AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿಗೆ ಹೆಸರಿಡಲು ಮೈಸೂರು ದಂಪತಿ ನಡುವೆ ಜಗಳ, ಕೋರ್ಟ್​ನಲ್ಲೇ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥ ಮಾಡಿದ ಜಡ್ಜ್

ಮಗುವಿಗೆ ಯಾವ ಹೆಸರಿಡುವುದು ಎನ್ನುವ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಜಗಳಗಳು ಆಡುವುದನ್ನು ನೋಡಿರಬಹುದು. ಇದೇ ರೀತಿಯ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಹೆಸರಿಡಲು ಮುಂದಾಗ ದಂಪತಿಗಳ ನಡುವೆ ಮನಸ್ತಾಪವೊಂದು ಮೂಡಿದೆ. ಕೊನೆಗೆ ಪತ್ನಿಯೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಮೂರು ವರ್ಷದ ಮಗುವಿಗೆ ಆರ್ಯವರ್ಧನ್ ಎಂದು ಹೆಸರಿಡಲು ಸೂಚಿಸುವ ಮೂಲಕ ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಈ ಪ್ರಕರಣವನ್ನು ಬಗೆಹರಿಸಿದೆ.

ಮಗುವಿಗೆ ಹೆಸರಿಡಲು ಮೈಸೂರು ದಂಪತಿ ನಡುವೆ ಜಗಳ, ಕೋರ್ಟ್​ನಲ್ಲೇ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥ ಮಾಡಿದ ಜಡ್ಜ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 21, 2024 | 12:24 PM

Share

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹೆಸರಿಡುವುದೇ ದೊಡ್ಡ ಕೆಲಸವಾಗಿದೆ. ಪೋಷಕರು ಮಗು ಹುಟ್ಟುವುದಕ್ಕೂ ಮುಂಚೆಯೇ ಮಗುವಿಗೆ ಏನು ಹೆಸರಿಡಬೇಕೆಂದು ಯೋಚಿಸುತ್ತಾರೆ. ಕೆಲವೊಮ್ಮೆ ಮಗುವಿಗೆ ಯಾವ ಹೆಸರಿಡುವುದು ಎನ್ನುವ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಜಗಳಗಳು ಆಗುತ್ತದೆ. ಇದೇ ರೀತಿಯ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಮಗುವಿನ ಹೆಸರಿಡಲು ಮುಂದಾಗ ದಂಪತಿಗಳ ನಡುವೆ ಮನಸ್ತಾಪವೊಂದು ಮೂಡಿದ್ದು, ಪತ್ನಿಯೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಅಂದಹಾಗೆ, 2021 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನ ದಂಪತಿಗಳಿಗೆ ಮಗು ಜನಿಸಿತು. ಆದರೆ ಮಗುವಿನ ಜನಿಸಿದ ಬಳಿಕ ಈ ದಂಪತಿಗಳ ನಡುವೆ ಮಗುವಿನ ಹೆಸರಿನ ಆಯ್ಕೆಯ ವಿಚಾರವಾಗಿ ಜಗಳವಾಗಿತ್ತು. ತಾಯಿ ಮಗುವನ್ನು ‘ಆದಿ’ ಎಂದು ಹೆಸರಿಡಲು ಬಯಸಿದರೆ, ತಂದೆಯೂ ಶನಿ ಹೆಸರನ್ನು ಇಡಲು ಇಚ್ಛಿಸಿದ್ದರು. ಆದರೆ ದಂಪತಿಗಳಿಬ್ಬರಿಗೂ ಗಂಡು ಮಗುವಿಗೆ ನಾಮಕರಣ ಮಾಡಲು ಒಮ್ಮತದ ಅಭಿಪ್ರಾಯವು ಮೂಡಿರಲಿಲ್ಲ. ಇದರಿಂದಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಒಂದೂವರೆ ವರ್ಷದಿಂದ ತವರು ಮನೆಯಲ್ಲೇ ಉಳಿದಿದ್ದರು. ಅದಲ್ಲದೇ, ಸಿಆರ್ ಪಿಸಿ ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಧೀಶರು ನೀಡಿದ ಸಲಹೆಗಳನ್ನೂ ಮಹಿಳೆಯೂ ತಿರಸ್ಕರಿಸಿದ್ದಾರೆ.

ಆದರೆ, ಮೈಸೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮಗುವನ್ನು ಪೋಷಕರೊಂದಿಗೆ ಕರೆಸಿ, ಮೂರು ವರ್ಷದ ಮಗುವಿಗೆ ಆರ್ಯವರ್ಧನ್ ಎಂದು ಹೆಸರಿಡಲು ಸೂಚಿಸುವ ಮೂಲಕ ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಹೌದು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೋವಿಂದಯ್ಯ ಅವರು, ಮಗುವಿಗೆ ಹೆಸರಿಡುವುದರಲ್ಲಿ ಏನಿದೆ? ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ಕೊಡಿಸಿ ಎಂದು ದಂಪತಿಗಳಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: ಡಚ್ ಸೊಸೆಗೆ ಫಿಲ್ಟರ್ ಕಾಫಿ ಕುಡಿಯುವುದು ಹೇಗೆಂದು ಹೇಳಿಕೊಡುತ್ತಿರುವ ಭಾರತೀಯ ಅತ್ತೆ, ವಿಡಿಯೋ ವೈರಲ್

ಅದಲ್ಲದೇ, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೌಮ್ಯ ಅವರು ಮಗುವಿಗೆ ಆರ್ಯವರ್ಧನ್ ಹೆಸರಿಡಲು ಸೂಚಿಸಿದ್ದಾರೆ. ಕೊನೆಗೆ ನ್ಯಾಯಾಧೀಶ ಗೋವಿಂದಯ್ಯ ಅವರು ದಂಪತಿಗಳಿಬ್ಬರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಗುವಿಗೆ ಅದೇ ಹೆಸರನ್ನು ಇಡಿ ಎಂದು ಹೇಳಿ ಮಗುವಿಗೆ ಸಿಹಿಯನ್ನು ತಿನ್ನಿಸಿದ್ದಾರೆ. ನ್ಯಾಯಾಧೀಶರ ಮಾತಿಗೆ ದಂಪತಿಗಳು ಒಪ್ಪಿಗೆ ಸೂಚಿಸುವ ಮೂಲಕ ಈ ಪ್ರಕರಣವು ಇತ್ಯರ್ಥವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ