Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಬಾಲ್ಯದಲ್ಲೇ ಮದುವೆ ನಿಶ್ಚಯ, ಬೆಳೆದ ನಂತರ ಮದುವೆ ಬೇಡ ಎಂದ್ರೆ ಲಕ್ಷಗಟ್ಟಲೆ ಹಣ ಕೊಡಬೇಕು

ರಾಜ್‌ಗಢ್ ಜಿಲ್ಲೆಯಲ್ಲಿ ಜಾಗರ್ ನಾಥ್ರ ಎಂಬ ಬಾಲ್ಯವಿವಾಹ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಪೋಷಕರು ಸಾಮಾಜಿಕ ಪ್ರತಿಷ್ಠೆ ಮತ್ತು ಆಸ್ತಿ ರಕ್ಷಣೆಗಾಗಿ ಇದನ್ನು ಅನುಸರಿಸುತ್ತಾರೆ. ಆದರೆ ಯೌವನಾವಸ್ಥೆಗೆ ಬಂದಾಗ ಮದುವೆ ಮುರಿದು ಬಿದ್ದರೆ, ಈ ಪರಿಹಾರದ ಮೊತ್ತವನ್ನು ಎರಡೂ ಕುಟುಂಬಗಳ ನಡುವೆ ಪಾವತಿಸಬೇಕಾಗುತ್ತದೆ. ಈ ದಂಡವನ್ನು ಸಾಂಪ್ರದಾಯಿಕವಾಗಿ ಒಂದು ರೀತಿಯ ರಾಜಿ ಎಂದು ಪರಿಗಣಿಸಲಾಗಿದೆ.

ಇಲ್ಲಿ ಬಾಲ್ಯದಲ್ಲೇ ಮದುವೆ ನಿಶ್ಚಯ, ಬೆಳೆದ ನಂತರ ಮದುವೆ ಬೇಡ ಎಂದ್ರೆ ಲಕ್ಷಗಟ್ಟಲೆ ಹಣ ಕೊಡಬೇಕು
Rajgarh's Child Marriage
Follow us
ಅಕ್ಷತಾ ವರ್ಕಾಡಿ
|

Updated on: Nov 14, 2024 | 2:12 PM

ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ಇಂದಿಗೂ ಇಲ್ಲಿ ಚಾಲ್ತಿಯಲ್ಲಿದೆ. ಇಲ್ಲಿನ ನಿಯಮಗಳ ಪ್ರಕಾರ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಮದುವೆಯನ್ನು ಏರ್ಪಡಿಸುತ್ತಾರೆ . ಕುಟುಂಬಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು , ಆಸ್ತಿಯನ್ನು ರಕ್ಷಿಸಲು ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಇದು ಒಂದು ಮಾರ್ಗವೆಂದು ಪರಿಗಣಿಸಲಾಗುತ್ತದೆ. ಅಂದರೆ ಬಾಲ್ಯದಲ್ಲೇ ಹುಡುಗ ಮತ್ತು ಹುಡುಗಿಯ ಮದುವೆ ನಿಶ್ಚಯವಾಗಿರುತ್ತದೆ. ಆದರೆ ಯೌವನಾವಸ್ಥೆಗೆ ಬಂದಾಗ ಹುಡುಗಿ ಮದುವೆಯನ್ನು ಮುರಿಯಲು ಬಯಸಿದರೆ, ಅವಳು ತನ್ನ ಅತ್ತೆಯ ಬೇಡಿಕೆಯ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಲಕ್ಷಗಳಲ್ಲಿ ಇರುತ್ತದೆ. ಹಾಗೆ ಮಾಡದಿದ್ದರೆ ಪಂಚಾಯತಿಯಲ್ಲಿ ಶಿಕ್ಷೆಗೂ ಗುರಿಯಾಗಬಹುದು.

ಲಕ್ಷಗಟ್ಟಲೆ ದಂಡ:

ರಾಜ್‌ಗಢದಲ್ಲಿ ನಡೆಯುತ್ತಿರುವ ಈ ಸಂಪ್ರದಾಯದ ಹೆಸರು ಜಾಗ್ರ ನಾತ್ರ . ರಾಜ್‌ಗಢದಲ್ಲಿ ಮಾತ್ರ ಈ ಜಾಗ್ರ ನಾತ್ರ ಸಂಪ್ರದಾಯವಿರುವುದಲ್ಲ, ಇದರ ಹೊರತಾಗಿ, ಈ ಸಂಪ್ರದಾಯವನ್ನು ಅಗರ್ ಮಾಲ್ವಾ , ಗುಣ, ಝಲಾವರ್‌ನಿಂದ ರಾಜಸ್ಥಾನದ ಚಿತ್ತೋರ್‌ಗಢದಂತಹ ಸ್ಥಳಗಳಲ್ಲಿಯೂ ಅನುಸರಿಸಲಾಗುತ್ತದೆ . ಮದುವೆ ಮುರಿದು ಬಿದ್ದರೆ, ಈ ಪರಿಹಾರದ ಮೊತ್ತವನ್ನು ಎರಡೂ ಕುಟುಂಬಗಳ ನಡುವೆ ಪಾವತಿಸಬೇಕಾಗುತ್ತದೆ. ಈ ದಂಡವನ್ನು ಸಾಂಪ್ರದಾಯಿಕವಾಗಿ ಒಂದು ರೀತಿಯ ರಾಜಿ ಎಂದು ಪರಿಗಣಿಸಲಾಗುತ್ತದೆ , ಇದು ಕುಟುಂಬಗಳ ಖ್ಯಾತಿಯನ್ನು ಕಾಪಾಡುವ ಪ್ರಯತ್ನ ಎಂದು ಅಲ್ಲಿನ ಜನರು ನಂಬುತ್ತಾರೆ.

ಇದನ್ನೂ ಓದಿ:  ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಶ್ ನುಂಗಿದ ಮಹಿಳೆ

ವಾಸ್ತವವಾಗಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ( NFHS -5) ಪ್ರಕಾರ , ರಾಜ್‌ಗಢ್ ಜಿಲ್ಲೆಯ 52 ಪ್ರತಿಶತದಷ್ಟು ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ ಮತ್ತು 20-24 ವರ್ಷ ವಯಸ್ಸಿನ ಒಟ್ಟು ಹುಡುಗಿಯರಲ್ಲಿ 46 ಪ್ರತಿಶತದಷ್ಟು ಬಾಲ್ಯ ವಿವಾಹವಾದವರು ಎಂದು ತಿಳಿದುಬಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ