IPL 2022: ಈತ ಪ್ರತಿನಿಧಿಸಿದ ತಂಡ ಬರೋಬ್ಬರಿ 7 ಬಾರಿ ಫೈನಲ್​ಗೇರಿದೆ; ಆದರೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ!

IPL 2022: ಐಪಿಎಲ್ 2022 ರಲ್ಲಿ ಆರ್ ಅಶ್ವಿನ್ ಚೆಂಡಿನೊಂದಿಗೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅಶ್ವಿನ್ ತಮ್ಮ ಹೆಸರಿಗೆ 17 ಪಂದ್ಯಗಳಲ್ಲಿ ಕೇವಲ 12 ವಿಕೆಟ್ಗಳನ್ನು ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

IPL 2022: ಈತ ಪ್ರತಿನಿಧಿಸಿದ ತಂಡ ಬರೋಬ್ಬರಿ 7 ಬಾರಿ ಫೈನಲ್​ಗೇರಿದೆ; ಆದರೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ!
Rajasthan Royals IPL 2022
Follow us
| Updated By: ಪೃಥ್ವಿಶಂಕರ

Updated on: May 31, 2022 | 7:00 AM

ಐಪಿಎಲ್ 2022 (IPL 2022)ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿಜಯದ ನಂತರ ಬಿರುಸಿನ ಸಂಭ್ರಮಾಚರಣೆ ನಡೆಸಿದರೆ, ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ (Rajasthan Royals) ಪಾಳಯದಲ್ಲಿ ಮೌನ ಆವರಿಸಿತ್ತು. ಅಂತಹ ಅತ್ಯುತ್ತಮ ಮತ್ತು ಅನುಭವಿ ಆಟಗಾರರನ್ನು ಹೊಂದಿರುವ ಈ ತಂಡವು ಏಕಪಕ್ಷೀಯ ರೀತಿಯಲ್ಲಿ ಫೈನಲ್‌ನಲ್ಲಿ ಸೋಲುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಆರೆಂಜ್ ಕ್ಯಾಪ್ ಗೆದ್ದ ಬ್ಯಾಟ್ಸ್‌ಮನ್, ಪರ್ಪಲ್ ಕ್ಯಾಪ್ ಗೆದ್ದ ಬೌಲರ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ, ಈ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟ. ಜೋಸ್ ಬಟ್ಲರ್, ಯುಜುವೇಂದ್ರ ಚಾಹಲ್, ನಾಯಕ ಸಂಜು ಸ್ಯಾಮ್ಸನ್ (os Buttler, Yuzvendra Chahal, captain Sanju Samson) ಸೇರಿದಂತೆ ತಂಡದ ಪ್ರತಿಯೊಬ್ಬ ಸದಸ್ಯರೂ ಪ್ರಶಸ್ತಿ ಸುತ್ತಿನ ಸೋಲಿನಿಂದ ದುಃಖಿತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಈ ಎಲ್ಲರಿಗಿಂತ ಮತ್ತೊಬ್ಬ ಆಟಗಾರನಾಗಿಗಾಗಿರುವ ನೋವು ಅಷ್ಟಿಷ್ಟಲ್ಲ. ಬರೋಬ್ಬರಿ 7 ಬಾರಿ ಫೈನಲ್‌ನಲ್ಲಿ ಸೋಲು ಅನುಭವಿಸಿದ ಆಟಗಾರ ಈ ತಂಡದಲ್ಲಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ, ಐಪಿಎಲ್ 2022 ರ ಫೈನಲ್‌ನಲ್ಲಿ 7 ನೇ ಬಾರಿಗೆ ಸೋಲು ಕಂಡಿರುವ ಆಫ್ ಸ್ಪಿನ್ನರ್ ಆರ್ ಅಶ್ವಿನ್.

ಅಶ್ವಿನ್​ಗೆ 7ನೇ ಬಾರಿಗೆ ಐಪಿಎಲ್ ಫೈನಲ್ ಸೋಲು ಅಶ್ವಿನ್​ರಂತಹ ಚಾಂಪಿಯನ್ ಆಟಗಾರ ಐಪಿಎಲ್ ಫೈನಲ್​ನಲ್ಲಿ 7ನೇ ಬಾರಿ ಸೋಲನುಭವಿಸಬೇಕಾಗಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಅಶ್ವಿನ್ ನಾಲ್ಕು ತಂಡಗಳೊಂದಿಗೆ ಐಪಿಎಲ್ ಫೈನಲ್ ತಲುಪಿದ್ದು, 7 ಬಾರಿ ನಿರಾಸೆ ಎದುರಿಸಿದ್ದಾರೆ. ಧೋನಿ ಜತೆಗಿನ ಫೈನಲ್‌ನಲ್ಲಿ ಅಶ್ವಿನ್ 4 ಬಾರಿ ಸೋತಿದ್ದಾರೆ. ಅವರು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನೊಂದಿಗೆ ಫೈನಲ್‌ನಲ್ಲಿ ಸೋತಿದ್ದರು. ಇದು ಅವರಿಗೆ 2020 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ ಎದುರು ಸಂಭವಿಸಿತು. ಈಗ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿಯೂ ಅಂತಹ ದಿನವನ್ನು ನೋಡಬೇಕಾಗಿದೆ. ಅಶ್ವಿನ್ 2008, 2012, 2013 ಮತ್ತು 2015 ರಲ್ಲಿ ಚೆನ್ನೈನೊಂದಿಗೆ ಐಪಿಎಲ್ ಫೈನಲ್‌ನಲ್ಲಿ ಸೋಲನುಭವಿಸಿದ್ದರು. ನಂತರ 2017 ರಲ್ಲಿ, ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಅಶ್ವಿನ್ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನೊಂದಿಗೆ ಆಡಿದ್ದಾಗ ಸೋಲನುಭವಿಸಬೇಕಾಗಿತ್ತು.

ಇದನ್ನೂ ಓದಿ:IPL 2022: ಈ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಸಿಕ್ಕ ಐವರು ಪ್ರತಿಭಾವಂತ ಬೌಲರ್​ಗಳಿವರು

ಇದನ್ನೂ ಓದಿ
Image
IPL 2022: 74 ಪಂದ್ಯಗಳಿಗೆ ಪಿಚ್ ಸಿದ್ಧಪಡಿಸಿದ ಕ್ಯುರೇಟರ್‌ಗಳಿಗೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ!
Image
IPL 2022: ಈ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಸಿಕ್ಕ ಐವರು ಪ್ರತಿಭಾವಂತ ಬೌಲರ್​ಗಳಿವರು
Image
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಅಶ್ವಿನ್ ತಂತ್ರದ ಮೇಲೆ ಎಲ್ಲರ ಪ್ರಶ್ನೆಗಳು

ಐಪಿಎಲ್ 2022 ರಲ್ಲಿ ಆರ್ ಅಶ್ವಿನ್ ಚೆಂಡಿನೊಂದಿಗೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅಶ್ವಿನ್ ತಮ್ಮ ಹೆಸರಿಗೆ 17 ಪಂದ್ಯಗಳಲ್ಲಿ ಕೇವಲ 12 ವಿಕೆಟ್ಗಳನ್ನು ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಫೈನಲ್‌ನಲ್ಲೂ ಅವರು ಅತ್ಯಂತ ದುಬಾರಿ ಎಂಬುದನ್ನು ಸಾಬೀತುಪಡಿಸಿದರು. ಇದಾದ ಬಳಿಕ ರಾಜಸ್ಥಾನ ತಂಡದ ನಿರ್ದೇಶಕ ಕುಮಾರ ಸಂಗಕ್ಕಾರ ಅವರು ಅಶ್ವಿನ್‌ಗೆ ಕೇರಂ ಬಾಲ್‌ಗಿಂತ ಆಫ್‌ ಸ್ಪಿನ್‌ ಹೆಚ್ಚು ಬಳಸುವಂತೆ ಸಲಹೆ ನೀಡಿದರು. ಋತುವಿನ ಉದ್ದಕ್ಕೂ ಅಶ್ವಿನ್ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಕೇರಂ ಬೌಲಿಂಗ್ ಮಾಡುವುದನ್ನು ನೋಡಿದ್ದೇವೆ. ಆದರೆ ಅದು ತಂಡಕ್ಕೆ ಹೆಚ್ಚು ಪ್ರಯೋಜನವನ್ನು ನೀಡಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು