AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೈ ತುಂಬಾ ಸಂಪಾದನೆಯಿದ್ರೂ ಕೆಲಸದಲ್ಲಿ ಖುಷಿಯಿಲ್ಲ; ಭ್ರಮನಿರಸ ಅನುಭವ ಬಿಚ್ಚಿಟ್ಟ ವ್ಯಕ್ತಿ

ಕೈಯಲ್ಲೊಂದು ಕೆಲಸ, ದುಡ್ದು ಇದ್ದರೇನೇ ಮರ್ಯಾದೆ. ಆದರೆ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳಲಾಗದು. ವ್ಯಕ್ತಿಯೊಬ್ಬರು ಕಠಿಣ ಪರಿಶ್ರಮ, ಬಡ್ತಿ ಮತ್ತು ಮೌಲ್ಯಮಾಪನಗಳು ಜೀವನವನ್ನು ಸುರಕ್ಷಿತವಾಗಿಸುವುದಿಲ್ಲ. ಹೀಗಾಗಿ ಈ ಆಧುನಿಕ ಕೆಲಸವು ಅರ್ಥಹೀನವಾಗಿದೆ ಎಂದಿದ್ದಾರೆ. ಹೌದು, ಉದ್ಯೋಗಿಗಳು ಅನುಭವಿಸುವ ಭ್ರಮನಿರಸನದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಇದು ಆನ್ಲೈನ್ ನಲ್ಲಿ ಚರ್ಚೆ ಹುಟ್ಟುಹಾಕಿದೆ.

Video: ಕೈ ತುಂಬಾ ಸಂಪಾದನೆಯಿದ್ರೂ ಕೆಲಸದಲ್ಲಿ ಖುಷಿಯಿಲ್ಲ; ಭ್ರಮನಿರಸ ಅನುಭವ ಬಿಚ್ಚಿಟ್ಟ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 01, 2026 | 12:22 PM

Share

ಈಗ ಎಲ್ಲವೂ ಬದಲಾಗಿದೆ. ಕೈ ತುಂಬಾ ಸಂಪಾದನೆಯಿದೆ. ಆದರೆ ಕೆಲಸದಲ್ಲಿ (job) ನೆಮ್ಮದಿ ಖುಷಿ ನೆಮ್ಮದಿಯಂತೂ ಇಲ್ಲವೇ ಇಲ್ಲ. ಇದೀಗ ವ್ಯಕ್ತಿಯೊಬ್ಬರು ಉದ್ಯೋಗಿಗಳ ಭ್ರಮನಿರಸನದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಮೋಷನ್ ಸಿಕ್ಕಿದ್ರೂ, ಲೈಫ್ ಸೆಟ್ಲ್ ಆದ್ರೂ ತಾವು ಮಾಡುವ ಕೆಲಸದಲ್ಲಿ ಖುಷಿಯಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಮಾತನ್ನು ಒಪ್ಪಿಕೊಂಡಿದ್ದಾರೆ.

ನಾಸಿರ್ (the.headless) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಇದು ನನಗೆ ಮಾತ್ರನಾ, ಅಥವಾ ಯಾರೂ ನಿಜವಾಗಿಯೂ ತಮ್ಮ ಕೆಲಸವನ್ನು ಆನಂದಿಸುತ್ತಿಲ್ಲ ಎಂದು ಅನಿಸುತ್ತಿದೆಯೇ? ಕೆಲವು ವರ್ಷಗಳ ಹಿಂದೆ, ಕೆಲಸವು ನಿರಾಶಾದಾಯಕವಾಗಿದ್ದಿತು. ಆದರೆ ಹಣ ಸಿಗುತ್ತಿದ್ದಂತೆ ಜೀವನವು ಸ್ವಲ್ಪ ಸುರಕ್ಷಿತ ಎನಿಸಿತು. ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ, ಕಂಪನಿಗಳನ್ನು ಬದಲಾಯಿಸಿದರೂ, ಬಡ್ತಿ ಸಿಕ್ಕರೂ ಹಾಗೂ  ಮೌಲ್ಯಮಾಪನಕ್ಕಾಗಿ ಕಾಯುತ್ತಿದ್ದರೂ ತಮ್ಮ ಕೆಲಸವನ್ನು ಇಷ್ಟ ಪಡುತ್ತಿಲ್ಲ ಎಂದಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

View this post on Instagram

A post shared by Nasir (@the.headless)

ಹೀಗಾದಾಗ ಕೆಲಸಕ್ಕೆ ಸಂಬಂಧಿಸಿದ ಎಲ್ಲವೂ ಇದ್ದಕ್ಕಿದ್ದಂತೆ ಅರ್ಥಹೀನವೆನಿಸುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ, ಆದರೆ ನೀವು ಇನ್ನೂ ಸಾಕಷ್ಟು ಗಳಿಸುವುದಿಲ್ಲ. ನೀವು ಒಳ್ಳೆಯ ಕೆಲಸ ಮಾಡಿದರೆ, ನಿಮಗಿಂತ ಮೇಲಿರುವ ಯಾರಾದರೂ ಅದನ್ನು ಹಾಳು ಮಾಡುತ್ತಾರೆ. ಆ ಕೆಲಸದ ಎಲ್ಲಾ ಕ್ರೆಡಿಟ್ ಅವರೇ ತೆಗೆದುಕೊಳ್ಳುತ್ತಾರೆ. ನೀವು ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡಿದರೆ, ಕ್ಲೈಂಟ್ ಎಷ್ಟೇ ಅಸಮಂಜಸನಾಗಿದ್ದರೂ, ಅಂತಿಮವಾಗಿ ಅವರು ಅಭಿನಂದನೆ ಪಡೆಯುತ್ತಾರೆ. ಹೀಗಾಗಿ ನೀವು ಮಾಡುವ ಕೆಲಸವು ದಿನದ ಕೊನೆಯಲ್ಲಿ ಅರ್ಥಹೀನವೆಂದು ನಿಮಗೆ ಭಾವಿಸುತ್ತದೆ. ನಾನು ಹೇಳುತ್ತಿರುವುದು ಒಂದೇ ಇದರ ಅರ್ಥವೇನು?, ನಾವು ಇದನ್ನೆಲ್ಲಾ ಏಕೆ ಮಾಡುತ್ತಿದ್ದೇವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ

ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು, ಬಡ್ತಿ ಇನ್ನು ಮುಂದೆ ಪ್ರಗತಿಯಂತೆ ಭಾಸವಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಸಂಬಳ ಹೆಚ್ಚಾಗುತ್ತದೆ, ಆದರೆ ನೆಮ್ಮದಿ ಮಾತ್ರ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕಾರ್ಪೊರೇಟ್ ಜೀವನವು ಭ್ರಮನಿರಸವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us