AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನ ಯುದ್ಧ ಆರಂಭವಾಗಿ ಇಂಟರ್ನೆಟ್ ಸ್ಥಗಿತಗೊಂಡರೂ ವಾಟ್ಸ್ಆ್ಯಪ್ ಉಪಯೋಗಿಸಬಹುದು: ಹೇಗೆ ಗೊತ್ತೇ?

WhatsApp proxy Use: ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಸಹ ನೀವು ವಾಟ್ಸ್ಆ್ಯಪ್ ಅನ್ನು ಬಳಸಬಹುದಾದ ಒಂದು ಮಾರ್ಗವೆಂದರೆ ಪ್ರಾಕ್ಸಿ. ನಿಮ್ಮ ದೇಶ ಅಥವಾ ನಗರದಲ್ಲಿ ವಾಟ್ಸ್ಆ್ಯಪ್ ಬ್ಲಾಕ್ ಆಗಿದ್ದರೆ, ಪ್ರಾಕ್ಸಿ ಸರ್ವರ್ ಮೂಲಕ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿರುವ ಸರ್ವರ್‌ಗೆ ಸಂಪರ್ಕಿಸಿ ನೀವು ವಾಟ್ಸ್ಆ್ಯಪ್ ಅನ್ನು ಬಳಸುವಂತೆ ಮಾಡುತ್ತದೆ.

ಭಾರತ-ಪಾಕಿಸ್ತಾನ ಯುದ್ಧ ಆರಂಭವಾಗಿ ಇಂಟರ್ನೆಟ್ ಸ್ಥಗಿತಗೊಂಡರೂ ವಾಟ್ಸ್ಆ್ಯಪ್ ಉಪಯೋಗಿಸಬಹುದು: ಹೇಗೆ ಗೊತ್ತೇ?
Whatsapp Froxy
Vinay Bhat
|

Updated on: May 08, 2025 | 4:38 PM

Share

ಬೆಂಗಳೂರು (ಮೇ. 08): ಭಾರತ ಮತ್ತು ಪಾಕಿಸ್ತಾನದ (India Pakistan) ನಡುವೆ ಯುದ್ಧದಂತಹ ಪರಿಸ್ಥಿತಿ ಎದುರಾದರೆ, ಮೊದಲ ಪರಿಣಾಮ ಇಂಟರ್ನೆಟ್ ಮತ್ತು ಮೊಬೈಲ್ ನೆಟ್‌ವರ್ಕ್ ಮೇಲೆ ಆಗಬಹುದು. ಯಾಕೆಂದರೆ ಅಂತಹ ಸಂದರ್ಭಗಳಲ್ಲಿ, ವದಂತಿಗಳು ಹರಡುವುದನ್ನು ತಡೆಯಲು ಸರ್ಕಾರಗಳು ಹೆಚ್ಚಾಗಿ ಇಂಟರ್ನೆಟ್, ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್​ಆ್ಯಪ್​-ಇನ್‌ಸ್ಟಾಗ್ರಾಮ್‌ನಂತಹ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುತ್ತವೆ. ಆದರೆ, ಇಂಟರ್ನೆಟ್ ಸ್ಥಗಿತಗೊಂಡರೂ ನೀವು ವಾಟ್ಸ್​ಆ್ಯಪ್​ ಬಳಸಲು ಸಾಧ್ಯವಾಗುತ್ತದೆ. ಇದರಲ್ಲಿ ನಿಮಗೆ ಸಹಾಯ ಮಾಡಲು ವಿಶೇಷ ವೈಶಿಷ್ಟ್ಯವಿದೆ, ಅದರ ಹೆಸರು ಪ್ರಾಕ್ಸಿ ವೈಶಿಷ್ಟ್ಯ.

ವಾಟ್ಸ್​ಆ್ಯಪ್​ ಪ್ರಾಕ್ಸಿ ಫೀಚರ್ಸ್ ಎಂದರೇನು?

ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಸಹ ನೀವು ವಾಟ್ಸ್​ಆ್ಯಪ್​ ಅನ್ನು ಬಳಸಬಹುದಾದ ಒಂದು ಮಾರ್ಗವೆಂದರೆ ಪ್ರಾಕ್ಸಿ. ನಿಮ್ಮ ದೇಶ ಅಥವಾ ನಗರದಲ್ಲಿ ವಾಟ್ಸ್​ಆ್ಯಪ್​ ಬ್ಲಾಕ್ ಆಗಿದ್ದರೆ, ಪ್ರಾಕ್ಸಿ ಸರ್ವರ್ ಮೂಲಕ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿರುವ ಸರ್ವರ್‌ಗೆ ಸಂಪರ್ಕಿಸಿ ನೀವು ವಾಟ್ಸ್​ಆ್ಯಪ್​ ಅನ್ನು ಬಳಸುವಂತೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಪ್ರಾಕ್ಸಿ ಎಂಬುದು ವಾಟ್ಸ್​ಆ್ಯಪ್​ ಅನ್ನು ಮತ್ತೆ ಚಲಾಯಿಸಲು ಒಂದು ರಹಸ್ಯ ಮಾರ್ಗವಾಗಿದೆ.

ಇಂಟರ್ನೆಟ್ ಇಲ್ಲದೆ ವಾಟ್ಸ್​ಆ್ಯಪ್​ ಹೇಗೆ ಕೆಲಸ ಮಾಡುತ್ತದೆ?

ಇಂಟರ್ನೆಟ್ ಇಲ್ಲದೆಯೇ ವಾಟ್ಸ್​ಆ್ಯಪ್​ ಬಳಸಲು ಈ ಹಂತಗಳನ್ನು ಅನುಸರಿಸಿ. ಇದಕ್ಕಾಗಿ ನೀವು ಪ್ರಾಕ್ಸಿ ವೈಶಿಷ್ಟ್ಯವನ್ನು ಬಳಸಬಹುದು. ಇದಲ್ಲದೆ, ನೀವು ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ವೆಬ್ ವಾಟ್ಸಾಪ್ ಅನ್ನು ಬಳಸಬಹುದು.

ಇದನ್ನೂ ಓದಿ
Image
ಬಿಡುಗಡೆಯಾಗಿದೆ ಬರೋಬ್ಬರಿ 6000mAh ಬ್ಯಾಟರಿಯ ಹೊಸ ಬಜೆಟ್ ಸ್ಮಾರ್ಟ್​ಫೋನ್
Image
ಬಹುಬೇಡಿಕೆಯ ವೈಶಿಷ್ಟ್ಯ: ವಾಟ್ಸ್ಆ್ಯಪ್ ವೆಬ್ ಬಳಸುವವರಿಗೆ ಬಂಪರ್ ಸುದ್ದಿ
Image
ನಿಮ್ಮ ಜಿಮೇಲ್ ಖಾತೆ ಹ್ಯಾಕ್ ಮಾಡಲಾಗಿದೆಯೇ?: ಈ ಟ್ರಿಕ್ ಮೂಲಕ ತಿಳಿದುಕೊಳ್ಳಿ
Image
ಮನೆಯ ಮೂಲೆ ಮೂಲೆಯಲ್ಲೂ ವೈಫೈ ಸಿಗ್ನಲ್ ಸಿಗುತ್ತೆ: ಈ 5 ಟ್ರಿಕ್ ಪ್ರಯತ್ನಿಸಿ

ಪ್ರಾಕ್ಸಿ ವೈಶಿಷ್ಟ್ಯವನ್ನು ಪಡೆಯಲು, ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರಾಕ್ಸಿ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ. ಅಪ್ಲಿಕೇಶನ್ ಅನ್ನು ಪ್ರಾಕ್ಸಿ ನೆಟ್‌ವರ್ಕ್‌ಗೆ ಸಂಪರ್ಕಪಡಿಸಿ. ಆದರೆ ಫೋನ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರಬಾರದು ಎಂಬುದನ್ನು ನೆನಪಿನಲ್ಲಿಡಿ.

ಪ್ರಾಕ್ಸಿ ವೈಶಿಷ್ಟ್ಯವು ಗೌಪ್ಯತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಇದರಲ್ಲಿ ನಿಮ್ಮ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ಆದರೆ ನೀವು ಥರ್ಡ್ ಪಾರ್ಟಿ ಪ್ರಾಕ್ಸಿಯನ್ನು ಬಳಸಿದರೆ, ನಿಮ್ಮ IP ವಿಳಾಸವನ್ನು ಪೂರೈಕೆದಾರರೊಂದಿಗೆ ಹಂಚಿಕೊಳ್ಳಬಹುದು.

Realme C75 5G: ಭಾರತದಲ್ಲಿ ಬಿಡುಗಡೆಯಾಗಿದೆ ಬರೋಬ್ಬರಿ 6000mAh ಬ್ಯಾಟರಿಯ ಹೊಸ ಬಜೆಟ್ ಸ್ಮಾರ್ಟ್​ಫೋನ್

ಪ್ರಾಕ್ಸಿ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಇಂಟರ್ನೆಟ್ ಅಥವಾ ವಾಟ್ಸ್​ಆ್ಯಪ್ ಸರ್ವರ್ ನಿರ್ಬಂಧಿಸಲ್ಪಟ್ಟಾಗ, ನೀವು ಬೇರೆ ದೇಶದಲ್ಲಿ ಚಾಲನೆಯಲ್ಲಿರುವ ಪ್ರಾಕ್ಸಿ ಸರ್ವರ್ ಅನ್ನು ಸೇರಿಸಬಹುದು. ಇದು ನಿಮ್ಮ ವಾಟ್ಸ್​ಆ್ಯಪ್ ಅನ್ನು ಅದೇ ಮಾರ್ಗಕ್ಕೆ ಸಂಪರ್ಕಿಸುತ್ತದೆ ಮತ್ತು ನಂತರ ಸಂದೇಶ ಕಳುಹಿಸುವಿಕೆ ಪ್ರಾರಂಭವಾಗುತ್ತದೆ. ಆದಾಗ್ಯೂ, ನಿಮ್ಮ ದೇಶದ ಸರ್ವರ್‌ನಿಂದ ಬೇರೆ ದೇಶದ ಸರ್ವರ್‌ಗೆ ಸಂಪರ್ಕ ಸಾಧಿಸುವುದು ತುಂಬಾ ಅಪಾಯಕಾರಿ ಎಂಬುದು ನೆನಪಿರಲಿ.

ವಾಟ್ಸ್​ಆ್ಯಪ್ ವೆಬ್ ಬಳಸುವವರಿಗೆ ಬಂಪರ್ ಸುದ್ದಿ:

ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್ ಬಳಸುತ್ತಿದ್ದರೆ ನಿಮಗೆ ಅತ್ಯುತ್ತಮವಾದ ಫೀಚರ್ ಒಂದು ಸಿಗಲಿದೆ. ಇಲ್ಲಿಯವರೆಗೆ ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಮಾತ್ರ ಧ್ವನಿ ಕರೆಗಳು ಮತ್ತು ವಿಡಿಯೋ ಕರೆಗಳನ್ನು ಮಾಡಬಹುದಾಗಿತ್ತು, ಆದರೆ ಈಗ ಕೋಟ್ಯಂತರ ವಾಟ್ಸ್​ಆ್ಯಪ್ ಬಳಕೆದಾರರು ವೆಬ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಲಿದ್ದಾರೆ.  ಈ ಹಿಂದೆ ವೆಬ್​ನವರು ಕರೆ ಮಾಡಲು ವಿಂಡೋಸ್ ಅಥವಾ ಮ್ಯಾಕ್ ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿತ್ತು. ಆದರೆ ಈಗ ವಾಟ್ಸ್​ಆ್ಯಪ್​​​ನ ಎಲ್ಲಾ ವೆಬ್ ಬಳಕೆದಾರರು ಯಾವುದೇ ಅಪ್ಲಿಕೇಶನ್‌ನ ಸಹಾಯವಿಲ್ಲದೆ ನೇರ ಧ್ವನಿ ಕರೆ ಮತ್ತು ವಿಡಿಯೋ ಕರೆ ಮಾಡಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​