AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ

Snow Leopard : ಎಂಥ ರಾಜಗಾಂಭೀರ್ಯ, ಎಂಥ ರಮ್ಯ, ಬೀಳುವ ಹಿಮಬಿಂದುಗಳಿಗೆ ಕೊರಳೊಡ್ಡುವ ಮೋಹಕತೆ... ಇಲ್ಲಿ ಓದುವುದಕ್ಕಿಂತ ಒಮ್ಮೆ ಈ ಹಿಮಚಿರತೆಯ ವಿಡಿಯೋ ನೋಡಿಬಿಡಿ.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ
ಆಹಾ ಎಂಥ ಆಹ್ಲಾದಕರವಾಗಿದೆ ಇದು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 25, 2022 | 11:07 AM

Viral Video : ದೂರದಲ್ಲಿದ್ದುಕೊಂಡೇ ಹೀಗೆ ಹತ್ತಿರದಿಂದ ವನ್ಯಜೀವಿಗಳನ್ನು ನೋಡುವುದು ರಮ್ಯ ಅನುಭವವನ್ನು ಕೊಡುತ್ತದೆ. ಇದಕ್ಕೆ ನಾವೆಲ್ಲರೂ ಧನ್ಯವಾದ ಹೇಳಬೇಕಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ. ಸೆಕೆಂಡು ಲೆಕ್ಕದ ವಿಡಿಯೋಗೆ ಅವರು ದಿನಗಟ್ಟಲೆ ಸಮಯ, ಶ್ರಮ ವಹಿಸಿರುತ್ತಾರೆ. ಸಾಕಷ್ಟು ಅಪಾಯವನ್ನೂ ಎದುರಿಸಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಅತ್ಯಂತ ಮನೋಹರವಾದಂಥ ಹಿಮಚಿರತೆಯ ವಿಹಾರದೃಶ್ಯವಿದು. ತಲೆಯ ಮೇಲೆ ಹಿಮ ಉದುರಿ ಬೀಳುತ್ತಿದ್ದಂತೆ ಅದನ್ನು ಕಣ್ಣುಮುಚ್ಚಿ ತಲೆಎತ್ತಿ ಮನಸಾ ಅನುಭವಿಸುವುದನ್ನು ನೋಡಿ. ಈಗಾಗಲೇ ಈ ವಿಡಿಯೋ ಅನ್ನು 44,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,400 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬೆಕ್ಕಿನ ಜಾತಿಗೆ ಸೇರಿದ ಇವು ಯಾವಾಗಲೂ ಸುಂದರ ಎಂದಿದ್ದಾರೆ ಒಬ್ಬರು. ಇಂಥ ಅಪರೂಪದ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫರ್​ಗೆ ಸಲಾಮ್​ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹ್ಯಾಂಡ್​ಸಮ್ ಆಗಿದಾನೆ ಇವ ಎಂದಿದ್ದಾರೆ ಮತ್ತೊಬ್ಬರು. ಭಯಂಕರ! ಆದರೆ ಅಷ್ಟೇ ಮುದ್ದು ಎಂದಿದ್ಧಾರೆ ಮಗದೊಬ್ಬರು.

ಎಂಥ ಚೆಂದದ ವಿಡಿಯೋ ಅಲ್ವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು