AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತದಲ್ಲಿ ವಿದೇಶಿಗನ ಏಕಾಂಗಿ ಪ್ರಯಾಣ; ಟ್ರಿಪ್‌ ಅನುಭವ ಹಂಚಿಕೊಂಡ ಆಫ್ರಿಕನ್ ವ್ಯಕ್ತಿ

ಕೆಲವರಿಗೆ ಸುತ್ತಾಡೋದು ಅಂದ್ರೆ ಅದೇನೋ ಕ್ರೇಜ್. ಹೀಗಾಗಿ ಒಂದು ದೇಶ, ವಿದೇಶಗಳಿಗೆ ಟ್ರಾವೆಲ್ ಮಾಡ್ತಾರೆ. ಆದರೆ ಆಫ್ರಿಕನ್ ವ್ಯಕ್ತಿ ಭಾರತದಾದ್ಯಂತ ಏಕಾಂಗಿಯಾಗಿ ಪ್ರಯಾಣಿಸಿದ್ದು, ಈ ವೇಳೆ ತಾನು ಕಲಿತ ಪಾಠಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿನ ಪ್ರಯಾಣಿಕ ಅನುಭವವು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತದಲ್ಲಿ ವಿದೇಶಿಗನ ಏಕಾಂಗಿ ಪ್ರಯಾಣ; ಟ್ರಿಪ್‌ ಅನುಭವ ಹಂಚಿಕೊಂಡ ಆಫ್ರಿಕನ್ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: May 25, 2026 | 4:18 PM

Share

ವಿದೇಶಿ ಪ್ರಜೆಗಳು (foreigner) ಭಾರತಕ್ಕೆ ಆಗಾಗ ಭೇಟಿ ಕೊಡ್ತಾರೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇತಿಹಾಸಗಳನ್ನು ಕೆದಕುತ್ತಾರೆ. 21 ವರ್ಷದ ಆಫ್ರಿಕನ್ ವ್ಯಕ್ತಿಯೊಬ್ಬರು (African) ಏಕಾಂಗಿಯಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಏಕಾಂಗಿ ಪ್ರವಾಸದ ವೇಳೆ ಈ ದೇಶದ ಆಧ್ಯಾತ್ಮಿಕತೆ, ಅವ್ಯವಸ್ಥೆ ಮತ್ತು ಇತಿಹಾಸವು ತಾನು ಜಗತ್ತನ್ನು ನೋಡುವ ವಿಧಾನವನ್ನು ಆಳವಾಗಿ ಬದಲಾಯಿಸಿತು ಎಂದು ಹೇಳಿಕೊಂಡಿದ್ದಾರೆ. ತಾನು ಕಲಿತ ಐದು ಪಾಠಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

@hunchsquare ಬಳಕೆದಾರ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಾರಣಾಸಿಯಲ್ಲಿ ಸಂಜೆ ಗಂಗಾ ಆರತಿಯಲ್ಲಿ ಭಾಗವಹಿಸಿದ್ದನ್ನು ತೋರಿಸಲಾಗಿದೆ. ಈ ವಿಡಿಯೋದ ಕ್ಲಿಪ್ ನಲ್ಲಿ ನಾನು 21 ವರ್ಷದ ಆಫ್ರಿಕನ್ ಆಗಿ ಭಾರತದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೆ. ನಾನು ಕಲಿತದ್ದು ಇಲ್ಲಿದೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Hunch. (@hunchsquared)

ಈ ವಿಡಿಯೋದೊಂದಿಗೆ ಭಾರತವು ಒಂದು ಕಾಲದಲ್ಲಿ ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ನಾಗರಿಕತೆಯಾಗಿತ್ತು. ವಸಾಹತುಶಾಹಿಗೆ ಮುಂಚಿತವಾಗಿ, ಭಾರತವು ಜಾಗತಿಕ GDP ಯ 25% ಅನ್ನು ಹೊಂದಿತ್ತು. ಈ ಸ್ಥಳದಲ್ಲಿ ನಡೆಯುವಾಗ ಕುಸಿಯುತ್ತಿರುವ ಭವ್ಯತೆ, ಬಡತನದಿಂದ ಆವೃತವಾದ ದೇವಾಲಯಗಳೊಳಗಿನ ಚಿನ್ನ, ನೀವು ಎಲ್ಲೆಡೆ ಆ ಗಾಯವನ್ನು ಅನುಭವಿಸುತ್ತೀರಿ. ನೀವು ಆಫ್ರಿಕನ್ ಆಗಿದ್ದಾಗ ನಿಮಗೆ ವಿಭಿನ್ನ ಅನುಭವವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ನಿಮ್ಮ ಮೆದುಳು ಫಿಲ್ಟರ್ ಮಾಡುವ ಪ್ರಯತ್ನವನ್ನು ಬಿಟ್ಟುಬಿಡುತ್ತದೆ ಹಾಗೂ ನೀವು ಶರಣಾಗುತ್ತೀರಿ. ವಿಚಿತ್ರವೆಂದರೆ, ಇದು ನಾನು ಅನುಭವಿಸಿದಅತ್ಯಂತ ಪ್ರಸ್ತುತವಾಗಿದೆ. ಇಲ್ಲಿನ ಆಚರಣೆಗಳು, ಭಕ್ತಿ, ಸಂಪೂರ್ಣ ಪ್ರಾಮಾಣಿಕತೆ ನನ್ನ ರಕ್ಷಣೆಯನ್ನು ಮೀರಿತು. ನಾನು ನನಗೆ ತಿಳಿದಿರದ ಭಾವನೆಗಳು ಹೊರಹೊಮ್ಮಿದವು. ನಾನು ಅಳುತ್ತಿದ್ದೆ. ಆದರೆ ಏಕೆ ಎಂದು ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದಿದ್ದಾರೆ.

ಭಾರತವು ಒಂದು ಕಾಲ್ಪನಿಕ ಜಗತ್ತುಎಂಬ ಭಾವನೆಯನ್ನು ಹೊಂದಿದೆ. ಆದರೆ ಇಲ್ಲಿನ ವಾಸ್ತುಶಿಲ್ಪ, ಬಣ್ಣಗಳು ಮತ್ತು ಅವ್ಯವಸ್ಥೆಯು ತಾನು ಹಿಂದೆ ಅನುಭವಿಸಿದ್ದಕ್ಕಿಂತ ಭಿನ್ನವಾಗಿದೆ ಇದು ನಿಜವೆಂದು ಭಾವಿಸುವುದಿಲ್ಲ. ಯಾರೋ ಶುದ್ಧ ಕಲ್ಪನೆಯಿಂದ ನಾಗರಿಕತೆಯನ್ನು ರಚಿಸಿದಂತಿದೆ. ಭಾರತದ ವಸಾಹತುಶಾಹಿ ಇತಿಹಾಸದ ಹೊರತಾಗಿ, ಅದರ ಸ್ಥಿತಿಸ್ಥಾಪಕತ್ವವನ್ನು ನೋಡಿ ತಾನು ಆಘಾತಕ್ಕೊಳಗಾಗಿದ್ದೇನೆ. ಭಾರತವನ್ನು ಲೂಟಿ ಮಾಡಲಾಗಿದೆ. ಬ್ರಿಟಿಷರು ತಮ್ಮ ಕೈಲಾದಷ್ಟು ತೆಗೆದುಕೊಂಡರು. ಆದರೂ ಈ ಸ್ಥಳದ ಆತ್ಮವು ಸ್ಪಷ್ಟ ಮತ್ತು ಅಖಂಡವಾಗಿದೆ. ನಾನು ಇನ್ನೂ ಪ್ರಕ್ರಿಯೆಗೊಳಿಸುತ್ತಿದ್ದೇನೆ ಎಂಬ ಪಾಠವಿದೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯುರೋಪಿಯನ್ನರು ಭಾರತೀಯರಿಂದ ಈ ವಿಷ್ಯಗಳನ್ನು ಕಲಿಯಬೇಕು ಎಂದ ವಿದೇಶಿ ಮಹಿಳೆ

ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿನ ಸಕಾರಾತ್ಮಕ ಅಂಶಗಳನ್ನು ನೀವು ಬಳಸಿಕೊಂಡಿದ್ದಕ್ಕೆ ಸಂತೋಷ! ಚಿಯರ್ಸ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮಂತಹ ಜನರು ನಮ್ಮ ದೇಶದಲ್ಲಿ ಇರುವುದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಾಮಾಣಿಕ ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಸಿಎಂಗೆ ಹೈಕಮಾಂಡ್​ ದಿಲ್ಲಿ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!