Viral Video: ಇಲ್ಲಿದ್ದಾರೆ ತೇಲುವ ಚಹಾದಂಗಡಿಯ ಛಾಯಕ್ಕ

Kerala : ನೀರ ಮೇಲೆ ತೇಲಿ ಬರುವ ಈ ಚಹಾದ ಅಂಗಡಿ ಮತ್ತು ಇಲ್ಲಿ ತಯಾರಾಗುವ ಬಿಸಿಬಿಸಿ ಚಹಾ ಕುಡಿಯಲು ನೀವು ಕೇರಳದ ಕುಮಾರಕೊಮ್​ಗೆ ಹೋಗಬೇಕು!

Viral Video: ಇಲ್ಲಿದ್ದಾರೆ ತೇಲುವ ಚಹಾದಂಗಡಿಯ ಛಾಯಕ್ಕ
ಕೇರಳದ ಕೋಕೋನಟ್ ಲಗೂನ್​ ರೆಸಾರ್ಟ್​ನಲ್ಲಿ ತೇಲುವ ಚಹಾದಂಗಡಿಯ ಛಾಯಕ್ಕ
Follow us
|

Updated on:Jul 24, 2023 | 6:01 PM

Floating Tea Stall: ಪ್ರವಾಸದಲ್ಲಿದ್ಧಾಗ ಅಂಗಡಿಗಳಿಗೆ, ಹೋಟೆಲ್​​ಗಳಿಗೆ ಹೋಗಿ ಚಹಾ ಕುಡಿಯುವುದುಂಟು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಚಹಾದಂಗಡಿಯೇ ನಿಮ್ಮ ಬಳಿ ತೇಲಿ ಬರುತ್ತದೆ. ಕೇರಳದ ಕುಮಾರಕೊಮ್​ನಲ್ಲಿರುವ ಕೋಕೋನಟ್​ ಲಗೂನ್​ (Coconut Lagoon) ರೆಸಾರ್ಟ್​ನಲ್ಲಿ ಈ ತೇಲುವ ಚಹಾದಂಗಡಿಯ ಛಾಯಕ್ಕ ನಿಮ್ಮನ್ನು ಎದುರುಗೊಳ್ಳುತ್ತಾರೆ. ಸುತ್ತಮುತ್ತಲಿನ ಹಳ್ಳಿಗರಿಗೆ ಛಾಯಾ ಚೇಚಿ ಎಂದು ಪರಿಚಿತರಾಗಿರುವ ಈಕೆ ಸಂಜೆಯ ಹೊತ್ತಿಗೆ ಹೀಗೆ ತನ್ನ ಪುಟ್ಟ ದೋಣಿಯೊಂದಿಗೆ ನೀರಿಗಿಳಿಯುತ್ತಾರೆ. ಮನೆಯಲ್ಲಿ ತಯಾರಿಸಿಕೊಂಡು ಬಂದ ರುಚಿಕಟ್ಟಾದ ಚಹಾ ಮತ್ತು ಸಣ್ಣಪುಟ್ಟ ತಿಂಡಿಗಳನ್ನು ಮಾರುವುದನ್ನೇ ಇವರು ಕಾಯಕವನ್ನಾಗಿಸಿಕೊಂಡಿದ್ಧಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by India Cultural Hub (@indiaculturalhub)

2012ರಿಂದಲೂ ಕೋಕೋನಟ್​ ಲಗೂನ್​ನಲ್ಲಿ  ಛಾಯಾ ಚೇಚಿ ಈ ತೇಲುವ ಅಂಗಡಿಯ ಮೂಲಕ ರುಚಿಯಾದ ಚಹಾ ಮತ್ತು ತಿಂಡಿಗಳನ್ನು ಮಾರುತ್ತಿದ್ದಾರೆ. ಈಕೆ ಮೊದಲಿದ್ದ ತನ್ನ ಚಹಾದ ಅಂಗಡಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಕೇರಳದ CGH Earth Experience Hotels ಈಕೆಗೆ ಈ ವ್ಯವಸ್ಥೆಗೆ ತೆರೆದುಕೊಳ್ಳಲು ಸಹಾಯ ಮಾಡಿತು. ಈ ಛಾಯಕ್ಕ ಮತ್ತು ಆಕೆಯ ಚಹಾಗಾಗಿ ನಾನು ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದಿದ್ದೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನಾನು  ಮತ್ತೊಮ್ಮೆ ಈಕೆಯ ಚಹಾಗೋಸ್ಕರ ಭೇಟಿ ನೀಡಬೇಕು ಹಾಗಿದ್ದರೆ! ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

ದೆಹಲಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೇಜ್ರಿವಾಲ್​ ಹೀಗೆಯೇ ಬದುಕುತ್ತಾರೆ ಎಂದಿದ್ದಾರೆ ಒಬ್ಬರು. ನೀವು ಈ ಪೋಸ್ಟ್ ಮಾಡುವಾಗ ಕೇರಳ ಎಂದು ರಾಜ್ಯದ ಹೆಸರನ್ನು ಹೇಳದೆ ದಕ್ಷಿಣ ಭಾರತ ಎಂದು ಹೇಳಿದ್ದೀರಲ್ಲ ಯಾಕೆ? ಎಂದು ಅನೇಕರು ಇಂಡಿಯಾ ಕಲ್ಚರ್ ಹಬ್ ಇನ್ಸ್ಟಾಗ್ರಾಂ ಪುಟದ ನಿರ್ವಾಹಕರಿಗೆ ಕೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 37 ಸಾವಿರ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಮತ್ತಷ್ಟು ಮಾಹಿತಿ ಕೇಳಿದ್ದಾರೆ ಮತ್ತು ಈ ತಾಣಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:01 pm, Mon, 24 July 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ