Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರು; 500 ಮೀ ಆಟೋ ಪ್ರಯಾಣಕ್ಕೆ ರೂ 100 ಪಾವತಿಸಿದ ಮುಂಬೈ ಸಿಇಒ

Auto : ಮುಂಬೈನಲ್ಲಿ ರೂ. 100ರಲ್ಲಿ 9 ಕಿ.ಮೀ ಪ್ರಯಾಣಿಸಬಹುದು. ಆದರೆ ಬೆಂಗಳೂರಿನಲ್ಲಿ!? ಎಂದು ಬೇಸರಕ್ಕೆ ಒಳಗಾಗಿದ್ದಾರೆ ಈ ವ್ಯಕ್ತಿ. ಮುಂಬೈ ಹೊರತುಪಡಿಸಿ ಎಲ್ಲ ಮಹಾನಗರಗಳ ಆಟೋ ಕಥೆ ಇಷ್ಟೇ ಎಂದಿದ್ದಾರೆ ನೆಟ್ಟಿಗರು.

Viral: ಬೆಂಗಳೂರು; 500 ಮೀ ಆಟೋ ಪ್ರಯಾಣಕ್ಕೆ ರೂ 100 ಪಾವತಿಸಿದ ಮುಂಬೈ ಸಿಇಒ
ಮಂದಾರ ನಾಟೇಕರ್ ಪ್ರಯಾಣಿಸಿದ ಆಟೋ
Follow us
ಶ್ರೀದೇವಿ ಕಳಸದ
|

Updated on:Jul 25, 2023 | 10:58 AM

Bengaluru : ಮುಂಬೈನ ನ್ಯೂರಲ್ ಗ್ಯಾರೇಜ್​ನ ಸಿಇಒ ಮಂದಾರ್​ ನಾಟೇಕರ್ ಬೆಂಗಳೂರಿನಲ್ಲಿ ಅನುಭವಿಸಿದ ಕಹಿ ಅನುಭವವನ್ನು ಟ್ವೀಟ್ ಮಾಡಿದ್ದಾರೆ. 500 ಮೀ. ಆಟೋ ಪ್ರಯಾಣಕ್ಕೆ ಅವರು ರೂ. 100 ಪಾವತಿಸಿದ ವಿಷಯದೊಂದಿಗೆ ಆ ಆಟೋದ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಎಂದೂ ಇಷ್ಟೊಂದು ದುಬಾರಿ ಆಟೋ ಪ್ರಯಾಣ ಮಾಡಿರಲಿಲ್ಲ, ಮುಂಬೈನಲ್ಲಿ ರೂ. 100ಕ್ಕೆ 9 ಕಿ.ಮೀ ಪ್ರಯಾಣಿಸಬಹುದೆಂದೂ ಹೇಳಿದ್ದಾರೆ. ವೈರಲ್ ಆಗುತ್ತಿರುವ ಈ ಟ್ವೀಟಿನಡಿ ಅನೇಕರು ತಮ್ಮ ಆಟೋ ಪ್ರಯಾಣದ ಅಭಿಪ್ರಾಯಗಳನ್ನು ವಿನೋದ ಪ್ರಸಂಗಗಳನ್ನು ಅಚ್ಚರಿಗಳನ್ನು ದಾಖಲಿಸಿದ್ಧಾರೆ. ​

7,000ಕ್ಕೂ ಹೆಚ್ಚು ಜನರು ಈ ಟ್ವೀಟ್ ನೋಡಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಟಿವಿಎಫ್ ಅಧ್ಯಕ್ಷ ವಿಜಯ್ ಕೋಶಿ, ಮುಂಬೈ ಬಿಟ್ಟರೆ ಉಳಿದ ಮಹಾನಗರಗಳ ಕಥೆ ಎಲ್ಲವೂ ಒಂದೇ ಥರ ಇದೆ. ಚೆನ್ನೈಗೆ ಬನ್ನಿ, ಇದಕ್ಕಿಂತಲೂ ದುಬಾರಿಯಾದ ಆಟೋ ಪ್ರಯಾಣವನ್ನು ಇಲ್ಲಿ ಮಾಡಬಹುದಾಗಿದೆ! ಎಂದಿದ್ದಾರೆ.

ಇದನ್ನೂ ಓದಿ : Viral Video: ಉಚಿತ ಐಸ್ಕ್ರೀಮ್​​ಗಾಗಿ ಬೆಂಗಳೂರಿಗರು ಹೇಗೆ ನೃತ್ಯ ಮಾಡಿದ್ದಾರೆ ನೋಡಿ

ಮುಂಬೈ ಆಟೋ ಚಾಲಕರ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಅಲ್ಲಿಯ ಆಟೋ ಆಟೋ ಮೀಟರ್​ಗೆ ಅನುಗುಣವಾಗಿ ಹಣ ಪಾವತಿಸಬಹುದಾಗಿದೆ ಎಂದಿದ್ದಾರೆ. ಸರ್ಕಾರವೇ ಮೀಟರ್ ದರವನ್ನು ನಿಗದಿ ಪಡಿಸುತ್ತದೆ. ಬೆಂಗಳೂರಿನಲ್ಲಿ ಆರಂಭದ ಎರಡು ಕಿ.ಮೀ ರೂ. 30, ಆನಂತರ ಪ್ರತೀ ಕಿ.ಮೀ. ಮೂಲ ಬೆಲೆ ರೂ. 15 ಎಂದು ಹೇಳಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:57 am, Tue, 25 July 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!