AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs DC, IPL 2025: ರಿಷಭ್ ಪಂತ್ ಸೇರಿದಂತೆ ಈ 5 ಆಟಗಾರರು ಎಲ್‌ಎಸ್‌ಜಿ ಸೋಲಿಗೆ ನೇರ ಕಾರಣರಾದರು

LSG vs DC, IPl 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡದ ಸೋಲಿಗೆ ನಾಯಕ ರಿಷಭ್ ಪಂತ್ ಕೂಡ ಪ್ರಮುಖ ಕಾರಣದಾದರು. ಇವರ ಜೊತೆಗೆ ಇನ್ನೂ 4 ಆಟಗಾರರು ಈ ಸೋಲಿಗೆ ಕಾರಣರಾದರು. ಇವರು ಉತ್ತಮ ಪ್ರದರ್ಶನ ನೀಡಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು.

LSG vs DC, IPL 2025: ರಿಷಭ್ ಪಂತ್ ಸೇರಿದಂತೆ ಈ 5 ಆಟಗಾರರು ಎಲ್‌ಎಸ್‌ಜಿ ಸೋಲಿಗೆ ನೇರ ಕಾರಣರಾದರು
Rishabh Pant And Lsg
Follow us
Vinay Bhat
|

Updated on: Apr 23, 2025 | 10:10 AM

ಬೆಂಗಳೂರು (ಏ. 23): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League 2025) 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತ ನಂತರ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡಿ ದೆಹಲಿಗೆ 160 ರನ್ ಗಳ ಗುರಿ ನೀಡಿತು. ಈ ಗುರಿಯನ್ನು ದೆಹಲಿ 17.5 ಓವರ್‌ಗಳಲ್ಲಿ ತಲುಪಿತು. ಲಕ್ನೋ ಸೋಲಿಗೆ ನಾಯಕ ರಿಷಭ್ ಪಂತ್ ಕೂಡ ಪ್ರಮುಖ ಕಾರಣದಾದರು. ಇವರ ಜೊತೆಗೆ ಇನ್ನೂ 4 ಆಟಗಾರರು ಈ ಸೋಲಿಗೆ ಕಾರಣರಾದರು. ಇವರು ಉತ್ತಮ ಪ್ರದರ್ಶನ ನೀಡಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು.

ಡೇವಿಡ್ ಮಿಲ್ಲರ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಡೇವಿಡ್ ಮಿಲ್ಲರ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಅವರು ಕೊನೆಯವರೆಗೂ ಅಜೇಯರಾಗಿ ಉಳಿದರು. ಆದರೆ ಮಿಲ್ಲರ್ 15 ಎಸೆತಗಳಲ್ಲಿ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ಈ ಅವಧಿಯಲ್ಲಿ ಅವರು ಕೇವಲ ಒಂದು ಫೋರ್ ಮಾತ್ರ ಬಾರಿಸಿದರು.

ರವಿ ಬಿಷ್ಣೋಯ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನುಭವಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತುಂಬಾ ದುಬಾರಿಯಾಗಿ ಪರಿಣಮಿಸಿದರು. ಅವರು ಮೂರು ಓವರ್‌ಗಳಲ್ಲಿ 36 ರನ್‌ಗಳನ್ನು ನೀಡಿದರು ಮತ್ತು ಯಾವುದೇ ವಿಕೆಟ್ ಪಡೆಯಲಿಲ್ಲ.

ಇದನ್ನೂ ಓದಿ
Image
ತನ್ನದೇ ತಂಡದ ಆಟಗಾರನಿಗೆ ಕಪಾಳಮೋಕ್ಷ ಮಾಡಲು ಮುಂದಾದ ರಿಷಭ್ ಪಂತ್
Image
ಬರೋಬ್ಬರಿ 27 ಕೋಟಿ ರೂ... LSG ತಂಡದಲ್ಲಿ ಮೂಲೆಗುಂಪಾದ ರಿಷಭ್ ಪಂತ್
Image
VIDEO: ನಾನೇ ಕೆಎಲ್ ರಾಹುಲ್... LSGಗೆ ಕನ್ನಡಿಗನ ತಿರುಗೇಟು
Image
Kl Rahul: ದಾಖಲೆಗಳು ಧೂಳೀಪಟ... ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್

ಅಬ್ದುಲ್ ಸಮದ್: ದೆಹಲಿ ವಿರುದ್ಧದ ಪಂದ್ಯದಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದರು. ಅವರನ್ನು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಆದರೆ ಸಮದ್ ಎಂಟು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಔಟಾದರು.

Rishabh Pant: ತನ್ನದೇ ತಂಡದ ಆಟಗಾರನಿಗೆ ಕಪಾಳಮೋಕ್ಷ ಮಾಡಲು ಮುಂದಾದ ರಿಷಭ್ ಪಂತ್

ರಿಷಭ್ ಪಂತ್: ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಸಂಪೂರ್ಣವಾಗಿ ವಿಫಲರಾದರು. ದೆಹಲಿ ವಿರುದ್ಧದ ಕೊನೆಯ ಓವರ್‌ನಲ್ಲಿ ಅವರು ಬ್ಯಾಟಿಂಗ್‌ ಮಾಡಲು ಬಂದರು. ಪಂತ್ ಕೇವಲ ಎರಡು ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾದರು. ಇವರು ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಔಟ್ ಆದರು.

ನಿಕೋಲಸ್ ಪೂರನ್: ಉತ್ತಮ ಫಾರ್ಮ್‌ನಲ್ಲಿದ್ದ ನಿಕೋಲಸ್ ಪೂರನ್ ಅವರ ಬ್ಯಾಟ್ ಕೂಡ ಮೌನವಾಗಿತ್ತು. ಅವರು ಐದು ಎಸೆತಗಳಲ್ಲಿ ಕೇವಲ ಒಂಬತ್ತು ರನ್ ಗಳಿಸಲು ಸಾಧ್ಯವಾಯಿತು. ಇವರಿಗೆ ಮಿಚೆಲ್ ಸ್ಟಾರ್ಕ್ ಪೆವಿಲಿಯನ್ ಹಾದಿ ತೋರಿಸಿದರು.

ಸೋಲಿನ ಬಗ್ಗೆ ರಿಷಭ್ ಪಂತ್ ಹೇಳಿದ್ದೇನು?:

ಪಂದ್ಯದ ನಂತರ ಮಾತನಾಡಿದ ರಿಷಭ್ ಪಂತ್, ‘‘ಇಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಪಿಚ್ ನಿಂದ ಸಾಕಷ್ಟು ಸಹಾಯ ಸಿಗುತ್ತಿದೆ. ಲಕ್ನೋದಲ್ಲಿ ಇದೇರೀತಿ ಆಗುತ್ತದೆ, ಪಂದ್ಯ ಮುಂದುವರೆದಂತೆ ಪಿಚ್ ಬ್ಯಾಟಿಂಗ್‌ಗೆ ಸುಲಭವಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ನಾವು 20 ರನ್ ಕಡಿಮೆ ಗಳಿಸಿದ್ದೇವೆಂದು ನಮಗೆ ತಿಳಿದಿತ್ತು’’ ಎಂದು ಹೇಳಿದ್ದಾರೆ.

ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಂತರ ಟೀಕೆಗಳನ್ನು ಎದುರಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್, ‘‘ನಾವು ಸಂದರ್ಭಗಳ ಲಾಭವನ್ನು ಪಡೆಯಲು ಬಯಸಿದ್ದೆವು. ಇದಕ್ಕಾಗಿ ನಾವು (ಅಬ್ದುಲ್) ಸಮದ್ ಅವರನ್ನು ಕಳುಹಿಸಿದ್ದೇವೆ. (ಡೇವಿಡ್) ಮಿಲ್ಲರ್ ಕ್ರೀಸ್‌ಗೆ ಬಂದ ನಂತರ ನಮ್ಮ ರನ್ ರೇಟ್ ಹೆಚ್ಚಾಗಲಿಲ್ಲ’’ ಎಂದು ಸೋಲಿಗೆ ಕಾರಣ ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ