AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್! ಗಿಫ್ಟ್ ನೋಡಿ ನಗುತ್ತಾ ನಾಚಿ ತಲೆ ತಗ್ಗಿಸಿದ ವಧು

Viral Video: ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಮಾರಂಭದಲ್ಲಿ ಜರುಗುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಸ್ನೇಹಿತರು ಕೊಟ್ಟ ಉಡುಗೊರೆ ನೋಡಿ ವಧು ನಾಚಿ ತಲೆ ತಗ್ಗಿಸಿದ್ದಾಳೆ.

ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್! ಗಿಫ್ಟ್ ನೋಡಿ ನಗುತ್ತಾ ನಾಚಿ ತಲೆ ತಗ್ಗಿಸಿದ ವಧು
ನವ ಜೋಡಿಗೆ ಉಡುಗೊರೆ ನೀಡಲು ಸ್ನೇಹಿತರ ಸಕತ್ ಪ್ಲಾನ್!
TV9 Web
| Edited By: |

Updated on: Aug 03, 2021 | 12:40 PM

Share

ಮದುವೆ ಸಮಾರಂಭಗಳಲ್ಲಿ ಮಜಾ ಮಾಡಿದಷ್ಟು ಸಂತೋಷ, ಖುಷಿ ಇನ್ನೆಲ್ಲು ಸಿಗುವುದಿಲ್ಲ. ಅದರಲ್ಲಿಯೂ ನಮ್ಮ ಆಪ್ತ ಸ್ನೇಹಿತರ ವಿವಾಹ (Wedding) ಸಂದರ್ಭದಲ್ಲಿ ಕಾಲೆಳೆಯುತ್ತಾ, ನಗುತ್ತಾ ವಿಶೇಷ ಆಚರಣೆಯನ್ನು ಸಂಭ್ರಮಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ (Social Media) ಮದುವೆ ಸಮಾರಂಭದಲ್ಲಿ ಜರುಗುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್ (Viral Video) ಆಗಿದೆ. ಸ್ನೇಹಿತರು (Friends) ಕೊಟ್ಟ ಉಡುಗೊರೆ (Gift) ನೋಡಿ ವಧು ನಾಚಿ ತಲೆ ತಗ್ಗಿಸಿದ್ದಾಳೆ.

ಮದುವೆಯ ಆಚರಣೆಗಳನ್ನೆಲ್ಲಾ ಮುಗಿಸಿದ ಬಳಿಕ ಉಡುಗೊರೆ ಕೊಟ್ಟು ನವ ಜೋಡಿಗಳಿಗೆ ಆಶೀರ್ವದಿಸುವುದು ಮೊದಲಿನಿಂದಲೂ ಬಂದಿದೆ. ವಧು ವರನಿಗೆ ಅಕ್ಷತೆ ಹಾಕಿ ಹಿರಿಯರು ಆಶೀರ್ವದಿಸುತ್ತಾರೆ. ಈಗೆಲ್ಲಾ ಅತಿಥಿಗಳೂ ಸಹ ಉಡುಗೊರೆಯನ್ನು ನೀಡುವ ಪದ್ಧತಿ ಆಚರಣೆಗೆ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ಆಪ್ತ ಸ್ನೇಹಿತರು ಸರ್ಪ್ರೈಸ್ ಗಿಫ್ಟ್ ಕೊಡುತ್ತಾರೆ ಎಂಬ ನಿರೀಕ್ಷೆ ಸಾಮಾನ್ಯ. ಹಾಗಿರುವಾಗ ಈ ಜೋಡಿಗಳ ಮದುವೆಯಲ್ಲಿ ಸ್ನೇಹಿತರೆಲ್ಲಾ ಸೇರಿ ಸಕತ್ ಪ್ಲಾನ್ ಮಾಡಿದ್ದಾರೆ. ಕೊಡುವ ಗಿಫ್ಟ್ ನೋಡುತ್ತಿದ್ದಂತೆಯೇ ವಧು ನಗುತ್ತಾ ನಾಚಿ ತಲೆ ತಗ್ಗಿಸಿದ್ದಾಳೆ.

ವಿಡಿಯೋ ನೋಡಲು ತಮಾಷೆಯಾಗಿದೆ. ವಧು, ವರ ವೇದಿಕೆಯ ಮೇಲೆ ಆಸೀನರಾಗಿದ್ದಾರೆ. ಸ್ನೇಹಿತರು ಒಬ್ಬರಾದ ಮೇಲೆ ಒಬ್ಬರು ವೇದಿಕೆ ಬರುತ್ತಾರೆ. ಒಂದೊಂದು ರೂಪಾಯಿ ನಾಣ್ಯವನ್ನು ಕೈಯಲ್ಲಿ ಇಟ್ಟು ಅವರೇ ಆಶೀರ್ವಾದ ಪಡೆಯುತ್ತಿದ್ದಾರೆ. ಸ್ನೇಹಿತರ ಈ ಕಪಿಚೇಷ್ಟೆ ನೋಡಿದ ನೆಟ್ಟಿಗರು ಹಾಸ್ಯ ಮಾಡಿ ನಕ್ಕಿದ್ದಾರೆ.

ಇದನ್ನೂ ಓದಿ:

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ