AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: 10 ಸೆಕೆಂಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯುತ್ತೀರಾ?

Trending: ಈ ಪರ್ವತದ ಹಾದಿಯಲ್ಲಿ ಜಿಂಕೆಯೊಂದು ಅಡಗಿ ಕುಳಿತಿದೆ. ನಿಮ್ಮ ಕಣ್ಣು ಮತ್ತು ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ? ಪರೀಕ್ಷಿಸಿಕೊಳ್ಳಿ.

Viral Post: 10 ಸೆಕೆಂಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯುತ್ತೀರಾ?
ಎಲ್ಲಿದೆ ಇಲ್ಲಿ ಜಿಂಕೆ?
TV9 Web
| Edited By: |

Updated on:Aug 04, 2022 | 5:12 PM

Share

Trending : ಊಟ ಮಾಡಿ ಮತ್ತೆ ಆಫೀಸು ಕೆಲಸದಲ್ಲಿ ತೊಡಗಿಕೊಂಡಿರುತ್ತೀರಿ. ಹೊಟ್ಟೆ ತುಂಬಿದ ಕಾರಣ ಮನಸ್ಸನ್ನು ಹಿಡಿತಕ್ಕೆ ತಂದು ಕೆಲಸ ಮಾಡಲು ಆಲಸ್ಯ ಉಂಟಾಗುತ್ತಿರಬಹುದು. ಮನೆಯಲ್ಲಿರುವ ಕೆಲವರಿಗೆ ನಿದ್ದೆ ಎಳೆಯುತ್ತಿರಬಹುದು. ಆದರೆ ಮಲಗಿದರೆ ದೇಹಕ್ಕೆ ಜಿಡ್ಡು ಹಿಡಿಯುತ್ತದೆ. ಹಾಗಿದ್ದರೆ ಇದಕ್ಕೇನು ಉಪಾಯ? ಮೆದುಳಿಗೆ ಕಸರತ್ತು ನೀಡುವುದು! ಇಲ್ಲಿದೆಯಲ್ಲ ಈ ಫೋಟೋ ಈಗ ಅಂತರ್ಜಾಲದಲ್ಲಿ ಜನಪ್ರಿಯವಾಗಿದೆ.  ಈ ಬೆಟ್ಟದಲ್ಲಿ ಅಡಗಿರುವ ಜಿಂಕೆಯನ್ನು ಕೆಲವರು 10 ಸೆಕೆಂಡುಗಳಲ್ಲಿ ಕಂಡುಹಿಡಿದಿದ್ದಾರೆ. ಇನ್ನೂ ಕೆಲವರು 5 ನಿಮಿಷಗಳಾದರೂ ಹುಡುಕಲು ಸಾಧ್ಯವಾಗಿಲ್ಲ.  ಯಾಕೆ ಈ ಜಿಂಕೆಯನ್ನು ಗುರುತಿಸುವುದು ಕಷ್ಟವಾಗುತ್ತಿದೆ?

ಜಿಂಕೆಯ ಮೈಬಣ್ಣ ಮತ್ತು ಬೆಟ್ಟದ ಮೇಲ್ಮೈ ಹೊದಿಕೆ ಒಂದೇ ಬಣ್ಣದಿಂದ ಕೂಡಿರುವುದರಿಂದ ಗುರುತಿಸುವುದು ನಿಮಗೆ ಕಷ್ಟವಾಗುತ್ತಿದೆ. ಜಿಂಕೆಯು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಹೂಡುವ ಉಪಾಯವಿದು. ತಪ್ಪಲು ಪ್ರದೇಶದಿಂದ ದೂರಬಂದು, ಬೆಟ್ಟಪ್ರದೇಶಗಳಲ್ಲಿ ಓಡಾಡಿಕೊಂಡು ತನ್ನನ್ನು ತಾ ರಕ್ಷಿಸಿಕೊಳ್ಳುವುದು ಇದರ ಸ್ವಭಾವ. ಮನುಷ್ಯರದ್ದಷ್ಟೇ ಭಯ ಇದಕ್ಕಿಲ್ಲ. ಹುಲಿ, ಚಿರತೆ, ಸಿಂಹಗಳ ಪ್ರಿಯ ಆಹಾರವೂ ಇದೇ ಅಲ್ಲವೆ? ಹಾಗಾಗಿ ಜಿಂಕೆ ತನ್ನ ಮೈಬಣ್ಣದ ಪರ್ವತವನ್ನೇರುತ್ತ ಏರುತ್ತ ಸ್ವಯಂರಕ್ಷಣೆ ಮಾಡಿಕೊಳ್ಳುತ್ತದೆ.

ಸರಿ ಈಗ ಮತ್ತೊಮ್ಮೆ ಚಿತ್ರವನ್ನು ನೋಡಿ. ಸಿಕ್ಕಲ್ಲಿ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ! ಇಲ್ಲವಾದಲ್ಲಿ ಬೇಸರಿಕೊಳ್ಳದೆ ಈ ಕೆಳಗಿನ ಫೋಟೋ ನೋಡಿ. ಕಾಣುತ್ತಿದೆಯಾ? ಕಾಣಲೇಬೇಕು. ಆದರೆ ನಿಮ್ಮ ಆಲಸ್ಯ ಮುಂದುವರಿದಿದೆಯಾ? ಸ್ವಲ್ಪ ಸಮಯವಿದ್ದರೆ ಹತ್ತಿರದ ಮೃಗಾಲಯಕ್ಕೆ ಭೇಟಿ ನೀಡಿ. ನಿಜವಾದ ಜಿಂಕೆಯನ್ನು ಕಣ್ತುಂಬಿಕೊಂಡು ಬನ್ನಿ. ಇಲ್ಲವಾದರೆ ಮನೆಯಲ್ಲಿ ಪ್ರಾಣಿಗಳನ್ನು ಸಾಕಿರದೇ ಇದ್ದರೆ ಅಕ್ಕಪಕ್ಕ ಅಥವಾ ರಸ್ತೆಬದಿಯಲ್ಲಿ ಪ್ರಾಣಿ ಪಕ್ಷಿಗಳ ಚಲನವಲನವನ್ನು ಗಮನಿಸಿ. ಅವುಗಳೊಂದಿಗೆ ಸಂಭಾಷಣೆ ನಡೆಸಿ. ಆಗ ನೋಡಿ ನಿಮ್ಮ ಮನಸ್ಸು ಉಲ್ಲಾಸದಿಂದ ಪುಟಿಯುತ್ತದೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Can you find the deer hidden in this picture within 10 seconds?

ಇಲ್ಲಿದೆ ಜಿಂಕೆ!

Published On - 3:35 pm, Thu, 4 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ