Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕ್ಲಿನಿಕ್ ಹೊಕ್ಕ ತಾಯಿಕೋತಿ, ಚಿಕಿತ್ಸೆ ನೀಡಿದ ಡಾ. ಅಹಮ್ಮದ್

Monkey entered clinic : ಕೋತಿಯೊಂದು ತನ್ನ ಮರಿಯೊಂದಿಗೆ ಇದ್ದಕ್ಕಿದ್ದ ಹಾಗೆ ನನ್ನ ಕ್ಲಿನಿಕ್​ನೊಳಗೆ ಬಂದಾಗ ಗಾಬರಿಯಾದೆ. ಮೊದಲು ಏನು ಮಾಡಬೇಕೆಂದು ತಿಳಿಯಲಿಲ್ಲ. ಅದರ ಮುಖದಲ್ಲಿ ಮಡುಗಟ್ಟಿದ್ದ ನೋವು ನನ್ನನ್ನು ಸುಮ್ಮನಿರಗೊಡಲಿಲ್ಲ.

Viral Video : ಕ್ಲಿನಿಕ್ ಹೊಕ್ಕ ತಾಯಿಕೋತಿ, ಚಿಕಿತ್ಸೆ ನೀಡಿದ ಡಾ. ಅಹಮ್ಮದ್
ಬಿಹಾರದ ಡಾ. ಅಹಮ್ಮದ್ ತಾಯಿಕೋತಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 09, 2022 | 10:54 AM

Monkey Visited Clinic : ಬಿಹಾರದ ಸಾಸಾರಾಮನಲ್ಲಿ ಡಾ. ಎಸ್. ಎಮ್. ಅಹಮ್ಮದ್ ಮೆಡಿಕೋ ಕ್ಲಿನಿಕ್​ ಗೆ ತಾಯಿಕೋತಿ ತನ್ನ ಮರಿಯೊಂದಿಗೆ ಬಂದಾಗ ಸಹಜವಾಗಿ ಅಚ್ಚರಿಯೂ ಗಾಬರಿಯೂ ಆಗಿದೆ. ಅಷ್ಟೊತ್ತಿಗೆ ಓಣಿಯಲ್ಲಿ ಆಡಿಕೊಂಡಿದ್ದ ಮಕ್ಕಳು, ಹುಡುಗರು ಮುಂದೇನಾಗುವುದು ಎಂದು ಮೊಬೈಲ್​ನೊಂದಿಗೆ ಕ್ಲಿನಿಕ್​ಗೆ ಬಂದು ನಿಂತಿದ್ದಾರೆ. ಈ ಎಲ್ಲ ಗಲಾಟೆಗೆ ಕ್ಲಿನಿಕ್ ಹೊರಗೂ ಒಳಗೂ ಹುಯಿಲೆಬ್ಬಿದೆ. ರಸ್ತೆಯಲ್ಲಿ ಗಾಡಿಗಳ ಓಡಾಟಕ್ಕೂ ತೊಂದರೆಯಾಗಿದೆ. ಇತ್ತ ಡಾಕ್ಟರ್ ಅಹಮ್ಮದ್ ಅವರಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ. ಅತ್ತ ಗಾಯಗೊಂಡ ಕೋತಿ ಕಂಕುಳಲ್ಲಿ ಮರಿಯನ್ನೆತ್ತಿಕೊಂಡು ರೋಗಿಗೆ ಮೀಸಲಾದ ಬೆಡ್​ಮೇಲೆ ಗಾಬರಿಯಿಂದ, ನೋವಿನಿಂದ ಡಾಕ್ಟರ್​ ಗಾಗಿ ಅತೀ ತಾಳ್ಮೆಯಿಂದಲೇ ಕಾಯುತ್ತ ಕುಳಿತಿದೆ. ತನ್ನ ಅಮ್ಮ ಎಲ್ಲಿ ಕರೆದುಕೊಂಡು ಬಂದಿದ್ದಾಳೆ? ತನ್ನ ಸುತ್ತಮುತ್ತಲಿರುವವರು ಯಾರು? ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನೆಲ್ಲ ಗಮನಿಸುತ್ತ ಅಮ್ಮನೆದೆ ಅವುಚಿಕೊಂಡು ಮರಿ ಕುಳಿತಿದೆ.

ಅಷ್ಟೊತ್ತಿಗೆ ಇದು ಊರೆಲ್ಲ ಸುದ್ದಿಯಾಗಿದೆ. ಡಾ. ಅಹಮ್ಮದ್ ಕೊನೆಗೂ ಧೈರ್ಯಮಾಡಿ ತಾಯಿಕೋತಿಯ ಗಾಯವನ್ನು ಪರೀಕ್ಷಿಸಿದ್ದಾರೆ. ಮೊದಲು ಟಿಟ್ಯಾನಸ್ ಇಂಜೆಕ್ಷನ್ ಕೊಟ್ಟು, ಮುಖಕ್ಕೆ ಆದ ಗಾಯಕ್ಕೆ ಆಯಿಂಟ್​ಮೆಂಟ್ ಹಚ್ಚಿದ್ದಾರೆ. ನಂತರ ಅದು ಬೆಡ್​ ಮೇಲೆ ಮಲಗಿ ಮರಿಗೆ ಹಾಲು ಕುಡಿಸಿ ಸಂತೈಸಿದೆ.

ಮುಂದೇನು? ಸುತ್ತಮುತ್ತಲಿನ ಜನರನ್ನು ನೋಡಿ ಅದಕ್ಕೆ ಆತಂಕವೂ ಎದುರಾಗಿದೆ. ಹೇಗೆ ಈ ನಾಗರಿಕ ಜಗತ್ತಿನಿಂದ ತನ್ನ ಜಗತ್ತಿಗೆ ಮರಳುವುದು ಎಂದು. ಈ ಸಂಕಟವನ್ನು ಅರ್ಥ ಮಾಡಿಕೊಂಡ ಅಹಮ್ಮದ್, ಅಲ್ಲಿದ್ದವರಿಗೆಲ್ಲ ದೂರ ಹೋಗಲು ತಿಳಿಸಿ, ತಾಯಿಕೋತಿ ಮರಿಯೊಂದಿಗೆ ಹೊರಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ನೋಡಿ : Viral Video: ಕ್ಲಾಸ್​ರೂಂನಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದ ಟೀಚರ್​​ಗೆ ಗಾಳಿ ಬೀಸಿದ ವಿದ್ಯಾರ್ಥಿ; ವಿಡಿಯೋ ವೈರಲ್

Published On - 10:50 am, Thu, 9 June 22

ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ