
KMF Nandini
ಕರ್ನಾಟಕ ಹಾಲು ಒಕ್ಕೂಟ ಆರಂಭವಾಗಿ 50 ವರ್ಷ ಆಗಿದೆ. ವಿಶ್ವಬ್ಯಾಂಕ್ನ ಡೇರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಹಾಯವಾಗಿ 1974-75ರಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿತ್ತು. ಹತ್ತು ವರ್ಷದ ಬಳಿಕ ಅಂದರೆ 1984ರಲ್ಲಿ ಇದರ ಹೆಸರನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ ಅಥವಾ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಎಂದು ಬದಲಿಸಲಾಯಿತು. ಕೆಎಂಎಫ್ನಲ್ಲಿ ಇವತ್ತು ರಾಜ್ಯದ ವಿವಿಧ 14 ಹಾಲು ಒಕ್ಕೂಟಗಳು ಒಳಗೊಂಡಿವೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಲು ಸಹಕಾರ ಸಂಸ್ಥೆಗಳಿದ್ದು ಬೃಹತ್ ನೆಟ್ವರ್ಕ್ ಆಗಿ ರೂಪುಗೊಂಡಿದೆ. ನಂದಿನಿ ಎಂಬುದು ಕೆಎಂಎಫ್ ಉತ್ಪನ್ನಗಳ ಕಾರ್ಪೊರೇಟ್ ಬ್ರ್ಯಾಂಡಿಂಗ್ ಆಗಿದೆ. 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆಎಂಎಫ್ ಘೋಷಿಸಿತು
ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ವಿತರಣೆಗೆ ಬಮೂಲ್ ಪ್ರಸ್ತಾಪ
ಬಮೂಲ್ ನಿರ್ದೇಶಕ ಡಿಕೆ ಸುರೇಶ್ ಅವರು ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ಪೂರೈಸುವ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ. ಪೌಡರ್ ಹಾಲಿನ ದುರ್ಬಳಕೆ ತಡೆಯಲು ಮತ್ತು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ಒದಗಿಸಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಮುಂತಾದ ರುಚಿಕರವಾದ ಫ್ಲೇವರ್ಗಳಲ್ಲಿ ಹಾಲು ವಿತರಿಸಲು ಚಿಂತನೆ ನಡೆಸಲಾಗಿದೆ.
- Harish GR
- Updated on: Jul 24, 2025
- 6:59 am
Nandini Milk: ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್, ದೇಶದಲ್ಲೇ ಮೊದಲ ಪ್ರಯತ್ನ
ನಂದಿನಿ ಹಾಲು: ಪರಿಸರಕ್ಕೆ ಮಾರಕವಾಗಿದ್ದ ಪಾಲಿಥಿನ್ ಹಾಲಿನ ಪ್ಯಾಕೆಟ್ಗಳ ಬದಲಿಗೆ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಹಾಲಿನ ಕವರ್ಗಳನ್ನು ಬಳಕೆ ಮಾಡಲು ಕೆಎಂಎಫ್ ಹೆಜ್ಜೆ ಇಟ್ಟಿದ್ದು, ಇದು ದೇಶದಲ್ಲೇ ಮೊದಲು. ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಈ ಪ್ರಯತ್ನ ಇತಿಹಾಸದಲ್ಲಿ ಮಾತ್ರವಲ್ಲದೆ ದೇಶದ ಹಾಲು ಉದ್ಯಮದಲ್ಲೇ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ.
- Ramesh B Jawalagera
- Updated on: Jul 18, 2025
- 4:24 pm
ರಾಬಕೊವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಗೆಲುವು; ಮತ್ತೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು ಮಾಡಿದ ಭೀಮಾ ನಾಯ್ಕ್
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಎಂಎಫ್ ಮಾಜಿ ಅಧ್ಯಕ್ಷ ಎಲ್.ಬಿ.ಪಿ. ಭೀಮಾ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ಅವರು ಬಳ್ಳಾರಿಯಿಂದ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ನಡುವೆ ಲಾಬಿ ಜೋರಾಗಿದೆ.
- Vinayak Badiger
- Updated on: Jul 10, 2025
- 8:59 pm
ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!
ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಜನರ ಮೆಚ್ಚುಗೆ ಗಳಿಸಿರುವ ನಂದಿನಿ ಹಾಲಿಗೆ ಇನ್ಮುಂದೆ ಹೊಸ ರೂಪ ಬರುವ ಸೂಚನೆ ಸಿಕ್ಕಿದೆ. ಈಗ ಪಾಲಿಥಿನ್ ಕವರ್ನಲ್ಲಿ ಪ್ಯಾಕ್ ಆಗಿ ಹೊರಬರುತ್ತಿರುವ ನಂದಿನಿ ಹಾಲಿಗೆ ಇದೀಗ ಪರಿಸರಸ್ನೇಹಿ ಟಚ್ ಕೊಡಲು ಬಮೂಲ್ ಮುಂದಾಗಿದೆ. ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ವಿಭಿನ್ನ ತಂತ್ರಜ್ಞಾನ ಬಳಸಿ ಪ್ಯಾಕ್ ಮಾಡುವ ಸುಳಿವು ನೀಡಿದೆ.
- Shanthamurthy
- Updated on: Jun 21, 2025
- 9:56 am
ಅಮುಲ್ ಡೈರಿ ಉತ್ಪನ್ನಗಳ ಮಾರಾಟಕ್ಕೆ ಕೇವಲ ಎರಡು ಮೆಟ್ರೋ ನಿಲ್ದಾಣಗಳನ್ನು ಮಾತ್ರ ನೀಡಲಾಗಿದೆ: ಶಿವಕುಮಾರ್
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯುಎಸ್ ತೆರಳಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ತಾನು ಇಂಧನ ಸಚಿವನಾಗಿದ್ದಾಗಲೂ ವಿದೇಶದಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದರಲ್ಲಿ ಭಾಗಿಯಾಗದಂತೆ ತಡೆಯಲಾಗಿತ್ತು, ಆದರೆ ಅದೇ ಸಮ್ಮೇಳನದಲ್ಲಿ ಬಿಜೆಪಿ ನಿಯೋಗವೊಂದು ಭಾಗಿಯಾಗಲು ಅನುಮತಿ ನೀಡಲಾಗಿತ್ತು, ಕೇಂದ್ರದ ಧೋರಣೆಯೇ ಹಾಗೆ, ಕಾಮೆಂಟ್ ಮಾಡೋದು ಇಷ್ಟವಿಲ್ಲ ಎಂದರು.
- Arun Belly
- Updated on: Jun 18, 2025
- 7:17 pm
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆಗೆ ಅನುಮತಿ: ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಅಮುಲ್ ಉತ್ಪನ್ನ ಮಳಿಗೆಗಳನ್ನು ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪಿಸುವ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕೇವಲ ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್ಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳಿಗೆ ಕೆಎಂಎಫ್ಗೆ ಟೆಂಡರ್ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
- Ganapathi Sharma
- Updated on: Jun 18, 2025
- 1:03 pm
ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್ಸಿಎಲ್: ಸಾರ್ವಜನಿಕರಿಂದ ಆಕ್ಷೇಪ
ಬೆಂಗಳೂರಿನ ಹತ್ತು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪನೆ ಕುರಿತು ಭಾರಿ ಚರ್ಚೆ ಏರ್ಪಟ್ಟಿದೆ. ಕರ್ನಾಟಕದ ನಂದಿನಿ ಇರುವಾಗ ಗುಜರಾತ್ನ ಅಮುಲ್ಗೆ ಏಕೆ ಅವಕಾಶ ಎಂದು ಆಕ್ರೋಶವಾಗುತ್ತಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
- Gangadhar Saboji
- Updated on: Jun 18, 2025
- 12:00 pm
ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿ ದಾಖಲೆ ಬರೆದ ಕೆಎಂಎಫ್
ಹಾಲು ಸಂಗ್ರಹದಲ್ಲಿ ಕೆಎಂಎಫ್ ಮತ್ತೆ ದಾಖಲೆ ಬರೆದಿದೆ. ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಕಳೆದ ವರ್ಷದ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ. ಮುಂಗಾರು ಮಳೆ ಚುರುಕು, ಹಸಿರು ಹುಲ್ಲು ಹಾಗೂ ಮೇವಿನ ಲಭ್ಯತೆಯ ಕಾರಣದಿಂದ ಹಾಲು ಉತ್ಪಾದನೆ ಹೆಚ್ಚಳವಾಗಿರುವುದು ಹಾಲು ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಎಂಎಫ್ ತಿಳಿಸಿದೆ.
- Ganapathi Sharma
- Updated on: Jun 4, 2025
- 11:14 am
ಎಲ್ಲ ವಯಸ್ಕರಿಗೂ ಇಷ್ಟವಾಗುವ ಕೇಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF
ಅಂತಾರಾಷ್ಟ್ರೀಯ ಹಾಲು ದಿನಾಚರಣೆಯಂದು, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) 18 ಹೊಸ ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಫಿನ್ಸ್, ಕೇಕ್ಗಳು (ಸ್ಲೈಸ್, ಸ್ಪಾಂಜ್, ಬಾರ್) ಸೇರಿವೆ. ವಿವಿಧ ರುಚಿಗಳಲ್ಲಿ ಲಭ್ಯವಿರುವ ಈ ಉತ್ಪನ್ನಗಳು ಗ್ರಾಹಕರಿಗೆ ಹೊಸ ಅನುಭವ ನೀಡಲಿವೆ ಎಂದು ಕೆಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಕೆಎಂಎಫ್ ಪನ್ನೀರ್ ಖಾದ್ಯ ಸ್ಪರ್ಧೆಯನ್ನೂ ಆಯೋಜಿಸಿತ್ತು.
- Vivek Biradar
- Updated on: Jun 1, 2025
- 10:07 pm
ಬಮೂಲ್ ಅಧ್ಯಕ್ಷನಾಗಲು ಚುನಾವಣೆ ಎದುರಿಸಬೇಕು ಮತ್ತು ಪಕ್ಷದ ನಾಯಕರ ಸಮ್ಮತಿ ಬೇಕು: ಡಿಕೆ ಸುರೇಶ್
ನಿನ್ನೆ ಹೊಸಪೇಟೆಯಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಸಾಧನಾ ಸಮಾವೇಶದ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಕಟುವಾದ ಟ್ವೀಟ್ಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಹೇಳಿರುವುದಕ್ಕೆ ಏನು ಪ್ರತಿಕ್ರಿಯೆ ನೀಡೋದು, ಅವರೊಬ್ಬ ಕಳ್ಸಾಮಿ, ಅವರಂಥ ಹಿಟ್ ಅಂಡ್ ರನ್ ಗಿರಾಕಿಯನ್ನು ಎಲ್ಲೂ ನೋಡಿಲ್ಲ ಎಂದು ಸುರೇಶ್ ಹೇಳಿದರು.
- Arun Belly
- Updated on: May 21, 2025
- 1:12 pm