AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಬೌಲರ್ ಪರ ಅಶ್ವಿನ್ ಬ್ಯಾಟಿಂಗ್

Usman Tariq - Ashwin: ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಭಾರತೀಯ ಆಟಗಾರ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನೆಗಳನ್ನೆತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವುದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂಬುದು ವಿಶೇಷ. ಅದು ಕೆಲ ಪ್ರಶ್ನೆಗಳನ್ನು ಮುಂದಿಡುವ ಮೂಲಕ. 

ಪಾಕ್ ಬೌಲರ್ ಪರ ಅಶ್ವಿನ್ ಬ್ಯಾಟಿಂಗ್
Usman Tariq - Ashwin
ಝಾಹಿರ್ ಯೂಸುಫ್
|

Updated on: Feb 11, 2026 | 11:58 AM

Share

ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗೆಗಿನ ಚರ್ಚೆ ಮುಂದುವರೆದಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲೂ ಉಸ್ಮಾನ್ ತಾರಿಖ್ ತನ್ನ ವಿಳಂಬ ರೀತಿಯ ಬೌಲಿಂಗ್​ಗೆ ಶೈಲಿಯನ್ನು ಮುಂದುವರೆಸಿದ್ದಾರೆ. ಇದನ್ನೇ ಭಾರತೀಯ ಕ್ರಿಕೆಟಿಗ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

“ಫುಟ್​ಬಾಲ್ ಆಟಗಾರರಿಗೆ ಪೆನಾಲ್ಟಿ ರನ್-ಅಪ್ ಸಮಯದಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಇದು ಹೇಗೆ ಸರಿ? ಆಕ್ಷನ್ – ಎಲ್ಲವೂ ಒಳ್ಳೆಯದು. ಆದರೆ ಈ ವಿರಾಮ? ಅದು ಕೂಡ ಚೆಂಡೆಸೆಯುವ ಮುನ್ನ. ಇದು ಗಂಭೀರ ವಿಷಯ, ಇದನ್ನೆಲ್ಲಾ ಮುಂದುವರೆಸಲು ಅನುಮತಿಸಬಾರದು!” ಎಂಬಾರ್ಥದಲ್ಲಿ ಶ್ರೀವಾಸ್ತವ್ ಗೋಸ್ವಾಮಿ X ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್, “ಫುಟ್​ಬಾಲ್​ನಲ್ಲಿ ಇದನ್ನು ಅನುಮತಿಸುವುದಿಲ್ಲ ಎಂಬುದನ್ನು ಒಪ್ಪಿಕೊತ್ತೇನೆ! ಆದರೆ ಬ್ಯಾಟರ್ ತನ್ನ ಸ್ಟಾನ್ಸ್ ತೆಗೆದುಕೊಂಡ ನಂತರ, ಅಂಪೈರ್ ಅಥವಾ ಬೌಲರ್‌ಗೆ ತಿಳಿಸದೆ ಸ್ವಿಚ್ ಹಿಟ್ ಅಥವಾ ರಿವರ್ಸ್ ಶಾಟ್ ಹೊಡೆಯಲು ಅನುಮತಿಸಲಾಗುತ್ತದೆ.

ಬ್ಯಾಟರ್​ಗೆ ಹೀಗೆ ಅನುಮತಿಸಬಹುದಾದರೆ, ನಿರ್ಬಂಧಗಳು ಬೌಲರ್‌ಗೆ ಮಾತ್ರ ಏಕೆ ಸೀಮಿತವಾಗಿವೆ?. ವಾಸ್ತವವಾಗಿ ಬೌಲರ್ ಅಂಪೈರ್‌ಗೆ ತಿಳಿಸದೆ ತಾನು ಬೌಲ್ ಮಾಡುವ ತೋಳನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ!  ಮೊದಲು ಆ ನಿಯಮವನ್ನು ಬದಲಾಯಿಸಬೇಕು” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಪಾಕಿಸ್ತಾನ್ ಸ್ಪಿನ್ನರ್​ನ ಲೇಟ್ ಎಸೆತಗಳನ್ನು ರವಿಚಂದ್ರನ್ ಅಶ್ವಿನ್ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಅಂದರೆ ಇಲ್ಲಿ ಬ್ಯಾಟರ್​ಗಳು ಚೆಂಡೆಸೆದ ಬಳಿಕ ಯಾವುದೇ ರೀತಿಯಲ್ಲೂ ಬೇಕಿದ್ದರೂ ಬ್ಯಾಟ್ ಬೀಸಬಹುದು. ಉದಾಹರಣೆಗೆ ರೈಟ್ ಹ್ಯಾಂಡ್ ಬ್ಯಾಟರ್, ಚೆಂಡು ಬರುವಾಗ ಲೆಫ್ಟ್ ಹ್ಯಾಂಡ್ ಆಗಿ ಬ್ಯಾಟ್ ಬೀಸಲು ಅವಕಾಶವಿದೆ.

ಆದರೆ ಬೌಲರ್​ಗಳಿಗೆ ಇಂತಹ ಯಾವುದೇ ಆಯ್ಕೆ ಇಲ್ಲ. ಒಂದು ವೇಳೆ ಬೌಲರ್ ಬಲಗೈ ಬದಲು ಎಡಗೈನಲ್ಲಿ ಚೆಂಡೆಸೆಯಲು ಮುಂದಾದರೆ ಅಂಪೈರ್​ಗೆ ತಿಳಿಸಬೇಕು. ಅದೇ ಬ್ಯಾಟರ್​ ಸ್ವಿಚ್ ಹಿಟ್ ಅಥವಾ ರಿವರ್ಸ್ ಸ್ವೀಪ್ ಮಾಡುತ್ತೇನೆ ಎಂಬುದನ್ನು ಅಂಪೈರ್​ಗೆ ತಿಳಿಸುವ ಅವಶ್ಯಕತೆಯಿಲ್ಲ. ಅಂದರೆ ಇಲ್ಲಿ ಬ್ಯಾಟರ್ ಕೂಡ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸುವುದಲ್ಲವೇ? ಇದಾಗ್ಯೂ ಎಲ್ಲಾ ನಿಯಮಗಳು ಬೌಲರ್​ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.

ಇತ್ತ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಉಸ್ಮಾನ್ ತಾರಿಖ್ ಈಗಾಗಲೇ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ ಲೇಟ್ ಎಸೆತಗಳ ಮೂಲಕ ಬ್ಯಾಟರ್​​ನ ಮೂವ್​ಮೆಂಟ್​ ಗ್ರಹಿಸುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೆ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

ಆದರೆ ಉಸ್ಮಾನ್ ತಾರಿಖ್​ಗೂ ಮುನ್ನವೇ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಅಂಗಳದಲ್ಲಿ ಇಂತಹ ಲೇಟ್ ಎಸೆತಗಳನ್ನು ಎಸೆದಿದ್ದರು ಎಂಬುದೇ ಸತ್ಯ. 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ತಂಡಕ್ಕೆ 6 ರನ್ ಬೇಕಿದ್ದಾಗ ಅಶ್ವಿನ್ ಲೇಟ್ ಎಸೆತದ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದೀಗ ಉಸ್ಮಾನ್ ತಾರಿಖ್​ಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಅಶ್ವಿನ್ ಅವರ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Follow Us
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ಸಭೆಗೆ ಗೈರಾದ ಹೆಸ್ಕಾಂ ಅಧಿಕಾರಿ ವಿರುದ್ಧ ಎಂ.ಬಿ. ಪಾಟೀಲ್​​ ಗರಂ
ಸಭೆಗೆ ಗೈರಾದ ಹೆಸ್ಕಾಂ ಅಧಿಕಾರಿ ವಿರುದ್ಧ ಎಂ.ಬಿ. ಪಾಟೀಲ್​​ ಗರಂ
ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ
ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ