ಗುರೂ ಅಳಬೇಡಾಮ್ಮಾ ಆಟದಲ್ಲಿ ಇದೆಲ್ಲ ಸಹಜವೇ.. ಚೆನ್ನಾಗಿಯೇ ಆಡಿದ್ದೀಯಾ ಬಿಡು: ಪಂತ್ ಭುಜ ತಟ್ಟಿ ಸಂತೈಸಿದ ದೊಡ್ಡಣ್ಣ ವಿರಾಟ್​

ಅರ್ಧ ಶತಕ ಬಾರಿಸಿ, ಕ್ಯಾಪ್ಟನ್ಸಿ ಆಟ ಆಡುತ್ತಿದ್ದ ರಿಷಬ್ ಪಂತ್ ಕಣ್ಣೇದುರಿಗೇ ಸೋಲುವಂತಾಯಿತು. ಪಾಪ ರಿಷಬ್ ಪಂತ್ ಅಳುತ್ತಿರುವುದನ್ನು ಕಂಡು ದೊಡ್ಡಣ್ಣ ವಿರಾಟ್​ ಕೊಹ್ಲಿ ತಡೆಯಲಾರದೆ ರಿಷಬ್ ಪಂತ್ ಬಳಿ ತೆರಳಿ.. ಗುರೂ ನೀನು ಅಳಬೇಡಾಮ್ಮಾ. ಆಟದಲ್ಲಿ ಇದೆಲ್ಲ ಸಹಜವೇ. ಚೆನ್ನಾಗಿಯೇ ಆಡಿದ್ದೀಯಾ ಬಿಡು. ಬೇಜಾರು ಮಾಡಿಕೋ ಬೇಡ ಭುಜ ತಟ್ಟಿ ಸಂತೈಸಿದ್ದಾರೆ.

ಗುರೂ ಅಳಬೇಡಾಮ್ಮಾ ಆಟದಲ್ಲಿ ಇದೆಲ್ಲ ಸಹಜವೇ.. ಚೆನ್ನಾಗಿಯೇ ಆಡಿದ್ದೀಯಾ ಬಿಡು: ಪಂತ್ ಭುಜ ತಟ್ಟಿ ಸಂತೈಸಿದ ದೊಡ್ಡಣ್ಣ ವಿರಾಟ್​
ಪಂತ್ ಭುಜ ತಟ್ಟಿ ಸಂತೈಸಿದ ದೊಡ್ಡಣ್ಣ ವಿರಾಟ್​
Follow us
|

Updated on:Apr 28, 2021 | 1:34 PM

ಅವರಿಬ್ಬರೂ ದೇಶಕ್ಕಾಗಿ ಆಡುವಾಗ ಒಗ್ಗೂಡಿ ಆಡುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ದೇಶೀಯವಾಗಿಯೇ ಬೇರೆ ಬೇರೆ ತಂಡಗಳಿಗೆ ಆಡುವ ಅನಿವಾರ್ಯತೆ ಎದುರಾಗಿ ಪರಸ್ಪರ ಪೈಪೋಟಿಯಲ್ಲಿ ತೊಡಗಬೇಕಾಗುತ್ತದೆ. ದೇಶಕ್ಕಾಗಿ ಆಡುವಾಗ.. ಒಬ್ಬರು ಮತ್ತೊಬ್ಬರ ಕೈಕೆಳಗೆ ಆಡುವುದು ಅತ್ಯಗತ್ಯವಾಗಿರುತ್ತದೆ. ಅದೇ ಬೇರೆ ಬೇರೆ ತಂಡಗಳಿಗೆ ಆಡುವಾಗ ಪರಸ್ಪರ ಕೈಮಿಲಾಯಿಸಿ ಆಡುವ ಜರೂರತ್ತು ಇರುತ್ತದೆ. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇದು ಎದ್ದು ಕಂಡಿದೆ. ಆರ್​ಸಿಬಿ ಮತ್ತು ಡೆಲ್ಲಿ ತಂಡಗಳ ನಡುವೆ ಪಂದ್ಯ ನಡೆದಾಗ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ್ದ ಡೆಲ್ಲಿ ತಂಡಕ್ಕೆ ಕೊನೆಯ ಕ್ಷಣದಲ್ಲಿ ಪಂದ್ಯ ಕೈಜಾರಿದೆ. ಅದಕ್ಕೆ ಸಹಜವಾಗಿಯೇ ಡೆಲ್ಲಿ ತಂಡದ ಕ್ಯಾಪ್ಟನ್​ ತನ್ನ ಕಣ್ಣೆದುರೇ ಪಂದ್ಯ ಕೈಜಾರಿದಾಗ ಕಣ್ಣೀರು ಹಾಕಿದ್ದಾರೆ. ಸರಿಯಾಗಿ ಆಗಲೇ ಮನೆಯ ಹಿರಿಯಣ್ಣನಂತೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ಆ ಕಿರಿಯ ಕ್ಯಾಪ್ಟನ್​ ಭುಜದ ಮೇಲೆ ಕೈಹಾಕಿ, ಸಂತೈಸಿದ್ದಾನೆ!

ಜೀವನವೇ ಹಾಗೆ.. ಕೊನೆಯ ಘಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಈ ಕ್ರಿಕೆಟ್ ಆಟ ಸಹ ಅದಕ್ಕೆ ಒರತಲ್ಲ. ಅದರಲ್ಲೂ ಈ ​IPL ಬಂದಮೇಲೆ.. ಕೊನೆಯ ಕ್ಷಣದಲ್ಲಿ ಕೊನೆಯ ಬಾಲಿನಲ್ಲಿ ಏನು ಬೇಕಾದರೂ ಆಗಬಹುದು. ನಿನ್ನೆಯ Royal Challengers Bangalore (RCB) ಮತ್ತು Delhi Capitals (DC) ನಡುವಣ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ, ಕ್ಯಾಪ್ಟನ್ಸಿ ಆಟ ಆಡುತ್ತಿದ್ದ ರಿಷಬ್ ಪಂತ್ ಕಣ್ಣೇದುರಿಗೇ ಸೋಲುವಂತಾಯಿತು. ಕಣ್ಣೀರು ಗಂಗಾ ನದಿಯಾಗಿ ಉಕ್ಕಿದೆ. ಪಾಪ ರಿಷಬ್ ಪಂತ್ ಸಣ್ಣವ. ಅವ ಅಳುತ್ತಿರುವುದನ್ನು ಕಂಡು ದೊಡ್ಡಣ್ಣ ವಿರಾಟ್​ ಕೊಹ್ಲಿ ತಡೆಯಲಾರದೆ ರಿಷಬ್ ಪಂತ್ ಬಳಿ ತೆರಳಿ.. ಗುರೂ ನೀನು ಅಳಬೇಡಾಮ್ಮಾ. ಆಟದಲ್ಲಿ ಇದೆಲ್ಲ ಸಹಜವೇ. ಚೆನ್ನಾಗಿಯೇ ಆಡಿದ್ದೀಯಾ ಬಿಡು. ಬೇಜಾರು ಮಾಡಿಕೋ ಬೇಡ ಭುಜ ತಟ್ಟಿ ಸಂತೈಸಿದ್ದಾರೆ.

ನಿನ್ನೆಯ ಪಂದ್ಯದ ಕಟ್ಟಕಡೆಯ ಎರಡು ಬಾಲ್​ಗಳಲ್ಲಿ ಡೆಲ್ಲಿ ತಂಡಕ್ಕೆ ಜಸ್ಟ್​ ರನ್ಸ್​ ಬೇಕಿದ್ದವು. ಅಗ ಬ್ಯಾಟ್​ ಬೀಸುತ್ತಿದ್ದುದ್ದು ಇದೇ ಕ್ಯಾಪ್ಟನ್​​ ರಿಷಬ್ ಪಂತ್. ಅರ್ಧ ಶತಕ ಬಾರಿಸಿ, ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದರು. ಕೊನೆ ಬಾಲುಗಳಲ್ಲಿಯೂ ಸಿಕ್ಸ್​- ಬೌಂಡರಿ ಬಾರಿಸಿ, ತಂಡವನ್ನು ದಡ ಮುಟ್ಟಿಸುತ್ತಾರೆ ಎಂದು ಅಪಾರ ನಿರೀಕ್ಷೆಯಿತ್ತು. ಸ್ವತಃ ರಿಷಬ್ ಪಂತ್ ಸಹ ಹಾಗೆಂದುಕೊಂಡೇ ಬ್ಯಾಟ್​ ಹಿಡಿದು ಆಡಿದರು. ಆದ್ರೆ ಕೇವಲ ಎರಡೇ ಬೌಂಡರಿ ಬಾರಿಸಲು ಶಕ್ತ್ಯವಾದರು. ನೋ ಸಿಕ್ಸರ್​. ಅಲ್ಲಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಯದ ನಗೆ ಬೀರಿತು. ಎಕ್ಸಾಕ್ಟ್​ಲಿ ಆಗಲೇ ರಿಷಬ್ ಪಂತ್ ಅಳತೊಡಗಿದರು. ಆಗ ಕೊಹ್ಲಿ ಸಂತೈಸತೊಡಗಿದರು. ಅಷ್ಟೇ ಅಲ್ಲ.. ಅದಕ್ಕೂ ಮುನ್ನ Delhi Capitals ಪರ ಅವೇಶ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದರು. ಇದನ್ನು ಗಮನಿಸಿದ Royal Challengers Bangalore ಕ್ಯಾಪ್ಟನ್​ ಕೊಹ್ಲಿ ಅವೇಶ್ ಅವರು ಧರಿಸುವ ಜೆರ್ಸಿ ಮೇಲೆ ಹಸ್ತಾಕ್ಷರ ಮಾಡಿ, ಹುರುದುಂಬಿಸಿದರು.

ಪಂದ್ಯ ಹೀಗೆ ಸಾಗಿತ್ತು.. ಅವೇಶ್ ಖಾನ್ ಉತ್ತಮ ಬೌಲಿಂಗ್; ಜೆರ್ಸಿ ಮೇಲೆ ಸೈನ್ ಮಾಡಿದ ಕೊಹ್ಲಿ: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಿಸಲು ಪಂತ್- ಹೆಟ್ಮೆಯರ್ ನಡೆಸಿದ ಹೊರಾಟ ವ್ಯರ್ಥವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ 1 ರನ್​ಗಳ ಸೋಲು ಕಂಡಿದೆ. 172 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ, 170 ರನ್ ಗಳಿಸಲಷ್ಟೇ ಶಕ್ತವಾಗಿದೆ. ಪಂತ್ 58 ರನ್ ಮತ್ತು ಹೆಟ್ಮೆಯರ್ 53 ರನ್​ಗಳ ಹೋರಾಟ ವ್ಯರ್ಥವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತ್ತು.‌ ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 172 ರನ್ ಗುರಿ ನೀಡಿತ್ತು. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಆಕರ್ಷಕ ಅರ್ಧಶತಕ ದಾಖಲಿಸಿದ್ದರು. 42 ಬಾಲ್‌ಗೆ 5 ಸಿಕ್ಸ್, 3 ಫೋರ್ ಸಹಿತ 75 ರನ್ ಕಲೆಹಾಕಿದ್ದರು.‌ ರಜತ್ ಪಾಟೀದಾರ್ 31, ಮ್ಯಾಕ್ಸ್‌ವೆಲ್ 25 ರನ್ ದಾಖಲಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 12, 17 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದ್ದರು.

Avesh bowled well for delhi capitals, get pat from rcb captain virat kohli

ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಶರ್ಮಾ‌ ಹಾಗೂ ಅವೇಶ್ ಖಾನ್ ಉತ್ತಮ ಬೌಲಿಂಗ್

ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಶರ್ಮಾ‌ ಹಾಗೂ ಅವೇಶ್ ಖಾನ್ ಉತ್ತಮ ಬೌಲಿಂಗ್ ಮಾಡಿದ್ದರು. ತಲಾ‌ 1 ವಿಕೆಟ್ ಪಡೆದು ರನ್ ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದ್ದರು.

(IPL 2021 RCB captain Virat Kohli consoles devastated Rishabh Pant after Delhi Capitals 1 run loss to RCB)

Published On - 10:12 am, Wed, 28 April 21

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ