T20 World Cup: ‘ಟಿ20 ವಿಶ್ವಕಪ್ ಹತ್ತಿರವಾದಂತೆ ತಂಡದಲ್ಲಿ ಆತಂಕ ಮನೆಮಾಡಿದೆ’; ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್

| Updated By: ಪೃಥ್ವಿಶಂಕರ

Updated on: Aug 18, 2022 | 5:36 PM

Rishabh Pant: ಮುಂಬರುವ ವಿಶ್ವಕಪ್ ಬಗ್ಗೆ ಇಡೀ ತಂಡ ಸ್ವಲ್ಪ ಆತಂಕದಲ್ಲಿದೆ. ಆದರೆ ತಂಡವಾಗಿ ನಾವು 100 ಪ್ರತಿಶತ ನೀಡಲು ಇಷ್ಟಪಡುತ್ತೇವೆ. ವೈಯಕ್ತಿಕವಾಗಿ ಮತ್ತು ತಂಡವಾಗಿ ನೂರು ಪ್ರತಿಶತವನ್ನು ನೀಡುವುದು ನಮ್ಮ ಗುರಿಯಾಗಿದೆ.

T20 World Cup: ‘ಟಿ20 ವಿಶ್ವಕಪ್ ಹತ್ತಿರವಾದಂತೆ ತಂಡದಲ್ಲಿ ಆತಂಕ ಮನೆಮಾಡಿದೆ’; ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್
Follow us on

ಇನ್ನು ಕೆಲವೇ ದಿನಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಏಷ್ಯಾಕಪ್ (Asia Cup) ಟಿ20 ಟೂರ್ನಿಗೆ ಟೀಂ ಇಂಡಿಯಾ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ . ಹಾಲಿ ಚಾಂಪಿಯನ್‌ಗಳು ಪ್ರಶಸ್ತಿ ಉಳಿಸಿಕೊಳ್ಳುವ ಸಲುವಾಗಿ ಅಖಾಡಕ್ಕಿಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧ ಪಂದ್ಯವಿದ್ದು, ತಿಂಗಳಾಂತ್ಯದಲ್ಲಿ ಅಭಿಮಾನಿಗಳಿಗೆ ರಸದೌತಣವೇ ಸಿಗಲಿದೆ. ನಂತರ T20 ವಿಶ್ವಕಪ್ (T20 World Cup) ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದ್ದು, ದೊಡ್ಡ ಟೂರ್ನಿಯ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಉತ್ಸಾಹ ಈಗಿನಿಂದಲೇ ಏರತೊಡಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಭಾರತ, 2021 ರ ವೈಫಲ್ಯವನ್ನು ಮರೆತು ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಜೊತೆಗೆ ತಂಡದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹಲವು ಬದಲಾವಣೆಗಳಿದ್ದು, ನಾಯಕತ್ವದ ಬದಲಾವಣೆ ಜೊತೆಗೆ ತಂಡದಲ್ಲಿ ಹೆಚ್ಚು ಯುವ ಮುಖಗಳು ಸೇರಿಕೊಂಡಿವೆ.

ಟಿ20 ವಿಶ್ವಕಪ್​ಗೆ ಇನ್ನೂ ಎರಡು ತಿಂಗಳು ಉಳಿದಿಲ್ಲ.ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ತಂಡದ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ಆತಂಕ ಸ್ವಲ್ಪ ಹೆಚ್ಚಾಗಿದೆ ಎಂದು ಪಂತ್ ಹೇಳಿದ್ದಾರೆ. ನಾನು ಮಾತ್ರವಲ್ಲ, ತಂಡದ ಎಲ್ಲರ ಸ್ಥಿತಿಯೂ ಇದೇ ಆಗಿದೆ. ಮುಂಬರುವ ವಿಶ್ವಕಪ್ ಬಗ್ಗೆ ಇಡೀ ತಂಡ ಸ್ವಲ್ಪ ಆತಂಕದಲ್ಲಿದೆ. ಆದರೆ ತಂಡವಾಗಿ ನಾವು 100 ಪ್ರತಿಶತ ನೀಡಲು ಇಷ್ಟಪಡುತ್ತೇವೆ. ವೈಯಕ್ತಿಕವಾಗಿ ಮತ್ತು ತಂಡವಾಗಿ ನೂರು ಪ್ರತಿಶತವನ್ನು ನೀಡುವುದು ನಮ್ಮ ಗುರಿಯಾಗಿದೆ. ಜೊತೆಗೆ ನಾನು ಫೈನಲ್ ತಲುಪಲಿದ್ದು, ತಂಡಕ್ಕಾಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಪಂತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್​ ಆಡಿಲ್ಲ..!
ಟಿ20 ವಿಶ್ವಕಪ್​ಗೆ ಜಡೇಜಾರನ್ನು ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದ ಲೆಜೆಂಡರಿ ಕ್ರಿಕೆಟರ್..!
‘ಇಂಡಿಯನ್ಸ್ ಹೆದರಿಕೊಳ್ತಾರೆ’! ಪಾಕ್ ನಾಯಕನನ್ನು ಹೊಗಳುವ ಭರದಲ್ಲಿ ಭಾರತೀಯರನ್ನು ಕೆಣಕಿದ ಪಾಕ್ ಕ್ರಿಕೆಟ್ ಫ್ಯಾನ್ಸ್

ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ T20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯದಲ್ಲಿ ಟೂರ್ನಿ ಇದ್ದರೂ ಅರ್ಧಕ್ಕಿಂತ ಹೆಚ್ಚು ಅಭಿಮಾನಿಗಳು ರೋಹಿತ್‌ಗೆ ಹುರಿದುಂಬಿಸಲು ಇರುತ್ತಾರೆ ಎಂದು ಹೇಳಬೇಕಾಗಿಲ್ಲ. ಐಕಾನಿಕ್ ಎಂಸಿಜಿಯಲ್ಲಿ ಅಭಿಮಾನಿಗಳ ಮುಂದೆ ಬ್ಯಾಟ್ ಬೀಸಲು ರಿಷಭ್ ತಯಾರಿ ಆರಂಭಿಸಿದ್ದಾರೆ. ಜೊತೆಗೆ ಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿನ ನೆನಪುಗಳು ಜೀವಂತವಾಗಿವೆ. ಆಸ್ಟ್ರೇಲಿಯಾ ನೆಲದಲ್ಲಿ ತಂಡದ ಗೆಲುವಿಗೆ ಬ್ಯಾಟ್ ಮೂಲಕ ಮತ್ತೊಮ್ಮೆ ಕೊಡುಗೆ ನೀಡಲು ರಿಷಭ್ ಬಯಸಿದ್ದಾರೆ.

Published On - 5:35 pm, Thu, 18 August 22