AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಂಠಪೂರ್ತಿ ಕುಡಿದು ಕ್ಲಾಸ್ ರೂಮ್​ನಲ್ಲೇ ಶಿಕ್ಷಕಿಯ ನಿದ್ದೆ..!

Viral Story: ಮಕ್ಕಳಿಂದ ಅವರ ಆರೋಗ್ಯ ವಿಚಾರಿಸಿದೆ. ಮಕ್ಕಳ ಉತ್ತರದಿಂದ ನನಗೆ ಆಶ್ಚರ್ಯವಾಯಿತು. ಮಕ್ಕಳೇ ಮದ್ಯಪಾನ ಮಾಡಿ ಶಿಕ್ಷಕಿ ಪ್ರಜ್ಞೆ ತಪ್ಪಿದ್ದಾರೆ ಎಂದರು.

Viral News: ಕಂಠಪೂರ್ತಿ ಕುಡಿದು ಕ್ಲಾಸ್ ರೂಮ್​ನಲ್ಲೇ ಶಿಕ್ಷಕಿಯ ನಿದ್ದೆ..!
ಶಿಕ್ಷಕಿಯ ಫೋಟೋ
TV9 Web
| Edited By: |

Updated on: Jul 24, 2022 | 4:54 PM

Share

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ…ಎಂದು ಕೈಮುಗಿಯುವ ದೇಶ ನಮ್ಮದು. ಇಂತಹ ಮಹತ್ವದ ಸ್ಥಾನದಲ್ಲಿರುವ ಗುರು ಮಕ್ಕಳಿಗೆ ಮಾದರಿಯಾಗಿರಬೇಕು. ಆದರೆ ಇಲ್ಲೊಬ್ಬರು ಗುರು ಕಂಠಪೂರ್ತಿ ಕುಡಿದು ಬಂದು ಕ್ಲಾಸ್ ರೂಮ್​​ನಲ್ಲೇ ಗಡತ್ತಾಗಿ ನಿದ್ದೆ ಮಾಡಿರುವ ಘಟನೆ ನಡೆದಿದೆ. ಇದನ್ನು ನೋಡಿ ಮಕ್ಕಳು ಕಂಗಾಲಾಗಿದ್ದಾರೆ. ಏಕೆಂದರೆ ಅತ್ತ ಪಾಠವಿಲ್ಲ, ಇತ್ತ ಟೀಚರ್​ಗೆ ಎಚ್ಚರವಿಲ್ಲ…! ಹೌದು, ಇಂತಹದೊಂದು ಘಟನೆ ನಡೆದಿರುವುದು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ..ಪೂಜಿಸುವ ನಮ್ಮದೇ ದೇಶದ ಛತ್ತೀಸ್​ಗಢ ರಾಜ್ಯದಲ್ಲಿ ಎಂಬುದು ನಾಚಿಗೇಡಿನ ಸಂಗತಿ.

ಛತ್ತೀಸ್​ಗಢದ ಜಶ್‌ಪುರದ ಸರ್ಕಾರಿ ಶಾಲೆಯ ಶಿಕ್ಷಕಿ ಜಗಪತಿ ಭಗತ್ ಕುಡಿದು ಟೈಟಾಗಿ ಶಾಲೆಗೆ ಬಂದಿದ್ದರು. ಕಂಠಪೂರ್ತಿ ಕುಡಿದಿದ್ದ ಶಿಕ್ಷಕಿಗೆ ಮಕ್ಕಳಿಗೆ ಪಾಠ ಹೇಳಿಕೊಡುವಷ್ಟು ತ್ರಾಣವೂ ಕೂಡ ಇರಲಿಲ್ಲ. ಹೀಗಾಗಿ ಅಲ್ಲೇ ಕುರ್ಚಿ ಹಾಕಿ ನಿದ್ದೆ ಮಾಡಿದ್ದಾರೆ.

ಅದೃಷ್ಟವಶಾತ್ ಅದೇ ಸಮಯಕ್ಕೆ  ಪರಿಶೀಲನೆಗೆ ಸ್ಥಳೀಯ ಶಿಕ್ಷಣಾಧಿಕಾರಿ ಎಂಜೆಯು ಸಿದ್ದಿಕಿ ಶಾಲೆಗೆ ಭೇಟಿ ನೀಡಿದ್ದಾರೆ. ಅತ್ತ ಕ್ಲಾಸ್ ರೂಮ್​ನಲ್ಲಿ ಮಕ್ಕಳ ಗದ್ದಲಗಳು ಕೇಳಿ ಬರುತ್ತಿದ್ದರೂ ಟೀಚರ್​ನ ಒಂದೇ ಒಂದು ಶಬ್ದ ಕೇಳಿ ಬರುತ್ತಿರಲಿಲ್ಲ. ಹೀಗಾಗಿ ಶಿಕ್ಷಣಾಧಿಕಾರಿ ನೇರವಾಗಿ ತರಗತಿಯೊಳಗೆ ಹೋಗಿದ್ದಾರೆ. ಈ ವೇಳೆ ಕಂಡ ದೃಶ್ಯದಿಂದ ಖುದ್ದು ಶಿಕ್ಷಣಾಧಿಕಾರಿಯೇ ದಂಗಾಗಿ ಹೋದರು. ಏಕೆಂದರೆ ಶಿಕ್ಷಣಾಧಿಕಾರಿ ಹೋಗಿ ಮುಂದೆ ನಿಂತರೂ, ಅಮಲಿನಲ್ಲಿದ್ದ ಶಿಕ್ಷಕಿಗೆ ಮೈಮೇಲೆ ಯಾವುದೇ ಪ್ರಜ್ಞೆಯೇ ಇರಲಿಲ್ಲ. ಹಲವು ಬಾರಿ ಎಚ್ಚರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಹೀಗಾಗಿ ಬಿಇಒ ಹೆಚ್ಚುವರಿ ಎಸ್ಪಿಗೆ ಕರೆ ಮಾಡಿ ಮಹಿಳಾ ಪೊಲೀಸರನ್ನು ಕರೆಸಿದ್ದಾರೆ. ಆ ಬಳಿಕ ಬಂದ ಮಹಿಳಾ ಪೊಲೀಸರು ಜಗಪತಿ ಭಗತ್ ಅವರನ್ನು ವಶಕ್ಕೆ ಪಡೆದರು. ಅಚ್ಚರಿ ಎಂದರೆ ಈ ಶಾಲೆಯಲ್ಲಿ ಒಟ್ಟು 54 ಮಕ್ಕಳು ಓದುತ್ತಿದ್ದಾರೆ. ಅಲ್ಲದೆ ಜಗಪತಿ ಭಗತ್ ಎಲ್ಲಾ ವಿಷಯಗಳನ್ನು ಕಲಿಸುತ್ತಾರೆ. ಆದರೆ ಶಿಕ್ಷಣಾಧಿಕಾರಿಯ ಭೇಟಿಯ ವೇಳೆ ಶಿಕ್ಷಕಿಯು ಪಾನಮತ್ತಳಾಗಿರುವುದು ಕಂಡು ಬಂದಿದ್ದು, ಹೀಗಾಗಿ ಮಕ್ಕಳಿಗೆ ಅದ್ಯಾವ ರೀತಿಯ ಪಾಠ ಹೇಳಿಕೊಡುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇನ್ನು ಇಡೀ ಘಟನೆಯನ್ನು ಕಣ್ಣಾರೆ ಕಂಡ ಶಿಕ್ಷಣಾಧಿಕಾರಿಯು ಶಿಕ್ಷಕಿ ಜಗಪತಿ ಭಗತ್​ರನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಇಒ ಸಿದ್ದಿಕಿ, ‘ನಾನು ಶಾಲೆಗಳಿಗೆ ನಿತ್ಯ ತಪಾಸಣೆಗೆ ಹೋಗುತ್ತಿರುತ್ತೇನೆ. ಆದರೆ ಶಿಕ್ಷಕಿಯೊಬ್ಬರು ಕಂಠಪೂರ್ತಿ ಕುಡಿದು ಪ್ರಜ್ಞಾಹೀನಳಾಗಿರುವುದು ನೋಡಿದ್ದು ಇದೇ ಮೊದಲ ಬಾರಿಗೆ. ಆರಂಭದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಾನು ಭಾವಿಸಿದೆ. ಮಕ್ಕಳಿಂದ ಅವರ ಆರೋಗ್ಯ ವಿಚಾರಿಸಿದೆ. ಮಕ್ಕಳ ಉತ್ತರದಿಂದ ನನಗೆ ಆಶ್ಚರ್ಯವಾಯಿತು. ಮಕ್ಕಳೇ ಮದ್ಯಪಾನ ಮಾಡಿ ಶಿಕ್ಷಕಿ ಪ್ರಜ್ಞೆ ತಪ್ಪಿದ್ದಾರೆ ಎಂದರು.

ಹೀಗಾಗಿ ಜಶ್‌ಪುರ ಹೆಚ್ಚುವರಿ ಎಸ್‌ಪಿ ಪ್ರತಿಭಾ ಪಾಂಡೆ ಅವರಿಗೆ ಕರೆ ಮಾಡಿ ಸಂಪೂರ್ಣ ವಿಷಯ ತಿಳಿಸಿ, ಶಿಕ್ಷಕಿಯ ವೈದ್ಯಕೀಯ ತಪಾಸಣೆ ಮಾಡಿಸಲು ಮಹಿಳಾ ಪೊಲೀಸರನ್ನು ಕಳುಹಿಸುವಂತೆ ಮನವಿ ಮಾಡಿದೆ. ಕೂಡಲೇ ಇಬ್ಬರು ಮಹಿಳಾ ಪೊಲೀಸರನ್ನು ಶಾಲೆಗೆ ಕಳುಹಿಸಿದರು. ಮಹಿಳಾ ಶಿಕ್ಷಕಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷಿಸಿ ಶಿಕ್ಷಕಿ ಮದ್ಯ ಸೇವಿಸಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಸಿದ್ದಿಕಿ ತಿಳಿಸಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ