Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮೂರ್ಖ ಎಂದು ಹೇಳಿ ಗವಾಸ್ಕರ್​ರನ್ನು ಗೇಲಿ ಮಾಡಿದ್ರಾ ರಿಷಬ್ ಪಂತ್? ವಿಡಿಯೋ ವೈರಲ್

Rishabh Pant's "Fool" Video Goes Viral: ಐಪಿಎಲ್ 2025ರ ಹೊಸ ಸೀಸನ್ ಆರಂಭಕ್ಕೂ ಮೊದಲು ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಪಂತ್ ಯಾರನ್ನೋ "ಮೂರ್ಖ" ಎಂದು ಕರೆಯುತ್ತಿದ್ದಾರೆ. ಕೆಲವರು ಇದನ್ನು ಸುನಿಲ್ ಗವಾಸ್ಕರ್ ಅವರನ್ನು ಗೇಲಿ ಮಾಡುವುದೆಂದು ಅರ್ಥೈಸಿಕೊಂಡಿದ್ದಾರೆ, ಏಕೆಂದರೆ ಗವಾಸ್ಕರ್ ಮೊದಲು ಪಂತ್ ಅವರನ್ನು ಹೀಗೆ ಕರೆದಿದ್ದರು. ಆದರೆ ಪಂತ್ ಯಾರನ್ನು ಉದ್ದೇಶಿಸಿ ಹೇಳಿದ್ದಾರೆಂಬುದು ಸ್ಪಷ್ಟವಾಗಿಲ್ಲ.

IPL 2025: ಮೂರ್ಖ ಎಂದು ಹೇಳಿ ಗವಾಸ್ಕರ್​ರನ್ನು ಗೇಲಿ ಮಾಡಿದ್ರಾ ರಿಷಬ್ ಪಂತ್? ವಿಡಿಯೋ ವೈರಲ್
Rishab Pant
Follow us
ಪೃಥ್ವಿಶಂಕರ
|

Updated on: Mar 17, 2025 | 7:05 PM

ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ನಂತರ ನಡೆಯುತ್ತಿರುವ ಕಾರಣ ಎಲ್ಲಾ ತಂಡಗಳಲ್ಲೂ ಹೊಸ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿವೆ. ಅದರಂತೆ ಹೊಸ ತಂಡದೊಂದಿಗೆ ಐಪಿಎಲ್‌ನ ಹೊಸ ಸೀಸನ್​ ಆರಂಭಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸಿದ್ಧರಾಗಿದ್ದಾರೆ. ಕಳೆದ ಆವೃತ್ತಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಪಂತ್, ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದರೆ ಈ ಸೀಸನ್​ ಆರಂಭಕ್ಕೂ ಮುನ್ನ, ಪಂತ್ ಯಾರನ್ನೋ ಮೂರ್ಖ ಎಂದು ಕರೆಯುತ್ತಿರುವ ವೀಡಿಯೊ ಸೊಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗಿದ್ರೆ ಪಂತ್ ಯಾರನ್ನು ಮೂರ್ಖ ಎಂದು ಕರೆದರು ಎಂಬುದನ್ನು ನೋಡುವುದಾದರೆ..

ಮೂರ್ಖ ಎಂದ ರಿಷಬ್ ಪಂತ್

ಐಪಿಎಲ್ ಹೊಸ ಸೀಸನ್ ಆರಂಭವಾಗುವ ಮುನ್ನ ಪಂತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಪಂತ್ ಜೊತೆಗೆ ಇನ್ನಿಬ್ಬರು ವೀಕ್ಷಕ ವಿವರಣೆಗಾರರು ಕುಳಿತಿರುವುದನ್ನು ನಾವು ಕಾಣಬಹುದಾಗಿದೆ. ವಿಡಿಯೋ ಮುಂದುವರೆದಂತೆ ಪಂತ್, ಯಾರನ್ನೋ ಪದೇ ಪದೇ ಮೂರ್ಖ ಎಂದು ಕರೆಯುತ್ತಿರುವುದನ್ನು ಕಾಣಬಹುದು. ಒಂದೆರಡು ಬಾರಿಯಲ್ಲ, ಬದಲಿಗೆ ಹಲವು ಬಾರಿ ಮೂರ್ಖ, ಮೂರ್ಖ, ಮೂರ್ಖ ಎಂದು ಹೇಳುವ ಪಂತ್, ಮೂರ್ಖ ಎಂದು ಹೇಳುವುದಕ್ಕೆ ಕೆಲವು ಬಾರಿ ಕಷ್ಟ ಪಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದಾಗ್ಯೂ ಪಂತ್, ಮತ್ತೆ ಮತ್ತೆ ಮೂರ್ಖ ಎಂದು ಹೇಳುವುದನ್ನು ಮುಂದುವರೆಸಿದ್ದಾರೆ. ಅಷ್ಟಕ್ಕೂ ಪಂತ್ ತನ್ನನ್ನು ತಾನು ಮೂರ್ಖ ಎಂದು ಕರೆದುಕೊಂಡರಾ ಅಥವಾ ಬೇರೆ ಇನ್ನ್ಯಾರಿಗಾದರೂ ಈ ರೀತಿ ಹೇಳಿದರಾ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದಾಗ್ಯೂ ಪಂತ್ ಈ ರೀತಿ ಹೇಳಿರುವುದನ್ನು ಕೆಲವು ದಿನಗಳ ಹಿಂದೆ ನಡೆದಿದ್ದ ಅದೊಂದು ಘಟನೆಗೆ ತಾಳೆ ಹಾಕಲಾಗುತ್ತಿದೆ.

ಗವಾಸ್ಕರ್​ರನ್ನು ಗೇಲಿ ಮಾಡಿದ್ರಾ ಪಂತ್?

ವಿಷಯವೇನೆಂದರೆ, ಕಳೆದ ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಿದ್ದ ಟೀಂ ಇಂಡಿಯಾ, ಒಂದು ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು. ಅಂತಹ ಸಮಯದಲ್ಲಿ, ರಿಷಬ್ ಪಂತ್ ಕ್ರೀಸ್‌ನಲ್ಲಿದ್ದರು. ಆದರೆ ತಂಡದ ಪರಿಸ್ಥಿತಿಯನ್ನು ಅರಿತು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದ್ದ ಪಂತ್, ಬೇಡದ ಶಾಟ್ ಆಡಿ ವಿಕೆಟ್ ಒಪ್ಪಿಸಿದರು. ಪಂತ್ ಈ ರೀತಿ ಬೇಡದ ಶಾಟ್ ಆಡಿ ಔಟಾಗಿದ್ದು, ವೀಕ್ಷಕ ವಿವರಣೆಗಾರರಾಗಿದ್ದ ಗವಾಸ್ಕರ್ ಅವರನ್ನು ಕೆರಳಿಸಿತು. ಹೀಗಾಗಿ ಗವಾಸ್ಕರ್, ಪಂತ್​​ಗೆ ಮೂರ್ಖ ಎಂದು ಬೈದಿದ್ದರು.

ಇದನ್ನೂ ಓದಿ: IPL 2025: ಐಪಿಎಲ್ ಆರಂಭಕ್ಕೂ ಮುನ್ನ ತಂಡದ ಶಕ್ತಿ ಏನೆಂಬುದನ್ನು ವಿವರಿಸಿದ ಹಾರ್ದಿಕ್ ಪಾಂಡ್ಯ

ಗವಾಸ್ಕರ್, ತಮ್ಮದೇ ಆದ ಶೈಲಿಯಲ್ಲಿ, ಪಂತ್​ಗೆ ಮೂರು ಬಾರಿ ಮೂರ್ಖ ಎಂದು ಬೈದಿದ್ದರು. ಅದರ ವಿಡಿಯೋ ಆಗ ಸಾಕಷ್ಟು ವೈರಲ್ ಆಗಿತ್ತು. ಪಂದ್ಯದ ಬಳಿಕ ಪಂತ್ ಕೂಡ ಈ ವಿಡಿಯೋ ನೋಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಐಪಿಎಲ್ ಸೀಸನ್ ಪ್ರಾರಂಭವಾಗುವ ಮೊದಲು ಪಂತ್, ತನಗೆ ಬೈದಿದ್ದ ಬೈಗುಳವನ್ನು ಪುನರುಚ್ಚಿಸಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು