AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಗಂಗೂಲಿ, ಯುವರಾಜ್ ಹೆಗಲಿಗೆ ಕೋಚಿಂಗ್ ನೊಗ!

ಐಪಿಎಲ್ 2027ರ ಮೆಗಾ ಸಮರಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಳೆದ ಕೆಲವು ಸೀಸನ್‌ಗಳಿಂದ ಪ್ರಶಸ್ತಿ ಮುಖ ನೋಡದ ಡೆಲ್ಲಿ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರಿನಲ್ಲಿ ನಡೆದ ಡಿಸಿ ಟ್ರಯಲ್ಸ್​​ನಲ್ಲಿ  ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ.

IPL 2027: ಗಂಗೂಲಿ, ಯುವರಾಜ್ ಹೆಗಲಿಗೆ ಕೋಚಿಂಗ್ ನೊಗ!
Delhi Capitals
ಝಾಹಿರ್ ಯೂಸುಫ್
|

Updated on: Aug 10, 2026 | 2:06 PM

Share

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಹೊಸ ಜವಾಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬೆಂಗಳೂರಿನ ‘ಜಸ್ಟ್ ಕ್ರಿಕೆಟ್ ಅಕಾಡೆಮಿ’ಯಲ್ಲಿ ನಡೆದ ಆಟಗಾರರ ಆಯ್ಕೆ ಟ್ರಯಲ್ಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಇಬ್ಬರು ದಿಗ್ಗಜರು, ಮುಂಬರುವ ಸೀಸನ್‌ಗಾಗಿ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ DC  ಟ್ರಯಲ್ಸ್:

ಬೆಂಗಳೂರಿನಲ್ಲಿ ನಡೆದ ಟ್ರಯಲ್ಸ್ ಕ್ಯಾಂಪ್‌ನಲ್ಲಿ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಸಕ್ರಿಯವಾಗಿ ಭಾಗವಹಿಸಿದ್ದರು. ನೆಟ್ಸ್‌ನಲ್ಲಿ ದೇಶಿ ಆಟಗಾರರ ಬ್ಯಾಟಿಂಗ್ ಶೈಲಿಯನ್ನು ಯುವರಾಜ್ ಸಿಂಗ್ ಹತ್ತಿರದಿಂದ ಗಮನಿಸಿ, ಅವರಿಗೆ ಪವರ್-ಹಿಟ್ಟಿಂಗ್ ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಮತ್ತೊಂದೆಡೆ, ಗಂಗೂಲಿ ಅವರು ಭವಿಷ್ಯದ ತಂಡದ ಯೋಜನೆಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಉಸ್ತುವಾರಿ ವಹಿಸಿದ್ದರು. ಇವರೊಂದಿಗೆ ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹೊಸ ಕೋಚ್​ಗಳು (ಸಂಭಾವ್ಯ):

ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳ ಪ್ರಕಾರ, ಮುಂಬರುವ ಸೀಸನ್​ನಲ್ಲಿ ಡಿಸಿ ತಂಡದ ನೂತನ ಕೋಚಿಂಗ್ ಲೈನ್-ಅಪ್ ಈ ಕೆಳಗಿನಂತೆ ಇರಲಿದೆ:

  • ಮುಖ್ಯ ಕೋಚ್ / ಕ್ರಿಕೆಟ್ ನಿರ್ದೇಶಕ: ಸೌರವ್ ಗಂಗೂಲಿ
  • ಬ್ಯಾಟಿಂಗ್ ಕೋಚ್ / ಮೆಂಟರ್: ಯುವರಾಜ್ ಸಿಂಗ್
  • ಸ್ಪಿನ್ ಬೌಲಿಂಗ್ ಕೋಚ್: ಅಮಿತ್ ಮಿಶ್ರಾ

ಮಾಲೀಕತ್ವವೂ ಬದಲಾವಣೆ:

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಜಂಟಿ ಮಾಲೀಕತ್ವದ ಒಪ್ಪಂದದ ಪ್ರಕಾರ, ಮುಂಬರುವ ಎರಡು ವರ್ಷಗಳ ಅವಧಿಗೆ (2027 ಮತ್ತು 2028) ಪುರುಷರ ತಂಡದ ಸಂಪೂರ್ಣ ಕಾರ್ಯಾಚರಣೆಯ ಜವಾಬ್ದಾರಿಯನ್ನು ‘JSW ಸ್ಪೋರ್ಟ್ಸ್’ ಸಂಸ್ಥೆಯು ‘GMR ಗ್ರೂಪ್’ನಿಂದ ವಹಿಸಿಕೊಳ್ಳುತ್ತಿದೆ.

ಜಿಎಂಆರ್ ಗ್ರೂಪ್ ನೇಮಕ ಮಾಡಿದ್ದ ಕೋಚಿಂಗ್ ಸಿಬ್ಬಂದಿಗಳಾದ ಹೇಮಂಗ್ ಬದಾನಿ (ಮುಖ್ಯ ಕೋಚ್), ವೇಣುಗೋಪಾಲ್ ರಾವ್ ಮತ್ತು ಮುನಾಫ್ ಪಟೇಲ್ ಅವರ ಸ್ಥಾನಕ್ಕೆ ಈಗ ಜೆಎಸ್‌ಡಬ್ಲ್ಯೂ ಸಂಸ್ಥೆಯು ಗಂಗೂಲಿ ಮತ್ತು ಯುವರಾಜ್ ಜೋಡಿಯನ್ನು ಕರೆತರುತ್ತಿದೆ.

ಡಿಸಿ ತಂಡಕ್ಕೆ ಯುವರಾಜ್ ಎಂಟ್ರಿ ಏಕೆ ಮುಖ್ಯ?

ಕಳೆದ ಕೆಲವು ಸೀಸನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್ ತಲುಪಲು ವಿಫಲವಾಗಿ ನಿರಾಸೆ ಮೂಡಿಸಿದೆ. ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಯುವ ತಾರೆಗಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿ ಯಶಸ್ವಿಯಾಗಿಸಿರುವ ಯುವರಾಜ್ ಸಿಂಗ್ ಅವರ ಮೆಂಟರ್‌ಶಿಪ್ ಕೌಶಲ್ಯವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಯುವ ಬ್ಯಾಟರ್‌ಗಳಿಗೆ ಹೊಸ ಶಕ್ತಿ ನೀಡಬಲ್ಲದು.  ಅತ್ತ ಗಂಗೂಲಿ ಅವರು ಈಗಾಗಲೇ ಜೆಎಸ್‌ಡಬ್ಲ್ಯೂ ಮಾಲೀಕತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ (SA20) ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವುದರಿಂದ ತಂಡ ಮುನ್ನಡೆಸುವುದು ಸುಲಭವಾಗಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!

ಒಟ್ಟಾರೆಯಾಗಿ, ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೊಸ ಪ್ರತಿಭೆಗಳನ್ನು ಸೆಳೆಯಲು ಮತ್ತು ಬಲಿಷ್ಠ ಕೋಚಿಂಗ್ ಸಾಮ್ರಾಜ್ಯವನ್ನು ನಿರ್ಮಿಸಲು ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂಬರುವ ಸೀಸನ್‌ನಲ್ಲಿ ಹೊಸ ಇತಿಹಾಸ ಬರೆಯಲು ಈಗಿನಿಂದಲೇ ಭರ್ಜರಿ ತಾಲೀಮು ಆರಂಭಿಸಿದೆ.

Follow Us
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ