AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕ್ಲಿನಿಕ್ ಹೊಕ್ಕ ತಾಯಿಕೋತಿ, ಚಿಕಿತ್ಸೆ ನೀಡಿದ ಡಾ. ಅಹಮ್ಮದ್

Monkey entered clinic : ಕೋತಿಯೊಂದು ತನ್ನ ಮರಿಯೊಂದಿಗೆ ಇದ್ದಕ್ಕಿದ್ದ ಹಾಗೆ ನನ್ನ ಕ್ಲಿನಿಕ್​ನೊಳಗೆ ಬಂದಾಗ ಗಾಬರಿಯಾದೆ. ಮೊದಲು ಏನು ಮಾಡಬೇಕೆಂದು ತಿಳಿಯಲಿಲ್ಲ. ಅದರ ಮುಖದಲ್ಲಿ ಮಡುಗಟ್ಟಿದ್ದ ನೋವು ನನ್ನನ್ನು ಸುಮ್ಮನಿರಗೊಡಲಿಲ್ಲ.

Viral Video : ಕ್ಲಿನಿಕ್ ಹೊಕ್ಕ ತಾಯಿಕೋತಿ, ಚಿಕಿತ್ಸೆ ನೀಡಿದ ಡಾ. ಅಹಮ್ಮದ್
ಬಿಹಾರದ ಡಾ. ಅಹಮ್ಮದ್ ತಾಯಿಕೋತಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ
TV9 Web
| Edited By: |

Updated on:Jun 09, 2022 | 10:54 AM

Share

Monkey Visited Clinic : ಬಿಹಾರದ ಸಾಸಾರಾಮನಲ್ಲಿ ಡಾ. ಎಸ್. ಎಮ್. ಅಹಮ್ಮದ್ ಮೆಡಿಕೋ ಕ್ಲಿನಿಕ್​ ಗೆ ತಾಯಿಕೋತಿ ತನ್ನ ಮರಿಯೊಂದಿಗೆ ಬಂದಾಗ ಸಹಜವಾಗಿ ಅಚ್ಚರಿಯೂ ಗಾಬರಿಯೂ ಆಗಿದೆ. ಅಷ್ಟೊತ್ತಿಗೆ ಓಣಿಯಲ್ಲಿ ಆಡಿಕೊಂಡಿದ್ದ ಮಕ್ಕಳು, ಹುಡುಗರು ಮುಂದೇನಾಗುವುದು ಎಂದು ಮೊಬೈಲ್​ನೊಂದಿಗೆ ಕ್ಲಿನಿಕ್​ಗೆ ಬಂದು ನಿಂತಿದ್ದಾರೆ. ಈ ಎಲ್ಲ ಗಲಾಟೆಗೆ ಕ್ಲಿನಿಕ್ ಹೊರಗೂ ಒಳಗೂ ಹುಯಿಲೆಬ್ಬಿದೆ. ರಸ್ತೆಯಲ್ಲಿ ಗಾಡಿಗಳ ಓಡಾಟಕ್ಕೂ ತೊಂದರೆಯಾಗಿದೆ. ಇತ್ತ ಡಾಕ್ಟರ್ ಅಹಮ್ಮದ್ ಅವರಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ. ಅತ್ತ ಗಾಯಗೊಂಡ ಕೋತಿ ಕಂಕುಳಲ್ಲಿ ಮರಿಯನ್ನೆತ್ತಿಕೊಂಡು ರೋಗಿಗೆ ಮೀಸಲಾದ ಬೆಡ್​ಮೇಲೆ ಗಾಬರಿಯಿಂದ, ನೋವಿನಿಂದ ಡಾಕ್ಟರ್​ ಗಾಗಿ ಅತೀ ತಾಳ್ಮೆಯಿಂದಲೇ ಕಾಯುತ್ತ ಕುಳಿತಿದೆ. ತನ್ನ ಅಮ್ಮ ಎಲ್ಲಿ ಕರೆದುಕೊಂಡು ಬಂದಿದ್ದಾಳೆ? ತನ್ನ ಸುತ್ತಮುತ್ತಲಿರುವವರು ಯಾರು? ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನೆಲ್ಲ ಗಮನಿಸುತ್ತ ಅಮ್ಮನೆದೆ ಅವುಚಿಕೊಂಡು ಮರಿ ಕುಳಿತಿದೆ.

ಅಷ್ಟೊತ್ತಿಗೆ ಇದು ಊರೆಲ್ಲ ಸುದ್ದಿಯಾಗಿದೆ. ಡಾ. ಅಹಮ್ಮದ್ ಕೊನೆಗೂ ಧೈರ್ಯಮಾಡಿ ತಾಯಿಕೋತಿಯ ಗಾಯವನ್ನು ಪರೀಕ್ಷಿಸಿದ್ದಾರೆ. ಮೊದಲು ಟಿಟ್ಯಾನಸ್ ಇಂಜೆಕ್ಷನ್ ಕೊಟ್ಟು, ಮುಖಕ್ಕೆ ಆದ ಗಾಯಕ್ಕೆ ಆಯಿಂಟ್​ಮೆಂಟ್ ಹಚ್ಚಿದ್ದಾರೆ. ನಂತರ ಅದು ಬೆಡ್​ ಮೇಲೆ ಮಲಗಿ ಮರಿಗೆ ಹಾಲು ಕುಡಿಸಿ ಸಂತೈಸಿದೆ.

ಮುಂದೇನು? ಸುತ್ತಮುತ್ತಲಿನ ಜನರನ್ನು ನೋಡಿ ಅದಕ್ಕೆ ಆತಂಕವೂ ಎದುರಾಗಿದೆ. ಹೇಗೆ ಈ ನಾಗರಿಕ ಜಗತ್ತಿನಿಂದ ತನ್ನ ಜಗತ್ತಿಗೆ ಮರಳುವುದು ಎಂದು. ಈ ಸಂಕಟವನ್ನು ಅರ್ಥ ಮಾಡಿಕೊಂಡ ಅಹಮ್ಮದ್, ಅಲ್ಲಿದ್ದವರಿಗೆಲ್ಲ ದೂರ ಹೋಗಲು ತಿಳಿಸಿ, ತಾಯಿಕೋತಿ ಮರಿಯೊಂದಿಗೆ ಹೊರಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ನೋಡಿ : Viral Video: ಕ್ಲಾಸ್​ರೂಂನಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದ ಟೀಚರ್​​ಗೆ ಗಾಳಿ ಬೀಸಿದ ವಿದ್ಯಾರ್ಥಿ; ವಿಡಿಯೋ ವೈರಲ್

Published On - 10:50 am, Thu, 9 June 22

Follow Us
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ