IPL 2022 Auction
TV9 Web
| Updated By: Vinay Bhat|

Updated on: Feb 01, 2022 | 12:29 PM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳಿರುವುದು. ಇದೇ ಫೆಬ್ರವರಿ 12 ಮತ್ತು 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ದೊಡ್ಡ ಮೆಗಾ ಆಕ್ಷನ್ (IPL Mega Auction) ನಡೆಯಲಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿ ಹರಾಜು ಪ್ರಕ್ರಿಯೆಗೆ ಭರ್ಜರಿ ತಯಾರಿ ಆರಂಭಿಸಿದೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿಶೇಷ ಪ್ಲಾನ್ ರೂಪಿಸಿದಂತಿದೆ. ಈಗಾಗಲೇ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳಿರುವಾಗ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈಗೆ ಬಂದಿಳಿದಿರುವ ವಿಚಾರ ತಿಳಿದೇ ಇದೆ. ಮೆಗಾ ಹರಾಜಿಗೂ ಮೊದಲು ತಂಡಕ್ಕೆ ಯಾವ ಆಟಗಾರರನ್ನು ಖರೀದಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮ್ಯಾನೇಜ್ ಮೆಂಟ್ ಜೊತೆಗೆ ಚರ್ಚಿಸಲು ಧೋನಿ ಚೆನ್ನೈ ಫ್ರಾಂಚೈಸಿ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಹೀಗಿರುವಾಗ ಸಿಎಸ್​ಕೆ ಮ್ಯಾನೇಜ್ಮೆಂಟ್​ನಿಂಧ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಅದೇನೆಂದರೆ ಐಪಿಎಲ್ 2022 ಮೆಗಾ ಆಕ್ಷನ್ ನಡೆಯುವ ಸಮಯದಲ್ಲಿ ಚೆನ್ನೈ ಟೇಬಲ್​ನಲ್ಲಿ ಇತರೆ ಸದಸ್ಯರ ಜೊತೆ ಎಂಎಸ್ ಧೋನಿ ಕೂಡ ಇರಲಿದ್ದಾರಂತೆ. ಈ ಬಗ್ಗೆ ಸಿಎಸ್​ಕೆ ಅಧಿಕೃತ ಮೂಲಗಳು ತಿಳಿಸಿವೆ ಎಂದು ಇನ್​ಸೈಡ್ ಸ್ಫೋರ್ಟ್ಸ್​ ವರದಿ ಮಾಡಿದೆ. “ಮಾಹಿ ಸದ್ಯ ಹರಾಜಿನ ಕುರಿತ ಚರ್ಚೆಗಾಗಿ ಚೆನ್ನೈನಲ್ಲಿದ್ದಾರೆ. ಅವರು ಹರಾಜು ಪ್ರಕ್ರಿಯೆಗೂ ಬರುವ ಸಾಧ್ಯತೆ ಇದೆ. ಆದರೆ, ನಾವು ಒತ್ತಡ ಹಾಕುವುದಿಲ್ಲ, ಅದು ಅವರ ನಿರ್ಧಾರ. ಅವರು ಬಂದರೆ ಧೋನಿ ಅನುಭವ, ತಂಡಕ್ಕೆ ಯಾವ ಆಟಗಾರ ಬೇಕು ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತದೆ,” ಎಂದು ಚೆನ್ನೈ ಮ್ಯಾನೇಜ್ಮೆಂಟ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಯಶಸ್ವಿ ನಾಯಕನಾಗಿರುವ ಮಹೇಂದ್ರ ಸಿಂಗ್​ ಧೋನಿ ಈಗಾಗಲೇ ಸಿಎಸ್​​ಕೆ ತಂಡಕ್ಕೆ ಹಲವಾರು ಸಲ ಪ್ರಶಸ್ತಿ ತಂದುಕೊಟ್ಟಿದ್ದಾರೆ. 2022ರ ಆವೃತ್ತಿಗಾಗಿ ಸಿಎಸ್​​ಕೆ ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೊಯಿನ್​​ ಅಲಿ ಮತ್ತು ಆರಂಭಿಕ ಆಟಗಾರ ಋತುರಾಜ್ ಗಾಯ್ಕವಾಡ್​ಗೆ ತಂಡದಲ್ಲೇ ಉಳಿಸಿಕೊಂಡಿದೆ. ಇದೀಗ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಯಾವೆಲ್ಲ ಆಟಗಾರರ ಖರೀದಿ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಭಾಗವಾಗಿರುವ ಮಹೇಂದ್ರ ಸಿಂಗ್ ಧೋನಿ ಆಟಗಾರರ ಖರೀದಿಗಾಗಿ ಮಹತ್ವದ ಪ್ಲಾನ್​ ರೂಪಿಸಲಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಮೂಲಕ 2022ರ ಐಪಿಎಲ್ ಪ್ರಶಸ್ತಿ ಮೇಲೂ ಕಣ್ಣಿಟ್ಟಿದ್ದು, ಈಗಲೇ ತಯಾರಿಯನ್ನು ಆರಂಭಿಸಿದೆ.

ಮುಂಬೈ-ಅಹ್ಮದಾಬಾದ್​ನಲ್ಲಿ ಪಂದ್ಯ:

ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐ ಹಲವು ಸವಾಲುಗಳು ಎದುರಿಸಲು ತಯಾರಾಗಿದೆ. ಎಲ್ಲ ಪಂದ್ಯಗಳು ಮುಂಬೈನಲ್ಲಿ ಮತ್ತು ಅಹ್ಮದಾಬಾದ್​ನಲ್ಲಿ ಮಾತ್ರ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಐಪಿಎಲ್​ನ ಎಲ್ಲ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆದರೆ ಪ್ಲೇ ಆಫ್ ಪಂದ್ಯಗಳು ಅಹ್ಮದಾಬಾದ್​ನಲ್ಲಿ ಜರುಗಲಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಐಪಿಎಲ್ ಪ್ರಿಯರಿಗೆ ಸಿಕ್ಕಿದೆ. ಅದೇನೆಂದರೆ ಈ ಬಾರಿಯ ಐಪಿಎಲ್ ವೀಕ್ಷಣೆಗೆ ಶೇ. 25 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹರಾರಾಷ್ಟ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಐಪಿಎಲ್ ವೇಳೆ ಕೊರೊನಾಸಂಖ್ಯೆ ಇಳಿಮುಖವಾಗಿದ್ದರೆ ಶೇ. 25 ರಷ್ಟು ಜನರಿಗೆ ಪಂದ್ಯ ವೀಕ್ಷಿಸಲು ಅನಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.

India vs West Indies: ಭಾರತ-ವೆಸ್ಟ್ ಇಂಡೀಸ್ ಸರಣಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಸಿಕ್ತು ಬಂಪರ್ ಸುದ್ದಿ: ಏನದು?

Ranji Trophy 2021-22: ರಣಜಿ ಟ್ರೋಫಿ 2022: ಫೆ. 16 ರಿಂದ ಮಾ. 5 ರವರೆಗೆ 9 ತಾಣಗಳಲ್ಲಿ ಪಂದ್ಯ ಆಯೋಜನೆ

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ