AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

Baby drinking Beer : ಈ ವಿಡಿಯೋ ದೊಡ್ಡವರಿಗೆ ಮಾತ್ರ. ಕಡ್ಡಾಯವಾಗಿ ಒಂದೇ ಬಾರಿ ನೋಡಲು ಅನುಮತಿ ನೀಡಲಾಗಿದೆ. ನೋಡುತ್ತ ನೋಡುತ್ತ ಮುದ್ದು ಉಕ್ಕಿದರೆ ಖಂಡಿತ ಈ ವಿಡಿಯೋದಲ್ಲಿರುವವರು ಜವಾಬ್ದರರಲ್ಲ.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!
ನಾನೇನೂ ಮಾಡಿಲ್ಲಪ್ಪಾ
TV9 Web
| Edited By: ಶ್ರೀದೇವಿ ಕಳಸದ|

Updated on:Jan 02, 2023 | 6:50 PM

Share

Viral Video : ಹೇಳಿಕೇಳಿ ಮಗು. ನೆಟ್ಟಗೆ ನಿಂತ್ಕೋಳೋಕೂ ಬರಲ್ಲ. ಅದಕ್ಕೇನು ತಿಳಿಯಬೇಕು, ಬಿಯರ್ ಕ್ಯಾನಿಗಾದರೂ ತಿಳಿಯಬಾರದಾ? ತಾನು ಯಾರ ಕೈಯಲ್ಲಿದ್ದೀನಿ ಹೇಗಿರಬೇಕು ಅಂತ? ಈಗ ವಿಡಿಯೋ ನೋಡಿದ ನಿಮಗೋ ಇದೊಂದು ತಮಾಷೆ. ಮತ್ತೆ ಮತ್ತೆ ನೋಡ್ತಾ ಇರೋಬರೋವ್ರಿಗೆಲ್ಲ ಹಂಚತಾ ವೈರಲ್ ಮಾಡಿಡ್ತಿದೀರಿ. ಮತ್ತೆ ಮತ್ತೆ ನೋಡೋಹಾಗಿಲ್ಲ ಎಂದು ಪ್ರಮಾಣ ಮಾಡ್ತಾ ಇದೊಂದೇ ಸಲ ನೋಡಿಬಿಡಿ.

ಮಗು ಎಂದರೆ ಮಗು ಅಷ್ಟೇ. 24 ತಾಸೂ ಅದರ ಮೇಲೊಂದು ಕಣ್ಣಿಟ್ಟಿರಲೇಬೇಕು. ನೀವು ನಿಮ್ಮ ನಿದ್ದೆ ನಿಮ್ಮ ಊಟ ನಿಮ್ಮ ವಿಶ್ರಾಂತಿ ನಿಮ್ಮ ಆಸೆ ನಿಮ್ಮ ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಿಮ್ಮನ್ನು ನೀವೇ ಅದಕ್ಕೇ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದಿರೋ ಅಷ್ಟೇ! ನೋಡಿದಿರಲ್ಲ ಈಗ ವಿಡಿಯೋದಲ್ಲಿ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಬಿಡುತ್ತದೆ. ಒಂದು ಹೋಗಿ ಎರಡೇ ಆಗುವುದು. ಈಗ ನೋಡಿ ಈ ಮಗು ಬಿಯರ್ ಕುಡಿದದ್ದು ಒಂದು, ಇನ್ನು ಎದ್ದು ನಿಲ್ಲಲು ಹೋಗಿ ಹಿಂಬರಿಕೆಯಲ್ಲಿ ಬಿದ್ದಿದ್ದು ಇನ್ನೊಂದು. ಹಿಂದೇನಾದರೂ ಕಲ್ಲುಗಿಲ್ಲು ಇದ್ದಿದ್ದರೆ ಮೂರಾಗಿರೋದು. ಸದ್ಯ ಕ್ಯಾನ್​ನಲ್ಲಿ ಬಿಯರ್ ಇಲ್ಲವೆಂದೇ ಎಂದುಕೊಳ್ಳೋಣ ನಮ್ಮ ಸಮಾಧಾನಕ್ಕೆ.

ಈ ವಿಡಿಯೋ ಮಾಡಿದವರು ಖಂಡಿತ ಮಗುವಿನ ಪೋಷಕರಾಗಿರಲಾರರು ಎನ್ನುತ್ತಿದೆ ನೆಟ್​ಮಂದಿ. ನೀವೇನಂತೀರಿ?

ಅಣ್ಣೋವ್ರಂತೂ ಸರೀ ಪೋಸ್​ ಕೊಟ್ಟಿದಾರೆ. ಹ್ಯಾಪ್ಪಿ ನ್ಯೂ ಇಯರ್​!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:42 pm, Mon, 2 January 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ