AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

Baby drinking Beer : ಈ ವಿಡಿಯೋ ದೊಡ್ಡವರಿಗೆ ಮಾತ್ರ. ಕಡ್ಡಾಯವಾಗಿ ಒಂದೇ ಬಾರಿ ನೋಡಲು ಅನುಮತಿ ನೀಡಲಾಗಿದೆ. ನೋಡುತ್ತ ನೋಡುತ್ತ ಮುದ್ದು ಉಕ್ಕಿದರೆ ಖಂಡಿತ ಈ ವಿಡಿಯೋದಲ್ಲಿರುವವರು ಜವಾಬ್ದರರಲ್ಲ.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!
ನಾನೇನೂ ಮಾಡಿಲ್ಲಪ್ಪಾ
TV9 Web
| Edited By: |

Updated on:Jan 02, 2023 | 6:50 PM

Share

Viral Video : ಹೇಳಿಕೇಳಿ ಮಗು. ನೆಟ್ಟಗೆ ನಿಂತ್ಕೋಳೋಕೂ ಬರಲ್ಲ. ಅದಕ್ಕೇನು ತಿಳಿಯಬೇಕು, ಬಿಯರ್ ಕ್ಯಾನಿಗಾದರೂ ತಿಳಿಯಬಾರದಾ? ತಾನು ಯಾರ ಕೈಯಲ್ಲಿದ್ದೀನಿ ಹೇಗಿರಬೇಕು ಅಂತ? ಈಗ ವಿಡಿಯೋ ನೋಡಿದ ನಿಮಗೋ ಇದೊಂದು ತಮಾಷೆ. ಮತ್ತೆ ಮತ್ತೆ ನೋಡ್ತಾ ಇರೋಬರೋವ್ರಿಗೆಲ್ಲ ಹಂಚತಾ ವೈರಲ್ ಮಾಡಿಡ್ತಿದೀರಿ. ಮತ್ತೆ ಮತ್ತೆ ನೋಡೋಹಾಗಿಲ್ಲ ಎಂದು ಪ್ರಮಾಣ ಮಾಡ್ತಾ ಇದೊಂದೇ ಸಲ ನೋಡಿಬಿಡಿ.

ಮಗು ಎಂದರೆ ಮಗು ಅಷ್ಟೇ. 24 ತಾಸೂ ಅದರ ಮೇಲೊಂದು ಕಣ್ಣಿಟ್ಟಿರಲೇಬೇಕು. ನೀವು ನಿಮ್ಮ ನಿದ್ದೆ ನಿಮ್ಮ ಊಟ ನಿಮ್ಮ ವಿಶ್ರಾಂತಿ ನಿಮ್ಮ ಆಸೆ ನಿಮ್ಮ ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಿಮ್ಮನ್ನು ನೀವೇ ಅದಕ್ಕೇ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದಿರೋ ಅಷ್ಟೇ! ನೋಡಿದಿರಲ್ಲ ಈಗ ವಿಡಿಯೋದಲ್ಲಿ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಬಿಡುತ್ತದೆ. ಒಂದು ಹೋಗಿ ಎರಡೇ ಆಗುವುದು. ಈಗ ನೋಡಿ ಈ ಮಗು ಬಿಯರ್ ಕುಡಿದದ್ದು ಒಂದು, ಇನ್ನು ಎದ್ದು ನಿಲ್ಲಲು ಹೋಗಿ ಹಿಂಬರಿಕೆಯಲ್ಲಿ ಬಿದ್ದಿದ್ದು ಇನ್ನೊಂದು. ಹಿಂದೇನಾದರೂ ಕಲ್ಲುಗಿಲ್ಲು ಇದ್ದಿದ್ದರೆ ಮೂರಾಗಿರೋದು. ಸದ್ಯ ಕ್ಯಾನ್​ನಲ್ಲಿ ಬಿಯರ್ ಇಲ್ಲವೆಂದೇ ಎಂದುಕೊಳ್ಳೋಣ ನಮ್ಮ ಸಮಾಧಾನಕ್ಕೆ.

ಈ ವಿಡಿಯೋ ಮಾಡಿದವರು ಖಂಡಿತ ಮಗುವಿನ ಪೋಷಕರಾಗಿರಲಾರರು ಎನ್ನುತ್ತಿದೆ ನೆಟ್​ಮಂದಿ. ನೀವೇನಂತೀರಿ?

ಅಣ್ಣೋವ್ರಂತೂ ಸರೀ ಪೋಸ್​ ಕೊಟ್ಟಿದಾರೆ. ಹ್ಯಾಪ್ಪಿ ನ್ಯೂ ಇಯರ್​!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:42 pm, Mon, 2 January 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ