AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ವಿವಾದ.. ಚೆನ್ನೈ ತಂಡ ನಿಷೇಧಿಸಿ: ಏನಿದು ಅಭಿಮಾನಿಗಳ ಆಕ್ರೋಶ?

ಹೈದರಾಬಾದ್ ವಿರುದ್ಧ ಗೆದ್ದು ಬೀಗಿರೋ ಚೆನ್ನೈ ಸೂಪರ್ ಕಿಂಗ್ಸ್, ಕಡೆಗೂ ಗೆಲುವಿನ ಟ್ರ್ಯಾಕ್​ಗೆ ವಾಪಸ್ ಆಗಿದ್ದಾರೆ. ಆದ್ರೆ ಈ ಗೆಲುವು ಧೋನಿಗೆ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕಿಂತ, ಧೋನಿಯನ್ನ ವಿಲನ್ ಆಗುವಂತೆ ಮಾಡಿದೆ. ನಿಜ.. ಚೆನ್ನೈ ವಿರುದ್ಧದ ಗೆಲುವಿನ ಬಳಿಕ ನಾಯಕ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೈಡ್ ವಿಚಾರವಾಗಿ ಮಹೇಂದ್ರ ಸಿಂಗ್ ಧೋನಿ ತೋರಿಸಿದ ನಡತೆಯನ್ನ ಬಲವಾಗಿ ಖಂಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಫ್ರಾಂಚೈಸಿಯನ್ನ ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಏನಿದು ಧೋನಿ, ಅಂಪೈರ್ ವಿವಾದ.. […]

ಧೋನಿ ವಿವಾದ.. ಚೆನ್ನೈ ತಂಡ ನಿಷೇಧಿಸಿ: ಏನಿದು ಅಭಿಮಾನಿಗಳ ಆಕ್ರೋಶ?
ಆಯೇಷಾ ಬಾನು
|

Updated on: Oct 15, 2020 | 12:49 PM

Share

ಹೈದರಾಬಾದ್ ವಿರುದ್ಧ ಗೆದ್ದು ಬೀಗಿರೋ ಚೆನ್ನೈ ಸೂಪರ್ ಕಿಂಗ್ಸ್, ಕಡೆಗೂ ಗೆಲುವಿನ ಟ್ರ್ಯಾಕ್​ಗೆ ವಾಪಸ್ ಆಗಿದ್ದಾರೆ. ಆದ್ರೆ ಈ ಗೆಲುವು ಧೋನಿಗೆ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕಿಂತ, ಧೋನಿಯನ್ನ ವಿಲನ್ ಆಗುವಂತೆ ಮಾಡಿದೆ.

ನಿಜ.. ಚೆನ್ನೈ ವಿರುದ್ಧದ ಗೆಲುವಿನ ಬಳಿಕ ನಾಯಕ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೈಡ್ ವಿಚಾರವಾಗಿ ಮಹೇಂದ್ರ ಸಿಂಗ್ ಧೋನಿ ತೋರಿಸಿದ ನಡತೆಯನ್ನ ಬಲವಾಗಿ ಖಂಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಫ್ರಾಂಚೈಸಿಯನ್ನ ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಏನಿದು ಧೋನಿ, ಅಂಪೈರ್ ವಿವಾದ.. ಅಭಿಮಾನಿಗಳ ಆಕ್ರೋಶ? 19ನೇ ಓವರ್ ಮಾಡುತ್ತಿದ್ದ ಶಾರ್ದೂಲ್ ಠಾಕೂರ್ 2ನೇ ಎಸೆತ ವೈಡ್ ಎಸೆದಿದ್ರು. ಹೀಗಾಗಿ ಅಂಪೈರ್ ರೀಫೆಲ್ ವೈಡ್ ಸಿಗ್ನಲ್ ನೀಡೋದಕ್ಕೆ ಕೈ ಎತ್ತುತ್ತಿದ್ರು. ಆದ್ರೆ ಧೋನಿ ಕೋಪದ ಮುಖವನ್ನ ನೋಡಿದ ಬಳಿಕ, ರೀಫೆಲ್ ತಮ್ಮ ನಿರ್ಧಾರವನ್ನ ಬದಲಿಸ್ತಾರೆ.

ಅಂದ್ರೆ ಇದೇನು ವೈಡಾ ಅನ್ನೋ ಧೋನಿ ಬೆದರಿಕೆಯ ನೋಟ, ಅಂಪೈರ್ ರೀಫೆಲ್​ಗೆ ಭಯ ಬೀಳೋ ಹಾಗೇ ಮಾಡಿತ್ತು. ಹೀಗಾಗಿ ರೀಫೆಲ್ ಅರ್ಧಕ್ಕೆ ಎತ್ತಿದ ಕೈಯನ್ನ, ಧೋನಿ ಕೋಪ ನೋಡಿ ಕೆಳಗಿಳಿಸಿಬಿಡ್ತಾರೆ.

ಒಂದಡೆ ಅಂಪೈರ್ ರೀಫೆಲ್ ಧೋನಿ ಬೆದರಿಕೆಗೆ ಹೆದರಿ ಸುಮ್ಮನಾದ್ರೆ, ಮತ್ತೊಂದೆಡೆ ಗ್ಯಾಲರಿಯಲ್ಲಿದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅಂಪೈರ್ ನಿರ್ಧಾರ ನೋಡಿ ಗಲಿಬಿಲಿಗೊಂಡ್ರು. ಕಡೆಗೆ ಚೆನ್ನೈ 20 ರನ್​ಗಳ ಅಂತರದಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಿತು.

ಎಂಎಸ್‌ ಧೋನಿ ಈ ಗೆಲುವಿನೊಂದಿಗೆ ಖುಷಿಯಾಗಿರಬಹುದು. ಆದ್ರೆ ಅಭಿಮಾನಿಗಳು ಧೋನಿ ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಅಭಿಮಾನಿಗಳು ಎಂಎಸ್‌ ಧೋನಿ, ಅಂಪೈರ್‌ ಅವರನ್ನ ಬೆದರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಸಿಎಸ್‌ಕೆ ಫ್ರಾಂಚೈಸಿಯನ್ನು ಬ್ಯಾನ್‌ ಮಾಡಿ ಎಂದೆಲ್ಲ ಕಿಡಿ ಕಾರುತ್ತಿದ್ದಾರೆ.

ಶೋಭೆ ತರುವಂತಹದ್ದಲ್ಲ. ‘‘ಒಬ್ಬ ದಿಗ್ಗಜನ ಕೋಪಕ್ಕೆ ಹೆದರಿ ಅಂಪೈರ್ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ. ಜಂಟಲ್​ಮೆನ್ ಗೇಮ್​ನಲ್ಲಿ ಈ ರೀತಿಯ ನಡವಳಿಕೆ ಶೋಭೆ ತರುವಂತಹದ್ದಲ್ಲ.’’ -ಇಂದ್ರಜಿತ್ ಸೇನ್, ಕ್ರಿಕೆಟ್ ಅಭಿಮಾನಿ

ಕ್ರಿಕೆಟ್​ಗೆ ಅವಮಾನ ‘‘ಮೈದಾನದಲ್ಲಿದ್ದ ಆಟಗಾರ ಅಂಪೈರ್ ಈ ಬಾಲ್ ವೈಡ್ ಅಲ್ಲಾ ಅಂತಾ ಆಕ್ರೋಶಗೊಳ್ತಾನೆ. ಅಂಪೈರ್ ತಮ್ಮ ನಿರ್ಧಾರವನ್ನ ಬದಲಿಸ್ತಾರೆ. ಇದು ಕ್ರಿಕೆಟ್​ಗೆ ಮಾಡಿದ ಅವಮಾನ.’’ -ವಿರಾಟ್, ಕ್ರಿಕೆಟ್ ಅಭಿಮಾನಿ

ಚೆನ್ನೈ ತಂಡವನ್ನ ಬ್ಯಾನ್ ಮಾಡಿ ‘‘ ಕ್ರಿಕೆಟ್ ಜಗತ್ತು ಕಂಡ ದಿಗ್ಗಜನೊಬ್ಬ ಅಂಪೈರ್​ಗೆ ಯಾವಾಗಲೂ ಬೆದರಿಕೆ ಹಾಕ್ತಾನೆ. ಹೀಗಾಗಿ ಈ ಫ್ರಾಂಚೈಸಿಯನ್ನ ಬ್ಯಾನ್ ಮಾಡಿ. ಇವರು ಆಡೋದಕ್ಕೆ ಅರ್ಹರಲ್ಲ.’’ -ವರ್ಧನ್, ಕ್ರಿಕೆಟ್ ಅಭಿಮಾನಿ

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಫ್ಯಾನ್ಸ್ ಧೋನಿ ನಡೆದುಕೊಂಡ ರೀತಿಯ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಅದೇನೋ ಅಂತಾರಲ್ಲ.. ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯ್ತು ಅನ್ನೋ ಹಾಗೇ, ಸತತ ಸೋಲಿನ ನೋವು, ಧೋನಿಗೆ ತನ್ನ ತಾಳ್ಮೆಯನ್ನ ಕಳೆದುಕೊಳ್ಳೋ ಹಾಗೇ ಮಾಡ್ತಿದೆ. ಇದೇ ಕಾರಣಕ್ಕೆ ಧೋನಿ ತಾವೊಬ್ಬ ದಿಗ್ಗಜ ಅನ್ನೋದನ್ನ ಮರೆತು, ಸಿಲ್ಲಿ ವಿಚಾರಕ್ಕೂ ಕೋಪ ಮಾಡಿಕೊಳ್ಳೋದಕ್ಕೆ ಶುರುಮಾಡಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ