AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

Baby drinking Beer : ಈ ವಿಡಿಯೋ ದೊಡ್ಡವರಿಗೆ ಮಾತ್ರ. ಕಡ್ಡಾಯವಾಗಿ ಒಂದೇ ಬಾರಿ ನೋಡಲು ಅನುಮತಿ ನೀಡಲಾಗಿದೆ. ನೋಡುತ್ತ ನೋಡುತ್ತ ಮುದ್ದು ಉಕ್ಕಿದರೆ ಖಂಡಿತ ಈ ವಿಡಿಯೋದಲ್ಲಿರುವವರು ಜವಾಬ್ದರರಲ್ಲ.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!
ನಾನೇನೂ ಮಾಡಿಲ್ಲಪ್ಪಾ
TV9 Web
| Edited By: |

Updated on:Jan 02, 2023 | 6:50 PM

Share

Viral Video : ಹೇಳಿಕೇಳಿ ಮಗು. ನೆಟ್ಟಗೆ ನಿಂತ್ಕೋಳೋಕೂ ಬರಲ್ಲ. ಅದಕ್ಕೇನು ತಿಳಿಯಬೇಕು, ಬಿಯರ್ ಕ್ಯಾನಿಗಾದರೂ ತಿಳಿಯಬಾರದಾ? ತಾನು ಯಾರ ಕೈಯಲ್ಲಿದ್ದೀನಿ ಹೇಗಿರಬೇಕು ಅಂತ? ಈಗ ವಿಡಿಯೋ ನೋಡಿದ ನಿಮಗೋ ಇದೊಂದು ತಮಾಷೆ. ಮತ್ತೆ ಮತ್ತೆ ನೋಡ್ತಾ ಇರೋಬರೋವ್ರಿಗೆಲ್ಲ ಹಂಚತಾ ವೈರಲ್ ಮಾಡಿಡ್ತಿದೀರಿ. ಮತ್ತೆ ಮತ್ತೆ ನೋಡೋಹಾಗಿಲ್ಲ ಎಂದು ಪ್ರಮಾಣ ಮಾಡ್ತಾ ಇದೊಂದೇ ಸಲ ನೋಡಿಬಿಡಿ.

ಮಗು ಎಂದರೆ ಮಗು ಅಷ್ಟೇ. 24 ತಾಸೂ ಅದರ ಮೇಲೊಂದು ಕಣ್ಣಿಟ್ಟಿರಲೇಬೇಕು. ನೀವು ನಿಮ್ಮ ನಿದ್ದೆ ನಿಮ್ಮ ಊಟ ನಿಮ್ಮ ವಿಶ್ರಾಂತಿ ನಿಮ್ಮ ಆಸೆ ನಿಮ್ಮ ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಿಮ್ಮನ್ನು ನೀವೇ ಅದಕ್ಕೇ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದಿರೋ ಅಷ್ಟೇ! ನೋಡಿದಿರಲ್ಲ ಈಗ ವಿಡಿಯೋದಲ್ಲಿ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಬಿಡುತ್ತದೆ. ಒಂದು ಹೋಗಿ ಎರಡೇ ಆಗುವುದು. ಈಗ ನೋಡಿ ಈ ಮಗು ಬಿಯರ್ ಕುಡಿದದ್ದು ಒಂದು, ಇನ್ನು ಎದ್ದು ನಿಲ್ಲಲು ಹೋಗಿ ಹಿಂಬರಿಕೆಯಲ್ಲಿ ಬಿದ್ದಿದ್ದು ಇನ್ನೊಂದು. ಹಿಂದೇನಾದರೂ ಕಲ್ಲುಗಿಲ್ಲು ಇದ್ದಿದ್ದರೆ ಮೂರಾಗಿರೋದು. ಸದ್ಯ ಕ್ಯಾನ್​ನಲ್ಲಿ ಬಿಯರ್ ಇಲ್ಲವೆಂದೇ ಎಂದುಕೊಳ್ಳೋಣ ನಮ್ಮ ಸಮಾಧಾನಕ್ಕೆ.

ಈ ವಿಡಿಯೋ ಮಾಡಿದವರು ಖಂಡಿತ ಮಗುವಿನ ಪೋಷಕರಾಗಿರಲಾರರು ಎನ್ನುತ್ತಿದೆ ನೆಟ್​ಮಂದಿ. ನೀವೇನಂತೀರಿ?

ಅಣ್ಣೋವ್ರಂತೂ ಸರೀ ಪೋಸ್​ ಕೊಟ್ಟಿದಾರೆ. ಹ್ಯಾಪ್ಪಿ ನ್ಯೂ ಇಯರ್​!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:42 pm, Mon, 2 January 23

ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ