AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Diwali sale: ಫ್ಲಿಪ್​ಕಾರ್ಟ್​ ಬಿಗ್ ದಿವಾಳಿ ಸೇಲ್: ಐಫೋನ್ 13, ಐಫೋನ್ 12 ಮಿನಿ ಅತಿ ಕಡಿಮೆ ಬೆಲೆಗೆ ಲಭ್ಯ

iPhone 13 Offer: ಇಂದಿನಿಂದ ಫ್ಲಿಪ್​ಕಾರ್ಟ್ ಪ್ಲಸ್ ಬಳಕೆದಾರರಿಗೆ ಬಿಗ್ ದಿವಾಳಿ ಸೇಲ್ (Flipkart Big Diwali sale) ಲೈವ್ ಆಗಿದೆ. ಈ ಸೇಲ್​ನಲ್ಲಿ ಮುಖ್ಯವಾಗಿ ಹಳೆಯ ಐಫೋನ್ ಮಾಡೆಲ್​ಗೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ.

Big Diwali sale: ಫ್ಲಿಪ್​ಕಾರ್ಟ್​ ಬಿಗ್ ದಿವಾಳಿ ಸೇಲ್: ಐಫೋನ್ 13, ಐಫೋನ್ 12 ಮಿನಿ ಅತಿ ಕಡಿಮೆ ಬೆಲೆಗೆ ಲಭ್ಯ
Big Diwali Sale and iPhone 13
Follow us
TV9 Web
| Updated By: Vinay Bhat

Updated on: Oct 18, 2022 | 12:51 PM

ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ. ಫ್ಲಿಪ್‌ಕಾರ್ಟ್ (Flipkart) ನಲ್ಲಿ ಇಂದಿನಿಂದ ಪ್ಲಸ್ ಬಳಕೆದಾರರಿಗೆ ಬಿಗ್ ದಿವಾಳಿ ಸೇಲ್ (Flipkart Big Diwali sale) ಲೈವ್ ಆಗಿದೆ. ಉಳಿದ ಬಳಕೆದಾರರು ನಾಳೆಯಿಂದ (ಅ. 18) ಈ ಮೇಳದ ಪ್ರಯೋಜನ ಪಡೆಯಬಹುದು. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಲಭ್ಯವಾಗಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days Sale) ಮೊನ್ನೆಯಷ್ಟೆ ಮುಕ್ತಾಯಗೊಂಡೊತ್ತು. ಇದೀಗ ಫ್ಲಿಪ್‌ಕಾರ್ಟ್‌ ದೀಪಾವಳಿ ಪ್ರಯುಕ್ತ ಮತ್ತೊಂದು ವಿಶೇಷ ಸೇಲ್‌ ಶುರು ಮಾಡಿರುವುದು ಆನ್​ಪ್ರಿಯರಲ್ಲಿ ಸಂತಸ ಮೂಡಿದೆ. ಈ ಸೇಲ್​ನಲ್ಲಿ ಮುಖ್ಯವಾಗಿ ಹಳೆಯ ಐಫೋನ್ ಮಾಡೆಲ್​ಗೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ.

ಐಫೋನ್ 13 128GB ಮಾಡೆಲ್ ಅನ್ನು ನೀವು ದೀವಾಳಿ ಸೇಲ್​ನಲ್ಲಿ 69,990 ರೂ. ಬದಲಾಗಿ 59,990 ರೂ. ಗೆ ಖರೀದಿಸಬಹುದು. ಇದರ ಮೇಲೆ 10,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಅಂತೆಯೆ ಎಸ್​ಬಿಐ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು 2,000 ರೂ. ಗಳ ಡಿಸ್ಕೌಂಟ್ ಪಡೆಯಬಹುದು. ಹಳೆಯ ಐಫೋನನ್ನೇ ಎಕ್ಸ್​ಚೇಂಜ್ ಮಾಡುತ್ತಿರಿ ಎಂದಾದರೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಐಫೋನ್ 13 ನಿಮ್ಮದಾಗಿಸಬಹುದು. ಹಿಂದಿನ ಸೇಲ್​ನಲ್ಲಿ ಐಫೋನ್ 13 ಕೇವಲ 49,000 ರೂ. ಗೆ ಮಾರಾಟ ಆಗುತ್ತಿತ್ತು. ಆದರೆ, ಇದು ಕೆಲವೇ ಸಮಯದಲ್ಲಿ ಸೋಲ್ಡ್ ಔಟ್ ಆಗಿತ್ತು. ಹೀಗಾಗಿ ನೀವು ಐಫೋನ್ 13 ಖರೀದಿಸುವ ಪ್ಲಾನ್​ನಲ್ಲಿ ಇದ್ದರೆ ಆದಷ್ಟು ಬೇಗ ಬುಕ್ ಮಾಡುವುದು ಉತ್ತಮ.

ಇನ್ನು ಐಫೋನ್ 12 ಮಿನಿ 36,990 ರೂ. ಗೆ ಮಾರಾಟ ಕಂಡರೆ, ಐಫೋನ್ 11 31,990 ರೂ. ಗೆ ಸೇಲ್ ಆಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ನೀವು ಹೊಸ ಮಾಡೆಲ್ ಐಫೋನ್ 14 ಮೇಲೆ ಕಣ್ಣಿಟ್ಟಿದ್ದರೆ 79,9000 ರೂ. ಗೆ ಖರೀದಿಸಬಹುದು. ಇದಕ್ಕಿಂತ ಐಫೋನ್ 12 ಅಥವಾ ಐಫೋನ್ 13 ಉತ್ತಮ ಆಯ್ಕೆ ಎಂಬುದು ಅನೇಕರ ಅಭಿಪ್ರಾಯ. ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಜೊತೆಗೆ ಇದು 5G ಬೆಂಬಲ ಕೂಡ ಪಡೆದುಕೊಂಡಿದೆ. ಐಫೋನ್ 13 ಹಾಗೂ ಐಫೋನ್ 14 ಫೀಚರ್ಸ್ ಕೂಡ ಬಹುತೇಕ ಒಂದೇ ಇದೆ.

ಇದನ್ನೂ ಓದಿ
Image
WhatsApp Ban: ಎಚ್ಚರ: ವಾಟ್ಸ್​ಆ್ಯಪ್​ನಲ್ಲಿ ಅತಿ ಹೆಚ್ಚು ಗುಡ್​ ಮಾರ್ನಿಂಗ್ ಮೆಸೇಜ್ ಮಾಡುತ್ತಿದ್ದೀರಾ?: ಅಕೌಂಟ್ ಬ್ಯಾನ್ ಆಗುತ್ತದೆ
Image
Redmi A1+: ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ ರೆಡ್ಮಿ A1+ ಈಗ ಖರೀದಿಗೆ ಲಭ್ಯ
Image
Moto E22s: ಕೇವಲ 8,999 ರೂ. ಗೆ ಮೋಟೋ ಕಂಪನಿಯಿಂದ ಬಂಪರ್ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ
Image
PM Kisan Samman Nidhi: ಪಿಎಂ ಕಿಸಾನ್​ ಯೋಜನೆಯ 12ನೇ ಕಂತು ಬಿಡುಗಡೆ: ಹಣ ಬಂದಿದೆಯೇ ಎಂದು ನೋಡುವುದು ಹೇಗೆ?

ಇನ್ನು ಬಿಗ್ ದೀಪಾವಳಿ ಸೇಲ್‌ ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ. ದೀಪಾವಳಿ ಸೇಲ್​ನಲ್ಲಿ ಗ್ಯಾಜೆಟ್‌ಗಳ ಮೇಲೆ ಬರೋಬ್ಬರಿ 45% ರಷ್ಟು ರಿಯಾಯಿತಿ ನೀಡಲಾಗಿದೆ. ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆಫರ್‌ಗಳು ಇರುತ್ತವೆ.

ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 80 ರ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ರಿಯಾಯಿತಿ ಒಳಗೆ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಪ್ರಾಟಕ್ಟ್ ಸೇರಿವೆ. ಲ್ಯಾಪ್‌ಟಾಪ್‌ ಮೇಲೆ ಶೇ. 50 ರಷ್ಟು ರಿಯಾಯಿತಿ ಇದೆ. ಬಲಿಷ್ಠವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ರೂ. 50,990 ರಿಂದ ಮಾರಾಟವಾಗುತ್ತವೆ. ಪ್ರಿಂಟರ್‌ಗಳು ಮತ್ತು ಮಾನಿಟರ್‌ಗಳು ಮಾರಾಟದಲ್ಲಿ ಶೇ. 80 ರಷ್ಟು ರಿಯಾಯಿತಿ ಲಭ್ಯ ಇರುತ್ತವೆ.

ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್