ಹೊಸ ಅವತಾರದಲ್ಲಿ ಮಾರುಕಟ್ಟೆಯಲ್ಲಿ ಪುನಃ ರಿಲೀಸ್ ಆಯಿತು ಮೋಟೋರೊಲಾ 40 ಆಲ್ಟ್ರಾ

Motorola Razr 40 Ultra in New Color: ಮೋಟೋರೊಲಾ ರೇಜರ್ 40 ಆಲ್ಟ್ರಾ ಅನ್ನು ಭಾರತದಲ್ಲಿ ಒಂದೇ 8GB + 256GB ರೂಪಾಂತರದಲ್ಲಿ ನೀಡಲಾಗುತ್ತದೆ. ಆರಂಭದಲ್ಲಿ, ಈ ಫೋನ್ ಅನ್ನು 89,999 ರೂ. ಬೆಲೆಗೆ ಮತ್ತು ಇನ್ಫೈನೈಟ್ ಬ್ಲ್ಯಾಕ್, ವಿವಾ ಮೆಜೆಂಟಾ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಆಗಿತ್ತು. ಈ ಫೋನ್ ಈಗ ಗ್ಲೇಸಿಯರ್ ಬ್ಲೂ ಬಣ್ಣದಲ್ಲಿ ಲಭ್ಯವಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಯಲ್ಲಿ ಪುನಃ ರಿಲೀಸ್ ಆಯಿತು ಮೋಟೋರೊಲಾ 40 ಆಲ್ಟ್ರಾ
Motorola Razr 40 Ultra
Follow us
|

Updated on: Nov 13, 2023 | 2:07 PM

ಪ್ರಸಿದ್ಧ ಮೋಟೋರೊಲಾ ಕಂಪನಿ ಈ ವರ್ಷದ ಜುಲೈನಲ್ಲಿ ಭಾರತದಲ್ಲಿ ಮೋಟೋರೊಲಾ ರೇಜರ್ 40 ಆಲ್ಟ್ರಾ (Motorola Razr 40 Ultra) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿತ್ತು. ಈ ಫೋನ್ ಸ್ನಾಪ್​ಡ್ರಾಗನ್ 8+ Gen 1 SoC ಮತ್ತು 30W ವೈರ್ಡ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 3,800mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು ಮೋಟೋರೊಲಾ ರೇಜರ್ 40 ಜೊತೆಗೆ ಬಿಡುಗಡೆಗೊಂಡಿತ್ತು. ರೇಜರ್ 40 ಆಲ್ಟ್ರಾ ಆರಂಭದಲ್ಲಿ ಒಂದೇ ಸಂಗ್ರಹಣೆಯಲ್ಲಿ ಮತ್ತು ಎರಡು ಬಣ್ಣದ ಆಯ್ಕೆಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಈ ಫೋನ್ ಮೂರನೇ ಹೊಸ ಬಣ್ಣದಲ್ಲಿ ಪರಿಚಯಿಸಲಾಗಿದೆ.

ಭಾರತದಲ್ಲಿ ಮೋಟೋರೊಲಾ ರೇಜರ್ 40 ಆಲ್ಟ್ರಾ ಬೆಲೆ, ಲಭ್ಯತೆ:

ಮೋಟೋರೊಲಾ ರೇಜರ್ 40 ಆಲ್ಟ್ರಾ ಅನ್ನು ಭಾರತದಲ್ಲಿ ಒಂದೇ 8GB + 256GB ರೂಪಾಂತರದಲ್ಲಿ ನೀಡಲಾಗುತ್ತದೆ. ಆರಂಭದಲ್ಲಿ, ಈ ಫೋನ್ ಅನ್ನು 89,999 ರೂ. ಬೆಲೆಗೆ ಮತ್ತು ಇನ್ಫೈನೈಟ್ ಬ್ಲ್ಯಾಕ್, ವಿವಾ ಮೆಜೆಂಟಾ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಆಗಿತ್ತು. ಈ ಫೋನ್ ಈಗ ಗ್ಲೇಸಿಯರ್ ಬ್ಲೂ ಬಣ್ಣದಲ್ಲಿ ಲಭ್ಯವಿದೆ. ಇದರ ಜೊತೆಗೆ ಆಫರ್ ಕೂಡ ಘೋಷಣೆ ಮಾಡಲಾಗಿದ್ದು, ಅಮೆಜಾನ್‌ನಲ್ಲಿ ಕೇವಲ 79,999 ರೂ. ಗೆ ಖರೀದಿಸಬಹುದು.

ಬಜೆಟ್ ಪ್ರಿಯರಿಗೆ ಬಂತು ಬಂಪರ್ ಫೋನ್: ಇನ್ಫಿನಿಕ್ಸ್ ಸ್ಮಾರ್ಟ್​ 8 ಬಿಡುಗಡೆ, ಬೆಲೆ ಎಷ್ಟು?

ಇದನ್ನೂ ಓದಿ
Image
ಇಷ್ಟು ಹಣ ಕೊಟ್ಟರೆ ಸಾಕು ನಿಮ್ಮಿಷ್ಟದ ಮೊಬೈಲ್ ನಂಬರ್ ಪಡೆಯಬಹುದು
Image
ಸ್ಮಾರ್ಟ್​ಫೋನ್​ಗಳಿಗೆ ಜೀವಿತಾವಧಿ ಇದೆಯೇ?: ಫೋನನ್ನು ಎಷ್ಟು ಸಮಯ ಬಳಸಬಹುದು?
Image
ಮಂಗಳೂರು, ಮೈಸೂರು ಸೇರಿ 115 ಕಡೆ ಜಿಯೋ ಏರ್​ಫೈಬರ್ ಆರಂಭ
Image
ಹೊಸ ವರ್ಷಕ್ಕೆ ಬರುತ್ತಿದೆ ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ 12 5G ಫೋನ್

ಮೋಟೋರೊಲಾ ರೇಜರ್ 40 ಆಲ್ಟ್ರಾ ಫೀಚರ್ಸ್:

ಮೋಟೋರೊಲಾ ಹೈ-ಎಂಡ್ ಕ್ಲಾಮ್‌ಶೆಲ್ ಫೋಲ್ಡಬಲ್ 6.9-ಇಂಚಿನ ಪೂರ್ಣ-HD+ pOLED ಒಳಗಿನ ಡಿಸ್‌ಪ್ಲೇಯನ್ನು 165Hz ರಿಫ್ರೆಶ್ ದರದೊಂದಿಗೆ ಮತ್ತು 1,200 nits ವರೆಗಿನ ಗರಿಷ್ಠ ಬ್ರೈಟ್​ನೆಸ್ ಜೊತೆಗೆ ನೀಡಲಾಗಿದೆ. ಹೊರಗಿನ ಡಿಸ್ ಪ್ಲೇಯು 1,056×1,066 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 144Hz ನ ರಿಫ್ರೆಶ್ ದರದೊಂದಿಗೆ 3.6-ಇಂಚಿನ pOLED ಪ್ಯಾನೆಲ್​ನಲ್ಲಿದೆ. ಮೋಟೋರೊಲಾ ರೇಜರ್ 40 ಆಲ್ಟ್ರಾ ಕವರ್ ಪ್ಯಾನೆಲ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ.

ಮೋಟೋರೊಲಾ ರೇಜರ್ 40 ಆಲ್ಟ್ರಾ ಸ್ಮಾರ್ಟ್​ಫೋನ್ 4nm ಕ್ವಾಲ್ಕಂ ಸ್ನಾಪ್​ಡ್ರಾಗನ್ 8+ Gen 1 SoC ಜೊತೆಗೆ Adreno 730 GPU, 8GB LPDDR5 RAM ಮತ್ತು 256GB UFS 3.1 ಸ್ಟೋರೇಜ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಫೋನ್ ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ರೇಜರ್ 40 ಆಲ್ಟ್ರಾದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 12-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿದೆ. 32-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರುವ ಒಳಗಿನ ಡಿಸ್ಪ್ಲೇಯಲ್ಲಿ ಕ್ಯಾಮೆರಾವನ್ನು ಇರಿಸಲಾಗಿದೆ.

ಮೋಟೋರೊಲಾ ರೇಜರ್ 40 ಆಲ್ಟ್ರಾದಲ್ಲಿ 30W ವೈರ್ಡ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 3,800mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್‌ನೊಂದಿಗೆ ಬರುತ್ತದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?