AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಯಕತ್ವ ನೀಡುವುದಾಗಿ ನಂಬಿಸಿ ತಂಡದಿಂದ ಹೊರಹಾಕಿದ್ರು’; ಶಾಕಿಂಗ್ ಹೇಳಿಕೆ ನೀಡಿದ ವೀರೇಂದ್ರ ಸೆಹ್ವಾಗ್

Virender Sehwag: ನನಗೆ ನಾಯಕತ್ವ ನೀಡುವುದಾಗಿ ಹೇಳಿ, ಆ ಬಳಿಕ ಕೇವಲ ಎರಡೇ ಎರಡು ತಿಂಗಳೊಳಗೆ ನನ್ನನ್ನು ತಂಡದಿಂದ ಹೊರಗಟ್ಟಿದ್ರು ಎಂಬ ಸ್ಫೋಟಕ ಮಾಹಿತಿಯನ್ನು ಸೆಹ್ವಾಗ್ ಹೊರಹಾಕಿದ್ದಾರೆ.

‘ನಾಯಕತ್ವ ನೀಡುವುದಾಗಿ ನಂಬಿಸಿ ತಂಡದಿಂದ ಹೊರಹಾಕಿದ್ರು’; ಶಾಕಿಂಗ್ ಹೇಳಿಕೆ ನೀಡಿದ ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್, ಗ್ರೆಗ್ ಚಾಪೆಲ್
Follow us
ಪೃಥ್ವಿಶಂಕರ
|

Updated on:Mar 23, 2023 | 4:28 PM

ಟೀಂ ಇಂಡಿಯಾದ (Team India) ಮಾಜಿ ಓಪನರ್ ಸಿಡಲಮರಿ ಸೆಹ್ವಾಗ್ (Virender Sehwag) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಾನು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಖಾತೆ ತೆರೆಯುತ್ತಿದ್ದ ಏಕೈಕ ಕ್ರಿಕೆಟಿಗನೆಂದರೆ ಅದು ವೀರೇಂದ್ರ ಸೆಹ್ವಾಗ್. ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದ ಸೆಹ್ವಾಗ್ ಟೀಂ ಇಂಡಿಯಾ ಗೆದ್ದಿರುವ ಎರಡು ವಿಶ್ವಕಪ್​ಗಳಲ್ಲಿ (World Cup) ತಂಡವನ್ನು ಪ್ರತಿನಿಧಿಸಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2007ರಲ್ಲಿ ಟೀಂ ಇಂಡಿಯಾ ಗೆದ್ದ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ (T20 World Cup) ತಂಡದಲ್ಲಿದ್ದ ಸೆಹ್ವಾಗ್, 2011 ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಆರಂಭಿಕ ಜವಬ್ದಾರಿಯನ್ನು ವಹಿಸಿಕೊಂಡಿದ್ದರು. ತಂಡದಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗನೆನಿಸಿಕೊಂಡಿದ್ದ ಸೆಹ್ವಾಗ್​ಗೆ ಅದ್ಯಾಕೋ ಟೀಂ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುವ ಅವಕಾಶ ಹೆಚ್ಚಾಗಿ ಸಿಗಲೇ ಇಲ್ಲ. ಈ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿವೆ. ಆದರೆ ಈ ಬಗ್ಗೆ ಇದೀಗ ಮೌನ ಮುರಿದಿರುವ ಸೆಹ್ವಾಗ್, ನನಗೆ ನಾಯಕತ್ವ ನೀಡುವುದಾಗಿ ಹೇಳಿ, ಆ ಬಳಿಕ ಕೇವಲ ಎರಡೇ ಎರಡು ತಿಂಗಳೊಳಗೆ ನನ್ನನ್ನು ತಂಡದಿಂದ ಹೊರಗಟ್ಟಿದ್ರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ಗಂಗೂಲಿ ಬಳಿಕ ನೀನೇ ನಾಯಕ

ತನಗೆ ನಾಯಕತ್ವ ಹೆಚ್ಚಾಗಿ ಸಿಗದ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಸೆಹ್ವಾಗ್, ‘ಗ್ರೆಗ್ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿದ್ದಾಗ, ಸೌರವ್ ಗಂಗೂಲಿ ಬಳಿಕ ನೀನೇ ತಂಡದ ಮುಂದಿನ ನಾಯಕ ಎಂದು ​ ನನಗೆ ಭರವಸೆ ನೀಡಿದ್ದರು. ಆದರೆ ನನಗೆ ಹಾಗೆ ಹೇಳಿದ ಎರಡೇ ಎರಡು ತಿಂಗಳೊಳಗೆ ನನ್ನನ್ನು ತಂಡದಿಂದ ಹೊರಗಿಟ್ಟರು ಎಂಬ ಸ್ಫೋಟಕ ಮಾಹಿತಿಯನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಸೌರವ್ ಗಂಗೂಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಸೆಹ್ವಾಗ್​ಗೆ ನಾಯಕತ್ವ ನೀಡಬೇಕೆಂಬ ಕೂಗು ಹೆಚ್ಚಾಗಿತ್ತು. ಆದರೆ ಸೆಹ್ವಾಗ್ ಬದಲು ರಾಹುಲ್ ದ್ರಾವಿಡ್​ಗೆ ನಾಯಕತ್ವ ನೀಡಲಾಯಿತು. ದ್ರಾವಿಡ್​ ಬಳಿಕ ತಂಡದ ನಾಯಕತ್ವವನ್ನು ಧೋನಿಗೆ ವಹಿಸಲಾಯಿತು. ಆಗ ಸೆಹ್ವಾಗ್​ಗೆ ಉಪನಾಯಕತ್ವ ನೀಡಲಾಯಿತ್ತಾದರೂ, ಇಲ್ಲಿಂದ ಸೆಹ್ವಾಗ್​ಗೆ ನಾಯಕನಾಗುವ ಅವಕಾಶ ಮತ್ತೆ ಬರಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ತಂಡದ ನಾಯಕತ್ವವಹಿಸಿಕೊಂಡರಾದರೂ, ಸೆಹ್ವಾಗ್​ಗೆ ಖಾಯಂ ನಾಯಕತ್ವ ಸಿಗಲೇ ಇಲ್ಲ.

IPL 2023: ಪಂಜಾಬ್​ ಕಿಂಗ್ಸ್​ಗೆ ಬಿಗ್ ಶಾಕ್; ಸ್ಟಾರ್ ಓಪನರ್​ ಔಟ್! ಮತ್ತಿಬ್ಬರಿಗೆ ಗ್ರೀನ್ ಸಿಗ್ನಲ್

ವಿದೇಶಿ ಕೋಚ್​ಗಳ ಅವಶ್ಯಕತೆ ಇಲ್ಲ

ಇನ್ನು ವಿದೇಶಿ ಕೋಚ್​ಗಳ ಬಗ್ಗೆ ಮಾತನಾಡಿರುವ ಸೆಹ್ವಾಗ್, “ನಮ್ಮ ದೇಶದಲ್ಲಿ ಭಾರತ ತಂಡವನ್ನು ನಿರ್ವಹಿಸುವ ಉತ್ತಮ ತರಬೇತುದಾರರಿದ್ದಾರೆ ಎಂದು ನಾನು ಯಾವಾಗಲೂ ನಂಬುತ್ತೇನೆ. ಆದ್ದರಿಂದ ನಮಗೆ ವಿದೇಶಿ ಕೋಚ್‌ಗಳು ಅಗತ್ಯವಿಲ್ಲ. ಆದರೆ ನಾನು ಆಡುವಾಗ, ನಮಗೆ ಇನ್ನೊಬ್ಬ ವಿದೇಶಿ ಕೋಚ್ ಬೇಕ ಎಂದು ನಾನು ನನ್ನ ಹಿರಿಯರಿಗೆ ಈ ಪ್ರಶ್ನೆಯನ್ನು ಕೇಳಿದ್ದೆ. ಇದಕ್ಕೆ ಅವರು, ಭಾರತೀಯ ತರಬೇತುದಾರರು ಕೆಲವೊಮ್ಮೆ ಆಟಗಾರರ ಕಡೆಗೆ ಪಕ್ಷಪಾತ ಮಾಡುತ್ತಾರೆ. ಅವರಿಗೆ ಇಷ್ಟವಾಗುವ ಆಟಗಾರರು ತಂಡದಲ್ಲಿ ಅವಕಾಶ ಪಡೆಯುತ್ತಾರೆ. ಇಷ್ಟವಾಗದವರು ಬೆಂಚ್ ಕಾಯಬೇಕಾಗುತ್ತದೆ. ಹಾಗಾಗಿ ನಾವು ವಿದೇಶಿ ಕೋಚ್ ಮೊರೆ ಹೋಗವುದು ಎಂದು ಉತ್ತರಿಸಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ವಿದೇಶಿ ಕೋಚ್​ ಕೂಡ ಇದರಿಂದ ಹೊರತಾಗಿಲ್ಲ. ವಿದೇಶಿ ಕೋಚ್ ಕೂಡ ತೆಂಡೂಲ್ಕರ್, ದ್ರಾವಿಡ್, ಗಂಗೂಲಿ ಅಥವಾ ಲಕ್ಷ್ಮಣ್ ಅವರಂತಹ ಆಟಗಾರರನ್ನು ಎದುರಿಸುವ ಒತ್ತಡವನ್ನು ಅನುಭವಿಸಬೇಕಾಗಿತ್ತು ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Thu, 23 March 23

ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್