ಸುಲಭವಾಗಿ ಆನೆ ಸೊಂಡಿಲು ಮೇಲೆ ಕಾಲಿಟ್ಟು ಮೇಲೇರಿ ಕುಳಿತ ಮಾವುತ; ನಿಜ ಜೀವನದ ಬಾಹುಬಲಿ ಎಂದ ನೆಟ್ಟಿಗರು

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್​ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ.

ಸುಲಭವಾಗಿ ಆನೆ ಸೊಂಡಿಲು ಮೇಲೆ ಕಾಲಿಟ್ಟು ಮೇಲೇರಿ ಕುಳಿತ ಮಾವುತ; ನಿಜ ಜೀವನದ ಬಾಹುಬಲಿ ಎಂದ ನೆಟ್ಟಿಗರು
ಆನೆ ಮೇಲೇರಿ ಕುಳಿತ ಮಾವುತ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 01, 2022 | 8:54 AM

(viral video) ಬಾಹುಬಲಿ 2, 2017 ರ ಅತ್ಯಂತ ಪ್ರೀತಿ ಪಾತ್ರ ಭಾರತೀಯ ಮಹಾಕಾವ್ಯ ಚಲನಚಿತ್ರಗಳಲ್ಲಿ ಒಂದಾಗಿದೆ. ಅದು ಬಿಡುಗಡೆಯಾದಾಗಿನಿಂದ, ನಟ ಪ್ರಭಾಸ್‌ಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅವರ ವಿಶೇಷ ಫಿಲ್ಮಿ ಶೈಲಿಯ ಆಕ್ಷನ್ ಸೀಕ್ವೆನ್ಸ್‌ಗಳು ಅನೇಕ ಜನರನ್ನು ಚಲನಚಿತ್ರ ದೃಶ್ಯಗಳನ್ನು ಮರುಸೃಷ್ಟಿಸಲು ಕಾರಣವಾಗಿವೆ. ಪ್ರಭಾಸ್ ಅವರ ಗ್ರ್ಯಾಂಡ್ ಎಂಟ್ರಿ ದೃಶ್ಯವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನವರು ಯಶಸ್ವಿಯಾಗಲಿಲ್ಲ, ಆದರೆ ಈ ವ್ಯಕ್ತಿ ಅದನ್ನು ಹಿಂದೆಂದೂ ಯಾರೂ ಕೂಡ ಮಾಡದಂತೆ ಮಾಡಿದ್ದಾರೆ. ಹೌದು ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾವುತ ಆನೆಯ ಮೇಲೆ ಹತ್ತುವುದು ಮತ್ತು ಸವಾರಿ ಮಾಡುವುದು ಆತನಿಗೆ ಅದು ದೈನಂದಿನ ವಿಷಯ. ಆದರೆ ಅವರು ಆನೆಯನ್ನು ಹತ್ತುವುದು ಎಷ್ಟು ಸುಲಭ ಎಂಬುದು ಜನರು ಬಾಹುಬಲಿ 2ರ ಚಿತ್ರದಲ್ಲಿ ಆನೆಯನ್ನು ಪಳಗಿಸಿ ಅದರ ಸೊಂಡಿಲಿನ ಮೇಲೆ ನಿಲ್ಲುವ ದೃಶ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ವಯಸ್ಸಾದ ಮಾವುತ ಆನೆಯ ಸೊಂಡಿಲಿನ ಮೇಲೆ ಎಷ್ಟು ಅನಾಯಾಸವಾಗಿ ಹತ್ತಿ, ಕ್ರಮೇಣ ಅದರ ಮೇಲೆ ಕುಳಿತುಕೊಳ್ಳುವುದನ್ನು ನೋಡಿ ಜನರು ಆಶ್ಚರ್ಯ ಪಟ್ಟಿದ್ದು, ಆನೆ ಕೂಡ ತನ್ನ ಸೊಂಡಿಲನ್ನು ಕೆಳಕ್ಕೆ ಇಳಿಸಿ ತನ್ನ ಮಾವುತನನ್ನು ಮೇಲೆ ಏರಲು ಸಹಾಯ ಮಾಡುತ್ತದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್​ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ಜನರು ವೀಡಿಯೋವನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂದರೆ ಇದುವರೆಗೂ 28,000 ಕ್ಕೂ ಹೆಚ್ಚು ವೀಕ್ಷಣೆ ಮತ್ತು 420 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.

ಕೆಲವರು ಮಾವುತನನ್ನು ನಿಜವಾದ ಬಾಹುಬಲಿ ಎಂದು ಕರೆಯುತ್ತಿದ್ದರೆ, ಇತರರು ಪ್ರಾಣಿ ಮತ್ತು ಮನುಷ್ಯನ ನಡುವಿನ ಶುದ್ಧ ಬಂಧವನ್ನು ಶ್ಲಾಘಿಸುತ್ತಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಪ್ರಭಾಸ್ ಅವರಂತೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:

ಹೆಲಿಕಾಪ್ಟರ್ ಮೂಲಕ ವಿಜಯ್ ದೇವರಕೊಂಡ ಮಾಸ್​ ಎಂಟ್ರಿ; ಇಲ್ಲಿದೆ ವಿಡಿಯೋ

ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ