AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ

Virender Sehwag: ಸಚಿನ್ ನನ್ನ ಬಳಿ ಬಂದು ,ಇದು ನಿಮ್ಮ ಕಳಪೆ ಫಾರ್ಮ್ ಮಾತ್ರ. ಈ ಪ್ರವಾಸದ ನಂತರ ಮನೆಗೆ ಹೋಗಿ ನಂತರ ಯೋಚಿಸಿ, ಅನಂತರ ಏನು ಮಾಡಬೇಕೆಂದು ನಿರ್ಧರಿಸಿ ಎಂಬ ಸಲಹೆ ನೀಡಿದ್ದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.

ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ
ಸೆಹ್ವಾಗ್-ಧೋನಿ
TV9 Web
| Updated By: ಪೃಥ್ವಿಶಂಕರ|

Updated on: Jun 01, 2022 | 5:26 PM

Share

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿ ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾ (Team India)ಗೆ ಅನೇಕ ದೊಡ್ಡ ಪಂದ್ಯಾವಳಿಗಳನ್ನು ಗೆದ್ದು ಟೀಮ್ ಇಂಡಿಯಾಕ್ಕೆ ಯಶಸ್ಸನ್ನು ತಂದರು. ಈ ವೇಳೆ ಹಲವು ಬಾರಿ ಹಿರಿಯ ಆಟಗಾರರನ್ನು ತಂಡದಿಂದ ಹೊರಹಾಕಿದ ಆರೋಪವೂ ಧೋನಿ ವಿರುದ್ಧ ಕೇಳಿ ಬಂದಿತ್ತು. ಇದಕ್ಕೆ ಪೂರಕವೆಂಬಂತೆ ಈಗ ಸುಮಾರು 10 ವರ್ಷಗಳ ನಂತರ, ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ತಮ್ಮ ಮನದಾಳದ ನೋವನ್ನು ವಿವರಿಸಿದ್ದಾರೆ. ಒಂದು ಸಮಯದಲ್ಲಿ ಧೋನಿ ಮಾಡಿದ ಕೆಲಸದಿಂದ ತಾನು ನಿವೃತ್ತಿ ಘೋಷಿಸಲು ಮುಂದಾಗಿದ್ದೆ ಎಂಬ ಶಾಕಿಂಗ್ ಸತ್ಯವನ್ನ ವೀರೂ ಈಗ ಬಾಯ್ಬಿಟ್ಟಿದ್ದಾರೆ.

2007 ರಲ್ಲಿ ಧೋನಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ನೀಡಲಾಯಿತು. ಧೋನಿ, ಮೊದಲು ಟಿ 20 ಮತ್ತು ನಂತರ ODI ಸ್ವರೂಪದಲ್ಲಿ ನಾಯಕತ್ವವನ್ನು ವಹಿಸಿಕೊಂಡರು. ಆದರೆ, ಈ ಸಮಯದಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ವೀರೇಂದ್ರ ಸೆಹ್ವಾಗ್‌, ಧೋನಿಯ ಕೆಲವು ಶಿಸ್ತುಬದ್ಧ ಕ್ರಮಗಳಿಗೆ ಸಿಲುಕಿ ಒದ್ದಾಡಬೇಕಾಯಿತು. ನಾಯಕನಾದ ಬಳಿಕ ಧೋನಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಆರಂಭಿಸಿದರು. ಅವರ ನಿರ್ಧಾರಗಳಿಗೆ ಸೆಹ್ವಾಗ್ ಕೂಡ ಬಲಿಯಾಗಬೇಕಾಯಿತು. ಇದು ಸೆಹ್ವಾಗ್​ಗೆ ಇನ್ನಿಲ್ಲದ ನೋವು ನೀಡಿತ್ತು. ಇದರಿಂದ ನೊಂದಿದ್ದ ಸೆಹ್ವಾಗ್ ODI ಸ್ವರೂಪಕ್ಕೆ ಶಾಶ್ವತವಾಗಿ ವಿದಾಯ ಹೇಳುವ ಆಲೋಚನೆಯನ್ನು ಮಾಡಿದ್ದರು.

ಇದನ್ನೂ ಓದಿ:IPL 2022: ಧೋನಿ ನಿರ್ಧಾರವೇ ಅಂತಿಮ; ಮಹೀ ಮನವಿ ನೋಡಿ ನಿರ್ಧಾರ ಬದಲಿಸಿದ ಅಂಪೈರ್! ವಿಡಿಯೋ ವೈರಲ್

ಇದನ್ನೂ ಓದಿ
Image
IND vs SA: ರಾಹುಲ್ ಪಡೆಗೆ ಸಿಹಿ ಸುದ್ದಿ; ಬಯೋ ಬಬಲ್​ ನಿಯಮಗಳಿಂದ ಟೀಂ ಇಂಡಿಯಾ ಆಟಗಾರರು ಮುಕ್ತ!
Image
ಭಾರತದ ವಿರುದ್ಧ 23 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಡೇವಿಡ್ ಹೋಲ್ಫೋರ್ಡ್ ನಿಧನ
Image
IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು

2008 ರಲ್ಲಿ ಸೆಹ್ವಾಗ್ ಅವರನ್ನು ಆಡುವ XI ನಿಂದ ಕೈಬಿಟ್ಟ ಧೋನಿ 2008ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಸರಣಿ ಆಡುತ್ತಿತ್ತು. ಭಾರತ ಮತ್ತು ಆತಿಥೇಯ ತಂಡವನ್ನು ಹೊರತುಪಡಿಸಿ, ಶ್ರೀಲಂಕಾ ಕೂಡ ಈ ಸರಣಿಯ ಭಾಗವಾಗಿತ್ತು. ಈ ಸರಣಿಯಲ್ಲಿ ಸೆಹ್ವಾಗ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಈ ಸರಣಿಯಲ್ಲಿ ವೀರೂ ರನ್‌ಗಾಗಿ ಹೋರಾಡುತ್ತಲೇ ಇದ್ದರು. ನಾಲ್ಕು ಪಂದ್ಯಗಳಲ್ಲಿ ಅವರು 6, 33, 11, 14 ರನ್ ಗಳಿಸಿದ್ದರು. ಹೀಗಾಗಿ ಧೋನಿ ಅವರನ್ನು ತಂಡದಿಂದ ಕೈಬಿಟ್ಟಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಸೆಹ್ವಾಗ್ ಆ ಸಮಯದಲ್ಲಿ ಏಕದಿನ ಕ್ರಿಕೆಟ್​ಗೆ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದರು. ಈ ಬಗ್ಗೆ ಈಗ ಕ್ರಿಕ್‌ಬಜ್ ಶೋನಲ್ಲಿ ಮಾತನಾಡಿದ ಸೆಹ್ವಾಗ್, ‘2008 ರಲ್ಲಿ, ನಾವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ನಾನು ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಏಕದಿನದಲ್ಲಿ ನನಗೆ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಧೋನಿ ನನ್ನನ್ನು ಆಡುವ XI ನಿಂದ ಕೈಬಿಟ್ಟರು. ಅದಕ್ಕಾಗಿಯೇ ನಾನು ಏಕದಿನ ಮಾದರಿಯನ್ನು ತೊರೆಯುವ ಆಲೋಚನೆಯನ್ನು ಪ್ರಾರಂಭಿಸಿದೆ ಎಂಬ ಮಾತನ್ನು ಈ ಶೋನಲ್ಲಿ ಬಾಯ್ಬಿಟ್ಟಿದ್ದಾರೆ.

ಸಚಿನ್ ಒತ್ತಾಯದ ಮೇರೆಗೆ ನಿವೃತ್ತಿಯ ನಿರ್ಧಾರವನ್ನು ಬದಲಾಯಿಸಿದೆ ಆದರೆ ಸಚಿನ್ ತೆಂಡೂಲ್ಕರ್ ನನ್ನನ್ನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಬಿಡಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಸಚಿನ್ ನನ್ನ ಬಳಿ ಬಂದು ,ಇದು ನಿಮ್ಮ ಕಳಪೆ ಫಾರ್ಮ್ ಮಾತ್ರ. ಈ ಪ್ರವಾಸದ ನಂತರ ಮನೆಗೆ ಹೋಗಿ ನಂತರ ಯೋಚಿಸಿ, ಅನಂತರ ಏನು ಮಾಡಬೇಕೆಂದು ನಿರ್ಧರಿಸಿ ಎಂಬ ಸಲಹೆ ನೀಡಿದ್ದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಆದರೆ 2013 ರಲ್ಲಿ ತಮ್ಮ ಕೊನೆಯ ODI ಪಂದ್ಯವನ್ನು ಆಡಿದ ಸೆಹ್ವಾಗ್ ವಿದಾಯ ಪಂದ್ಯ ಆಡುವ ಅವಕಾಶ ಸಿಗದೇ ಕ್ರಿಕೆಟ್​ಗೆ ವಿದಾಯ ಹೇಳಿದರು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?