AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಈ ಐಪಿಎಲ್​ನ ಮೊದಲ ಅರ್ಧ ಶತಕವನ್ನು ಮಗಳಿಗೆ ಅರ್ಪಿಸಿದ ಕಿಂಗ್ ಕೊಹ್ಲಿ! ಹೇಗಿತ್ತು ಗೊತ್ತಾ ಆ ಭಾವನಾತ್ಮಕ ಕ್ಷಣ

Virat Kohli : ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಕೊಹ್ಲಿ ಪೂರ್ಣಗೊಳಿಸಿದ ಕೂಡಲೇ, ಆರ್‌ಸಿಬಿ ನಾಯಕ ತನ್ನ ಮಗಳು ವಮಿಕಾಗೆ ಈ ಅರ್ಧ ಶತಕವನ್ನು ಅರ್ಪಿಸಿದರು.

IPL 2021: ಈ ಐಪಿಎಲ್​ನ ಮೊದಲ ಅರ್ಧ ಶತಕವನ್ನು ಮಗಳಿಗೆ ಅರ್ಪಿಸಿದ ಕಿಂಗ್ ಕೊಹ್ಲಿ! ಹೇಗಿತ್ತು ಗೊತ್ತಾ ಆ ಭಾವನಾತ್ಮಕ ಕ್ಷಣ
ಮೊದಲ ಅರ್ಧ ಶತಕವನ್ನು ಮಗಳು ವಮಿಕಾಗೆ ಅರ್ಪಿಸಿದ ಕೊಹ್ಲಿ
ಪೃಥ್ವಿಶಂಕರ
| Edited By: |

Updated on:Apr 23, 2021 | 9:19 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್​ಆರ್​) ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. 178 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಕೊಹ್ಲಿ ಬಳಗ ಈ ಸಲ ಕಪ್ ಗೆಲ್ಲುವ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿದೆ. ಋತುವಿನ ಮೊದಲ ಪಂದ್ಯವನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಆಡುತ್ತಾ, ಕೊಹ್ಲಿ ಹಾಗೂ ಕನ್ನಡಿಗ ಪಡಿಕ್ಕಲ್ ಆರ್​ಆರ್​ ತಂಡದ ಪ್ರತಿ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಈ ಇನ್ನಿಂಗ್ಸ್​ನಲ್ಲಿ ಪಡಿಕ್ಕಲ್ ಪ್ರಮುಖ ಪಾತ್ರ ವಹಿಸಿ ಕೇವಲ 52 ಎಸೆತಗಳಲ್ಲಿ 101 ರನ್ ಗಳಿಸಿದರು. ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಕೂಡ ಅಜೇಯರಾಗಿ 47 ಎಸೆತಗಳಲ್ಲಿ 72 ರನ್ ಗಳಿಸಿದರು.

ಮಗಳು ವಮಿಕಾಗೆ ಈ ಅರ್ಧ ಶತಕ ಐಪಿಎಲ್​ನಲ್ಲಿ ಕೊಹ್ಲಿ ಹೀಗೆ ನಿಯಮಿತವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯದೇ ಕೆಲ ವರ್ಷಗಳೇ ಆಗಿಹೋಗಿದ್ದವು. ಜತೆಗೆ ತನ್ನ ಈ ನಿರ್ಣಯಕ್ಕೆ ನ್ಯಾಯ ಒದಗಿಸಿರುವ ಅವರು ಉತ್ತಮ ಪ್ರದರ್ಶನ ತೋರಿಸುತ್ತಿದ್ದಾರೆ. ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದ ಕೂಡಲೇ, ಆರ್‌ಸಿಬಿ ನಾಯಕ ತನ್ನ ಮಗಳು ವಮಿಕಾಗೆ ಈ ಅರ್ಧ ಶತಕವನ್ನು ಅರ್ಪಿಸಿದರು. ಆರ್‌ಸಿಬಿ ಆಡಳಿತವು ಆಟಗಾರರ ಕುಟುಂಬ ಸದಸ್ಯರೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ, ಕೊಹ್ಲಿ ಅವರ ಪತ್ನಿ ಅನುಷ್ಕಾ ಮತ್ತು ಮಗಳು ವಮಿಕಾ ಕೊಹ್ಲಿಯೊಂದಿಗೆ ನೆಲೆಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಕೊಹ್ಲಿ ತನ್ನ ಮಗಳತ್ತ ಕೈಗಳನ್ನು ತೊಟ್ಟಿಲನ್ನು ತೂಗುವಂತೆ ಮಾಡಿ ಅರ್ಧ ಶತಕವನ್ನು ಅರ್ಪಿಸಿದರು.

View this post on Instagram

A post shared by IPL (@iplt20)

ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ಅಗ್ರ ಸ್ಥಾನ ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ಅಗ್ರ ಸ್ಥಾನವನ್ನು ಮತ್ತೆ ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿರುವ ಏಕೈಕ ತಂಡವಾದ ಆರ್‌ಸಿಬಿ ತಮ್ಮ ಖಾತೆಯಲ್ಲಿ 4 ಗೆಲುವುಗಳು ಮತ್ತು 8 ಅಂಕಗಳನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಎಸೆತಗಳ ಜಯದೊಂದಿಗೆ ಅವರು ತಮ್ಮ ಆವೃತ್ತಿಯನ್ನು ಆರಂಭಿಸಿದ್ದರು. ಅದರೆ, ಕಳೆದ ಪಂದ್ಯದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದ್ದ ಚೆನ್ನೈ, ಆರ್​ಸಿಬಿಯಿಂದ ಮೊದಲ ಸ್ಥಾನವನ್ನು ಕಿತ್ತುಕೊಂಡಿತ್ತು. ಇದೀಗ ಮತ್ತೆ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಆರ್​ಸಿಬಿ  ಚೆನ್ನೈನಿಂದ ತನ್ನ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಮುಂಬೈ ನಂತರ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಆರ್ ಆರ್ ತಂಡವನ್ನು ಸೋಲಿಸುವ ಮೂಲಕ ನಂಬರ್​ ಒನ್ ಪಟ್ಟಕ್ಕೆ ಏರಿದೆ. ಆರ್​ಸಿಬಿ ಈಗ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬಲಿಷ್ಠ ತಂಡಗಳನ್ನೇ ಎದುರಿಸಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವುದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಈ ಆವೃತ್ತಿಯ ಮೂರನೇ ಹಂತಕ್ಕಾಗಿ ಅಹಮದಾಬಾದ್‌ಗೆ ಪ್ರಯಾಣಿಸುತ್ತಿರುವುದರಿಂದ ಆರ್‌ಸಿಬಿ ಮುಂಬಯಿಯಲ್ಲಿ ಇನ್ನು ಒಂದು ಪಂದ್ಯವನ್ನು ಮಾತ್ರ ಆಡಲಿದೆ. ಅಹಮದಾಬಾದ್‌ನಲ್ಲಿ ನಾಲ್ಕು ಪಂದ್ಯಗಳ ನಂತರ ಆರ್‌ಸಿಬಿ ಕೋಲ್ಕತ್ತಾಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಅಂತಿಮ ಐದು ಪಂದ್ಯಗಳನ್ನು ಆಡಲಿದ್ದಾರೆ.

Published On - 7:43 am, Fri, 23 April 21

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ