AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ರಿಷಬ್ ಪಂತ್ ದುರಹಂಕಾರಿ! ಅವರ ನಾಯಕತ್ವ ನನ್ನ ತಲೆ ಕೆರೆದುಕೊಳ್ಳುವಂತೆ ಮಾಡಿತು; ಆಕಾಶ ವಾಣಿ

Rishabh Pant: ಈ ಆಟಗಾರ ತನ್ನ ದುರಹಂಕಾರದಿಂದಲೇ ಹಲವು ಬಾರಿ ಔಟಾಗಿದ್ದಾನೆ. ಬೌಲರ್‌ಗೆ ಲಾಂಗ್‌ ಶಾಟ್‌ಗಳನ್ನು ಹೊಡೆಯುವ ಭರದಲ್ಲಿ ವಿಕೆಟ್‌ ಕಳೆದುಕೊಂಡಿದ್ದಾನೆ.

Rishabh Pant: ರಿಷಬ್ ಪಂತ್ ದುರಹಂಕಾರಿ! ಅವರ ನಾಯಕತ್ವ ನನ್ನ ತಲೆ ಕೆರೆದುಕೊಳ್ಳುವಂತೆ ಮಾಡಿತು; ಆಕಾಶ ವಾಣಿ
ರಿಷಬ್ ಪಂತ್
TV9 Web
| Updated By: ಪೃಥ್ವಿಶಂಕರ|

Updated on:Jun 01, 2022 | 6:25 PM

Share

ಐಪಿಎಲ್ 2022 (IPL 2022)ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪ್ರದರ್ಶನ ವಿಶೇಷವಾಗಿರಲಿಲ್ಲ. ಕೇವಲ ಒಂದು ಗೆಲುವನ್ನು ಪಡೆಯದ ಕಾರಣ ತಂಡವು ಪ್ಲೇ ಆಫ್ ರೇಸ್‌ನಿಂದ ಹೊರಗುಳಿಯಿತು. ಮುಂಬೈ ವಿರುದ್ಧದ ಸೋಲಿನಿಂದಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪ್ಲೇ ಆಫ್ ತಲುಪಿತು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ನಿರಾಸೆಯನ್ನು ಎದುರಿಸಬೇಕಾಯಿತು. ಈಗ ತಂಡವು ಕಳಪೆ ಪ್ರದರ್ಶನ ನೀಡಿರುವುದರಿಂದ ನಾಯಕನ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ರಿಷಬ್ ಪಂತ್ (Rishabh Pant) ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆಕಾಶ್ ಚೋಪ್ರಾ, ಪಂತ್ ನಾಯಕತ್ವ, ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಂತ್ ವಿರುದ್ಧ ಹರಿಹಾಯ್ದಿದ್ದಾರೆ.

ಪಂತ್ ನಾಯಕತ್ವದ ಬಗ್ಗೆ ಛೋಪ್ರಾ ಹಲವು ಪ್ರಶ್ನೆಗಳು

ಆಕಾಶ್ ಚೋಪ್ರಾ, ‘ರಿಷಬ್ ಪಂತ್ ಆಟಗಾರನಾಗಿ ನನ್ನ ನೆಚ್ಚಿನ ಆಟಗಾರ, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ನಾವು ಕೂಡ ಅದೇ ಕ್ಲಬ್‌ನಲ್ಲಿ ಆಡಿದ್ದೇವೆ, ಆದರೆ ಅವರ ನಾಯಕತ್ವ ಚೆನ್ನಾಗಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ಅವರ ನಾಯಕತ್ವ ನನ್ನ ತಲೆ ಕೆರೆದುಕೊಳ್ಳುವಂತೆ ಮಾಡಿತು. ಕುಲದೀಪ್ ಯಾದವ್ 3 ಓವರ್‌ಗಳಲ್ಲಿ 4 ವಿಕೆಟ್ ಕಬಳಿಸಿದ ಪಂದ್ಯವಿತ್ತು ಆದರೆ ಪಂತ್ ಅವರಿಗೆ ನಾಲ್ಕನೇ ಓವರ್ ನೀಡಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಬೌಲರ್‌ಗಳು ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗದ ಅನೇಕ ಸಂದರ್ಭಗಳಲ್ಲಿ ಇದು ಸಂಭವಿಸಿತು.

ಇದನ್ನೂ ಓದಿ
Image
ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ
Image
IND vs SA: ರಾಹುಲ್ ಪಡೆಗೆ ಸಿಹಿ ಸುದ್ದಿ; ಬಯೋ ಬಬಲ್​ ನಿಯಮಗಳಿಂದ ಟೀಂ ಇಂಡಿಯಾ ಆಟಗಾರರು ಮುಕ್ತ!
Image
ಭಾರತದ ವಿರುದ್ಧ 23 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಡೇವಿಡ್ ಹೋಲ್ಫೋರ್ಡ್ ನಿಧನ

ಇದನ್ನೂ ಓದಿ: IPL 2022: ಈ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಸಿಕ್ಕ ಐವರು ಪ್ರತಿಭಾವಂತ ಬೌಲರ್​ಗಳಿವರು

ಬ್ಯಾಟ್‌ನಲ್ಲೂ ಪಂತ್ ವಿಫಲ

ಬ್ಯಾಟ್‌ನೊಂದಿಗೆ ಪಂತ್ ಅವರ ಸ್ಥಿರ ಪ್ರದರ್ಶನವು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಾಕಷ್ಟು ಹಾನಿ ಮಾಡಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಆಕಾಶ್ ಚೋಪ್ರಾ, ‘ರಿಷಬ್ ಪಂತ್ ಅವರ ಬ್ಯಾಟಿಂಗ್‌ನ ಕಳಪೆ ಫಾರ್ಮ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಸಮಸ್ಯೆಯಾಗಿದೆ. ಅವರ ರನ್ ಗೆಲುವಿನಲ್ಲಿ ಕೆಲಸ ಮಾಡಲಿಲ್ಲ. ಪಂತ್ ಉತ್ತಮ ಸರಾಸರಿ ಹೊಂದಿದ್ದಾರೆ ಆದರೆ ಅವರು ರನ್ ಗಳಿಸಿದ ಹೆಚ್ಚಿನ ಪಂದ್ಯಗಳಲ್ಲಿ ತಂಡ ಸೋಲನುಭವಿಸಿತು.

ಪಂತ್ ತಮ್ಮ ವಿಕೆಟ್ ಅನ್ನು ಹಲವು ಬಾರಿ ಕೈಚೆಲ್ಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಕೆಟ್ಟ ಹೊಡೆತದಿಂದ ಪಂತ್ ಹಲವು ಬಾರಿ ಬೇಗನೆ ಪೆವಿಲಿಯನ್‌ಗೆ ಮರಳಬೇಕಾಯಿತು. ಚೋಪ್ರಾ ಇದನ್ನು ಪಂತ್ ದುರಹಂಕಾರ ಎಂದು ಕರೆದಿದ್ದಾರೆ. ಆಕಾಶ್ ಚೋಪ್ರಾ, ‘ಈ ಆಟಗಾರ ತನ್ನ ದುರಹಂಕಾರದಿಂದಲೇ ಹಲವು ಬಾರಿ ಔಟಾಗಿದ್ದಾನೆ. ಬೌಲರ್‌ಗೆ ಲಾಂಗ್‌ ಶಾಟ್‌ಗಳನ್ನು ಹೊಡೆಯುವ ಭರದಲ್ಲಿ ವಿಕೆಟ್‌ ಕಳೆದುಕೊಂಡಿದ್ದಾನೆ. ಆದರೆ ನನ್ನ ನಂತರ ತಂಡದಲ್ಲಿ ಹೆಚ್ಚು ಬ್ಯಾಟಿಂಗ್ ಇಲ್ಲ ಎಂಬುದು ಪಂತ್​ಗೆ ಗೊತ್ತಿದ್ದರು ಅವರು ನಿರ್ಲಕ್ಷ್ಯ ವಹಿಸಿದರು ಎಂದಿದ್ದಾರೆ. ಆದಾಗ್ಯೂ, ಕುಲದೀಪ್ ಯಾದವ್ ಅವರ ಉತ್ತಮ ಪ್ರದರ್ಶನಕ್ಕಾಗಿ ಆಕಾಶ್ ಚೋಪ್ರಾ ರಿಷಬ್ ಪಂತ್ಗೆ ಸಂಪೂರ್ಣ ಕ್ರೆಡಿಟ್ ನೀಡಿದ್ದು, ಪಂತ್ ನೀಡಿದ ಧೈರ್ಯದಿಂದ ಕುಲದೀಪ್ ಅದ್ಭುತ ಪ್ರದರ್ಶನ ನೀಡಿದರು ಎಂದು ಛೋಪ್ರಾ ಹೇಳಿದ್ದಾರೆ.

Published On - 6:25 pm, Wed, 1 June 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?