AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಿಕ್​ ಮಲ್ಟಿ ರೈಡರ್​; ಹಳ್ಳಿಹೈದನ ಹೊಸ ಆವಿಷ್ಕಾರಕ್ಕೆ ಭೇಷ್​ ಎಂದ ಆನಂದ ಮಹೀಂದ್ರಾ

Anand Mahindra : ಈ ವಾಹನದ ಬೆಲೆ ರೂ. 12,000. ಒಮ್ಮೆ ಚಾರ್ಜ್​ ಮಾಡಿದರೆ 150 ಕಿ.ಮೀ. ಓಡುತ್ತದೆ. ಹಳ್ಳಿಗಾಡು, ಕೈಗಾರಿಕೋದ್ಯಮ, ಮೃಗಾಲಯ, ಕ್ಯಾಂಪಸ್​ಗಳಿಗೆ ಸೂಕ್ತ. ಆರು ಆಸನಗಳು ಲಭ್ಯ. ಒಬ್ಬರಿಗೆ ಪ್ರಯಾಣ ಶುಲ್ಕ ರೂ. 10.  

ಎಲೆಕ್ಟ್ರಿಕ್​ ಮಲ್ಟಿ ರೈಡರ್​; ಹಳ್ಳಿಹೈದನ ಹೊಸ ಆವಿಷ್ಕಾರಕ್ಕೆ ಭೇಷ್​ ಎಂದ ಆನಂದ ಮಹೀಂದ್ರಾ
ಆರು ಆಸನಗಳುಳ್ಳ ಎಲೆಕ್ಟ್ರಿಕ್ ಸೈಕಲ್​ ಆವಿಷ್ಕಾರ ಮಾಡಿದ ಯುವಕ ಮತ್ತು ಉದ್ಯಮಿ ಆನಂದ ಮಹೀಂದ್ರಾ
TV9 Web
| Edited By: ಶ್ರೀದೇವಿ ಕಳಸದ|

Updated on:Dec 02, 2022 | 10:45 AM

Share

Viral Video : ಸಾಮಾನ್ಯವಾಗಿ ನಾವೆಲ್ಲರೂ ಹಳ್ಳಿಮೂಲದಿಂದಲೇ ಬಂದವರು. ಇದ್ದುದರಲ್ಲಿಯೇ ಅನುಕೂಲಗಳನ್ನು ರೂಪಿಸಿಕೊಳ್ಳುತ್ತ ಹೋಗುತ್ತಿರುವವರು. ಹಾಗಾಗಿ ಆವಿಷ್ಕಾರಗಳ ಬಗ್ಗೆ ಸದಾ ಯೋಚಿಸುತ್ತಿರುತ್ತೇವೆ. ಪ್ರಯೋಗಗಳಲ್ಲಿ ತೊಗಿಕೊಂಡಿರುತ್ತೇವೆ. ಉದ್ಯಮಿ ಆನಂದ ಮಹೀಂದ್ರಾ ಆಗಾಗ ತಮ್ಮ ಆಲೋಚನೆ, ಅನ್ವೇಷಣೆ, ವಿಚಾರಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ಬಯಸುತ್ತಿರುತ್ತಾರೆ. ಈ ಬಾರಿ ಅವರು ಟ್ವೀಟ್ ಮಾಡಿರುವ ಈ ವಿಡಿಯೋ ಆಸಕ್ತಿಕರವಾಗಿದೆ. ಕಡಿಮೆ ಖರ್ಚಿನಲ್ಲಿ ಈ ವಾಹನ ಖರೀದಿಸಬಹುದಾಗಿದೆ ಮತ್ತು ಕಡಿಮೆ ಖರ್ಚಿನಲ್ಲಿ ಇದನ್ನು ನಿರ್ವಹಿಸಬಹುದಾಗಿದೆ. ನೋಡಿ ಈ ಮಲ್ಟಿ ರೈಡರ್ ಪ್ಯಾಸೆಂಜರ್​ ಗಾಡಿಯ ವಿಡಿಯೋ.

ಈ ವಾಹನಕ್ಕೆ ತಗಲುವ ವೆಚ್ಚ ಕೇವಲ ರೂ. 12,000. ಒಮ್ಮೆ ಚಾರ್ಜ್​ ಮಾಡಿದರೆ ಸಾಕು 150 ಕಿ.ಮೀ. ಓಡುತ್ತದೆ. ಕೈಗಾರಿಕೋದ್ಯಮ, ಪ್ರಾಣಿಸಂಗ್ರಹಾಲಯ, ಜನನಿಬಿಡ ಸ್ಥಳಗಳಲ್ಲಿ ಓಡಾಡಲು ಈ ವಾಹನ ಹೆಚ್ಚು ಅನುಕೂಲಕರವಾಗಿದೆ. ಸೈಕಲ್ ರಿಕ್ಷಾ ಮಾದರಿಯಲ್ಲಿ ಆರು ಆಸನಗಳನ್ನು ಜೋಡಿಸಲಾಗಿದೆ. ಒಬ್ಬರಿಗೆ ಪ್ರಯಾಣ ಶುಲ್ಕ ರೂ. 10.

ನೆಟ್ಟಿಗರು ಈ ಆವಿಷ್ಕಾರವನ್ನು ಸ್ವಾಗತಿಸಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೌದು ಮೃಗಾಲಯ, ಉದ್ಯಾನದಂಥ ಜಾಗಗಳಿಗೆ ಇದು ಹೇಳಿ ಮಾಡಿಸಿದಂತಿದೆ. ತಾಂತ್ರಿಕವಾಗಿಯೂ ಇದು ಸೂಕ್ತವಾಗಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral : ಬೇಕಾ ನಿಮಗೂ ‘ಲಲ್ಲೂರಾಮ್ಸ್ ಸೋಲಾರ್ ಫ್ಯಾನ್​ ಹೆಲ್ಮೆಟ್​’?

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇದು ಒಳ್ಳೆಯ ಆವಿಷ್ಕಾರ. ಅವರು ನೀರಿಗಾಗಿ ದಿನವೂ ಮೈಲಿಗಳಷ್ಟು ನಡೆದುಕೊಂಡೇ ಪ್ರಯಾಣಿಸುತ್ತಾರೆ. ಅವರಿಗೆ ಇದು ಪ್ರಯೋಜನಕಾರಿ ಎಂದಿದ್ದಾರೆ ಇನ್ನೊಬ್ಬರು. ಇನ್ನು ದೂರ ಎನ್ನುವ ಕಾರಣಕ್ಕೆ ಎಷ್ಟೋ ಮಕ್ಕಳು ಶಾಲಾಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಇದು ಅನುಕೂಲ ಎಂದಿದ್ದಾರೆ ಮತ್ತೂ ಒಬ್ಬರು.

ಇಂಥ ಪರಿಸರಸ್ನೇಹಿ ಆವಿಷ್ಕಾರಗಳು ಹೆಚ್ಚೆಚ್ಚು ಆಗಬೇಕು. ಅದರಲ್ಲೂ ನಮ್ಮ ಭಾರತದಂಥ ದೇಶಗಳಿಗೆ ಎಂದಿದ್ದಾರೆ ಹಲವರು. ಇದು ಜಾಗತಿಕವಾಗಿ ಬಳಕೆಗೆ ಬರಬೇಕು ಎಂದಿದ್ಧಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:45 am, Fri, 2 December 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು