Rohit Sharma: ಆಟಗಾರರನ್ನು ಗೌರವಿಸಿ; ಟೀಕಿಸುವವರಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
Rohit Sharma's Strong Response to Critics: ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ರೋಹಿತ್ ಶರ್ಮಾ ಅವರು ತಮ್ಮ ವಿರುದ್ಧದ ಅಸಮಂಜಸ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅತಿರೇಕದ ವಿವರಣೆ ಮತ್ತು ಆಟಗಾರರ ವೈಯಕ್ತಿಕ ಜೀವನದ ಮೇಲಿನ ಒತ್ತಡವನ್ನು ಖಂಡಿಸಿ, ಆಟಗಾರರನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಟೀಕೆ ಅಗತ್ಯವೆಂದಾದರೂ, ಅದಕ್ಕೂ ಒಂದು ಸರಿಯಾದ ಮಾರ್ಗವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಷ್ಟೇ ಅಂದರೆ ಮೇ 7 ರಂದು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma), ನಿವೃತ್ತರಾದ ಕೂಡಲೇ ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ವೀಕ್ಷಕ ವಿವರಣೆ ನೀಡುವ ಸಮಯದಲ್ಲಿ ಅಸಂಬದ್ಧ ಮಾತುಗಳನ್ನು ಆಡಿದ್ದಾರೆ. ಇದು ಅವರ ಇಮೇಜ್ಗೆ ಹಾನಿ ಮಾಡುತ್ತದೆ. ಕೆಲವರು ಆಟಕ್ಕೆ ಮಸಾಲೆ ಸೇರಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಮಾತನಾಡುವ ಹಕ್ಕಿದೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಹೇಳಬಹುದು ಎಂದರ್ಥವಲ್ಲ ಎಂದಿರುವ ರೋಹಿತ್ ಆಟಗಾರರನ್ನು ಗೌರವಿಸುವಂತೆ ಸಲಹೆ ನೀಡಿದ್ದಾರೆ.
ನಿವೃತ್ತಿ ನಂತರ ರೋಹಿತ್ ಹೇಳಿದ್ದೇನು?
ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗಿನ ಸಂಭಾಷಣೆಯಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ‘ಜನರು ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ, ಅವರಿಗೆ ಮಸಾಲ ಬೇಕಾಗಿಲ್ಲ. ಅವರಿಗೆ ಕ್ರಿಕೆಟ್ ನೋಡುವ ಆಸೆ ಅಷ್ಟೇ. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಮಸಾಲೆಗಳನ್ನು ಸೇರಿಸುತ್ತೇವೆ. ಕ್ರಿಕೆಟ್ ಅಭಿಮಾನಿಗಳು ಆಟಗಾರರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುವುದಿಲ್ಲ, ಆದರೆ ಆಟಗಾರರ ಫಾರ್ಮ್ ಏಕೆ ಕೆಟ್ಟದಾಗಿದೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ ಎಂದ ಮಾತ್ರಕ್ಕೆ ಅವರು ಏನು ಬೇಕಾದರೂ ಹೇಳಬಹುದು ಎಂದರ್ಥವಲ್ಲ. ಆಟಗಾರರನ್ನು ಗೌರವಿಸುವುದು ಮುಖ್ಯ. ವಿಶ್ವಕಪ್ನಲ್ಲಿ ಆಡುವ ಆಟಗಾರರು ಗೌರವಕ್ಕೆ ಅರ್ಹರು. 24 ಪಂದ್ಯಗಳಲ್ಲಿ 23 ಗೆಲುವು ಸಾಧಿಸುವುದು ತಮಾಷೆಯಲ್ಲ’.
ಟೀಕಿಸುವುದಕ್ಕೂ ಒಂದು ದಾರಿ ಇದೆ
ಮುಂದುವರೆದು ಮಾತನಾಡಿರುವ ರೋಹಿತ್, ‘ಟೀಕೆ ಅಗತ್ಯ ಆದರೆ ಅದಕ್ಕೂ ಒಂದು ವಿಧಾನವಿದೆ. ಟೀಕೆ ಇರಬೇಕು, ಯಾವುದೇ ಸಮಸ್ಯೆ ಇಲ್ಲ. ನಾವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸೋತಿದ್ದೇವೆ, ಟೀಕೆ ಸಮರ್ಥನೀಯ ಆದರೆ ಟೀಕಿಸಲು ಒಂದು ಮಾರ್ಗವಿದೆ. ಇತ್ತೀಚಿನ ದಿನಗಳಲ್ಲಿ, ಅಸಂಬದ್ಧವಾಗಿ ಟೀಕೆಗಳನ್ನು ಮಾಡಲಾಗುತ್ತಿದೆ, ಅದು ಸರಿಯಿಲ್ಲ ಎಂದು ತೋರುತ್ತದೆ ಎಂದು ರೋಹಿತ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
IND vs ENG: ಟೆಸ್ಟ್ ನಾಯಕತ್ವದಿಂದ ರೋಹಿತ್ ಶರ್ಮಾಗೆ ಗೇಟ್ಪಾಸ್; ಇಂಗ್ಲೆಂಡ್ ಪ್ರವಾಸಕ್ಕೆ ನೂತನ ನಾಯಕ
ರೋಹಿತ್ಗೆ ಇಷ್ಟವಿರಲಿಲ್ಲ
ವಾಸ್ತವವಾಗಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ಬಯಸಿರಲಿಲ್ಲ. ಇಂಗ್ಲೆಂಡ್ನಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕೆಂದು ಬಯಸಿದ್ದರು. ಈ ವಿಚಾರವನ್ನು ಆಯ್ಕೆ ಮಂಡಳಿಗೆ ತಿಳಿಸಿದ್ದ ರೋಹಿತ್, ತಾನು ನಾಯಕತ್ವವನ್ನು ತೊರೆಯುವುದಾಗಿಯೂ, ಇಂಗ್ಲೆಂಡ್ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡುವುದಾಗಿಯೂ ತಿಳಿಸಿದ್ದರು. ಆದರೆ ಆಯ್ಕೆದಾರರು ಮತ್ತು ಬಿಸಿಸಿಐ ರೋಹಿತ್ ಮಾತನ್ನು ಕೇಳಿಲ್ಲ. ಇದರ ಪರಿಣಾಮವಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತಂಡದ ಆಯ್ಕೆಗೂ ಮೊದಲೇ ರೋಹಿತ್ ನಿವೃತ್ತ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ