AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink Ball Test: ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ಪಿಂಕ್​ ಬಾಲ್ ಬಳಕೆ ಏಕೆ? ಏನಿದರ ಮರ್ಮ?

Pink Ball: ಗುಲಾಬಿ ಬಣ್ಣವನ್ನು ಆಯ್ಕೆಮಾಡಲು ಕಾರಣವೆಂದರೆ ಅದು ಸಾಂಪ್ರದಾಯಿಕ ಕೆಂಪು ಬಣ್ಣದ ಚೆಂಡಿಗೆ ಹತ್ತಿರದಲ್ಲಿದೆ ಮತ್ತು ಲೈವ್ ಸ್ಟ್ರೀಮಿಂಗ್‌ಗಾಗಿ ಕ್ಯಾಮೆರಾದಲ್ಲಿ ಚೆಂಡನ್ನು ಸೆರೆಹಿಡಿಯುವಾಗ ದೀಪಗಳ ಅಡಿಯಲ್ಲಿ ಚೆಂಡಿನ ಚಲನೆಯನ್ನು ಸೆರೆಹಿಡಿಯುವುದು ಸುಲಭವಾಗುತ್ತದೆ.

Pink Ball Test: ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ಪಿಂಕ್​ ಬಾಲ್ ಬಳಕೆ ಏಕೆ? ಏನಿದರ ಮರ್ಮ?
ಪಿಂಕ್​ ಬಾಲ್​
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 23, 2021 | 6:56 PM

ಪ್ರಪಂಚದಾದ್ಯಂತದ ಪ್ರತಿಯೊಂದು ಕ್ರೀಡೆಯಲ್ಲೂ ವೈಜ್ಞಾನಿಕ ಆಲೋಚನೆ ಕೆಲಸ ಮಾಡುತ್ತದೆ. ಕ್ರಿಕೆಟ್‌ನಲ್ಲಿ, ಆಟಗಾರರ ಉಡುಪನ್ನು ವೈಜ್ಞಾನಿಕ ಕಾರಣಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಆಟಗಾರರು ಬಣ್ಣದ ಬಟ್ಟೆಗಳನ್ನು ಧರಿಸಿ ಬಿಳಿ ಚೆಂಡಿನೊಂದಿಗೆ ಆಡುತ್ತಾರೆ. ಈ ಸಂಯೋಜನೆಯ ಹಿಂದಿನ ಕಾರಣವೆಂದರೆ ಚೆಂಡು ಆಟಗಾರರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಎಂಬುದು. ಅದೇ ರೀತಿಯಲ್ಲಿ, ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸಿ ಟೆಸ್ಟ್​ ಪಂದ್ಯಗಳಲ್ಲಿ ಕೆಂಪು ಚೆಂಡಿನೊಂದಿಗೆ ಆಡುತ್ತಾರೆ. ಇದರಿಂದ ಚೆಂಡು ಸ್ಪಷ್ಟವಾಗಿ ಗೋಚರಿಸುತ್ತದೆ. ಟೆಸ್ಟ್​ ಪಂದ್ಯಗಳನ್ನು ಸೂರ್ಯನ ಬೆಳಕಿನಲ್ಲಿ ದಿನವಿಡಿ ಆಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಬಿಳಿಬಟ್ಟೆಗಳನ್ನು ಬಳಸುವ ಮತ್ತೊಂದು ಉಪಯೋಗವೆಂದರೆ ಇವು ಶಾಖವನ್ನು ಹೀರಿಕೊಳ್ಳುವುದಿಲ್ಲ, ಪ್ರತಿಫಲಿಸುತ್ತದೆ. ಹೀಗಾಗಿಯೇ ಇಂದಿಗೂ ಟೆಸ್ಟ್​ನಲ್ಲಿ ಎಲ್ಲಾ ಆಟಗಾರರು ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡಿನ ಬಳಕೆ.. ಟೆಸ್ಟ್ ಪಂದ್ಯಗಳಲ್ಲಿ 3 ರೀತಿಯ ಚೆಂಡುಗಳನ್ನು ಬಳಸಲಾಗುತ್ತದೆ. ಅವುಗಳ ಹೆಸರುಗಳೆಂದರೆ ಕೂಕಬುರಾ, ಎಸ್‌ಜಿ, ಮತ್ತು ಡ್ಯೂಕ್. ವಿವಿಧ ಬಣ್ಣಗಳ ಚೆಂಡುಗಳನ್ನು ಕ್ರಿಕೆಟ್‌ನಲ್ಲಿ ವಿವಿಧ ಸ್ವರೂಪಗಳಲ್ಲಿ ಬಳಸಲಾಗುತ್ತದೆ.

ಇಲ್ಲಿಯವರೆಗೆ, ಕೆಂಪು ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಗುಲಾಬಿ ಬಣ್ಣದ ಚೆಂಡನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತಿದೆ. 22ನೇ ನವೆಂಬರ್ 2019ರಂದು ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಗುಲಾಬಿ ಚೆಂಡಿನೊಂದಿಗೆ ಭಾರತ ತಂಡವು ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿ ಜಯಗಳಿಸಿತ್ತು. ಇದು ಭಾರತೀಯ ನೆಲದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್​ ಪಂದ್ಯವೂ ಹೌದು.

ಹಗಲು ರಾತ್ರಿ ಟೆಸ್ಟ್​ನಲ್ಲಿ ಕಿತ್ತಳೆ ಅಥವಾ ಹಳದಿ ಬಣ್ಣದ ಚೆಂಡು ಯಾಕಿಲ್ಲ? ಮೊದಲ ಗುಲಾಬಿ ಬಣ್ಣದ ಚೆಂಡನ್ನು ಆಸ್ಟ್ರೇಲಿಯಾದ ಚೆಂಡು ಉತ್ಪಾದನಾ ಕಂಪನಿ ‘ಕೂಕಬುರಾ’ ತಯಾರಿಸಿತು. ಆರಂಭದಲ್ಲಿ, ಈ ಚೆಂಡಿನ ಬಣ್ಣವು ಬೇಗನೆ ಮಾಸಿ ಹೋಗುತ್ತಿತ್ತು. ಆದರೆ ಕಂಪನಿಯ ಹಲವು ವರ್ಷಗಳ ಸತತ ಪ್ರಯತ್ನದಿಂದ ಆ ಸಮಸ್ಯೆಗೆ ಪರಿಹಾರ ಹುಡುಕಲಾಯಿತು. ಈಗ ಚೆಂಡಿನ ಮೇಲಿರುವ ಗುಲಾಬಿ ಬಣ್ಣವು, ಕೆಂಪು ಬಣ್ಣದ ಚೆಂಡಿನಂತೆ ಹೆಚ್ಚು ಕಾಲ ಉಳಿಯಲಿದೆ.

ಪಿಂಕ್ ಬಾಲ್ ಆರಂಭದಲ್ಲಿ, ಕೂಕಬುರಾ ಕಂಪನಿಯು ಚೆಂಡು ತಯಾರಿಸಲು ಕಿತ್ತಳೆ ಮತ್ತು ಹಳದಿ ಬಣ್ಣಗಳನ್ನು ಬಳಸಿತು. ಆ ಚೆಂಡುಗಳ ಪ್ರಯೋಗದ ಸಮಯದಲ್ಲಿ, ಕ್ಯಾಮೆರಾಮೆನ್‌ಗಳಿಗೆ ತಮ್ಮ ಕ್ಯಾಮೆರದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡನ್ನು ಸರಿಯಾಗಿ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಿತ್ತಳೆ ಮತ್ತು ಹಳದಿ ಬಣ್ಣಗಳ ಚೆಂಡಿನ ಬಳಕೆ ಮುಂದಿನ ದಿನಗಳಲ್ಲಿ ನಿಂತುಹೋಯಿತು. ಇದರ ಬದಲು ಪಿಂಕ್​ ಬಣ್ಣದ ಚೆಂಡಿನ ಬಳಕೆ ಆರಂಭವಾಯಿತು. ಇದಕ್ಕೆ ಮುಖ್ಯ ಕಾರಣ ಇದು ಸಾಂಪ್ರದಾಯಿಕ ಕೆಂಪು ಬಣ್ಣದ ಚೆಂಡಿಗೆ ಹತ್ತಿರದಲ್ಲಿದೆ ಮತ್ತು ಲೈವ್ ಸ್ಟ್ರೀಮಿಂಗ್‌ಗಾಗಿ ಕ್ಯಾಮೆರಾದಲ್ಲಿ ಚೆಂಡನ್ನು ಸೆರೆಹಿಡಿಯುವಾಗ ದೀಪಗಳ ಅಡಿಯಲ್ಲಿ ಬಾಲ್​ನ ಚಲನೆಯನ್ನು ಸೆರೆಹಿಡಿಯುವುದು ಸುಲಭ ಎನ್ನುವುದು.

ಗುಲಾಬಿ ಬಣ್ಣದ ಚೆಂಡಿನ ಮೇಲೆ ಕಪ್ಪುದಾರದಿಂದ ಹೊಲಿಗೆ ಹಾಕಲಾಗುತ್ತದೆ. ಕೆಲವೊಮ್ಮೆ ಹಸಿರು ಮತ್ತು ಬಿಳಿ ಬಣ್ಣದ ದಾರವನ್ನು ಸಹ ಬಳಸಲಾಗುತ್ತಿದೆ. ಈ ಮೊದಲು ಕಪ್ಪುದಾರದಿಂದ ಹೊಲಿದ ಗುಲಾಬಿ ಬಣ್ಣದ ಚೆಂಡಿನೊಂದಿಗೆ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಆಡಿತ್ತು.

ವೈಜ್ಞಾನಿಕವಾಗಿ, ಗುಲಾಬಿ ಒಂದು ಸ್ವತಂತ್ರ ಬಣ್ಣವೇ ಅಲ್ಲ. ಇದು ಕೇವಲ ಕೆಂಪು ಮತ್ತು ನೀಲಿ ಬಣ್ಣಗಳ ಒಂದು ನಿರ್ದಿಷ್ಟ ಹದದ ಮಿಶ್ರಣವಾಗಿದೆ. ಇದು ಮಾನವನ ಕಣ್ಣಿನ ಗ್ರಹಿಕೆಯ ಮೂಲಕ ಮಾತ್ರ ಕಂಡುಬರುತ್ತದೆ.  ಈಗ ಬಳಕೆಯಲ್ಲಿರುವ ಕೂಕಬುರಾ ಕಂಪನಿಯ ಪಿಂಕ್ ಚೆಂಡುಗಳು ಮೂಲದಲ್ಲಿ ಕೆಂಪು ಬಣ್ಣವನ್ನೇ ಹೊಂದಿವೆ. ಚೆಂಡಿನ ಮೇಲೆ ಗುಲಾಬಿ ಬಣ್ಣದ ಒಂದು ಪದರವನ್ನು ಡೈ ಮೂಲಕ ಲೇಪಿಸಲಾಗಿದೆ. ಇದು ಚೆಂಡಿನ ರಕ್ಷಣಾತ್ಮಕ ಪದರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: India vs England: ಪಿಂಕ್​ ಬಾಲ್​ ಆರಂಭದಲ್ಲಿ ಸಾಕಷ್ಟು ಸ್ವಿಂಗ್ ಆಗಲಿದೆ..! ಮೊಟೆರಾ ಕ್ರೀಡಾಂಗಣದ ಹವಾಮಾನ, ಪಿಚ್​ ವರದಿ ಹೀಗಿದೆ

ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್