Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​

ಕರಡಿಯನ್ನು ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ. ನಾನು ಮಾಡಿರುವ ತಪ್ಪನ್ನು ನೀವೂ ಮಾಡದಿರಿ. ಕರಡಿಯನ್ನು ತಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ಬಾಲಕಿಯು ನೀಡಿದ್ದಾರೆ.

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​
Follow us
TV9 Web
| Updated By: shruti hegde

Updated on: Jun 02, 2021 | 1:50 PM

ಕ್ಯಾಲಿಫೋರ್ನಿಯಾದ 17 ವರ್ಷದ ಬಾಲಕಿಯು ತಾನು ಸಾಕಿದ ನಾಯಿಯನ್ನು ರಕ್ಷಿಸುವ ಸಲುವಾಗಿ ಕರಡಿಯನ್ನು ಕಂಪೌಂಡ್​ನಿಂದ ಆಚೆಗೆ ತಳ್ಳುತ್ತಿರುವ ದೃಶ್ಯವನ್ನು ವಿಡಿಯೋ ತೋರಿಸುತ್ತದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿ ಮಾಡುತ್ತಿದೆ. ಕರಡಿಯನ್ನು ಮನೆಯ ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿಯ ಮನೆಯ ಕಂಪೌಂಡ್ ಮೇಲೆ ಕರಡಿ ನಿಂತಿರುವ ದೃಶ್ಯವನ್ನು ನೋಡಬಹುದು. ಕರಡಿ ಕಾಣುತ್ತಿದ್ದಂತೆಯೇ ನಾಯಿ ಮರಿಗಳು ಬೊಗಳಲು ಪ್ರಾರಂಭಿಸುತ್ತವೆ. ಕರಡಿಯನ್ನು ಓಡಿಸಲು ಹತ್ತಿರ ಹೋಗುತ್ತಿದ್ದಂತೆಯೇ ನಾಯಿಯನ್ನು ಹಿಡಿಯಲು ಕರಡಿ ಮುಂದಾಗುತ್ತದೆ. ಈ ದೃಶ್ಯ ನೋಡುತ್ತಿದ್ದಂತೆಯೇ ಮನೆಯೊಳಗಿನಿಂದ ಓಡಿ ಬಂದ ಬಾಲಕಿ ಏನೂ ಮಾಡಬೇಕೆಂದು ತೋಚದೆ ಕರಡಿಯನ್ನು ಕಂಪೌಂಡ್​ನಿಂದ ಆಚೆಕೆ ನೂಕುತ್ತಾಳೆ ಮತ್ತು ತನ್ನ ನಾಯಿಮರಿಗಳನ್ನು ಎತ್ತಿಕೊಂಡು ಬೇಗ ಮನೆಯೊಳಕ್ಕೆ ಸೇರಿಕೊಳ್ಳುತ್ತಾಳೆ.

ಕೂದಲೆಳೆಯ ಅಂತರದಲ್ಲಿ ಬಾಲಕಿ ಮತ್ತು ನಾಯಿಮರಿಗಳು ಪಾರಾದ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ತುಣುಕನ್ನು ಟಿಕ್​ಟಾಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಟಿಕ್​ಟಾಕ್​ನಲ್ಲಿ ಪೋಸ್ಟ್​ ಮಾಡಿದ 6 ಗಂಟೆಯ ಬಳಿಕ ಸುಮಾರು 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ಕರಡಿಯನ್ನು ಕಂಪೌಂಡ್​ನಿಂದ ಆಚೆ ತಳ್ಳುವ ಮೂಲಕ ನನ್ನ ನಾಯಿ ಮರಿಗಳನ್ನು ಕರೆದುಕೊಂಡು ನಾನು ಮನೆಯೊಳಗೆ ಬಂದುಬಿಟ್ಟೆ. ಆದರೆ, ಈ ರೀತಿಯ ಘಟನೆ ನಡೆಯುವಾಗ ಎಚ್ಚರದಿಂದಿರಿ. ನಾನು ಮಾಡಿರುವ ತಪ್ಪನ್ನು ನೀವೂ ಮಾಡದಿರಿ. ಕರಡಿಯನ್ನು ತಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ಬಾಲಕಿಯು ನೀಡಿದ್ದಾರೆ.

ಇದನ್ನೂ ಓದಿ:

Pranitha Marriage: ನಟಿ ಪ್ರಣಿತಾ ಮದುವೆ ಫೋಟೋ ವೈರಲ್​; ಲಾಕ್​ಡೌನ್​ನಲ್ಲಿ ಗುಟ್ಟಾಗಿ ಹಸೆಮಣೆ ಏರಿದ ‘ಪೊರ್ಕಿ’ ಬೆಡಗಿ

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್